Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ ?…ಏನು ಕಾರಣ?

2 June 2025

ಜನಮೆಚ್ಚಿದ ಪೊಲೀಸ್ ಗೆ ಕಮೆಂಡೇಶನ್ ಪದಕ

30 May 2025

ನಾಯಿ ಕಾಣೆಯಾದರೆ ಇಲ್ಲಿ ಸುದ್ದಿ ಕೊಡಿ?

28 May 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»ರಾಜಕೀಯ ಸುದ್ದಿ»ಮಂಡ್ಯ ಪಾಲಿಟಿಕ್ಸ್​ ಇಂಡ್ಯಾನೇ ತಿರುಗಿ ನೋಡುವಂತೆ ಮಾಡ್ತೀದಿ‌ ಯಾಕಾಗಿ ಗೊತ್ತಾ?
ರಾಜಕೀಯ ಸುದ್ದಿ

ಮಂಡ್ಯ ಪಾಲಿಟಿಕ್ಸ್​ ಇಂಡ್ಯಾನೇ ತಿರುಗಿ ನೋಡುವಂತೆ ಮಾಡ್ತೀದಿ‌ ಯಾಕಾಗಿ ಗೊತ್ತಾ?

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪಟ್ಟಿ.
davangerevijaya.comBy davangerevijaya.com9 April 2024Updated:9 April 2024No Comments3 Mins Read
Facebook WhatsApp Twitter
Share
WhatsApp Facebook Twitter Telegram

ದಾವಣಗೆರೆ : ಮಂಡ್ಯ ರಾಜಕಾರಣ ಅಂದ್ರೆ ಇಡೀ ಇಂಡ್ಯಾನೇ ತಿರುಗಿ ನೋಡುತ್ತೆ ಅನ್ನೋ ಮಾತಿದೆ. ಅದೇ ರೀತಿ 2019ರಲ್ಲಿ ಅಂದಿನ ಸಿಎಂ ಆಗಿದ್ದ ಹೆಚ್​ಡಿಕೆ ತಮ್ಮ ಮಗನನ್ನ ಅಖಾಡಕ್ಕಿಳಿಸಿದ್ರೆ, ನಟ ಅಂಬರೀಷ್ ಅವರು ತೀರಿಕೊಂಡಿದ್ದ ಅನುಕಂಪದ ಅಲೆಯಲ್ಲಿ ಸುಮಲತಾ ಅವರು ಸ್ಪರ್ಧಿಸಿದ್ರು. 

ಆ ಜಿದ್ದಾಜಿದ್ದಿನ ಹೋರಾಟದಲ್ಲಿ ಕೊನೆಗೂ ಸುಮಲತಾ ಗೆದ್ದು ಬೀಗಿದ್ರು. ಅಂದಿನ ಸಿಎಂ ಹೆಚ್​ಡಿಕೆ ಮೀಸೆ ಮಣ್ಣಾಗಿತ್ತು. ಆದ್ರೀಗ ಬದಲಾದ ಕಾಲಘಟ್ಟದಲ್ಲಿ ಎಲ್ಲವೂ ಬದಲಾಗಿದೆ. ಸುಮಲತಾ ಕಣದಿಂದ ಹೊರಗಿದ್ದು, ವಾರ್​ ಒನ್ ಸೈಡ್​ ಆಗೋಗಿದೆ. ಗೆಲ್ಲೋದು ನಾನೇ.. ರೊಟ್ಟಿ ತಾನಾಗೇ ಜಾರಿ ತುಪ್ಪಕ್ಕೆ ಬಿದ್ದಿದೆ ಅಂತೇಳಿ ಮಾಜಿ ಸಿಎಂ ಹೆಚ್​ಡಿಕೆ ಭಾವಿಸಿರಬಹುದು. 

ಆದ್ರೆ ಸುಮಲತಾ ಸೈಡ್​ಕೊಟ್ರೂ, ಮಂಡ್ಯ ಜನ ಹೆಚ್​ಡಿಕೆಗೆ ಗೇಟ್​ಪಾಸ್ ಕೊಡ್ತಾರಾ ಅನ್ನೋ ಅನುಮಾನ ಇದೀಗ ದುತ್ ಅಂತ ಎದ್ದು ಕೂತಿದೆ. ಹಾಗಾದ್ರೆ ಮಂಡ್ಯದಲ್ಲಿ ಮಾಜಿ ಸಿಎಂಗೆ ಸೋಲಿನ ಭೀತಿ ಶುರುವಾಗಿರೋದ್ಯಾಕೆ ಗೊತ್ತಾ.? 

ಮಂಡ್ಯ.. ಈ ಹಿಂದೆ ಜೆಡಿಎಸ್​ನ ಭದ್ರಕೋಟೆಯಾಗಿತ್ತು. ಆದ್ರೆ 2019ರಲ್ಲಿ ಜೆಡಿಎಸ್​ ಭದ್ರಕೋಟೆಯನ್ನ ಛಿದ್ರ ಮಾಡಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆದ್ದು ಬೀಗಿದ್ರು.. ಆ ಗೆಲುವು ಜೆಡಿಎಸ್​ ನಾಯಕರಿಗೆ ಅರಗಿಸಿಕೊಳ್ಳೋದಕ್ಕೆ ಸಾಧ್ಯವೇ ಆಗಿರ್ಲಿಲ್ಲ. ಅಂಥದ್ದೊಂದು ಆಘಾತವನ್ನ ಸುಮಲತಾ ಕಳೆದ ಚುನಾವಣೆಯಲ್ಲಿ ಕೊಟ್ಟಿದ್ರು. ಹೀಗಾಗಿ ಮಂಡ್ಯವನ್ನ ಮತ್ತೆ ಜೆಡಿಎಸ್​ ತೆಕ್ಕೆಗೆ ತಗೋಬೇಕು ಅಂತಾನೇ ಕುಮಾರಸ್ವಾಮಿ ಬಿಜೆಪಿ ಜೊತೆ ಲೋಕಸಭಾ ಚುನಾವಣಾ ದೋಸ್ತಿ ಕುದುರಿಸಿಕೊಂಡಿರೋದು.. ನಿಮಗೆ ಗೊತ್ತಿರ್ಲಿ, ಜೆಡಿಎಸ್​ ಬಿಜೆಪಿ ಜೊತೆ ದೋಸ್ತಿ ಮಾಡ್ಕೊಂಡಿಲ್ಲ ಅಂದ್ರೂ ಒಂದೆರಡು ಸೀಟು ಗೆಲ್ಲೋದು ಗ್ಯಾರಂಟಿ ಇತ್ತು. 

ಆದ್ರೀಗ ದೋಸ್ತಿ ಮಾಡ್ಕೊಂಡಿರೋ ಜೆಡಿಎಸ್​​ಗೆ ಸಿಕ್ಕಿರೋದು ಎಷ್ಟು ಕ್ಷೇತ್ರಗಳ ಟಿಕೆಟ್​, ಕೇವಲ ಮೂರು. ಹಾಸನ ಹೆಂಗಿದ್ರೂ ಜೆಡಿಎಸ್ ತೆಕ್ಕೆಯಲ್ಲಿತ್ತು. ಈಗ ಮಂಡ್ಯದ ಜೊತೆಗೆ ಕೋಲಾರ ಟಿಕೆಟ್ ಜೆಡಿಎಸ್ ಗಿಟ್ಟಿಸಿಕೊಂಡಿದೆ. ಅಲ್ಲಿಗೆ ನೀವೇ ಯೋಚ್ನೆ ಮಾಡಿ, ಮಂಡ್ಯ ಕ್ಷೇತ್ರದ ಟಿಕೆಟ್​​ಗಾಗಿ ಹೆಚ್​ಡಿಕೆ ಎಷ್ಟೆಲ್ಲಾ ಸರ್ಕಸ್ ಮಾಡಿದ್ರು ಅನ್ನೋದನ್ನ. 

ಹೀಗೆ ವ್ಯವಸ್ಥಿತವಾಗಿ ಬಿಜೆಪಿ ಜೊತೆ ದೋಸ್ತಿ ಕುದುರಿಸಿದ್ದ ಹೆಚ್​ಡಿಕೆ ಸುಮಲತಾ ಅವರ ಜೊತೆ ಸಂಘರ್ಷಕ್ಕಿಳಿಯದೇ ಸಲೀಸಾಗಿ ಅವರನ್ನ ಅಖಾಡಕ್ಕಿಳಿಯದಂತೆ ನೋಡಿಕೊಂಡಿದ್ರು. ಆದ್ರೆ ಸುಮಲತಾ ಸೈಡ್​ಲೈನ್ ಆದ್ರೂ ಮಾಜಿ ಸಿಎಂ ಹೆಚ್​ಡಿಕೆಗೆ ಬರಸಿಡಿಲು ಬಡೆಯುವಂತಾ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾಯಿದೆ. ಅದುವೇ ಮಂಡ್ಯ ಜಾತಿ ಲೆಕ್ಕಾಚಾರ..

ಇದೇ… ಇದೊಂದೇ ಜಾತಿ ಲೆಕ್ಕಾಚಾರದ ಫೋಟೋ ನೋಡಿ, ದಳಪತಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿರೋದು. ದಳಪತಿಗಳು ಬಿಜೆಪಿ ಜೊತೆ ಕೈ ಜೋಡಿಸಿದ್ದರಿಂದ ಇಷ್ಟು ದಿನ ಜೆಡಿಎಸ್ ಬೆನ್ನಿಗಿದ್ದ ಅಹಿಂದ ಮತಗಳು ಕಾಂಗ್ರೆಸ್​ ಬೆನ್ನಿಗೆ ಸಾಲಿಡ್ಡಗಿ ಬಂದು ನಿಂತಿವೆ.. ಆ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಹೆಚ್​ಡಿಕೆಗಿಂತ ಹೆಚ್ಚು ಮತಗಳನ್ನ ಪಡೆದು ಸುಲಭವಾಗಿ ಗೆಲ್ತಾರೆ ಅನ್ನೋ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡ್ತಾಯಿದೆ. ಅದು ಹೇಗೆ ಅಂದ್ರಾ.? 

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪಟ್ಟಿಯ ಪ್ರಕಾರ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 7,89,420 ಒಕ್ಕಲಿಗ ಮತದಾರರಿದ್ದಾರೆ. ಇವರಲ್ಲಿ ಶೇಕಡಾ 75 ರಷ್ಟು ಮತದಾನ ನಡೆದರೆ 5,92,065 ಮತಗಳಾಗುತ್ತವೆ. ಇದರಲ್ಲಿ HD ಕುಮಾರಸ್ವಾಮಿ ಅವರರಿಗೆ ಶೇಕಡಾ 70 ರಷ್ಟು ಮತಗಳು ಹೋಗುತ್ತವೆ. ಅಂದರೆ 4,14,446 ಮತಗಳು ಸೇರುತ್ತವೆ. ಉಳಿದ 30% ಅಂದರೆ 1,77,620 ಮತಗಳು ಸ್ಟಾರ್ ಚಂದ್ರು ಅವರಿಗೆ ಸೇರಲಿವೆ. ಇದೇ ರೀತಿ ಮಂಡ್ಯ ಅಖಾಡದಲ್ಲಿ ಪರಿಶಿಷ್ಟ ಜಾತಿ/ ಪಂಗಡದ 3,03,601 ಮತಗಳಿವೆ. ಇದರಲ್ಲಿ ಕುಮಾರಸ್ವಾಮಿಗೆ 25 ಪರ್ಸೆಂಟ್ ಮತಗಳು, ಸ್ಟಾರ್ ಚಂದ್ರುಗೆ 75 ಪರ್ಸೆಂಟ್ ಮತಗಳು ಬೀಳೋ ಸಾಧ್ಯತೆ ಇದೆ. ಇದೇ ರೀತಿ ಲಿಂಗಾಯತರ 60 ಪರ್ಸೆಂಟ್ ಮತಗಳನ್ನ ಹೆಚ್​ಡಿಕೆ ಸೆಳೆದ್ರೆ, ಬ್ರಾಹ್ಮಣರ ಶೇಕಡ 90 ರಷ್ಟು ಮತಗಳನ್ನ ಸೆಳೆಯಬಹುದು.

ಆದ್ರೆ ಮಂಡ್ಯದಲ್ಲಿ 1,29,145 ಮುಸ್ಲಿಂ ಮತಗಳಿದ್ದು, ಇದ್ರಲ್ಲಿ ಶೇಕಡ 95 ಪರ್ಸೆಂಟ್ ಮತಗಳು ಸ್ಟಾರ್ ಚಂದ್ರು ಬೆನ್ನಿಗೆ ನಿಂತಿವೆ. ಅದೇ ರೀತಿ ಕುರುಬ, ಗಂಗಾಮಸ್ಥರ ಮತಗಳು ಶೇಕಡ 80ರಷ್ಟು ಸ್ಟಾರ್ ಚಂದ್ರು ಪಾಲಾಗೋ ಸಾಧ್ಯತೆ ಇದೆ. ಹೀಗೆ ಒಟ್ಟಾರೆ ಮಂಡ್ಯ ಲೋಕಸಭಾ ಕ್ಷೇತ್ರದ ಜಾತಿ ಲೆಕ್ಕಾಚಾರ ನೋಡಿದ್ರೆ ಕೆಲವೇ ಸಾವಿರ ಮತಗಳ ಅಂತರದಿಂದ ಯಾರುಬೆಕಾದರೂ ಗೆಲ್ಲಬಹುದು ಅಂತೇಳಿ ಈ ಜಾತಿ ಲೆಕ್ಕಾಚಾರದ ವರದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾಯಿದೆ. 

ಹಾಗೊಮ್ಮೆ ಈ ಜಾತಿ ಲೆಕ್ಕಾಚಾರ ವರ್ಕೌಟ್ ಆಗಿ ಸ್ಟಾರ್​ ಚಂದ್ರು ಗೆದ್ರೆ ಮಾಜಿ ಸಿಎಂ ಹೆಚ್​ಡಿಕೆಗೆ ಮತ್ತೆ ಮರ್ಮಾಘಾತವಾದಂತೆಯೇ ಲೆಕ್ಕ.. ಕಳೆದ ಸಲ ಇದೇ ಮಂಡ್ಯದಲ್ಲಿ ನಿಂತು ಹೆಚ್​ಡಿಕೆ ಮಗ ನಿಖಿಲ್ ಸೋತಿದ್ರು. ಈಗ ಅಪ್ಪ ಸೋತಿದ್ದಾರೆ ಅನ್ನೋ ಮೆಸೇಜ್ ಪಾಸ್ ಆಗುತ್ತೆ. ಜೊತೆಗೆ ಮಂಡ್ಯ ಜನ ಜೆಡಿಎಸ್​​ ಪಕ್ಷವನ್ನ ತಮ್ಮ ಕ್ಷೇತ್ರದಿಂದ ಕಿತ್ತೆಸೆದಿದ್ದಾರೆ ಅನ್ನೋ ಸಂದೇಶ ಕೂಡ ರವಾನೆಯಾದಂತಾಗಿದೆ. 

ಹಾಗಾದ್ರೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಈ ಜಾತಿ ಸಮೀಕ್ಷಾ ವರದಿಯ ಬಗ್ಗೆ ನೀವೇನಂತಿರಾ? ಸುಮ ಸೈಡ್​ಕೊಟ್ರೂ, ಹೆಚ್​ಡಿಕೆಗೆ ಮಂಡ್ಯ ಮತದಾರರು ಗೇಟ್​ಪಾಸ್ ಕೊಡ್ತಾರಾ?…ಗೊತ್ತಿಲ್ಲ

Anukampa Ale Featured HDK Lok Sabha election .... Mandya Sumalatha Top News ಅನುಕಂಪ ಅಲೆ ಎಚ್ ಡಿಕೆ ಮಂಡ್ಯ ಲೋಕಸಭೆ ಚುನಾವಣೆ ಸುಮಲತಾ
Share. WhatsApp Facebook Twitter Telegram
davangerevijaya.com
  • Website

Related Posts

ಎಸ್ಸೆಸ್ಸೆಲ್ಸಿ : ಕ್ಯಾನ್ಸರ್‌ ಗೆದ್ದ ಯುವತಿ ಸರಕಾರಿ ಶಾಲೆಗೆ ಫಸ್ಟ್, ಹಾಗಾದ್ರೆ ಆ ಶಾಲೆ ಯಾವುದು?

3 May 2025

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಪೊಲೀಸರಿಗೆ ಇಲ್ಲಿ ರಕ್ಷಣೆ ಇಲ್ಲ : ಮಾಜಿ ಸಚಿವ ರೇಣುಕಾಚಾರ್ಯ

2 May 2025

ಜನಗಣತಿಯ ಜೊತೆಗೆ ಜಾತಿಗಣತಿಯನ್ನು ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ : ಬಿಜೆಪಿ ನಾಯಕ

2 May 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,639 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,275 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,072 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,580 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
ಕ್ರೈಂ ಸುದ್ದಿ

ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ ?…ಏನು ಕಾರಣ?

By davangerevijaya.com2 June 20250

ಶಿವಮೊಗ್ಗ : ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ವಿಷ್ಣುಪ್ರಿಯಾ (22) ಮೃತಪಟ್ಟ…

ಜನಮೆಚ್ಚಿದ ಪೊಲೀಸ್ ಗೆ ಕಮೆಂಡೇಶನ್ ಪದಕ

30 May 2025

ನಾಯಿ ಕಾಣೆಯಾದರೆ ಇಲ್ಲಿ ಸುದ್ದಿ ಕೊಡಿ?

28 May 2025

ಅಧ್ಯಕ್ಷರಾಗಿ ಯುವ ನೇತಾರ ಸಚಿನ್ ನೇಮಕ

28 May 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ ?…ಏನು ಕಾರಣ?

2 June 2025

ಜನಮೆಚ್ಚಿದ ಪೊಲೀಸ್ ಗೆ ಕಮೆಂಡೇಶನ್ ಪದಕ

30 May 2025

ನಾಯಿ ಕಾಣೆಯಾದರೆ ಇಲ್ಲಿ ಸುದ್ದಿ ಕೊಡಿ?

28 May 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,639 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,275 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,072 Views

Subscribe to Updates

Get the latest creative news from SmartMag about art & design.

Recent Posts
  • ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ ?…ಏನು ಕಾರಣ?
  • ಜನಮೆಚ್ಚಿದ ಪೊಲೀಸ್ ಗೆ ಕಮೆಂಡೇಶನ್ ಪದಕ
  • ನಾಯಿ ಕಾಣೆಯಾದರೆ ಇಲ್ಲಿ ಸುದ್ದಿ ಕೊಡಿ?
  • ಅಧ್ಯಕ್ಷರಾಗಿ ಯುವ ನೇತಾರ ಸಚಿನ್ ನೇಮಕ
  • ವಿಐಎಸ್ಎಲ್ ಗುತ್ತಿಗೆದಾರರ ಸಂಘದ ಚುನಾವಣೆ : ಹೊರಬಿತ್ತು ಫಲಿತಾಂಶ, ಹೇಗಿತ್ತು ಅದರ ಝಲಕ್ ? ಇವರೇ ಆ ಹೊಸ ನಾಯಕ?
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.