Author: davangerevijaya.com

*✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕* *🪐ಇಂದಿನ ರಾಶಿ ಭವಿಷ್ಯ*🪐 *🌾27/07/2024 ಶನಿವಾರ🌾* *01,⚜️ಮೇಷ ರಾಶಿ*⚜️ ಸಹೋದರರೊಂದಿಗೆ ಸ್ಥಿರಾಸ್ತಿ ವಿವಾದಗಳು ಬಗೆಹರಿಯುತ್ತವೆ. ಉದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ. ವ್ಯಾಪಾರ ಪಾಲುದಾರರೊಂದಿಗೆ ಹೊಸ ಒಪ್ಪಂದಗಳನ್ನುಮಾಡಿಕೊಳ್ಳಲಾಗುತ್ತದೆ. ನಿರುದ್ಯೋಗಿಗಳಿಗೆ ಕಾರ್ಯಸಿದ್ಧಿ ಉಂಟಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕಾರ್ಯಗತಗೊಳಿಸುತ್ತೀರಿ. ಆರ್ಥಿಕ ಅನುಕೂಲತೆ ಉಂಟಾಗುತ್ತದೆ, ಅದೃಷ್ಟದ ದಿಕ್ಕು:ಉತ್ತರ ಅದೃಷ್ಟದ ಸಂಖ್ಯೆ:6 ಅದೃಷ್ಟದ ಬಣ್ಣ:ಹಸಿರು *02,⚜️ವೃಷಭ ರಾಶಿ*⚜️ ಹಳೆ ಸಾಲವಸೂಲಿಯಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬವಾದರೂ ನಿಗದಿತ ಸಮಯಕ್ಕೆಪೂರ್ಣಗೊಳಿಸುತ್ತೀರಿ. ಸ್ನೇಹಿತರಿಂದ ಪ್ರಮುಖ ಮಾಹಿತಿಯನ್ನುಸಂಗ್ರಹಿಸುತ್ತೀರಿ ಮತ್ತುನಿಮ್ಮಮಾತಿಗೆಸಮಾಜದಲ್ಲಿ ಮೌಲ್ಯ ಹೆಚ್ಚಾಗುತ್ತದೆ. ವ್ಯಾಪಾರ ಉದ್ಯೋಗಗಳು ಹೆಚ್ಚುಉತ್ಸಾಹದಾಯಕವಾಗಿರುತ್ತವೆ. ದೂರ ಪ್ರಯಾಣ ಲಾಭದಾಯಕವಾಗಿರುತ್ತದೆ, ಅದೃಷ್ಟದ ದಿಕ್ಕು:ಪಶ್ಚಿಮ ಅದೃಷ್ಟದ ಸಂಖ್ಯೆ:8 ಅದೃಷ್ಟದ ಬಣ್ಣ:ಹಳದಿ *03,⚜️ಮಿಥುನ ರಾಶಿ*⚜️ ದೂರಪ್ರಯಾಣವನ್ನುಮುಂದೂಡುವುದು ಉತ್ತಮ. ಉದ್ಯೋಗದಲ್ಲಿ ಹೆಚ್ಚುವರಿ ಕೆಲಸದ ಹೊರೆಯಿಂದಾಗಿ, ಸಾಕಷ್ಟು ವಿಶ್ರಾಂತಿಇರುವುದಿಲ್ಲ. ವ್ಯಾಪಾರಗಳು ಮತ್ತಷ್ಟು ನಿಧಾನವಾಗುತ್ತವೆ. ಮನೆಯ ಹೊರಗೆ ಗೊಂದಲಮಯ ಸನ್ನಿವೇಶಗಳಿರುತ್ತವೆ. ನಿರುದ್ಯೋಗಿಗಳಿಗೆ ನಿರಾಸೆ ಉಂಟಾಗುತ್ತದೆ. ಮಕ್ಕಳ ಶಿಕ್ಷಣದ ಕಡೆ ಗಮನ ಹರಿಸುವುದು ಉತ್ತಮ, ಅದೃಷ್ಟದ ದಿಕ್ಕು:ಈಶಾನ್ಯ ಅದೃಷ್ಟದ ಸಂಖ್ಯೆ:5 ಅದೃಷ್ಟದ…

Read More

ದಾವಣಗೆರೆ: ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿ ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ನೇತೃತ್ವದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಮಣಿಸಿ ಭಾರತವು ದಿಗ್ವಿಜಯ ಸಾಧಿಸಿದ ದಿನ. ಈ ದಿನದಂದು ದೇಶವೇ ಹಬ್ಬದ ದಿನದಂತೆ ಆಚರಿಸುತ್ತದೆ. ಯುದ್ಧದಲ್ಲಿ ಗೆಲ್ಲಲು ಯೋಧರ ತ್ಯಾಗ, ಬಲಿದಾನ ಇದೆ. ಅವರೆಲ್ಲರನ್ನೂ ಸ್ಮರಿಸಿಕೊಳ್ಳುವ ದಿನ. ಪ್ರತಿಯೊಬ್ಬರೂ ಹುತಾತ್ಮರಾದವರಿಗೆ ಗೌರವಪೂರ್ಣ ನಮನ ಸಲ್ಲಿಸೋಣ ಎಂದು ಹೇಳಿದರು. ಭಾರತದ ವಿರುದ್ಧ ಯುದ್ಧ ಸಾರಿದ ಪಾಕ್ ಗೆ ತಕ್ಕ ಪಾಠ ಕಲಿಸಿದ ದಿನ. 1999ರಲ್ಲಿ ನಡೆದ ಈ ಯುದ್ಧದಲ್ಲಿ ಭಾರತೀಯ ಸೇನೆಯ ಸ್ವಾಭಿಮಾನ ಪ್ರಶ್ನಿಸುವ ವಿಷಯವಾಗಿತ್ತು. ನೂರಾರು ಸೈನಿಕರು ಹುತಾತ್ಮರಾದರೂ ಅಳುಕದೇ ಮುನ್ನುಗ್ಗಿ ಯೋಧರು ದೇಶದ ಗಡಿ ಸಂರಕ್ಷಿಸುವ ಮೂಲಕ ರಾಷ್ಟ್ರದ ಸೇನೆಯ ಶಕ್ತಿ ವಿಶ್ವಕ್ಕೆ ಗೊತ್ತಾಗುವಂತಾಯಿತು ಎಂದು ತಿಳಿಸಿದರು. ದೇಶದ ಸಾರ್ವಭೌಮತೆಗೆ ಧಕ್ಕೆ ಬಂದಾಗ ಎಲ್ಲರೂ ಒಗ್ಗಟ್ಟಗಾಬೇಕು. ದೇಶದ ಪ್ರತಿಷ್ಠೆ, ಆಂತರಿಕ ವಿಚಾರ, ಭದ್ರತೆ ವಿಚಾರದಲ್ಲಿ ಎಂದಿಗೂ ರಾಜಿ ಆಗುವುದು…

Read More

ದಾವಣಗೆರೆ: ಜಿಲ್ಲಾ ಛಲವಾದಿ ಮಹಾಸಭಾದ ವತಿಯಿಂದ 2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಶೇ.75ರಷ್ಟು ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 80ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಇದೇ ಜು.೨೮ ರಂದು ಬೆಳಿಗ್ಗೆ 11.00 ಗಂಟೆಗೆ ಬಾಪೂಜಿ ಇಂಜಿನಿಯರಿಂಗ್ ಕಾಲೇಜು (ಬಿಐಇಟಿ) ನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ ಎಂದು ಮಹಾಸಭಾದ ಅಧ್ಯಕ್ಷ ಎನ್.ರುದ್ರಮುನಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮೈಸೂರಿನ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಗೃಹಮಂತ್ರಿ ಡಾ. ಜಿ.ಪರಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಸವೇಶ್ವರರ ಭಾವಚಿತ್ರಕ್ಕೆ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ, ಅಂಬೇಡ್ಕರ್ ಭಾವಚಿತ್ರಕ್ಕೆ ಎಸ್.ಎಸ್.ಮಲ್ಲಿಕಾರ್ಜುನ್, ಒನಕೆ ಓಬವ್ವರ ಭಾವಚಿತ್ರಕ್ಕೆ ನೆಹರು ಚ. ಓಲೇಕಾರ್ ಹಾಗೂ ಬಿ.ಬಸವಲಿಂಗಪ್ಪ ಭಾವಚಿತ್ರಕ್ಕೆ ಛಲವಾದಿ ನಾರಾಯಣಸ್ವಾಮಿ ಪುಷ್ಪಾರ್ಚನೆ ಮಾಡಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಶಾಮನೂರು ಶಿವಶಂಕರಪ್ಪ, ಕೆ.ಎಸ್.ಬಸವಂತಪ್ಪ, ಡಿ.ಜಿ.ಶಾಂತನಗೌಡ, ಬಿ.ಪಿ.ಹರೀಶ್, ಬಿ.ದೇವೇಂದ್ರಪ್ಪ, ಬಸವರಾಜ ವಿ.…

Read More

ದಾವಣಗೆರೆ: ಪಿ.ಜೆ.‌ ಬಡಾವಣೆಯಲ್ಲಿನ‌ ಆದಿ ಕರ್ನಾಟಕ ವಿದ್ಯಾಭಿವೃದ್ದಿ ಸಂಘದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಜು.‌ 28 ರಂದು ಸಮವಸ್ತ್ರ, ಶೂ, ದಿಂಬು ಇತರೆ ಸಾಮಗ್ರಿಗಳ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಕಾರ್ಯದರ್ಶಿ ಬಿ.ಎಚ್. ವೀರಭದ್ರಪ್ಪ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 1974 ರಲ್ಲಿ ಪ್ರಾರಂಭ ವಾದ ಹಾಸ್ಟೆಲ್ ನಲ್ಲಿ ಇರುವಂತಹ ನೂರು ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ದಿಂಬು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. ಭಾನುವಾರ ಬೆಳಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ.‌ ಮಹದೇವಪ್ಪ,ಗೃಹ ಸಚಿವ ಡಾ.‌ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಇತರರು ಭಾಗವಹಿಸುವರು. ಕಾರ್ಯಕ್ರಮದ ಮುನ್ನ ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು. ಸಂಘದ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ, ‌ಎಲ್.ಎಚ್. ಸಾಗರ್, ಜಿ. ರಾಕೇಶ್, ಮಂಜಪ್ಪ…

Read More

ದಾವಣಗೆರೆ ; ಕಾರ್ಗಿಲ್ ಯುದ್ಧ ಗೆದ್ದು 25 ವರ್ಷದ ಸಂಭ್ರಮಕ್ಕೆ  ಯುವಾ ಬ್ರಿಗೇಡ್ ನಿಂದ ಮ್ಯಾರಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ನಾವೆಲ್ಲ ಸೇರಿ “ಕಾರ್ಗಿಲ್ ಗೆದ್ದಾಯ್ತು, ಇನ್ನೀಗ ಟಾರ್ಗೆಟ್ ಪಿಒಕೆ ಎಂಬ ಹೆಸರಿನಲ್ಲಿ ಯುವಾ ಬ್ರಿಗೇಡ್ ವತಿಯಿಂದ ಸೈನಿಕರ ಸಾಹಸಕ್ಕೆ, ತ್ಯಾಗ ಬಲಿದಾನಗಳಿಗೆ  ಗೌರವ ನೀಡುವ ದೃಷ್ಟಿಯಿಂದ  ಮ್ಯಾರಥಾನ್  ಆಯೋಜಿಸಲಾಗಿತ್ತು. ಚಾಣಕ್ಯ ಕಾಲೇಜ್ ಪ್ರೇರಣ ಅಕಾಡೆಮಿಯಿಂದ ಪ್ರಾರಂಭವಾದ ಮ್ಯಾರಥಾನ್  ಅಮರ್ ಜವಾನ್ ಪಾರ್ಕ್”  ತನಕ ಬಂದು ಗಿಡ ನೆಡುವ ಮೂಲಕ ಮುಕ್ತಾಯಗೊಂಡಿತು.ಸುಮಾರು 200 ಕ್ಕಿಂತ ಹೆಚ್ಚು ಜನ ಕಾಲೇಜ್ ವಿದ್ಯಾರ್ಥಿಗಳು, ಎನ್ ಸಿಸಿ ಕೆಡೆಟ್ಸ್, ಮಾಜಿ ಸೈನಿಕರು ಉಪಸ್ಥಿತರಿದ್ದರು.

Read More

ಶಿವಮೊಗ್ಗ : ಸಾಗರ ತಾಲೂಕಿನ ಆನಂದಪುರ ರೈಲ್ವೆ ಹಳಿ ಸಮೀಪದ ಕಾಲುವೆಯಲ್ಲಿ ಹೂಳಲಾಗಿದ್ದ ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ನಿವಾಸಿ ಸೌಮ್ಯ (27) ಶವವನ್ನು ಆರೋಪಿ ಪ್ರಿಯತಮನ ಸಮ್ಮುಖದಲ್ಲಿಯೇ ಗುರುವಾರ ಪೊಲೀಸರು ಹೊರತೆಗೆದಿದ್ದಾರೆ. ಪ್ರಿಯತಮ ಸೃಜನ್ (25) ನೀಡಿದ ಮಾಹಿತಿ ಆಧಾರದ ಮೇಲೆ, ಹೂಳಲಾಗಿದ್ದ ಶವವನ್ನು ಪೊಲೀಸರು ಹೊರತೆಗೆದಿದ್ದಾರೆ. ಈ ವೇಳೆ ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸರ್ಕಾರಿ ವೈದ್ಯರ ಮೂಲಕ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಏನೀದು ಘಟನೆ? : ಕೊಪ್ಪದ ಯುವತಿ ಸೌಮ್ಯ ಹಾಗೂ ಸಾಗರ ತಾಲೂಕು ತಾಳಗುಪ್ಪದ ಯುವಕ ಸೃಜನ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ತೀರ್ಥಹಳ್ಳಿಯ ಫೈನಾನ್ಸ್ ವೊಂದರಲ್ಲಿ ಸೃಜನ್ ಕೆಲಸ ಮಾಡುತ್ತಿದ್ದ. ಸದರಿ ಫೈನಾನ್ಸ್ ನಲ್ಲಿಯೇ ಸೌಮ್ಯ ತಾಯಿ ಕೂಡ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ. ಈ ವೇಳೆ ಸೌಮ್ಯ ಪರಿಚಯವಾಗಿದೆ. ಇದು ಪ್ರೇಮಕ್ಕೆ ತಿರುಗಿದೆ. ನಂತರ ಆರೋಪಿ ಫೈನಾನ್ಸ್ ನಲ್ಲಿನ ಕೆಲಸ ಬಿಟ್ಟು ನಂತರ ತನ್ನ ಊರಿಗೆ ಹಿಂದಿರುಗಿದ್ದ. ಕೆಲ ಕಾರಣಗಳಿಂದ ಇವರಿಬ್ಬರ…

Read More

ಸಾಲು ಅವಮಾನದಿಂದಲೇ ಸನ್ಮಾನ ಸಾಧ್ಯ…ಮಲ್ಲೇಶ್ ನಾಯ್ಕ್ ದಾವಣಗೆರೆ : ಪ್ರಸ್ತುತ ಬದಲಾಗುತ್ತಿರುವ ಜಗತ್ತಿನಲ್ಲಿ ಮನುಷ್ಯನ ಜೀವನ ನೋವು- ನಲಿವು, ಭೇದ-ಭಾವ, ಅಸೂಯೆ, ಸಿಟ್ಟು ,ಅವಮಾನ, ಗರ್ವ ,ಸೇಡು ಇವುಗಳನ್ನೇ ಸಾಧನೆ ಎಂದುಕೊಂಡಿರುವ ಆಧುನಿಕ ಯುವ ಪೀಳಿಗೆಯ ಭವಿಷ್ಯಕ್ಕೆ ತುಂಬಾ ಮಾರಕ . ಮಕ್ಕಳು ಮೋಡ ಕರಗಿ ಹನಿಗಟ್ಟಿ ನೆಲದತ್ತ ಸುರಿದ ಶುಭ್ರವಾದ ನೀರಿನಂತೆ, ನೆಲಕ್ಕೆ ಬಿದ್ದ ನಂತರವೇ ನೀರಹನಿ ಆಯಾ ನೆಲದ ಗುಣವನ್ನು ಪಡೆದು ಅಶುದ್ಧವಾಗುತ್ತದೆ. ಹಾಗೆ ಹುಟ್ಟುವಾಗ ಅಪ್ಪಟ ವಿಶ್ವಮಾನವ ಮರಿಯಾಗಿ ಹುಟ್ಟಿದ ಮಗುವಿಗೆ ಆದಷ್ಟು ಬೇಗ ಒoದು ಜಾತಿಗೆ ಸೇರಿದ ಹೆಸರನ್ನು ಕೊಟ್ಟು ಅದನ್ನು ನಿರಂತರವಾಗಿ ಅವಹೇಳನ ಮಾಡುವ ಈ ಪ್ರಸ್ತುತ ಯುಗದಲ್ಲಿ ವಿಜಯಶಾಲಿ ಆಗಬೇಕೆಂದರೆ ಸಾಲುಸಾಲು ಅವಮಾನವನ್ನು ಸಹಿಸಿಕೊಂಡರೆ ಮಾತ್ರ ಸಾಧ್ಯ . ಬಾಲ್ಯದಿಂದ ಹಿಡಿದು ಯೌವನದವರೆಗೆ ಏನೂ ತಿಳಿಯದೆ ಬೆಳೆ ಬೆಳೆದು ಬಿಡುತ್ತೆವೆ.ಅದರೊಂದಿಗೆ ಕಷ್ಟ ನೋವನ್ನು ಅರಿಯದೆ ಬೆಳೆದು ಬಿಡುತ್ತವೆ .ಆದರೆ ತದನಂತರ ಯವ್ವನದ ಬದುಕಿಗೆ ಕಾಲಿಟ್ಟರೆ ನಮ್ಮ ಮೇಲಿರುವ ಜವಾಬ್ದಾರಿಗಳು ನೂರಾರು ಕನಸುಗಳನ್ನು ತೊರೆಯುವಂತೆ…

Read More

ನಂದೀಶ್ ಭದ್ರಾವತಿ, ದಾವಣಗೆರೆ ಹದಿನೈದು ಪ್ರಶಸ್ತಿಗಳನ್ನು ಬಾಚಿಕೊಂಡ ದಾವಣಗೆರೆ ಅಂಚೆ ವಿಭಾಗ… ಮಂಗಳೂರಿನ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ… 2022ರ ಮೇ ತಿಂಗಳಿನಿಂದ ಪ್ರಾರಂಭಗೊಂಡ ದಾವಣಗೆರೆ ಅಂಚೆ ವಿಭಾಗ 2023-2024 ನೇ ಸಾಲಿನ ಉತ್ತಮ ಸಾಧನೆಗೆ ಭಾಜನವಾಗಿದ್ದು ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.… ಕರ್ನಾಟಕ ವಲಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ದಾವಣಗೆರೆ ಅಂಚೆ ವಿಭಾಗ ಹದಿನೈದು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ನಿನ್ನೆ ಮಂಗಳೂರಿನ ಓಷಿಯನ್ ಪರ್ಲ್ ಹೊಟೆಲ್ ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭದ ನೆರವೇರಿತು. ಅಂಚೆ ಜೀವ ವಿಮೆ ಪ್ರೀಮಿಯಂ, ಸಾವರಿನ್ ಗೋಲ್ಡ್ ಬಾಂಡ್ ಹಾಗೂ ಅಪಘಾತ ವಿಮೆ ಮಾಡಿಸುವಲ್ಲಿ ದ್ವಿತೀಯ ಸ್ಥಾನವನ್ನೂ ಹಾಗೂ ಅಂಚೆ ಜೀವವಿಮೆ ಮೊದಲ ವರ್ಷದ ಪ್ರೀಮಿಯಂ ಹಾಗೂ ಸ್ಪೀಡ್ ಪೋಸ್ಟ್ ಆದಾಯ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಇನ್ನು ದಾವಣಗೆರೆ ಹಾಗೂ ಚನ್ನಗಿರಿ ಅಂಚೆ ಉಪ ವಿಭಾಗಗಳು ಕ್ರಮವಾಗಿ ಅಂಚೆ ಜೀವವಿಮೆ ಹಾಗೂ ಅಪಘಾತ ವಿಮೆ ಮಾಡಿಸುವಲ್ಲಿ ಪ್ರಶಸ್ತಿ ಪಡೆದುಕೊಂಡಿವೆ. ನಗರದ…

Read More

ದಾವಣಗೆರೆ : ಆಗಸ್ಟ್ 5 ಅಥವಾ 6 ರಂದು ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆದು, ತದನಂತರ ನಾಲೆಗೆ ನೀರು ಹರಿಸಲು ತೀರ್ಮಾನಿಸಬೇಕು ಎಂದು ನಿನ್ನೆ ನಡೆದ ಕರ್ನಾಟಕ ನೀರಾವರಿ ನಿಗಮದ ಸಭೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ಶಾಸಕರು ಸಚಿವರು ಚರ್ಚಿಸಿರುವುದು ದುರ್ದೈವ ಸಂಗತಿಯಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ, ರೈತ ಮುಖಂಡ ಬಿ‌ಎಂ ಸತೀಶ್ ಖಂಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ದಾವಣಗೆರೆ ಜಿಲ್ಲೆಯ ಜೀವನಾಡಿ ಭದ್ರಾ ಡ್ಯಾಂ ನೀರಿನ ಮಟ್ಟ ದಿನೇ ದಿನೇ ಹೆಚ್ಚಾಗುತ್ತಿದೆ. ನೀರಿನ ಮಟ್ಟ ಇಂದು ಬೆಳಗ್ಗೆ 6 ಗಂಟೆಗೆ 171 ಅಡಿ 6 ಇಂಚು ಇದ್ದು, 26044 ಕ್ಯೂಸೆಕ್ ಒಳಹರಿವು ಇದೆ. ಇಂದು ಒಳಹರಿವು,17383 ಕ್ಯೂಸೆಕ್ ಇದ್ದದ್ದು ಇಂದು ಏರಿಕೆಯಾಗಿದೆ. ಡ್ಯಾಂ ತುಂಬುವುದು ಗ್ಯಾರಂಟಿಯಾಗಿದೆ. ರೈತರಲ್ಲಿ ಸಂತಸ ಮನೆ ಮಾಡಿದೆ. ಮೊನ್ನೆ ನಡೆದ ರೈತರ ಸಭೆಯಲ್ಲಿ ಜಿಲ್ಲಾಧಿಕಾರಿಯವರು ಇನ್ನೊಂದೇರಡು ದಿನಗಳಲ್ಲಿ ನಾಲೆಗೆ ನೀರು ಹರಿಸಲಾಗುವುದು ಎಂದು ಹೇಳಿದ್ದರು. ಅದರಂತೆ ಇಂದಿನಿಂದ ನೀರು ಹರಿಸಿದ್ರೆ, ಕಳೆದ…

Read More

ದಾವಣಗೆರೆ : ಆಗಸ್ಟ್ 5 ಅಥವಾ 6 ರಂದು ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆದು, ತದನಂತರ ನಾಲೆಗೆ ನೀರು ಹರಿಸಲು ತೀರ್ಮಾನಿಸಬೇಕು ಎಂದು ನಿನ್ನೆ ನಡೆದ ಕರ್ನಾಟಕ ನೀರಾವರಿ ನಿಗಮದ ಸಭೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ಶಾಸಕರು ಸಚಿವರು ಚರ್ಚಿಸಿರುವುದು ದುರ್ದೈವ ಸಂಗತಿಯಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ, ರೈತ ಮುಖಂಡ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ್ ಕಡ್ಲೇಬಾಳ್ ಖಂಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ದಾವಣಗೆರೆ ಜಿಲ್ಲೆಯ ಜೀವನಾಡಿ ಭದ್ರಾ ಡ್ಯಾಂ ನೀರಿನ ಮಟ್ಟ ದಿನೇ ದಿನೇ ಹೆಚ್ಚಾಗುತ್ತಿದೆ. ನೀರಿನ ಮಟ್ಟ ಇಂದು ಬೆಳಗ್ಗೆ 6 ಗಂಟೆಗೆ 171 ಅಡಿ 6 ಇಂಚು ಇದ್ದು, 26044 ಕ್ಯೂಸೆಕ್ ಒಳಹರಿವು ಇದೆ. ಇಂದು ಒಳಹರಿವು,17383 ಕ್ಯೂಸೆಕ್ ಇದ್ದದ್ದು ಇಂದು ಏರಿಕೆಯಾಗಿದೆ. ಡ್ಯಾಂ ತುಂಬುವುದು ಗ್ಯಾರಂಟಿಯಾಗಿದೆ. ರೈತರಲ್ಲಿ ಸಂತಸ ಮನೆ ಮಾಡಿದೆ. ಮೊನ್ನೆ ನಡೆದ ರೈತರ ಸಭೆಯಲ್ಲಿ ಜಿಲ್ಲಾಧಿಕಾರಿಯವರು ಇನ್ನೊಂದೇರಡು ದಿನಗಳಲ್ಲಿ ನಾಲೆಗೆ ನೀರು ಹರಿಸಲಾಗುವುದು ಎಂದು ಹೇಳಿದ್ದರು. ಅದರಂತೆ…

Read More