- ಪ್ರಮುಖ ಸುದ್ದಿ
- ದಾವಣಗೆರೆ ವಿಶೇಷ
- ಕ್ರೈಂ ಸುದ್ದಿ
- ರಾಜಕೀಯ ಸುದ್ದಿ
- ರೈತಮಿತ್ರ
- ಅಡಕೆ ಧಾರಣೆ
- ಚಿನ್ನ, ಬೆಳ್ಳಿ ಧಾರಣೆ
- Blog
Subscribe to Updates
Get the latest creative news from FooBar about art, design and business.
Author: davangerevijaya.com
ಮಾಯಕೊಂಡ (ದಾವಣಗೆರೆ) ಮಾಯಕೊಂಡ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹಾಗೂ ಕನ್ನಡ ಹಾಗೂ ತಮಿಳು ನಟಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡು ಮಾತನಾಡಿದ್ದಾರೆ..ಹಾಗಾದ್ರೆ ಅವರು ಏನು ಮಾತನಾಡಿದ್ರು ತಪ್ಪದೇ ನೋಡಿ.. ನಾನು ಎಲ್ಲಿ ಹೋಗಿಲ್ಲ, ನಾನು ದಾವಣಗೆರೆಯಲ್ಲಿಯೇ ಇದ್ದೇನೆ, ಒಂದಿಷ್ಟು ಕಾಲ ಅಮೆರಿಕಾಗೆ ಹೋಗಿದ್ದೇ. ನಾನು ಕಾಂಗ್ರೆಸ್ ಕಾರ್ಯಕರ್ತೆ, ಮಾಯಕೊಂಡದ ಜನರೊಂದಿಗೆ ಇದ್ದೇನೆ. ಈಗಲೂ ಇದ್ದೇನೆ ಎಂದು ಹೇಳಿದರು. ಮಾಯಕೊಂಡದ ಜನರ ಕಷ್ಟದಲ್ಲಿ ನೀವಿಲ್ಲ ಯಾಕಾಗಿ ಎಂಬ ಪ್ರಶ್ನೆಗೆ ಉತ್ತರಿಸಿದ ಸವಿತಾಬಾಯಿ, ನಾನು ಖಂಡಿತಾ ಮಾಯಕೊಂಡದ ಜನರೊಂದಿಗೆ ಇದ್ದೇನೆ. ನಾನು ಮಾಯಕೊಂಡದ ಮನೆ ಮಗಳು. ಸೋತರೂ ನಾ ಅವರೊಂದಿಗೆ ಇದ್ದೇನೆ ಎಂದರು… ಹಾಲಿ ಶಾಸಕರು ಕೆಲಸ ಮಾಡುತ್ತಿಲ್ಲ ಎಂಬ ಆರೋಪಕ್ಜೆ ಉತ್ತರಿಸಿದ ಸವಿತಾಬಾಯಿ, ಇಲ್ಲ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸ ಮಾಡುತ್ತಾರೆ ಎಂದು ಹಾರೈಕೆ ಉತ್ತರ ನೀಡಿದರು. ಈ ಹಿಂದೆ ಈಗಿನ ಹಾಲಿನ ಶಾಸಕರ ವಿರುದ್ದ ನೀವು ಎಫ್ ಐ ಆರ್ ಹಾಕಿದ್ದೀರಿ, ಏನಾದ್ರೂ ರಾಜಕೀಯವಾಗಿ ಒಪ್ಪಂದ ನಡೆದಿದೆಯೇ…
ದಾವಣಗೆರೆ : ತ್ರಿಚಕ್ರ ವಾಹನ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ತ್ರಿಚಕ್ರ ವಾಹನದಲ್ಲಿದ್ದ ತಾತಾ-ಮೊಮ್ಮಗ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತ್ರಿಚಕ್ರ ಬೈಕ್ ನಲ್ಲಿ ಪತ್ನಿ, ತಂದೆ ಹಾಗು ಪುತ್ರನ ಜೊತೆಗೆ ವಿಕಲಚೇತನ ಬರುತ್ತಿದ್ದರು. ಈ ವೇಳೆ ಜಗಳೂರು ಕಡೆಯಿಂದ ಬರುತ್ತಿದ್ದ ತ್ರಿಚಕ್ರ ಬೈಕಿಗೆ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರು ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಗಾಯಾಳುಗಳಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ : ತಾಲೂಕಿನ ಕೈದಾಳೆ ಗ್ರಾಮದ ಯೋಧನೊಬ್ಬ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಛತ್ತೀಸ್ಗಢದಲ್ಲಿ ಸೇವೆ ಸಲ್ಲಿಸುತ್ತಿದ್ದ ದಾವಣಗೆರೆಯ ಸಿಆರ್ಪಿಎಫ್ ಯೋಧ ಉಮೇಶ್ (34) ಆತ್ಮಹತ್ಯೆ ಮಾಡಿಕೊಂಡವರು. ಸಾಲಬಾಧೆ ಹಾಗೂ ಜೀವನದಲ್ಲಿ ಜುಗುಪ್ಸೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಳೆದೊಂದು ತಿಂಗಳ ಹಿಂದೆ ರಜೆಗಾಗಿ ಗ್ರಾಮಕ್ಕೆ ಬಂದಿದ್ದ ಉಮೇಶ್ ಅವರು ರಜೆ ಮುಗಿಸಿ ಡ್ಯೂಟಿಗೆ ಮತ್ತೆ ಹೊರಟಿದ್ದರು. ಆದರೆ ಕೈದಾಳೆ ಗ್ರಾಮದಿಂದ ಛತ್ತೀಸ್ಗಢಕ್ಕೆ ತೆರಳುವ ಮಾರ್ಗಮಧ್ಯ ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯೋಧನ ಆತ್ಮಹತ್ಯೆ ಬಗ್ಗೆ ಸಿಆರ್ಪಿಎಫ್ ಕಮಾಂಡ್ ಖಚಿತಪಡಿಸಿದೆ. ಸೇನಾಧಿಕಾರಿಗಳು ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಯೋಧ ಉಮೇಶ್ ಪಾರ್ಥಿವ ಶರೀರ ತಡರಾತ್ರಿ ಕೈದಾಳೆ ಗ್ರಾಮಕ್ಕೆ ಆಗಮಿಸಿದೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಛತ್ತೀಸ್ಗಢದ ಕೊಂಟಾ ಬೆಟಲಿಯನ್ 217ರಲ್ಲಿ ಅವರು ಕೆಲಸ ಮಾಡುತ್ತಿದ್ದರು. ಬುಧವಾರ ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.
ಬೆಂಗಳೂರು : ದ್ವೇಷ ರಾಜಕಾರಣ ಎಂಬುದು ಅವರ (ಕೇಂದ್ರ ಸಚಿವ ಕುಮಾರಸ್ವಾಮಿ) ಡಿಎನ್ ಎ ಯಲ್ಲಿದೆ. ಕೇತಗಾನಹಳ್ಳಿ ಜಮೀನು ವಿಚಾರವಾಗಿ ಕೇಸ್ ದಾಖಲಿಸಿರುವುದು ಎಸ್.ಆರ್ ಹಿರೇಮಠ್ ಅವರು. ಕೋರ್ಟ್ ಆದೇಶದಂತೆ ಅಧಿಕಾರಿಗಳು ಕೆಲಸ ಮಾಡಿದ್ದು, ನಾವು ಹೇಗೆ ದ್ವೇಷ ರಾಜಕಾರಣ ಮಾಡಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯಿಸಿದರು. ಕೇಂದ್ರ ಸಚಿವ ಕುಮಾರಸ್ವಾಮಿ ಕೇತಗಾನಹಳ್ಳಿ ಜಮೀನು ಒತ್ತುವರಿ ತೆರವು ದ್ವೇಷದ ರಾಜಕಾರಣ ಎಂಬ ಆರೋಪದ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನಾವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವಾ? ಈ ವಿಚಾರವಾಗಿ ಎಸ್.ಆರ್ ಹಿರೇಮಠ್ ಅವರು ಪ್ರಕರಣ ದಾಖಲಿಸಿದ್ದಾರೆ. ನನ್ನ ಮೇಲೂ ಹಿರೇಮಠ್ ಅವರು ಅನೇಕ ಕೇಸ್ ದಾಖಲಿಸಿದ್ದರು. ಅವರ ಅರ್ಜಿ ಮೇರೆಗೆ ನ್ಯಾಯಾಲಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಅಧಿಕಾರಿಗಳು ಕೋರ್ಟ್ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ದ್ವೇಷದ ರಾಜಕಾರಣ ಏನಿದೆ?” ಎಂದು ತಿಳಿಸಿದರು. *ಕುಮಾರಸ್ವಾಮಿ ಮರ್ಯಾದೆಯಾಗಿ ಇದ್ದರೆ ಕ್ಷೇಮ* “ನನ್ನ ವಿರುದ್ಧ…
*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫* *🪐,ದ್ವಾದಶರಾಶಿಗಳನಿತ್ಯಭವಿಷ್ಯ#ತಾರೀಖು#20/03/2025 ಗುರುವಾರ🪐* *01,♈🐏 🪷ಮೇಷ ರಾಶಿ🪷* 📖,ನಿಮ್ಮ ಯಾವುದೇಕೆಲಸವು ಹಣದ ಕಾರಣದಿಂದಾಗಿ ಬಾಕಿ ಉಳಿದಿದ್ದರೆ, ಅದನ್ನು ಸಹ ಪೂರ್ಣಗೊಳ್ಳಬಹುದು. ಬಾಲ್ಯ ಮಿತ್ರರೊಂದಿಗೆ ಭೋಜನ ಮನರಂಜನಾಕಾರ್ಯಕ್ರಮದಲ್ಲಿ, ಭಾಗವಹಿಸುತ್ತೀರಿ. ಸ್ಥಿರಾಸ್ತಿ ವಿವಾದಗಳುಇತ್ಯರ್ಥವಾಗುತ್ತವೆ ಸಮಾಜದಲ್ಲಿ ಹೊಸ ವ್ಯಕ್ತಿಗಳ ಪರಿಚಯಗಳು ಉಂಟಾಗುತ್ತವೆ.ವ್ಯವಹಾರಗಳನ್ನುಪ್ರಾರಂಭಿಸಲು,ಸ್ನೇಹಿತರಿಂದ.ಹೂಡಿಕೆಗಳನ್ನು,ಸ್ವೀಕರಿಸಲಾಗುತ್ತದೆ. ಮನೆ ನಿರ್ಮಾಣ, ಕಾರ್ಯಗಳು ವೇಗಗೊಳ್ಳಲಿವೆ. ಹೊಸ ವಾಹನ ಯೋಗವಿದೆ, *02, ♉🐂🪷,ವೃಷಭ ರಾಶಿ🪷* 📖,ಈದಿನವುಆಶ್ಚರ್ಯಗಳಿಂದ ತುಂಬಿರುತ್ತದೆ. ನೀವು ಅನಿರೀಕ್ಷಿತಬದಲಾವಣೆಗಳನ್ನು ಅನುಭವಿಸಬಹುದು,ಮಿತ್ರರೊಂದಿಗೆ ದೈವಿಕ ಸೇವಾ ಕಾರ್ಯಗಳಲ್ಲಿಭಾಗವಹಿಸುತ್ತೀರಿ. ಹಳೆ ಸಾಲಗಳನ್ನು ವಸೂಲಿ ಮಾಡಲಾಗುತ್ತದೆ. ವೃತ್ತಿ ಮತ್ತು ವ್ಯಾಪಾರಗಳು ವಿಶೇಷವಾಗಿ ಕಾರ್ಯ ನಿರ್ವಹಿಸುತ್ತದೆ. ನಿರುದ್ಯೋಗಿಗಳಿಗೆ ಹಿರಿಯರ ಕೃಪೆಯಿಂದಹೊಸಅವಕಾಶಗಳು, ದೊರೆಯುತ್ತವೆ ಕೈಗೊಂಡ ಕಾರ್ಯಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ.ಉದ್ಯೋಗದಲ್ಲಿ ಪ್ರಗತಿ ಕಂಡು ಬರುತ್ತದೆ. ಗೌರವಪ್ರತಿಷ್ಟೆಗಳುಹೆಚ್ಚಾಗುತ್ತದೆ, *03,♊👥🪷 ಮಿಥುನ ರಾಶಿ🪷* 📖,ವೃತ್ತಿಪರ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಆರ್ಥಿಕ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದತೆಗೆದುಕೊಳ್ಳಿ, ದೂರ ಪ್ರಯಾಣದಲ್ಲಿ ಹೊಸಸ್ನೇಹಿತರನ್ನುಭೇಟಿಮಾಡುತ್ತೀರಿ. ಬಾಲ್ಯ ಸ್ನೇಹಿತರ ನಡುವಿನ ವಿವಾದಗಳು ಬಗೆಹರಿಯುತ್ತವೆ. ಕುಟುಂಬದ ಸದಸ್ಯರನೆರವಿನಿಂದ,ಬಹುಕಾಲದಿಂದ ಪೂರ್ಣಗೊಳ್ಳದ, ಕೆಲಸಗಳುಪೂರ್ಣಗೊಳಿಸುತ್ತೀರಿ.ವ್ಯಾಪಾರಪಾಲುದಾರರೊಂದಿಗಿನ ವಿವಾದಗಳಿಂದ ಸ್ವಲ್ಪ ಮಟ್ಟಿಗೆ ಹೊರಬರುತ್ತೀರಿ, *04,…
ದಾವಣಗೆರೆ ; ವರ್ಷ ಪೂರ್ತಿ ಸದಾ ಒತ್ತಡದಿಂದಲೇ ಕೆಲಸ ಮಾಡುವ ಖಾಕಿ ಪಡೆ ಒಂದಿಷ್ಟು ಕಾಲ ಬಣ್ಣದಿಂದ ಮಿಂದೆದ್ದಿತ್ತು…ಇವರ ಜತೆ ಎಸ್ಪಿ ಉಮಾಪ್ರಶಾಂತ್ ಕೂಡ ತನ್ನ ಸಿಬ್ಬಂದಿ ಜತೆ ಹೆಜ್ಜೆ ಹಾಕಿ ತನ್ನ ಸಿಬ್ಬಂದಿಗಳನ್ನು ಖುಷಿಪಡಿಸಿದರು. ಹೌದು..ದಾವಣಗೆರೆಯ ಸಶಸ್ತ್ರ ಮೀಸಲು ಪಡೆ ಮೈದಾನ ಕಲರ್ ಪುಲ್ ಆಗಿತ್ತು…ಪೊಲೀಸರು ತಮ್ಮ ಕುಟುಂಬ ಸ್ನೇಹಿತರೊಂದಿಗೆ ಬಣ್ಣದಾಟವಾಡಿ ಸಂತಸ ಹಂಚಿಕೊಂಡರು. ಅದರಲ್ಲೂ ಮಹಿಳಾ ಪೊಲೀಸರು ಬಣ್ಣದ ಹಾಡಿಗೆ ಸಖತ್ ಸ್ಟೇಪ್ ಹಾಕಿದರು ಹೋಳಿ ಹುಣ್ಣಿಮೆ ರಂಗಿನಾಟದಲ್ಲಿ ಖಾಕಿ ತನ್ನದೇ ಆದ ಲೋಕವನ್ನು ಕೆಲ ಕಾಲ ಸೃಷ್ಟಿಸಿಕೊಂಡಿತ್ತು. ಮುಂಜಾನೆಯಿಂದ ಮಧ್ಯಾಹ್ನದವರೆಗೆ ಬಣ್ಣದ ಲೋಕದಲ್ಲಿ ಎಲ್ಲರೂ ಮಿಂದೆದ್ದರು. ರಂಗು-ರಂಗಿನಾಟದಲ್ಲಿ ಯುವಕ-ಯುವತಿಯರು ಪರಸ್ಪರ ಬಣ್ಣ ಹಚ್ಚಿ ಶುಭಾಶಯಗಳನ್ನು ಕೋರುವುದರ ಮೂಲಕ ಅದ್ಧೂರಿಯಾಗಿ ಆಚರಿಸಿದರು. ಅಲ್ಲದೇ ಬಣ್ಣ ಹಚ್ಚಿ ‘ಹ್ಯಾಪಿ ಹೋಳಿ’ ಎನ್ನುತ್ತಾ ಶುಭಾಶಯಗಳನ್ನು ಹಂಚಿದರು. ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ಸೇರಿ ಓಕುಳಿಯಾಟದಲ್ಲಿ ಪಾಲ್ಗೊಂಡಿದ್ದು ಕಂಡು ಬಂತು. ಯಾಕಾಗಿ ಹೋಳಿ ಹಬ್ಬ ಹೋಳಿ ಹಬ್ಬ ಆಚರಣೆ ದಿವಸ ಇಡೀ ನಗರವನ್ನು…
ದಾವಣಗೆರೆ :ಕಾಲ ಬದಲಾದಂತೆ ವಾಹನಗಳ ಮೇಲೆ ಆಸಕ್ತಿಯೂ ಬದಲಾಗುತ್ತಿದ್ದು, ಈಗ ಎಲೆಕ್ಟ್ರಿಕ್ ವಾಹನಗಳತ್ತ ಸವಾರರ ಚಿತ್ತ ನೆಟ್ಟಿದೆ. ಅದರಲ್ಲೂ ದೇವನಗರಿ ಮಂದಿ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದು, ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ಕಾರು ಹಾಗೂ ಬೈಕ್ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ಪರಿಸರ ಸ್ನೇಹಿ ಹಾಗೂ ಇಂಧನ ವೆಚ್ಚವಿಲ್ಲದ ಎಲೆಕ್ಟ್ರಿಕ್ ಕಾರು ಹಾಗೂ ಬೈಕ್ಗಳ ಖರೀದಿ ಜೋರಾಗಿದೆ. ಟಾಟಾ ಮೋಟರ್ಸ್, ಜೆಎಂ ಮೋಟಾರ್ಸ್, ಮಹೀಂದ್ರಾ ಸೇರಿದಂತೆ ಪೆಟ್ರೋಲ್, ಡಿಸೇಲ್ ಕಾರು ತಯಾರಿಸುವ ಕಂಪನಿಗಳು(ಇವಿ) ವಿದ್ಯುತ್ ಚಾಲಿತ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಆರ್ಟಿಒ ಅಧಿಕಾರಿ ಪ್ರಮುತೇಶ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸವಾರರು ವಿದ್ಯುತ್ ಚಾಲಿತ ವಾಹನಗಳನ್ನು ಹೆಚ್ಚು ಬಳಸುತ್ತಿದ್ದಾರೆ. ಈಗಾಗಲೇ ಕೇವಲ 11 ತಿಂಗಳಿಗೆ ಒಂದು ಸಾವಿರಕ್ಕೂ ದ್ವೀಚಕ್ರ ವಾಹನಗಳು ಸೇರಿದಂತೆ ಇತರೆ ವಿದ್ಯುತ್ ಚಾಲಿತ ವಾಹನಗಳು ಹೆಚ್ಚಾಗಿವೆ ಎಂದರು. ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ವಿನಾಯಿತಿ ನೀಡಿದೆ. ಇ ವಾಹನಗಳ ಖರೀದಿಗೆ ಟ್ಯಾಕ್ಸ್ ಇಲ್ಲ. ಆಟೋ ರಿಕ್ಷಾ…
ದಾವಣಗೆರೆ : ಮೂರು ಗಾಲಿ ಆಟೋ ನಂಬಿದ್ದ ದಾವಣಗೆರೆಯ ಈ ಆಟೋ ಚಾಲಕನ ಬದುಕು ಬೀದಿಗೆ ಬಿದ್ದಿದೆ. ಹದಿನೈದು ವರ್ಷದ ಹಳೆಯ ಗಾಡಿ ಎಂದು ಆರ್ ಟಿಒ ಅಧಿಕಾರಿಗಳು ಅಟೋವನ್ನು ಎಳೆತಂದು ಬರೋಬ್ಬರಿ 13 ಸಾವಿರ ರೂ ದಂಡ ವಿಧಿಸಿದ್ದಾರೆ. ದಂಡ ಕಟ್ಟಲಾಗದೇ ಈ ಚಾಲಕ ನಗರದ ಆರ್ ಟಿ ಓ ಕಚೇರಿ ಎದುರು ತನ್ನ ದುಃಖವನ್ನು ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಹಂಚಿಕೊಂಡಿದ್ದಾನೆ. ಈ ಆಟೋ ನನಗೆ ಜೀವನಕ್ಕೆ ಆಧಾರವಾಗಿತ್ತು. ನಾನು ತರಗಾರ ಕೆಲಸ ಮಾಡುತ್ತಿದ್ದೇನೆ..ನಾನು ಬಡವ..ಈ ಊರನ್ನು ಯಾಕಾದ್ರೂ ಸ್ಮಾರ್ಟ್ ಸಿಟಿ ಮಾಡಿದ್ರು, ದೊಡ್ಡವರೂ ಮಾತ್ರ ಇಲ್ಲಿ ಬದುಕ ಬಹುದು..ನಮ್ಮಂತವರು ಹೇಗೆ ಬದುಕಲು ಸಾಧ್ಯ. ನನ್ಮಗ ಪೋಪ್ಪಾ ಆಟೋ ತಂದಿಲ್ವ…ನಾನು ಊಟ ಮಾಡಬೇಕು ಆಟೋ ತಗೊಂಡು ಬಾ ಅಂತಾನೆ..ಆದರೆ ಆರ್ ಟಿ ಒ ಅಧಿಕಾರಿಗಳು 13 ಸಾವಿರ ದಂಡ ಹಾಕಿದ್ದಾರೆ…ಆಟೋ ಇಲ್ಲದೇ ನಾನು ಏನು ಮಾಡಲಿ ನೀವೇ ಹೇಳಿ…ನನ್ನಂತೆ ನೂರಾರು ಜನರದ್ದು ಇದೇ ಕಥೆ.ಬಡವರು ಬದುಕುವ ಹಾಗಿಲ್ವ ಎಂದು ಪ್ರಶ್ನಿಸುತ್ತಿದ್ದಾರೆ.…
ದಾವಣಗೆರೆ: ಖಾತೆ ವರ್ಗಾವಣೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಸಂಬಂಧ ಇಲ್ಲಿನ ಮಹಾನಗರ ಪಾಲಿಕೆ ವಲಯ ಕಚೇರಿ–2ರ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಲೋಕಾಯುಕ್ತ ಎಸ್ಪಿ ಕೌಲಾಪುರೆ ತಂಡದ ಬಲೆಗೆ ಬಿದ್ದಿದ್ದಾರೆ. ವಲಯ ಕಚೇರಿ –2ರ ಎಫ್ಡಿಎ ಪಾಲನಾಯಕ ಲೋಕಾಯುಕ್ತ ಬಲೆಗೆ ಬಿದ್ದವರು. ನಗರದ ನಿವಾಸಿ ಬಸವನಗೌಡ ಜಿ.ಯು. ಅವರು ಬಾಡ ಕ್ರಾಸ್ನಲ್ಲಿನ ನಿವೇಶನವನ್ನು ತಮ್ಮ ತಂಗಿ ಹೆಸರಿಗೆ ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಖಾತೆ ವರ್ಗಾವಣೆ ಮಾಡಲು ರೂ. 2,500 ಲಂಚ ಕೊಡುವಂತೆ ಪಾಲನಾಯಕ ಬೇಡಿಕೆ ಇಟ್ಟಿದ್ದರು. ಅದರಂತೆ ಶುಕ್ರವಾರ ತಮ್ಮ ಕಚೇರಿಯಲ್ಲಿ ಪಾಲನಾಯಕ ಅವರು ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಪ್ರಭು ಸೂರಿನ, ಮುಸ್ತಾಕ್ ಅಹಮ್ಮದ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ಶಿವಮೊಗ್ಗ : ರಂಗಭೂಮಿ ತಾಯಿ ಇದ್ದ ಹಾಗೆ ಚಲನಚಿತ್ರ ತಂದೆ ಇದ್ದ ಹಾಗೆ. ನಮ್ಮ ಮಲೆನಾಡಿನ ಜನ ನನಗೆ ತುಂಬಾ ಪ್ರೀತಿ ತೋರಿಸಿದ್ದಾರೆ. ಅವರ ಪ್ರೀತಿ ಬಹಳ ದೊಡ್ಡದು ಎಂದು ‘ಭೀಮ’ ಚಿತ್ರದ ಮೂಲಕ ಮನೆ ಮಾತಾಗಿರುವ ಚಿತ್ರ ನಟಿ ಪ್ರಿಯಾ ಹೇಳಿದರು. ನಮ್ಮ ಟಿವಿ ಶಿವಮೊಗ್ಗದ ಸ್ಟುಡಿಯೋದಲ್ಲಿ ಪ್ರಖ್ಯಾತ ಸಿನಿಮಾ ತಾರೆಯವರಾದ ಪ್ರಿಯಾ ಅವಿನಾಶ್ ಅವರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು 10 ಚಲನಚಿತ್ರ ಅದೆಷ್ಟೊ ಕಿರುತೆರೆಯಲ್ಲಿ ನಟಿಸಿದರೂ ಸಹ ನನಗೆ ಅತ್ಯಂತ ಹೆಸರು ತಂದು ಕೊಟ್ಟ ಭೀಮ ಚಲನ ಚಿತ್ರ ನನಗೆ ಹೆಸರು ತಂದುಕೊಟ್ಟಿತು. ನಿಜ ಜೀವನದಲ್ಲಿ ನಾನು ಪೋಲಿಸ್ ಅಧಿಕಾರಿಯಾಗಬೇಕೆಂದಿದ್ದೆ. ಆದರೆ ಚಲನ ಚಿತ್ರದಲ್ಲಿ ನಾನು ಪೋಲೀಸ್ ಅಧಿಕಾರಿಪಾತ್ರ ಮಾಡಿದೆ. ನಾನು ಶಿವಮೊಗ್ಗದ ಸೊಸೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಬರುವ ದಿನಗಳಲ್ಲಿ ರಂಗಭೂಮಿಯಲ್ಲಿ ಇನ್ನೂ ಅನೇಕ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಹಾಗೂ ವಿಶೇಷವಾಗಿ ಹೊಸ ಹೊಸ ಕಲಾವಿದರನ್ನು ರಂಗಭೂಮಿಗೆ ಪರಿಚಯಿಸುವ ಕೆಲಸ…