Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

ಜನಮೆಚ್ಚಿದ ಪೊಲೀಸ್ ಗೆ ಕಮೆಂಡೇಶನ್ ಪದಕ

30 May 2025

ನಾಯಿ ಕಾಣೆಯಾದರೆ ಇಲ್ಲಿ ಸುದ್ದಿ ಕೊಡಿ?

28 May 2025

ಅಧ್ಯಕ್ಷರಾಗಿ ಯುವ ನೇತಾರ ಸಚಿನ್ ನೇಮಕ

28 May 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»ಪ್ರಮುಖ ಸುದ್ದಿ»ಅಪಘಾತವಾದರೆ 10 ಲಕ್ಷ ವಿಮೆ ನೀಡಲಿದೆ ಕೇಂದ್ರ ಸರಕಾರ…ಅಷ್ಟೇ ಅಲ್ಲ ಆಸ್ಪತ್ರೆಯಲ್ಲಿ ಸಿಗಲಿದೆ ಚಿಕಿತ್ಸೆ
ಪ್ರಮುಖ ಸುದ್ದಿ

ಅಪಘಾತವಾದರೆ 10 ಲಕ್ಷ ವಿಮೆ ನೀಡಲಿದೆ ಕೇಂದ್ರ ಸರಕಾರ…ಅಷ್ಟೇ ಅಲ್ಲ ಆಸ್ಪತ್ರೆಯಲ್ಲಿ ಸಿಗಲಿದೆ ಚಿಕಿತ್ಸೆ

ವರ್ಷಕ್ಕೆ 529 ರೂ.ಕಟ್ಟಿದರೆ ಸಾಕು, ನಾನಾ ಸೌಲಭ್ಯ : ಎಎಸ್ಪಿ ಗುರುಪ್ರಸಾದ್
davangerevijaya.comBy davangerevijaya.com8 January 2024No Comments2 Mins Read
Facebook WhatsApp Twitter
Share
WhatsApp Facebook Twitter Telegram

 

ದಾವಣಗೆರೆ: ಈಗಿನ ಖಾಸಗಿ ಬದುಕಿನಲ್ಲಿ ಎಲ್ಲರಿಗೂ ಅರ್ಜೆಂಟ್, ಸಮಯ ಪರಿಪಾಲನೆ ಮುಖ್ಯ. ಹೀಗಿರುವಾಗ ಕಚೇರಿಗೆ ಹೋಗಬೇಕಾದರೆ ಅಥವಾ ಅಪಘಾತವಾದರೆ ನಮ್ಮನ್ನೇ ನಂಬಿ ಬದುಕುತ್ತಿದ್ದ ಕುಟುಂಬ ಬೀದಿಗೆ ಬರುತ್ತದೆ. ಆದರೆ ಇನ್ಮುಂದೆ ಈ ಚಿಂತೆ ಇಲ್ಲ.

ಹೌದು…ಸಮೂಹ  ಅಪಘಾತ ಸುರಕ್ಷಾ ಪಾಲಿಸಿ ಎಂಬ ವಿಮಾ ಸೌಲಭ್ಯವನ್ನು ಕೆಲ ಮಾಪಾರ್ಡುಗಳೊಂದಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ವರ್ಷಕ್ಕೆ 529 ರೂ.ಕಟ್ಟಿದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟರೇ ಆತನ ಕುಟುಂಬಕ್ಕೆ 10 ಲಕ್ಷ ರೂ.ಸಿಗಲಿದೆ.

ಏನಿದು ಸಮೂಹ ಅಪಘಾತ ಸುರಕ್ಷಾ ಪಾಲಿಸಿ

ಈ ಬಗ್ಗೆ  ಅಂಚೆ ಇಲಾಖೆಯ ದಾವಣಗೆರೆ ಶಾಖೆಯ ಉಪ ಅಧೀಕ್ಷಕರಾದ ಗುರುಪ್ರಸಾದ್ ದಾವಣಗೆರೆ ಅಂಚೆ ಇಲಾಖೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಮೂಹ  ಅಪಘಾತ ಸುರಕ್ಷಾ ಪಾಲಿಸಿ
ಇದು ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಅಪಘಾತ  ವಿಮಾ ಯೋಜನೆ .ಈ ಯೋಜನೆಯ ಮೊತ್ತ ಈ ಮೊದಲು 396 ರೂ ಪ್ರೀಮಿಯಂ  ಇತ್ತು.ಈಗ 529 ರೂಗೆ ಹೆಚ್ಚಳ ಮಾಡಲಾಗಿದೆ ಎಂದರು.

“ಈ ಪಾಲಿಸಿಯಿಂದ ಆಗುವ ಪ್ರಯೋಜನ”

ಯಾವುದೇ ಒಬ್ಬ ವ್ಯಕ್ತಿ ಮರಣಿಸಿದಾಗ ವಿಮಾ ಮೊತ್ತ ಹತ್ತು ಲಕ್ಷ ರೂ ಅವರ ನಾಮಿನಿಗೆ ಸಲ್ಲುತ್ತದೆ.ಮೊದಲಿಗಿಂತ ಹಲವಾರು ಪ್ರಯೋಜನ ಈಗ ಪಡೆಯಬಹುದು.ಅಪಘಾತ ವಿಮೆ ಪಡೆಯಲು ಒಳರೋಗಿ ವಿಭಾಗದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದರೆ 1 ಲಕ್ಷ ರೂ ನೀಡಲಾಗುವುದು. ಅಪಘಾತದಲ್ಲಿ ಮರಣಿಸಿದರೆ ಮಾತ್ರವಲ್ಲದೇ ಗಾಯಾಳುಗಳಾದರೂ ಕೂಡ ಸೌಲಭ್ಯ ನೀಡಬಹುದಾಗಿದೆ.

ಏನೇನು ಸೌಲಭ್ಯ ಸಿಗಲಿದೆ

ಅಪಘಾತದಿಂದ ಕೋಮಾಗೆ ಹೊದರೆ ಹತ್ತು ಲಕ್ಷ ನೀಡಲಾಗುವುದು.ಇದರಲ್ಲಿ ಎರಡು ಉಪಯೋಗಗಳಿದ್ದು 520 ರೂ ವಿಮೆ ಪಾವತಿಸಿದರೆ ಹತ್ತು ಲಕ್ಷ ರೂ ಹಾಗೂ 320 ರೂಗೆ 5 ಲಕ್ಷ ರೂ ಅಪಘಾತ ವಿಮೆ ನೀಡಲಾಗುವುದು. ಅಪಘಾತದಲ್ಲಿ ಮರಣಿಸಿದವರ ಮಕ್ಕಳಿಗೆ 1 ಲಕ್ಷ ರೂ ವಿದ್ಯಾಭ್ಯಾಸದ ಖರ್ಚು ನೀಡಲಾಗುತ್ತದೆ. ಜೊತೆಗೆ ವೈದ್ಯಕೀಯ ವೆಚ್ಚ 30 ಸಾವಿರ ರೂ,ಕುಟುಂಬದ ಸದಸ್ಯರಿಗೆ ಸಾರಿಗೆ ವೆಚ್ಚವಾಗಿ 25 ಸಾವಿರ ನೀಡಲಾಗುವುದು.
ಅಂಚೆ ಇಲಾಖೆಯಲ್ಲಿ ಹಲವಾರು ಉಪಯುಕ್ತ ವಿಮಾ ಸೌಲಭ್ಯಗಳಿವೆ.ಉತ್ತಮ ಯೋಜನೆಗಳಿವೆ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

“ದಾಖಲಾತಿಗಳು ಏನೇನು ಬೇಕು”

ಅಂಚೆ ಇಲಾಖೆಯಲ್ಲಿ ಪಾಲಿಸಿ ಮಾಡಿಸಲು ಮೊದಲು‌ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ಮಾಡಿಸಬೇಕು.ಹಾಗೂ ಖಾತೆಯಲ್ಲಿ‌ ಕನಿಷ್ಠ ಐದು ನೂರು ರೂ. ಡಿಪಾಸಿಟ್ ಮಾಡಬೇಕು. ಜೊತೆಗೆ ಪಾಲಿಸಿಯ ಪ್ರೀಮಿಯಂ 520 ರೂ ಪಾವತಿಸಬೇಕು.1020 ರೂ ಗಳೊಂದಿಗೆ ಖಾತೆ ತೆರೆಯಬೇಕು. ನಂತರ ಪಾಲಿಸಿ ಪಡೆಯಲು ಅರ್ಜಿ ನೀಡಲಾಗುತ್ತದೆ ಅದಕ್ಕೆ ದಾಖಲಾತಿಗಳನ್ನು ನೀಡಿ ಅರ್ಜಿ ಭರ್ತಿ ಮಾಡಿಕೊಡಬೇಕು ಎಂದು ಗುರುಪ್ರಸಾದ್ ಹೇಳುತ್ತಾರೆ.

ವಿಮೆ ಹಣ ಹೇಗೆ ಪಡೆಯುವುದು

ಪಾಲಿಸಿ ಮೊತ್ತ ಒಂದು ವರ್ಷಕ್ಕೆ 520 ರೂ ಪಾವತಿ ಮಾಡಬೇಕು.ಈ ಸೌಲಭ್ಯ ಪಡೆಯಲು ಪಾಲಿಸಿದಾರರು ಮರಣಿಸಿದರೆ ಎಲ್ಲಾ ದಾಖಲಾತಿಗಳೊಂದಿಗೆ ಅಂಚೆಇಲಾಖೆಗೆ ಸಂಬಂಧಿಸಿದ ಪೋಸ್ಟ್ ಮಾಸ್ಟರ್ ನ್ನು ಸಂಪರ್ಕಿಸಬೇಕು. ಪಾಲಿಸಿಯ ಅಕೌಂಟ್ ನಂಬರ್ ನೊಂದಿಗೆ ಪಾಲಿಸಿದಾರರ ಮರಣ ಪ್ರಮಾಣಪತ್ರ ಅಪಘಾತಕ್ಕೆ ಕಾರಣ ಸೇರಿದಂತೆ ಸೂಕ್ತ ದಾಖಲಾತಿಗಳನ್ನು ನೀಡಿ ಪಾಲಿಸಿ ಮೊತ್ತ ಪಡೆಯಬಹುದಾಗಿದೆ.
ಈ ಎಲ್ಲ ಪ್ರಕ್ರಿಯೆಗಳು ಮೇಲಾಧಿಕಾರಿಗಳು ಪರಿಶೀಲಿಸಿದ ನಂತರ ಪಾಲಿಸಿ ಮೊತ್ತ ಬಿಡುಗಡೆ ಮಾಡಲಿದ್ದಾರೆಂದು
ಅಂಚೆ ಇಲಾಖೆಯ ಉಪ ಅಧೀಕ್ಷಕರಾದ ಗುರುಪ್ರಸಾದ್ ಹೇಳಿದರು.

ಮ್ಯಾನೇಜರ್ ಶ್ರೀನಿವಾಸ್ ಹೇಳೋದೇನು?

ಇಂಡಿಯಾ ಪೋಸ್ಟ್ ಬ್ಯಾಂಕ್ ದಾವಣಗೆರೆ ಶಾಖೆಯ ಮ್ಯಾನೇಜರ್ ಶ್ರೀನಿವಾಸ್ ಮಾತನಾಡಿ, ಅಪಘಾತ ಪಾಲಿಸಿಯಲ್ಲಿ ಕೇವಲ ಮರಣ ಮಾತ್ರವಲ್ಲ ಯಾವುದೇ ರೀತಿ ಅಂಗವೈಕಲ್ಯವಾದಲ್ಲಿ ಪೂರ್ಣ ಹಾಗೂ ಭಾಗಶಃ ವೈಕಲ್ಯಕ್ಕೆ ಹತ್ತು ಲಕ್ಷ ವಿಮೆ ಅನ್ವಯವಾಗುತ್ತದೆ.ಅದರ ಜೊತೆ ಅಪಘಾತವಾದ ಬಳಿಕ ಉಂಟಾಗುವ ತೊಂದರೆಗಳು ಅಂದರೆ ಪಾರ್ಶ್ವವಾಯು ಅಥವಾ ಕೈಕಾಲುಗಳಿಗೆ ಊನವಾದಲ್ಲಿ ಅದಕ್ಕೂ ಹತ್ತು ಲಕ್ಷ ವಿಮೆ ಸೌಲಭ್ಯ ಇರುತ್ತದೆ.

ಅಪಘಾತದಿಂದ ಸಾವು,ಸಂಪೂರ್ಣ ವೈಕಲ್ಯ,ಭಾಗಶಃ ವೈಕಲ್ಯ,ಪಾರ್ಶ್ವ ವಾಯು ಅಂತಹ ಪರಿಸ್ಥಿತಿ ಬಂದರೆ ಅವರ ಮಕ್ಕಳಿಗೆ ಶೈಕ್ಷಣಿಕ ಉಪಯೋಗಕ್ಕಾಗಿ ಒಂದು ಲಕ್ಷದ ಮಿತಿಯಲ್ಲಿ ವಿಮಾ ಸೌಲಭ್ಯ ಇರುತ್ತದೆ.ಶೈಕ್ಷಣಿಕ ಸೌಲಭ್ಯಕ್ಕಾಗಿ ಶಾಲಾ ದಾಖಲಾತಿಗಳು ಶುಲ್ಕ ಪಾವತಿಯ ರಸೀದಿ ನೀಡಬೇಕು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾರುಕಟ್ಟೆ ವ್ಯವಸ್ಥಾಪಕ ಸಂತೋಷ್ ಇದ್ದರು.

Accident ASP Guruprasad Davangere Department of Posts Featured Safety Insurance Policy Top News ಅಂಚೆ ಇಲಾಖೆ ಅಪಘಾತ ಎಎಸ್ಪಿ ಗುರುಪ್ರಸಾದ್ ದಾವಣಗೆರೆ ಸುರಕ್ಷಾ ವಿಮೆ ಪಾಲಿಸಿ
Share. WhatsApp Facebook Twitter Telegram
davangerevijaya.com
  • Website

Related Posts

ನಾಯಿ ಕಾಣೆಯಾದರೆ ಇಲ್ಲಿ ಸುದ್ದಿ ಕೊಡಿ?

28 May 2025

ಅಧ್ಯಕ್ಷರಾಗಿ ಯುವ ನೇತಾರ ಸಚಿನ್ ನೇಮಕ

28 May 2025

ವಿಐಎಸ್ಎಲ್ ಗುತ್ತಿಗೆದಾರರ ಸಂಘದ ಚುನಾವಣೆ : ಹೊರಬಿತ್ತು ಫಲಿತಾಂಶ, ಹೇಗಿತ್ತು ಅದರ ಝಲಕ್ ? ಇವರೇ ಆ ಹೊಸ ನಾಯಕ?

25 May 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,636 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,273 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,070 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,580 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
ಕ್ರೈಂ ಸುದ್ದಿ

ಜನಮೆಚ್ಚಿದ ಪೊಲೀಸ್ ಗೆ ಕಮೆಂಡೇಶನ್ ಪದಕ

By davangerevijaya.com30 May 20250

ಹೈಲೈಟ್ಸ್ *ನಗದು ಬಹುಮಾನಗಳು : ಎಸ್ ಪಿ 09 * ಶ್ಲಾಘನೀಯ ಪತ್ರಗಳು : ಐಜಿಪಿ 01 *ಪ್ರಶಂಸನೀಯ ಪತ್ರಗಳು…

ನಾಯಿ ಕಾಣೆಯಾದರೆ ಇಲ್ಲಿ ಸುದ್ದಿ ಕೊಡಿ?

28 May 2025

ಅಧ್ಯಕ್ಷರಾಗಿ ಯುವ ನೇತಾರ ಸಚಿನ್ ನೇಮಕ

28 May 2025

ವಿಐಎಸ್ಎಲ್ ಗುತ್ತಿಗೆದಾರರ ಸಂಘದ ಚುನಾವಣೆ : ಹೊರಬಿತ್ತು ಫಲಿತಾಂಶ, ಹೇಗಿತ್ತು ಅದರ ಝಲಕ್ ? ಇವರೇ ಆ ಹೊಸ ನಾಯಕ?

25 May 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

ಜನಮೆಚ್ಚಿದ ಪೊಲೀಸ್ ಗೆ ಕಮೆಂಡೇಶನ್ ಪದಕ

30 May 2025

ನಾಯಿ ಕಾಣೆಯಾದರೆ ಇಲ್ಲಿ ಸುದ್ದಿ ಕೊಡಿ?

28 May 2025

ಅಧ್ಯಕ್ಷರಾಗಿ ಯುವ ನೇತಾರ ಸಚಿನ್ ನೇಮಕ

28 May 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,636 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,273 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,070 Views

Subscribe to Updates

Get the latest creative news from SmartMag about art & design.

Recent Posts
  • ಜನಮೆಚ್ಚಿದ ಪೊಲೀಸ್ ಗೆ ಕಮೆಂಡೇಶನ್ ಪದಕ
  • ನಾಯಿ ಕಾಣೆಯಾದರೆ ಇಲ್ಲಿ ಸುದ್ದಿ ಕೊಡಿ?
  • ಅಧ್ಯಕ್ಷರಾಗಿ ಯುವ ನೇತಾರ ಸಚಿನ್ ನೇಮಕ
  • ವಿಐಎಸ್ಎಲ್ ಗುತ್ತಿಗೆದಾರರ ಸಂಘದ ಚುನಾವಣೆ : ಹೊರಬಿತ್ತು ಫಲಿತಾಂಶ, ಹೇಗಿತ್ತು ಅದರ ಝಲಕ್ ? ಇವರೇ ಆ ಹೊಸ ನಾಯಕ?
  • DG & IGP ಕಮೆಂಡೇಶನ್ ಡಿಸ್ಕ್ ಪದಕ ಸ್ವೀಕರಿಸಿದ ಎಸ್ಪಿ ಉಮಾಪ್ರಶಾಂತ್ : ಪದಕ ಸಿಕ್ಕಿದ್ದು ಇದಕ್ಕಾಗಿಯೇ?
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.