
ದಾವಣಗೆರೆ :
ಪಂಪ್ ಸೆಟ್ ಗಳ ಸಂಪರ್ಕಕ್ಕೆ ತಗಲುವ ವೆಚ್ಚವನ್ನು ರೈತರೇ ಭರಿಸಬೇಕು ಎಂದು ಹೇಳುವ ಈ ಕಾಂಗ್ರೆಸ್ ಸರ್ಕಾರ ತಲಾ ಪಂಪ್ ಸೆಟ್ ಅಳವಡಿಸಲು 50 ಸಾವಿರ ಧನಸಹಾಯ ಎಂದು ಘೋಷಿಸಿರುವುದು ಹಾಸ್ಯಾಸ್ಪದವಾಗಿದೆ.
ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆ ಮೆಕ್ಕೆಜೋಳ ಸಂಸ್ಕರಣೆ ಘಟಕದ ಪ್ರಸ್ತಾವ ಇಲ್ಲ. ಆವರ್ತ ನಿಧಿಯ ಪ್ರಸ್ತಾವ ಇಲ್ಲ. ರೈತಪರ ಯಾವುದೇ ಹೊಸ ಯೋಜನೆಗಳಿಲ್ಲದ ನಿರಾಶಾದಾಯಕ ಬಜೆಟ್ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನಂಜಯ್ ಕಡ್ಲೆಬಾಳ್ ಹೇಳಿದ್ದಾರೆ.