- ಪ್ರಮುಖ ಸುದ್ದಿ
- ದಾವಣಗೆರೆ ವಿಶೇಷ
- ಕ್ರೈಂ ಸುದ್ದಿ
- ರಾಜಕೀಯ ಸುದ್ದಿ
- ರೈತಮಿತ್ರ
- ಅಡಕೆ ಧಾರಣೆ
- ಚಿನ್ನ, ಬೆಳ್ಳಿ ಧಾರಣೆ
- Blog
Subscribe to Updates
Get the latest creative news from FooBar about art, design and business.
Author: davangerevijaya.com
*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫* *💫,ದ್ವಾದಶರಾಶಿಗಳುದಿನಭವಿಷ್ಯ#ತಾರೀಖು#03/04/2025 ಗುರುವಾರ💫* *01,🪔ಮೇಷರಾಶಿ🪔* 📖,ಪ್ರತಿದಿನದಂತೆ ಈ ದಿನವೂ ಎಲ್ಲಾ ಸರಿಯಾಗಿದೆ ಎಂದುಕೊಳ್ಳತ್ತಿರುವಾಗಲೇ ಕೆಲಸಗಾರರು ಇಲ್ಲವೆ ನಿಮ್ಮ ಕೈಕೆಳಗೆ ಕೆಲಸ ಮಾಡುವವರು ದಿಢೀರನೆ ರಜಾ ಹಾಕುವುದರಿಂದ ಎಲ್ಲಾ ಕೆಲಸವೂ ಒಟ್ಟಿಗೆ ಮೈಮೇಲೆ ಬಂದಂತೆ ಆಗುವುದು. ನಿಮ್ಮ ಮಾತಿನ ಮೇಲೆ ಗಮನವಿರಲಿ, ಈ ದಿನ ಆಹಾರದ ವಿಚಾರದಲ್ಲಿ ಜಾಗ್ರತೆ ಇರಲಿ, *02,🪔ವೃಷಭರಾಶಿ🪔* 📖,ನಿಮ್ಮ ಕಾರ್ಯಕ್ರಮಗಳ ಸಫಲತೆಗೆ ಅನಿರೀಕ್ಷಿತ ವಲಯದಿಂದ ಭಾರೀ ಸಹಾಯ ದೊರೆಯುವುದು. ಇದರಿಂದ ಮನಸ್ಸಿಗೆ ಆನಂದ ಉಂಟಾಗುವುದು. ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಗೌರವ ಆದರಗಳು ದೊರೆಯುವುದು. ನಿಮ್ಮ ಸ್ವ ಇಚ್ಛೆಯಿಂದ ಈ ದಿನದ ನಿಮ್ಮ ಎಲ್ಲಾ ಕೆಲಸಗಳನ್ನು ಮುಗಿಸಿ, *03,🪔ಮಿಥುನ ರಾಶಿ🪔* 📖,ನಿಮ್ಮನ್ನು ಸುಮ್ಮನೆ ಒತ್ತಡದಲ್ಲಿರಿಸುವ ಕಾರ್ಯತಂತ್ರವನ್ನು ರೂಪಿಸುವ ಗೆಳೆಯರಿಂದ ದೂರವಿರಿ. ಸಂಗಾತಿಯ ಸಕಾಲಿಕ ಎಚ್ಚರಿಕೆಯಿಂದ ಅಧಿಕ ಲಾಭ ಅಥವಾ ನೆಮ್ಮದಿ ಉಂಟಾಗುವುದು. ಹೊಸ ವ್ಯವಹಾರ ಹಾಗು ಉಳಿತಾಯದ ವಿಚಾರಗಳನ್ನು ಈ ದಿನ ಮುಂದೂಡುವದು ಉತ್ತಮ, *04,🪔ಕಟಕ ರಾಶಿ🪔* 📖,ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿಗಳ ದರ್ಶನಕ್ಕೆ…
ಶಿವಮೊಗ್ಗ : ಸರಕಾರಿ ಆಸ್ಪತ್ರೆ ದೇವರ ಆಸ್ಪತ್ರೆ ಅಂತ ಬಡವರು ಹೇಳುತ್ತಾರೆ..ಅದು ನಿಜ ಕೂಡ ಇರಬಹುದು.ಅಲ್ಲಿ ರೋಗಿಗಳ ಸಂಬಂಧಿಗಳು ನೆಮ್ಮದಿಯಿಂದ ಮಲಗಬಹುದು..ಆದರೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಬಂದ್ರೆ ಇರುವ ನೆಮ್ಮದಿ ಕೂಡ ಹಾಳಾಗುತ್ತದೆ..ಇಲ್ಲಿ ರೋಗಿಗಳ ಸಂಬಂಧಿಕರನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಾರೆ…ಇದು ಸ್ವತಃ ಪತ್ರಕರ್ತನೊಬ್ಬನಿಗೆ ಆದ ಅನುಭವ. ಹೌದು..ಈ ಆಸ್ಪತ್ರೆಗೆ ನೀವೇನಾದರೂ ಅಪ್ಪಿ ತಪ್ಪಿ ಹೋದರೆ ಒಂದಿಷ್ಟು ಜೋಕೆ…ಹೋಗುವಾಗಲಿ ತಲೆ ದಿಂಬು, ಬೆಡ್ ಶೀಟ್ ಹೆಚ್ಚು ಕಮ್ನಿಯಾದರೆ ಮಂಚನೇ ತೆಗೆದುಕೊಂಡು ಹೋಗಬೇಕು. ವೈದ್ಯೋ ನಾರಾಯಣ ಹರಿ ಅಂತ ವೈದ್ಯರನ್ಬು ದೇವರೆಂದು ಭಾವಿಸಿ ಹಣ ಖರ್ಚಾದರೂ, ಆರೋಗ್ಯ ಕಾಪಾಡಿಕೊಳ್ಳಲು ಈ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ..ತಮ್ಮ ಸಂಬಂಧಿಕರು, ಹಿತೈಷಿಗಳು ಹುಷಾರಾಗಿಲಿ ಎಂದು ಸಾಲ, ಮನೆ, ಮಾರಿ ಈ ಆಸ್ಪತ್ರೆಗೆ ಕಟ್ಟುತ್ತಾರೆ. ಇಲ್ಲಿ ಏನೇ ತೆಗೆದುಕೊಂಡರೂ ದುಪ್ಪಟ್ಟು ದರ. ಅಲ್ಲ ತ್ರಿಪಟ್ಟು ಕೂಡ ತೆಗೆದುಕೊಳ್ಳುತ್ತಾರೆ.. ಉದಾಹರಣೆಗೆ ಉತ್ತಮ ಗುಣಮಟ್ಟದ ಹ್ಯಾಂಡ್ ಗ್ಲೌಸ್ ಗೆ ಜಾಸ್ತಿ ಅಂದ್ರೆ ನಾಲ್ಕು ರೂಪಾಯಿ ಇರುತ್ತದೆ.ಆದರೆ ಇಲ್ಲಿ ಒಂಭತ್ತು ರೂಪಾಯಿ ಹಾಕುತ್ತಾರೆ..ಇದು ಕೇವಲ ಸ್ಯಾಂಪಲ್…
ದಾವಣಗೆರೆ/ನವದೆಹಲಿ; ತೆಲಂಗಾಣದ ಕಾಂಗ್ರೆಸ್ ಸರ್ಕಾರ ವಿಧಾನಸಭೆಯಲ್ಲಿ ಅಂಗೀಕರಿಸಿದ ಹಿಂದುಳಿದ ವರ್ಗಗಳ ಶೇ.42 ಮೀಸಲಾತಿಯನ್ನು ಸಂಸತ್ತಿನಲ್ಲಿ ಅನುಮೋದಿಸುವಂತೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಸಂಸದರುಗಳು ಬೃಹತ್ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮಾತನಾಡಿ ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಮತ್ತು ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಜಾತಿ ಗಣತಿಯನ್ನು ನಡೆಸುವುದಾಗಿ ಮತ್ತು ಹಿಂದುಳಿದ ವರ್ಗಗಳಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ನ್ಯಾಯವನ್ನು ಖಚಿತಪಡಿಸುವುದಾಗಿ ಭರವಸೆ ನೀಡಿದ್ದರು ಅದರಂತೆ ಅವರ ಮಾರ್ಗದರ್ಶನದಲ್ಲಿ ತೆಲಂಗಾಣ ಮುಖ್ಯಮಂತ್ರಿಗಳಾದ ರೇವಂತ್ ರೆಡ್ಡಿ ನಿರ್ದೇಶನದ ಮೇರೆಗೆ ತೆಲಂಗಾಣದಲ್ಲಿ 100 ಸರ್ಕಾರಿ ಅಧಿಕಾರಿಗಳಿಂದ ಜಾತಿ ಗಣತಿ ನಡೆಸಿ 50 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ. ವರದಿಯನ್ನು ತೆಲಂಗಾಣ ವಿಧಾನಸಭೆಯಲ್ಲಿ ಮಂಡಿಸಲಾಯಿತು ಮತ್ತು ಹಿಂದುಳಿದ ವರ್ಗಗಳಿಗೆ ಶೇ.42% ಮೀಸಲಾತಿ ನೀಡಲು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಲಾಗಿದೆ ಆದ್ದರಿಂದ ತೆಲಂಗಾಣದ ಕಾಂಗ್ರೆಸ್ ಸರ್ಕಾರ ವಿಧಾನಸಭೆಯಲ್ಲಿ ಅಂಗೀಕರಿಸಿದ…
ದಾವಣಗೆರೆ: ತಮಿಳುನಾಡಿನ ಬಿಜೆಪಿ ಯುವ ನಾಯಕ, ಕರ್ನಾಟಕ ಮಾಜಿ ಪೊಲೀಸ್ ಅಧಿಕಾರಿ ಅಣ್ಣಮಲೈ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅgವರನ್ನು ದೇಹಲಿಯಲ್ಲಿ ಭೇಟಿಯಾಗಿರುವುದು ಹಲವು ಅನುಮಾನ ಮೂಡಿದೆ. ಆಗಾದ್ರೆ ಅಣ್ಣಮಲೈ ಬಿಜೆಪಿ ಪಕ್ಷವನ್ನು ಬಿಡ್ತಾರಾ? ಅಥವಾ ರಾಷ್ಟç ರಾಜಕಾರಣಕ್ಕೆ ಹೋಗ್ತಾರಾ? ಈ ಕುರಿತು ಮಹತ್ವದ ಸ್ಟೋರಿ ಇಲ್ಲಿದೆ ನೋಡಿ. ತ್ರಿಭಾಷೆ ಸೂತ್ರಕ್ಕೆ ಅಪಸ್ವರ, ಹಿಂದಿ ಭಾಷೆ ಹೇರಿಕೆ ಆರೋಪದ ನಡುವೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಸಾಧ್ಯತೆಗಳು ದಟ್ಟವಾಗಿವೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ನಡುವೆ ಮೈತ್ರಿ ಸಾಧ್ಯತೆಯಿದೆೆ. ಆದರೆ ಎಐಎಡಿಎಂಕೆ ಅಣ್ಣಾಮಲೈ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೋಡಲು ಆಸಕ್ತಿಯಿಲ್ಲ. ಇದು ಅಣ್ಣಮಲೈ ಕುರ್ಚಿಗೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ೨೦೨೩ರಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿ ಮುರಿದು ಬೀಳಲು ಅಣ್ಣಾಮಲೈ ಕಾರಣ ಎಂಬುದು ಎಐಎಡಿಎಂಕೆ…
ಭದ್ರಾವತಿ : ಉಕ್ಕಿನ ನಗರಿ ಭದ್ರಾವತಿಯಲ್ಲಿ ದಿನ ಕಳೆದಂತೆ ಅಕ್ರಮ ಚಟುವಟಿಕೆ, ಹಲ್ಲೆಗಳು ನಡೆಯುತ್ತಿದ್ದು, ಮಂಗಳವಾರ ರಾತ್ರಿ ಜೆಡಿಎಸ್ ನಾಯಕಿ ಶಾರದ ಅಪ್ಪಾಜಿ, ಮಾಜಿ ಶಾಸಕ ದಿವಂಗತ ಅಪ್ಪಾಜಿ ಗೌಡ ಪುತ್ರ ಅಜಿತ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಲಾಗಿದೆ. ಇದರಿಂದ ಆಕ್ರೋಶಗೊಂಡ ಜೆಡಿಎಸ್ ಕಾರ್ಯಕರ್ತರು ಕಳೆದ ರಾತ್ರಿ ಭದ್ರಾವತಿಯಲ್ಲಿ ದಿಢೀರ್ ರಸ್ತೆ ತಡೆ ನಡೆಸಿದರು. ಈ ಸಂದರ್ಭ ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆಸಿದರು. ಪ್ರಮೋದ್ ಎಂಬುವರ ಮೇಲೆ ಹಲ್ಲೆ ನಗರಸಭೆ ಸಮೀಪ ತರೀಕೆರೆ ರಸ್ತೆಯಲ್ಲಿ ಹೆಚ್.ಎಸ್.ಪ್ರಮೋದ್ ಎಂಬುವವರ ಮೇಲೆ ಹಲ್ಲೆ ನಡೆದಿದೆ. ರಾತ್ರಿ ಬಸ್ ನಿಲ್ದಾಣದ ಕಡೆಯಿಂದ ಬೈಕಿನಲ್ಲಿ ಪ್ರಮೋದ್ ತಮ್ಮ ಮನೆಗೆ ತೆರಳುತ್ತಿದ್ದರು. ನಗರಸಭೆ ಸಮೀಪ ತಿರುವಿನಲ್ಲಿ ಬೈಕಿನಲ್ಲಿ ಬಂದ ಯುವಕರು ಪ್ರಮೋದ್ ಅವರನ್ನು ಅಡ್ಡಗಟ್ಟಿದ್ದಾರೆ. ಹಿಂಬದಿಯಿಂದ ಅವರ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಲಾಗಿದೆ. ಈ ಸಂದರ್ಭ ಪ್ರಮೋದ್ ಕೊರಳಲ್ಲಿದ್ದ ಚಿನ್ನದ ಸರವನ್ನು…
ದಾವಣಗೆರೆ: ಅಕ್ರಮ ಪಂಪ್ಸೆಟ್ಗಳನ್ನು ತೆರವುಗೊಳಿಸಿ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಒಕ್ಕೂಟದ ಮುಖಂಡರು ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿನ ನೀರಾವರಿ ಇಲಾಖೆಯ ಕಚೇರಿ ಮುಂಭಾಗ ಜಮಾಯಿಸಿದ ರೈತರು, ಸರ್ಕಾರ, ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರ ಹಾಕಿದರು. ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಮಾತನಾಡಿ, ‘ಕೊನೆ ಭಾಗದ ರೈತರಿಗೆ 80 ದಿನ ಕಳೆದರೂ ನೀರು ತಲುಪಿಲ್ಲ. ನಾಲೆಗಳು ಒಣಗಿದ ಸ್ಥಿತಿಯಲ್ಲಿವೆ. ಕೊನೆ ಭಾಗದ ರೈತರು ಹಿಂದಿನಿಂದಲೂ ಮಲತಾಯಿ ಧೋರಣೆಗೆ ಒಳಗಾಗುತ್ತಿದ್ದಾರೆ. ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಮಾತನಾಡಿ 3–4 ದಿನಗಳಲ್ಲಿ ನೀರು ಕೊಡಿಸುವ ಪ್ರಯತ್ನ ಮಾಡಲಾಗುವುದೆಂದು ಹೇಳಿದರು ರೈತ ಮುಖಂಡ ಬಿ.ಎಂ.ಸತೀಶ್ ಮಾತನಾಡಿ, ‘ನಾಲೆಗೆ ನೀರು ಹರಿಸಿ ಇಂದಿಗೆ 80 ದಿನ ಕಳೆದರೂ, ಕೊನೆ ಭಾಗಕ್ಕೆ ಹನಿ ನೀರು ತಲುಪಿಲ್ಲ. ನೀರು ನಿರ್ವಹಣೆ ಮಾಡುವ ಎಂಜಿನಿಯರ್ಗಳ ನಿರ್ಲಕ್ಷ್ಯದಿಂದ…
ಇಂದಿನ ರಾಶಿ ಭವಿಷ್ಯ (01-04-2025) ಮೇಷ ರಾಶಿ ದಿನ ಭವಿಷ್ಯ (01 – 04 – 2025) (ಚು, ಚೆ, ಚೋ, ಲಾ, ಲೀ, ಲು, ಲೆ, ಲೋ, ಆ) ಸಮಾಜದ ಪ್ರಮುಖ ವ್ಯಕ್ತಿಗಳ ಪೃಚ್ಚಯಗಳಿಂದ ಪ್ರಮುಖ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಬಂಧು ಮಿತ್ರರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ವ್ಯಾಪಾರಗಳು ಹೆಚ್ಚು ಅಭಿವೃದ್ಧಿ ಹೊಂದುತ್ತವೆ. ವೃತ್ತಿಪರ ಉದ್ಯೋಗಗಳು ತೃಪ್ತಿಕರವಾಗಿ ಸಾಗುತ್ತವೆ. ಗೃಹ ನಿರ್ಮಾಣ ಆಲೋಚನೆಗಳು ಕಾರ್ಯರೂಪಕ್ಕೆ ಬರುತ್ತವೆ. ಅದೃಷ್ಟದ ದಿಕ್ಕು:ನೈಋತ್ಯ ಅದೃಷ್ಟದ ಸಂಖ್ಯೆ:8 ಅದೃಷ್ಟದ ಬಣ್ಣ:ನೀಲಿ ….. ವೃಷಭ ರಾಶಿ ದಿನ ಭವಿಷ್ಯ (01 – 04 – 2025) (ಇ, ಓ, ಎ, ಒ, ವಾ, ವಿ, ವು, ವೆ, ವೊ) ಕುಟುಂಬದ ಮುಖ್ಯಸ್ಥರ ಆರೋಗ್ಯ ವಿಚಾರದಲ್ಲಿ ಜಾಗ್ರತೆ ವಹಿಸಬೇಕು. ಮನೆಯ ಹೊರಗಿನ ಜವಾಬ್ದಾರಿಗಳು ಭಾವನಾತ್ಮಕವಾಗಿ ಕಿರಿಕಿರಿಯನ್ನು ಉಂಟುಮಾಡುತ್ತವೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಶ್ರಮಶೀಲತೆ ಹೆಚ್ಚಾಗುತ್ತದೆ. ನಿರುದ್ಯೋಗ ಪ್ರಯತ್ನಗಳು ಮಂದಗತಿಯಲ್ಲಿ ಸಾಗುತ್ತವೆ. ಹೊಸ ಸಾಲದ…
ದಾವಣಗೆರೆ: ಕಷ್ಟ ಅಂದಾಗ ಕೈ ಚಾಚಿ ಕೊಡುವ ಕೊಡುಗೈ ದಾನಿ, ಬಸವೇಶ್ವರ ಲಾರಿ ಟ್ರಾನ್ಸ್ ಪೋರ್ಟ್ ಮಾಲೀಕರು, ಸಮಾಜಕ ಸೇವಕರಾದ ಮಹಾಂತೇಶ್ ವಿ. ಒಣರೊಟ್ಟಿ ಅವರ ತಾಯಿ ಸಂಗಮ್ಮ ಇಂದು ಬೆಳಗ್ಗೆ 8 ಕ್ಕೆ ವಿಧಿವಶರಾಗಿದ್ದಾರೆ. ಮಹಾಂತೇಶ್ ರೊಟ್ಟಿ ಅಂದ್ರೆ ತುಂಬಾ ಸಾಮಾನ್ಯ ಮನುಷ್ಯ.. ಗೊತ್ತಿಲ್ಲದೇ ಸಾವಿರಾರು ಜನರಿಗೆ ಸಹಾಯ ಮಾಡಿದ್ದಾರೆ. ಹಲವರ ಕಣ್ಣೀನ ಆಪರೇಷನ್ ಗೆ ಹಣ ನೀಡಿದ್ದಾರೆ. ಕೆ. ಬಿ. ಬಡಾವಣೆಯ ಹಳೇ ಪೊಸ್ಟ್ ಆಫೀಸ್ ಹಿಂಭಾಗದಲ್ಲಿನ ನಾಲ್ಕನೇ ಮೇನ್ ಏಳನೇ ಕ್ರಾಸ್ ನಲ್ಲಿ ವಾಸವಿದ್ದ ತಾಯಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರ ನಿಧನಕ್ಕೆ ವಿವಿಧ ಸಂಘಟನೆಗಳು, ಹಿತೈಷಿಗಳು, ಹಿಂದುಳಿದ ವರ್ಗದ ನಾಯಕ ಬಾಡಾದ ಆನಂದ್ ರಾಜ್, ಕುಟುಂಬದವರು, ಬಂಧುಮಿತ್ರರು ಸಂತಾಪ ಸೂಚಿಸಿದ್ದಾರೆ.ಅಂತ್ಯಕ್ರಿಯೆ ಸಂಜೆ 5 ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ನಡೆಯುವುದೆಂದು ಕುಟುಂಬವರ್ಗ ತಿಳಿಸಿದೆ.
ದಾವಣಗೆರೆ : ಉತ್ತರ ಕರ್ನಾಟಕದ ಮಂದಿ ಹವಾನೇ ಬೇರೆ, ಅವರದ್ದು ಗತ್ತು ಗಮತ್ತೇ ಬೇರೆ…ಒಮ್ಮೆ ಕೈ ಇಟ್ಟರೇ ಆ ಕೆಲಸ ಆಗೋದೇ ಇಲ್ಲ ಎಂಬ ಮಾತಿದೆ..ಈ ಮಾತಿಗೆ ಸೂಟ್ ಆಗೋದು ದಾವಣಗೆರೆ ಗ್ರಾಮಾಂತರ ಡಿ.ಎಸ್ಪಿ.ಬಸವರಾಜ್…ಅಷ್ಟಕ್ಕೂ ಅವರಿಗೆ ಈ ಮಾತು ಹೇಳೋದಕ್ಕೂ ಕಾರಣವಿದೆ..ಅದೇನೂ ಅಂತೀರಾ ಈ ಸ್ಟೋರಿ ನೋಡಿ. ಡಿಎಸ್ಪಿ ಬಸವರಾಜ್ ದಾವಣಗೆರೆ ಜಿಲ್ಲೆಯಲ್ಲಿ ತಮ್ಮದೇ ಹೆಸರು ಮಾಡಿರುವ ಆಫೀಸರ್. ಮೂಲತಃ ಉತ್ತರ ಕರ್ನಾಟಕದವರಾದ ಇವರು. ಕ್ರೈಂ ಗಳನ್ನು ಭೇದಿಸುವಲ್ಲಿ ಅನುಭವಿ. ಅಲ್ಲದೇ ಲಂಬಾಣಿ ಸಮುದಾಯದ ಇವರು, ಕಲೆ, ಸಂಸ್ಕೃತಿಗೂ ಆದ್ಯತೆ ನೀಡುವರು.ತಾಯಿ ಇಂದುಮತಿ ಪ್ರಖ್ಯಾತ ದಲಿತ ಕವಿ..ಎಲ್ಲೆ ಅನ್ಯಾಯವಾದರೂ ತನ್ನ ಕಾದಂಬರಿಗಳ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಾರೆ..ಇಂತಹವರ ಮಗ ಡಿವೈಎಸ್ಪಿ ಬಸವರಾಜ್ ಪಾತಕಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿರುವ ಕಾರಣ ಸಿಎಂ ಪದಕ ಸಿಕ್ಕಿದೆ. ನ್ಯಾಮತಿ ಬ್ಯಾಂಕ್ ದರೋಡೆ 17 ಕೆಜಿ ಬಂಗಾರ ಭೇದಿಸಿದ ಪ್ರಕರಣಕ್ಕೆ ಸಿಕ್ತು ಸಿಎಂ ಪದಕ ಇಡೀ ರಾಜ್ಯಾದ್ಯಂತ ಈಗ ಬ್ಯಾಂಕ್ ದರೋಡೆ ಪ್ರಕರಣ ನಡೆಯುತ್ತಿದೆ..ಆದರೆ ಇದಕ್ಕೂ…
*💫🛕ಓಂಶ್ರೀಗಾಯಿತ್ರಿವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫* *🪐,ದ್ವಾದಶ ರಾಶಿಗಳುದಿನ ಭವಿಷ್ಯ#ತಾರೀಕು#31/03/2025 ಸೋಮವಾರ,🪐* *01,💫ಮೇಷ ರಾಶಿ💫* 📖,ಇಂದುನಿಮಗೆಸಂತೋಷದ.ದಿನವಾಗಿರುತ್ತದೆ. ನಿಮ್ಮ ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆಹೋಗಬಹುದು.ವ್ಯವಹಾರದಲ್ಲಿ ನಡೆಯುತ್ತಿರುವ ಕೆಲವು ಅಡೆತಡೆಗಳು ನಿಮ್ಮನ್ನು ಕಾಡುತ್ತಿದ್ದರೆ,ನೀವುಅವುಗನ್ನು ಬಹಳಜಾಗ್ರತೆಯಿಂದನಿಭಾಯಿಸಿ,ನೀವುಈಹಿಂದೆಯಾರಿಗಾದರೂಸಾಲನೀಡಿದ್ದರೆಆಹಣವನ್ನು ಮರಳಿ ಪಡೆಯುವ ಸಾಧ್ಯತೆ ತುಂಬಾ ಕಡಿಮೆ, *02,💫ವೃಷಭ ರಾಶಿ💫* 📖,ಇಂದು ನೀವು ವಹಿವಾಟಿನ ವಿಷಯದಲ್ಲಿಜಾಗರೂಕರಾಗಿರಬೇಕಾದ ದಿನವಾಗಿದೆ. ನೀವು ಜನರೊಂದಿಗೆ ಸಮಯವನ್ನು ಕಳೆದು ಸಮಯ ವ್ಯರ್ಥ ಮಾಡದಿರಿ, ಇದರಿಂದಾಗಿ ನಿಮ್ಮ ಬಹಳಷ್ಟು ಕೆಲಸಗಳು ಸ್ಥಗಿತಗೊಳ್ಳಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಮೇಲೆ ಹೆಚ್ಚಿನ ಕೆಲಸದ ಹೊರೆಯಿಂದಾಗಿ ನೀವುತೊಂದರೆಗೊಳಗಾಗುತ್ತೀರಿ. ಕುಟುಂಬದಲ್ಲಿ ಕಲಹ ಬರುವುದು ಸಾಧ್ಯತೆ ಇದೆ, *03,💫ಮಿಥುನ ರಾಕಿ💫* 📖,ಇಂದು ವ್ಯಾಪಾರದಲ್ಲಿ ನಡೆಯುತ್ತಿರುವಸಮಸ್ಯೆಗಳಿಂದ. ಮುಕ್ತಿ ಪಡೆಯುವ ದಿನ. ಈ ದಿನದ ಸ್ವಲ್ಪ ಸಮಯವನ್ನು ಕುಟುಂಬದ ಸದಸ್ಯರೊಂದಿಗೆ ಮಾತುಕತೆಯಲ್ಲಿ ಕಳೆಯುವಿರಿ. ಚಿಕ್ಕ ಮಕ್ಕಳು ಸಹನಿಮ್ಮೊಂದಿಗೆ ಸಂತೋಷವಾಗಿರುತ್ತಾರೆ. ಹಣ ವ್ಯಯವಾಗುವ ಸಾದ್ಯತೆ ಇದೆ, ಕೆಲಸದಸ್ಥಳದಲ್ಲಿನಡೆಯುತ್ತಿರುವ ಸಮಸ್ಯೆಗಳನ್ನು ಸ್ನೇಹಿತರ ಸಹಾಯದಿಂದಕೊನೆಗೊಳಿಸಲು.ಈ ದಿನ ನಿಮಗೆ ಸಾಧ್ಯವಾಗಬಹುದು, *04,💫ಕಟಕ ರಾಶಿ💫* 📖,ಇಂದು ಉತ್ಸಾಹದಿಂದ ತುಂಬಿರುವ ಕಾರಣ, ನೀವು ತಕ್ಷಣ ಯಾವುದೇ ಹೊಸ ಕೆಲಸವನ್ನು…