ದಾವಣಗೆರೆ : ಎತ್ತ ನೋಡಿದರೂ ಅತ್ತ ಮಹಿಳೆಯರು, ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಜನ..ಇದು ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಕಂಡು ಬಂದ ಭಾರಿ ಮಹಿಳಾ ಜನಸ್ತೋಮ.
ಹೌದು..ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಗೆ ಬೆಂಬಲ ಸೂಚಿಸಿ ನವೋದಯ ಚಾರಿಟಬಲ್ ಟ್ರಸ್ಟ್ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ, ಹಾಗೂ ಮಾಜಿ ಅಧ್ಯಕ್ಷ ಜೆ.ಆರ್.ಷಣ್ಮುಖಪ್ಪ ನೇತೃತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸುಮಾರು ಆರು ಸಾವಿರದಿಂದ ಏಳು ಸಾವಿರ ಜನ ಸೇರಿದ್ದರು.
ಬೆಳಗ್ಗೆ ಹತ್ತು ಘಂಟೆಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನರು ಆಟೋ, ಬಸ್ ಗಳಲ್ಲಿ ಬಿಸಿಲಿನಲ್ಲಿಯೂ ಸಾಗರದಂತೆ ಹರಿದು ಬಂದರು. ಈ ನಡುವೆ ಭಾರು ಮಹಿಳಾಸ್ತೋಮದಿಂದ ಸಭಾಂಗಣ ತುಂಬಿದ್ದು, ಕುಳಿತುಕೊಳ್ಳುವುದಕ್ಕೂ ಜಾಗವಿರಲಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ಮಹಿಳಾ ಅಭ್ಯರ್ಥಿಯಾದ ಕಾರಣ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸೆಖೆ ಇದ್ದರೂ ಮಹಿಳೆಯರು ಅಲುಗಾಡದಂತೆ ಕುಳಿತಿದ್ದರು. ಒಳಸಭಾಂಗಣದ ಮೇಲೆ ಹಾಗೂ ಕೆಳಗೆ ಎರಡೂ ಕಡೆ ಚೇರ್ ಗಳು ಪುಲ್ ಆಗಿದ್ದು,ಹೊರಗಡೆಯೂ ಜಾಗ ಇರಲಿಲ್ಲ
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಜೆ.ಆರ್.ಷಣ್ಮುಖಪ್ಪ ಮಾತನಾಡಿ, ಕಾಂಗ್ರೆಸ್ ನ ಪ್ರಭಾ ಮಲ್ಲಿಕಾರ್ಜುನ್ ಗೆ ಬೆಂಬಲ ಸೂಚಿಸಿ ಸುಮಾರು ಆರು ಸಾವಿರದಿಂದ ಏಳು ಸಾವಿರ ಜನ ಸೇರಿದ್ದಾರೆ. ಈ ಬಾರಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಮಹಿಳಾ ಅಭಿವೃದ್ಧಿ, ದಾವಣಗೆರೆ ಅಭಿವೃದ್ಧಿಗೆ ಪ್ರಭಾ ಮಲ್ಲಿಕಾರ್ಜುನ್ ಬೇಕಿದ್ದು, ಈ ಭಾರಿ ಅವರನ್ನು ಗೆಲ್ಲಿಸುವ ಮೂಲಕ ತ್ರಿಬಲ್ ಎಂಜಿನ್ ಸರಕಾರ ರಚಿಸುತ್ತೇವೆ. ಎಸ್ ಎಸ್ ಎಂ ಅಭಿವೃದ್ಧಿ ಕೆಲಸಗಳು ಕೈ ಹಿಡಿಯಲಿದ್ದು, ಜನತೆ ಕಾಂಗ್ರೆಸ್ ಗೆ ಬೆಂಬಲ ನೀಡಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಅಣಬೇರು ರಾಜಣ್ಣ, ರೇಣುಕಾ ಪ್ರಸನ್ನ, ಲೋಕೇಶ್, ಎಂ.ಜಿ.ಶ್ರೀಕಾಂತ್ ಸಿಬ್ಬಂದಿಗಳಾದ ವೀಣಾ, ಮಮತಾ, ರೇಣುಕಾ, ಬಸಮ್ಮ ಸೇರಿದಂತೆ ಇತರರು ಇದ್ದರು.