Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

ಪ್ರೀತಿ ಮಾಡಿದವನನ್ನೇ ಮಟಾಷ್ ಮಾಡಿದ “ಕೋಮಲ” ಕೈ

17 May 2025

ನಗು ಮುಖದಿಂದ ಎಲ್ಲರನ್ನೂ ಗೆಲ್ಲುವ ಡಿಎಆರ್ ಡಿಎಸ್ಪಿ ಪ್ರಕಾಶ್

17 May 2025

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»ಕ್ರೈಂ ಸುದ್ದಿ»ಪ್ರೀತಿ ಮಾಡಿದವನನ್ನೇ ಮಟಾಷ್ ಮಾಡಿದ “ಕೋಮಲ” ಕೈ
ಕ್ರೈಂ ಸುದ್ದಿ

ಪ್ರೀತಿ ಮಾಡಿದವನನ್ನೇ ಮಟಾಷ್ ಮಾಡಿದ “ಕೋಮಲ” ಕೈ

ಹೊಸದುರ್ಗ : ಪ್ರಿಯಕರನ್ನು ಕೊಂದ ಪ್ರಿಯೆ, ಅಷ್ಟಕ್ಕೂ ಪ್ರೀತಿಸಿದವನನ್ನು ಕೊಲೆ ಮಾಡಿದ್ದು ಯಾಕೆ? ಈ ಸ್ಟೋರಿ ನೋಡಿ
davangerevijaya.comBy davangerevijaya.com17 May 2025No Comments2 Mins Read
Facebook WhatsApp Twitter
Share
WhatsApp Facebook Twitter Telegram

ನಂದೀಶ್ ಭದ್ರಾವತಿ ಹೊಸದುರ್ಗ

ಪ್ರೀತಿ ಮಾಡಬಾರದು, ಪ್ರೀತಿ ಮಾಡಿದರೆ ಮೋಸ ಮಾಡಬಾರದು ಎಂಬ ಹಾಡು ನಿಮ್ಮ ಕಿವಿಯಲ್ಲಿ ಆಗಾಗ ಗುಯ್ಯುಗುಟ್ಟುತ್ತಿರುತ್ತದೆ..ಎಷ್ಟೋ ಪ್ರೇಮಿಗಳು ಪ್ರೀತಿಗಾಗಿ ತಮ್ಮ ಸರ್ವಸವನ್ನೇ ತ್ಯಾಗ ಮಾಡಿರುತ್ತಾರೆ..ಇಂತಹದ್ದರಲ್ಲಿ ಪ್ರಿಯತಮೆಯೇ ತನ್ನ ಪ್ರಿಯಕರನನ್ನು ಕೊಲೆ ಮಾಡಿರುವ ಘಟನೆ ಹೊಸದುರ್ಗ ತಾಲೂಕಿನ ಪುಟ್ಟ ಗ್ರಾಮದಲ್ಲಿ ನಡೆದಿದೆ…ಈ ನಡುವೆ ಹೊಸದುರ್ಗದ ಪೊಲೀಸರ ಚಾಣಾಕ್ಷತನ ಕಾರಣ ಆರೋಪಿಗಳು ಕಾನೂನು ಬಲೆಗೆ ಬಿದ್ದಿದ್ದಾರೆ‌..ಹಾಗಾದ್ರೆ ಆ ಸ್ಟೋರಿ ಕಥೆ ಏನು? ಕ್ಲೈಮ್ಯಾಕ್ಸ್ ಏನಾಯಿತು?…ಅವರು ಪೊಲೀಸರ ಬಲೆಗೆ ಬಿದ್ದಿದ್ದಾರೂ ಹೇಗೆ ಈ ಸ್ಟೋರಿ ನೋಡಿ..

ಆಕೆ ಸುಂದರ ಯುವತಿ, ಇನ್ನೂ ಮದುವೆಯಾಗಿರಲಿಲ್ಲ..ಹೀಗಿರುವಾಗ ಈಕೆಯನ್ನು ನೋಡಿದವ ಆ ಯುವತಿಗೆ ಮನಸ್ಸು ಕೊಟ್ಟ. ಆಕೆಯೂ ಸಹ ಆತನಿಗೆ ಮನಸ್ಸು ಕೊಟ್ಟಳು..ಇಬ್ಬರ ಪ್ರೀತಿ ಕಾಣದಂತೆ ಬಹಳ ದಿವಸ ನಡೆಯಿತು. ಈ ನಡುವೆ ಪ್ರಿಯಕರನಿಗೆ ಮದುವೆ ಆಯಿತು. ಅಷ್ಟೋತ್ತಿಗೆ ಪ್ರಿಯಕರನಿಂದ ದೂರ ಹೋದ ಪ್ರಿಯೆಗೆ ಪ್ರಿಯಕರ ತೊಂದರೆಕೊಡುತ್ತಿದ್ದ..ಇದಕ್ಕೆ ರೋಸಿ ಹೋದ ಆಕೆ ಹಾಗೂ ಅವರ ಕುಟುಂಬ ಸ್ಕೇಚ್ ಹಾಕಿ ಕೊಲೆ ಮಾಡಿತು…ಇದು ಈ ಕಥೆಯ ಸಾರಾಂಶ.

ತಾಲೂಕಿನ ಸಣ್ಣಕಿಟ್ಟದಹಳ್ಳಿ ಈ ಕಥೆ ನಡೆಯುವ ಊರು. ಕೋಮಲ ಈ ಕಥೆಯ ನಾಯಕಿ..ಚಿಕ್ಕಣ್ಣ ನಾಯಕ..ದೊಡ್ಡಪ್ಪ ಮೂಡಲಗಿರಿಯಪ್ಪ, ಸಹೋದರ ಗಿರೀಶ ಕಥೆಗೆ ಕ್ಲೇಮ್ಯಾಕ್ಸ್ ನೀಡಿದವರು.

ಕೋಮಲ ಹಾಗೂ ಚಿಕ್ಕಣ್ಣ ಇಬ್ಬರು ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು‌. ಇವರಿಬ್ಬರ ತೋಟವು ಅಕ್ಕ-ಪಕ್ಕ ಇದ್ದಊರಿಗೆ ಈ ನಡುವೆ ಪ್ರಿಯಕರ ಚಿಕ್ಕಣ್ಣ ಮದುವೆಯಾಗಿ ಹೆಂಡತಿಯನ್ನು ಊರಿಗೆ ಕರೆತಂದಿದ್ದ. ಇದು ಪ್ರಿಯೆ ಕೋಮಲಗೆ ಇಷ್ಟವಿರಲಿಲ್ಲ..ಅದಕ್ಕಾಗಿ ಕೋಮಲ ಇಷ್ಟು ದಿನ ನಾವು ಪ್ರೀತಿ ಮಾಡಿದ್ದೀವಿ..ಈಗ ನೀನು ಬೇರೆಯೊಬ್ಬರನ್ನು ಮದುವೆಯಾಗಿದ್ದೀಯಾ, ಸಾಕು ನನ್ನನ್ನು ಮರೆತುಬಿಡು ಅಂತ ಚಿಕ್ಕಣ್ಣಗೆ ಹೇಳಿದ್ದಾಳೆ. ಆದರೆ ಚಿಕ್ಕಣ್ಣ ಹೆಂಡತಿ ಮನೆಗೆ ಇದ್ದರೂ, ಕೋಮಲಗೆ ಪದೇ, ಪದೇ ಪೋನ್ ಮಾಡುವುದು, ಮನೆ ಬಳಿ ಹೋಗುತ್ತಿದ್ದ. ನಮ್ಮ ಮನೆ ಬಳಿ ಬರಬೇಡ. ಮರ್ಯಾದೆ ಹೋಗುತ್ತದೆ ಎಂದು ಕೋಮಲ ಹೇಳಿದ್ದರೂ, ಚಿಕ್ಕಣ್ಣ ಪದೇ ಪದೇ ಪ್ರಿಯೆ ಮನೆಗೆ ಹೋಗುತ್ತಿದ್ದ. ಇದರಿಂದ ಬೇಸತ್ತ ಪ್ರಿಯೆ ಕೋಮಲ ಹಾಗೂ ಕುಟುಂಬ ಚಿಕ್ಕಣ್ಣನನ್ನು ಮರ್ಡರ್ ಮಾಡೋದಕ್ಕೆ ಸ್ಕೇಚ್ ಹಾಕಿ ಕೊಲೆ ಮಾಡಿದರು.

ಮರ್ಡರ್ ಮಾಡಿದ್ದ ಸ್ಕೇಚ್ ಹೇಗಿತ್ತು ಗೊತ್ತಾ?

ಚಿಕ್ಕಣ್ಣ ಪದೇ ಪದೇ ತೊಂದರೆ ಕೊಡುತ್ತಿದ್ದ, ಆ ದಿನ ಮನೆ ಬಳಿ ಬಂದು ಗಲಾಟೆ ಮಾಡಿದ್ದ. ಕಾರಣ ಪ್ರಿಯೆ ಕೋಮಲ ಇಲ್ಲಿ ಗಲಾಟೆ ಮಾಡಬೇಡ. ಮರ್ಯಾದೆ ಹೋಗುತ್ತದೆ‌. ತೋಟದ ಬಳಿ ಬಾ ಮಾತನಾಡೋಣ ಎಂದು ಕೋಮಲ ಚಿಕ್ಕಣ್ಣನನ್ನು ತನ್ನ ತೋಟಕ್ಕೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ದೊಡ್ಡಪ್ಪ ಮೂಡಲಗಿರಿಯಪ್ಪ, ಸಹೋದರ ಗಿರೀಶ್ ಬಂದು ಚಿಕ್ಕಣ್ಣ ನನ್ನು ಇಲ್ಲವಾಗಿಸಿದ್ದಾರೆ. ಈ ಮೂವರು ಆರೋಪಿಗಳು ಸೇರಿ ಚಿಕ್ಕಣ್ಣನ ತಲೆಗೆ ಮೊದಲು ಕಲ್ಲಿನಿಂದ ಹೊಡೆದಿದ್ದಾರೆ. ನಂತರ ಸೀರೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ

ಪೊಲೀಸರಿಗೆ ಶರಣಾಗಿದ್ದಾದರೂ ಹೇಗೆ?

ಮೇ9 ರಂದು ಸಣ್ಣಕಿಟ್ಟದಹಳ್ಳಿ ಗ್ರಾಮದ ಹೊರವಲಯದ ತೋಟದ ಸಮೀಪದಲ್ಲಿ ಚಿಕ್ಕಣ್ಣ ಅವರ ಮೃತ ದೇಹ ಪತ್ತೆಯಾಗಿತ್ತು. ಕುತ್ತಿಗೆಗೆ ಟವಲ್ ಸುತ್ತಿ ಮಲಗಿದ ರೀತಿಯಲ್ಲಿ ಚಿಕ್ಕಣ್ಣನ ಶವ ಪತ್ತೆಯಾಗಿದ್ದರಿಂದ ಸ್ಥಳ ಪರಿಶೀಲನೆ ನಡೆಸಿದ್ದ ಪೋಲೀಸರಿಗೆ ಮೊದಲು ಇದು ಸಹಜ ಸಾವು ಎಂದು ಭಾವಿಸಿದ್ದರು. ಆದರೆ ದೇಹದಲ್ಲಿದ್ದ ಕೆಲವು ಗುರುತುಗಳು ಇದು ಸಹಜ ಸಾವಲ್ಲ ಕೊಲೆ ಎಂಬ ಅನುಮಾನವನ್ನು ಹುಟ್ಟುಹಾಕಿದ್ದವು. ಈ ಹಿನ್ನೆಲೆಯಲ್ಲಿ ಚಿಕ್ಕಣ್ಣ ಅವರ ಪೋನ್ ಕರೆಗಳ ಆಧಾರದ ಮೇಲೆ ಅನುಮಾನಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಪೊಲೀಸರು ಒಳಪಡಿಸಿದ್ದರು. ಮೃತ ವ್ಯಕ್ತಿ ಚಿಕ್ಕಣ್ಣ ಹಾಗೂ ಬಂಧಿತೆ ಕೊಮಲ ನಡುವೆ ಹಲವು ಭಾರಿ ಪೋನ್ ಮೂಲಕ ಸಂಭಾಷಣೆ ಆಗಿರುವುದು ತನಿಖೆ ವೇಳೆ ಪತ್ತೆ ಆಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಆರೋಪಿತರು ಒಪ್ಪಿಕೊಂಡಿದ್ದಾರೆ

ಯಾರು ಕೊಲೆ ಆರೋಪಿಗಳು

ಸಣ್ಣಕಿಟ್ಟದಹಳ್ಳಿ ಗ್ರಾಮದ ಕೋಮಲ, ಗಿರೀಶ, ಮೂಡಲಗಿರಿಯಪ್ಪ ಬಂಧಿತರು. ಈ ಮೂವರನ್ನು ಹೊಸದುರ್ಗ ಪೋಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಒಟ್ಟಾರೆ ಕೋಮಲ ತನ್ನ ಕೈಯಿಂದಲೇ ಅಪ್ಪಿಕೊಂಡ ಪ್ರಿಯಕರನನ್ನು ಪರಲೋಕಕ್ಕೆ ಕಳಿಸಿ ಈಗ ಕಂಬಿ ಎಣಿಸುತ್ತಿದ್ದಾಳೆ.
….

ಕೊಲೆ ಆರೋಪಿಗಳ ಬಂಧನ ಎಸ್ಪಿ ಶ್ಲಾಘನೆ

ಕೊಲೆ ಆರೋಪಿಗಳನ್ನು ಬಂಧಿಸಿದ ಪಿಐಗಳಾದ ಕೆ.ಟಿ.ರಮೇಶ್, ಮಧು, ಪಿಎಸ್‌ಐ ಭೀಮನಗೌಡ, ಮಹೇಶ್ ಕುಮಾರ್, ಶ್ರೀಶೈಲ ನೇತೃತ್ವದ ತಂಡಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅಭಿನಂದನೆ ಸಲ್ಲಿಸಿದ್ದಾರೆ.

Share. WhatsApp Facebook Twitter Telegram
davangerevijaya.com
  • Website

Related Posts

ನಗು ಮುಖದಿಂದ ಎಲ್ಲರನ್ನೂ ಗೆಲ್ಲುವ ಡಿಎಆರ್ ಡಿಎಸ್ಪಿ ಪ್ರಕಾಶ್

17 May 2025

ಭದ್ರಾವತಿ ಹೊಸ ಸಿದ್ದಾಪುರದಲ್ಲಿ ರಾತ್ರಿ ನಡೆಯಿತು ಘೋರ ಕೃತ್ಯ, ಐಸಿಯುನಲ್ಲಿ ಈ ವ್ಯಕ್ತಿ…ಪಿಎಸ್ಐ ಟಿ.ರಮೇಶ್, ಭಾರತಿಯಿಂದ ಆರೋಪಿಗಳ ಶೋಧ

26 April 2025

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಹಿಂದೆ ಇದೆ ನಿಗೂಢ ಕಾರಣ? ಹಾಗಾದ್ರೆ ಆ ಕಾರಣವಾದರೂ ಏನು?

26 April 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,625 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,146 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,061 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,571 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
ಕ್ರೈಂ ಸುದ್ದಿ

ಪ್ರೀತಿ ಮಾಡಿದವನನ್ನೇ ಮಟಾಷ್ ಮಾಡಿದ “ಕೋಮಲ” ಕೈ

By davangerevijaya.com17 May 20250

ನಂದೀಶ್ ಭದ್ರಾವತಿ ಹೊಸದುರ್ಗ ಪ್ರೀತಿ ಮಾಡಬಾರದು, ಪ್ರೀತಿ ಮಾಡಿದರೆ ಮೋಸ ಮಾಡಬಾರದು ಎಂಬ ಹಾಡು ನಿಮ್ಮ ಕಿವಿಯಲ್ಲಿ ಆಗಾಗ ಗುಯ್ಯುಗುಟ್ಟುತ್ತಿರುತ್ತದೆ..ಎಷ್ಟೋ…

ನಗು ಮುಖದಿಂದ ಎಲ್ಲರನ್ನೂ ಗೆಲ್ಲುವ ಡಿಎಆರ್ ಡಿಎಸ್ಪಿ ಪ್ರಕಾಶ್

17 May 2025

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 2025

ಪರಂಪರೆ,ಸಂಸ್ಕೃತಿ ಎತ್ತಿಹಿಡಿಯುವ ಕೆಲಸ ಗ್ರಾಮೀಣಭಾಗದ ಜನರು ಮಾಡುತ್ತಿದ್ದಾರೆ; ಡಾ.ಪ್ರಭಾ ಮಲ್ಲಿಕಾರ್ಜುನ್

5 May 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

ಪ್ರೀತಿ ಮಾಡಿದವನನ್ನೇ ಮಟಾಷ್ ಮಾಡಿದ “ಕೋಮಲ” ಕೈ

17 May 2025

ನಗು ಮುಖದಿಂದ ಎಲ್ಲರನ್ನೂ ಗೆಲ್ಲುವ ಡಿಎಆರ್ ಡಿಎಸ್ಪಿ ಪ್ರಕಾಶ್

17 May 2025

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,625 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,146 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,061 Views

Subscribe to Updates

Get the latest creative news from SmartMag about art & design.

Recent Posts
  • ಪ್ರೀತಿ ಮಾಡಿದವನನ್ನೇ ಮಟಾಷ್ ಮಾಡಿದ “ಕೋಮಲ” ಕೈ
  • ನಗು ಮುಖದಿಂದ ಎಲ್ಲರನ್ನೂ ಗೆಲ್ಲುವ ಡಿಎಆರ್ ಡಿಎಸ್ಪಿ ಪ್ರಕಾಶ್
  • ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್
  • ಪರಂಪರೆ,ಸಂಸ್ಕೃತಿ ಎತ್ತಿಹಿಡಿಯುವ ಕೆಲಸ ಗ್ರಾಮೀಣಭಾಗದ ಜನರು ಮಾಡುತ್ತಿದ್ದಾರೆ; ಡಾ.ಪ್ರಭಾ ಮಲ್ಲಿಕಾರ್ಜುನ್
  • ಭದ್ರಾವತಿ ಕಾಗದ ನಗರ ಶಾಲೆ ತೆರೆಯಲು ಮಧುಸೂದನ್ ಹಚ್ಚಿದ್ರು ಹೋರಾಟದ ಕಿಡಿ
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.