
ಸೊರಬ : ಸೊರಬ ಪಟ್ಟಣದ ಶ್ರೀ ವರದ ಹಸ್ತ ಆಂಜನೇಯ ಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ತಾಲೂಕು ಆಡಳಿತದಿಂದ ನಡೆಯಿತು.ಪ್ರತಿ ವರ್ಷ ಹುಂಡಿ ಎಣಿಕೆ ಮಾಡುವಂತೆ ಈ ವರ್ಷದ ಎಣಿಕೆ ಮಾಡಲಾಗಿ 1,10.635 ರೂ. ಸಂಗ್ರಹವಾಗಿದ್ದು ಕಳೆದ ವರ್ಷ 86.947 ರೂಪಾಯಿ ಸಂಗ್ರಹವಾಗಿತ್ತು.ಈ ಸಂದರ್ಭದಲ್ಲಿ ಶಿರಸ್ತೇದಾರ್ ನಿರ್ಮಲ, ಶೃತಿ, ಮಾರುತಿ, ಮಲ್ಲಿಕಾರ್ಜುನ, ಚಂದ್ರಪ್ಪ,ಮಲ್ಲಪ್ಪ, ಪ್ರಭಾಕರ್, ಅರುಣ್, ಉದಯ್, ಅನಿಲ್,ನಾಗೇಶಪ್ಪ, ಅರುಣ್ ಕುಮಾರ್, ನಾಗರಾಜ್ ಸೇರಿದಂತೆ ಮೊದಲಾದವರಿದ್ದರು.

