Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ

29 June 2025

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»ಪ್ರಮುಖ ಸುದ್ದಿ»ಕಾವೇರುತ್ತಿದೆ ಭದ್ರಾವತಿ ಮಹಾಸಭಾ ಚುನಾವಣೆ, ವಿಜಯ್ ಕುಮಾರ್ ಗೆ ಸಿಕ್ತು ಗೋಣಿಬೀಡು ಶ್ರೀರಕ್ಷೆ, ಗೋಣಿಬಿಡು‌ ಮಠದ ಇತಿಹಾಸ ಹೇಳಿದ ಜಗದೀಶ್
ಪ್ರಮುಖ ಸುದ್ದಿ

ಕಾವೇರುತ್ತಿದೆ ಭದ್ರಾವತಿ ಮಹಾಸಭಾ ಚುನಾವಣೆ, ವಿಜಯ್ ಕುಮಾರ್ ಗೆ ಸಿಕ್ತು ಗೋಣಿಬೀಡು ಶ್ರೀರಕ್ಷೆ, ಗೋಣಿಬಿಡು‌ ಮಠದ ಇತಿಹಾಸ ಹೇಳಿದ ಜಗದೀಶ್

ಗೋಣಿ ಬೀಡು ಮಠದ ಬಗ್ಗೆ ಇತಿಹಾಸ ನಿಮಗೇಷ್ಟು ಗೊತ್ತು
davangerevijaya.comBy davangerevijaya.com14 July 2024Updated:14 July 2024No Comments3 Mins Read
Facebook WhatsApp Twitter
Share
WhatsApp Facebook Twitter Telegram

ನಂದೀಶ್ ಭದ್ರಾವತಿ, ಶಿವಮೊಗ್ಗ

ಭದ್ರಾವತಿಯಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಹಾಸಭಾ ಎಲೆಕ್ಷನ್ ಜೋರಾಗಿದ್ದು, ಅಭ್ಯರ್ಥಿಗಳು‌ ಮಠ, ಮಾನ್ಯ ಕದ ತಟ್ಟುತ್ತಿದ್ದಾರೆ.

ವೀರಶೈವ ಲಿಂಗಾಯಿತ ಮಹಾಸಭಾ ವಿಜಯ್ ಕುಮಾರ್ ನೇತೃತ್ವದ ತಂಡ ಕಾಲಿಗೆ ಗೆಜ್ಜೆ ಕಟ್ಟಿಕೊಡುಬರಂತೆ ಓಡಾಡುತ್ತಿದ್ದಾರೆ. ಅದರಲ್ಲೂ ವಿಜಯ್ ಕುಮಾರ್ ಪ್ರತಿ ಮನೆ,ಮನೆಗೂ ಭೇಟಿ ನೀಡಿ ಮತದಾರರ ಮನವೊಲಿಸುತ್ತಿದ್ದಾರೆ. ಇದರ ಜತೆಗೆ ನಾನಾ ಸ್ವಾಮೀಜಿಗಳ ಬೆಂಬಲ ಕೇಳುತ್ತಿದ್ದಾರೆ. ಅದರಂತೆ ಪವಾಡ ಪುರುಷ ಗೋಣಿ ಬೀಡು ಶ್ರೀಗಳನ್ನು ವಿಜಯ್ ಕುಮಾರ್ ಭೇಟಿ ನೀಡಿ ಆರ್ಶೀವಾದ ಪಡೆದಿದ್ದಾರೆ.

ನಂತರ ಮಾತನಾಡಿದ  ಭದ್ರಾವತಿ ತಾಲೂಕು ಗೋಣಿಬೀಡು ಶೀಲಸಂಪಾದನಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ನಿಮ್ಮ ಮೇಲೆ ನಮ್ಮ ಆರ್ಶೀವಾದ ಯಾವಾಗಲೂ ಇರುತ್ತದೆ. ಸಮಾಜಕ್ಕೆ, ಜನರಿಗೆ ಒಳ್ಳೆಯದು ಮಾಡಿ ಸದ್ಗುಣ ಬೆಳೆಸಿಕೊಳ್ಳಿ ಎಂದಿದ್ದಾರೆ.

ಅಭ್ಯರ್ಥಿ ವಿಜಯ್ ಕುಮಾರ್ ಮಾತನಾಡಿ, ಪ್ರಚಾರಕ್ಕೆ ಚಾಲನೆ ನೀಡಿದ ನಂತರ ಮೊದಲಬಾರಿಗೆ ಗೋಣಿ ಬೀಡು ಶ್ರೀಗಳ ಆರ್ಶೀವಾದ ಪಡೆದಿದ್ದೇನೆ. ಶ್ರೀಗಳ ಆರ್ಶೀವಾದ ಸಿಕ್ಕಿರುವ ಕಾರಣ ನನ್ನ ನೇತೃತ್ವದ ತಂಡ ಗೆಲ್ಲಲಿದೆ. ಶ್ರೀಗಳು ಪವಾಡ ಪುರುಷರು, ಅವರ‌ ಆರ್ಶೀವಾದ ನನ್ನನ್ನು ಸೇರಿದಂತೆ ಎಲ್ಲರ ಮೇಲಿದೆ. ಪ್ರಯತ್ನದ ಜತೆ ಆರ್ಶೀವಾದವೂ ಬೇಕು ಎಂದರು.

ಪವಾಡ ಪುರುಷ ಮಠ ಗೋಣಿಬೀಡು ; ಜಗದೀಶ್

ನಿರ್ದೇಶಕ ಸ್ಥಾನಕ್ಕೆ ನಿಂತಿರುವ ಜನ್ನಾಪುರದ ಜಗದೀಶ್ ಮಾತನಾಡಿ, ಗೋಣಿಬೀಡು ರಾಜ್ಯ ಕಂಡ ಶಕ್ತಿ‌ಮಠವಾಗಿದೆ‌ ಈ ಬಾರಿ ನಮ್ಮ ಅಧ್ಯಕ್ಷ  ವಿಜಯ್ ಕುಮಾರ್ ನೇತೃತ್ವ ತಂಡ ಶ್ರೀ ಗಳ ಆರ್ಶೀವಾದ ಪಡೆದಿದ್ದಾರೆ. ನಮ್ಮ ಶಕ್ತಿ, ಯುಕ್ತಿ ಬಳಸಿ ಚುನಾವಣೆ ಮಾಡುತ್ತಿದ್ದೇವೆ. ಪ್ರಯತ್ನವೂ ನಡೆಯುತ್ತಿದೆ ಎಂದರು. ಮಾತು ಮುಂದುವರಿಸಿದ ಜಗದೀಶ್ ಮಠದ ಬಗ್ಗೆ ಮಾತನಾಡಿದರು. ಭದ್ರಾವತಿ ತಾಲೂಕು ಗೋಣಿಬೀಡು ಶೀಲಸಂಪಾದನಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸರ್ವ ಸಂಘ ಪರಿತ್ಯಾಗಿಯಾಗಿಯಾಗಿದ್ದಾರೆ.  ಒಪ್ಪೊತ್ತಿನ ಫಲಾಹಾರದೊಂದಿಗೆ ಸುದೀರ್ಘ 3 ವರ್ಷ ಮೌನಾಚರಣೆಯಲ್ಲಿದ್ದವರು.

ಜಗದೀಶ್, ಗೋಣಿ ಬೀಡು ಮಠದ ಭಕ್ತ

ಒಬ್ಬ ಮನುಷ್ಯ ಕೇವಲ ಒಂದು ದಿನ ಯಾರೊಂದಿಗೂ ಮಾತನಾಡದೆ, ಹೊರಗೆಲ್ಲೂ ಹೋಗದೆ ಕೊಠಡಿಯೊಳಗೆ ಕೂರುವುದೆಂದರೆ ಅದೊಂದು ದೊಡ್ಡ ಶಿಕ್ಷೆ. ಊಟ ಬಿಟ್ಟು ಕೇವಲ ಹಾಲು ಹಣ್ಣು ಸೇವಿಸಿ ಒಂದು ಹೊತ್ತು ಅಥವಾ ಒಂದು ದಿನ ಸಾಗಹಾಕಬಹುದು. ಆದರೆ ಸುದೀರ್ಘ 3 ವರ್ಷದ ವರೆಗೆ ಯಾರೊಂದಿಗೂ ಮಾತನಾಡದೆ, ಕೊಠಡಿಯಿಂದ ಹೊರಗೆ ಬರದೆ ಕೇವಲ ಒಪ್ಪೊತ್ತಿಗೆ ಹಣ್ಣು ಅಥವಾ ಹಾಲು ಸೇವಿಸಿ ಹಠ ಯೋಗದ ಮೂಲಕ ತಪಸ್ಸಿನಲ್ಲಿ ತೊಡಗುವುದು ಅತ್ಯಂತ ಕಠಿಣ. 

ಧ್ಯಾನ, ಮೌನ, ಉಪವಾಸ ಮತ್ತು ಏಕಾಂತದ ಕಠಿಣ ತಪಸ್ಸು ಕೈಗೊಂಡಿರುವ ಶ್ರೀ ಸಿದ್ದಲಿಂಗ ಸ್ವಾಮೀಜಿ ಭಕ್ತ ಸಮೂಹ ಮತ್ತು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದ್ದವರು. ಈ ಅವಧಿಯಲ್ಲಿ ಅವರು ಒಂದೇ ಒಂದು ದಿನ ಅನಾರೋಗ್ಯಕ್ಕೆ ಒಳಗಾಗಿಲ್ಲ. ಒಂದು ಸಾರಿಯೂ ಮದ್ದು ತೆಗೆದುಕೊಂಡಿಲ್ಲ.

ಅಂತಃಸತ್ವ ಸಾಧನೆ ಅಚಲ ಅನುಷ್ಠಾನದಿಂದ ಮಾತ್ರ ಸಾಧ್ಯ, ಎಂಬುದನ್ನು ಅರಿತ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು 2010ನೇ ಶಿವರಾತ್ರಿ ದಿನ ಮಠದ ಕೊಠಡಿಯೊಂದರಲ್ಲಿ ಮೌನಾಚರಣೆಗೆ ಕುಳಿತರು. ತಮ್ಮ ಬೇಕು ಬೇಡಗಳಿಗೆ ಸ್ವಾಮೀಜಿ ಬಾಳಯ್ಯ ಎಂಬ ಶಿಷ್ಯನನ್ನು ನೇಮಿಸಿಕೊಂಡಿದ್ದರು. 

ಶಿಷ್ಯನೊಂದಿಗೂ ಮಾತನಾಡದೆ ಚೀಟಿಗಳಲ್ಲಿ ಬರೆದು ಸಂಭಾಷಿಸುತ್ತಿದ್ದವರು.  ಬಾಳಯ್ಯನ ಹೊರತಾಗಿ ಸ್ವಾಮೀಜಿಯನ್ನು ನೋಡಲು ಮತ್ಯಾರಿಗೂ ಅವಕಾಶವಿಲ್ಲ. 3 ವರ್ಷದ ಅವಧಿಯಲ್ಲಿ ಸರ್ವಧರ್ಮಗಳ ನೂರಾರು ಕೃತಿಗಳನ್ನು ಸ್ವಾಮೀಜಿಗಳು ಅಧ್ಯ ಯನ ಮಾಡಿದ್ದಾರೆ. ಈ ನಡುವೆ ಸ್ವಾಮೀಜಿಗಳ ಮೌನಾಚರಣೆ, ಏಕಾಂತ ತಪಸ್ಸು ಮಾಹಿತಿ ಪಡೆದು ಆನಂದಪುರಂ ಮುರುಘರಾಜೇಂದ್ರ ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಕಪ್ಪನಹಳ್ಳಿ ಶಿವಯೋಗ ಮಂದಿರದ ಶ್ರೀ ರೇವಣಸಿದ್ದ ಸ್ವಾಮೀಜಿ, ಎಡೆಯೂರು ತಾವರೆಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವರು ಮಠಕ್ಕೆ ಭೇಟಿ ನೀಡಿದ್ದರು ಎಂದರು. 

75 ಕೆ.ಜಿ. ಇದ್ದ ಸ್ವಾಮೀಜಿಗಳು ಕಠಿಣ ತಪಸ್ಸಿನಿಂದಾಗಿ 3 ವರ್ಷದ ಅವಧಿಯಲ್ಲಿ 40 ಕೆ.ಜಿ.ಗಿಂತಲೂ ಕಡಿಮೆಯಾಗಿದ್ದರು. ದೇಹ ತೂಕ ಮತ್ತಷ್ಟು ಕುಸಿದಲ್ಲಿ ಅವರ ಜೀವಕ್ಕೆ ಅಪಾಯ ಎದುರಾಗಬಹುದೆಂದು ಅರಿತ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಕಠಿಣ ತಪಸ್ಸಿನಿಂದ ಹೊರಬರುವಂತೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು ಎಂದು‌ ಇತಿಹಾಸ ಹೇಳಿದರು.‌

ಶ್ರೀ ಸಿದ್ದಲಿಂಗ ಸ್ವಾಮೀಜಿ ಈಗಲ್ಲದೆ 1995ರಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಕೆಂಕೆರೆಯ ಗವಿಯಲ್ಲೂ 21 ದಿನ ಕಠಿಣ ತಪಸ್ಸು ಮಾಡಿದ್ದರು. ಎಡೆಯೂರು ಶ್ರಿ ಸಿದ್ದಲಿಂಗೇಶ್ವರ, ಗೋಸಲ ಶ್ರೀ ಚನ್ನಬಸವೇಶ್ವರ, ಕೊಟ್ಟೂರು ಶ್ರೀ ಬಸವೇಶ್ವರ ಮತ್ತು ಕುಪ್ಪೂರಿನ ಶ್ರೀ ಮರುಳಸಿದ್ದೇಶ್ವರರ ಬಳಿಕ ಕತ್ತಲ ಗವಿಯೊಳಗೆ ಮತ್ಯಾರು ಪ್ರವೇಶ ಮಾಡುವ ಧೈರ್ಯ ತೋರಿರಲಿಲ್ಲ. ವಿಷಜಂತುಗಳಿಂದ ತುಂಬಿರುವ ಗವಿಯನ್ನು ಶ್ರೀ ಸಿದ್ದಲಿಂಗ ಸ್ವಾಮೀಜಿ ಪ್ರವೇಶ ಮಾಡಿದ್ದಲ್ಲದೆ 21 ದಿನ ಕಠಿಣ ತಪಸ್ಸು ಮಾಡಿದ್ದರು.

ಮಠದ ಹಿನ್ನೆಲೆ

ಶೀಲ ಸಂಪಾದನಾ ಮಠ ರಾಜ್ಯದ ಅತ್ಯಂತ ಹಳೆಯ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದು. ಗೋಣಿಬೀಡು ಗ್ರಾಮದ ಭದ್ರಾ ನದಿ ಎಡದಂಡೆಯ ಸುಂದರ ಪ್ರಾಕತಿಕ ಮಡಿಲಲ್ಲಿ ಸ್ಥಾಪನೆಗೊಂಡಿರುವ ಶೀಲ ಸಂಪಾದನಾ ಮಠ ಐತಿಹಾಸಿಕ ದಾಖಲೆಗಳನ್ನು ಹೊಂದಿದೆ. 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಧಾರ್ಮಿಕ ಕ್ರಾಂತಿಯಿಂದ ಶಿವಶರಣ- ಶರಣೆಯರ ದೊಡ್ಡ ಗುಂಪು ಅಕ್ಕನಾಗಮ್ಮ, ಚನ್ನಬಸವಣ್ಣ ಹಾಗೂ ನುಲಿಯಚಂದಯ್ಯ ಅವರ ನೇತತ್ವದಲ್ಲಿ ದಕ್ಷಿಣಾಭಿಮುಖವಾಗಿ ಹೊರಟು ವಚನ ಸಾಹಿತ್ಯವನ್ನು ಸಂರಕ್ಷಿಸಿಕೊಂಡು ಬೆಳಗಾವಿ ಜಿಲ್ಲೆಯ ಮೂಲಕ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟದ ಉಳವಿಗೆ ಬಂದರು. 

ಉಳವಿಯಲ್ಲಿ ಚನ್ನ ಬಸವಣ್ಣ ಅವರನ್ನು ನೆಲೆಗೊಳಿಸಿ ಅಕ್ಕನಾಗಮ್ಮ ಮತ್ತು ನುಲಿಯಚಂದಯ್ಯ ಅವರು ಗೋಣಿಬೀಡಿಗೆ ಬಂದರು. ಇದೇ ಸಮಯದಲ್ಲಿ ಶ್ರೀ ಸಿದ್ದವೀರ ಸ್ವಾಮೀಜಿ ಅವರು ಶೀಲ ಸಂಪಾದನಾ ಮಠ ಸ್ಥಾಪಿಸಿ ಶರಣ ಶರಣೆಯರಿಗೆ ನೆಲೆ ಒದಗಿಸಿದರು. ಮಠದಲ್ಲಿ ಇಲ್ಲಿವರೆಗೆ 19 ಸ್ವಾಮೀಜಿಗಳು ಪಟ್ಟಾಧಿಕಾರ ಪಡೆದಿದ್ದಾರೆ. 19ನೇ ಪೀಠಾಧಿಕಾರಿಯಾಗಿ ಶ್ರೀ ಸಿದ್ದಲಿಂಗಸ್ವಾಮೀಜಿ ಅವರು 1995ನೇ ಫೆಬ್ರವರಿ 17ರಂದು ಅಧಿಕಾರ ಪಡೆದಿದ್ದರು ಎಂಬ ಮಾಹಿತಿ ಪಡೆದರು.

 

Bhadravati Mahasabha election is waiting Featured Jagadish told the history of Gonibidu Math Top News Vijay Kumar got Gonibidu Sriraksha
Share. WhatsApp Facebook Twitter Telegram
davangerevijaya.com
  • Website

Related Posts

ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ

29 June 2025

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,655 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,328 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,084 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,590 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
Blog

ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ

By davangerevijaya.com29 June 20250

ನಂದೀಶ್ , ಭದ್ರಾವತಿ ಉಕ್ಕಿನ ನಗರಿ ಭದ್ರಾವತಿಯಲ್ಲಿ ಒಂದೊಂದೇ ಸಂತಸದ ಕ್ಷಣಗಳು ಕಾಣುತ್ತಿವೆ..ಅತ್ತ ವಿಎಸ್ಐಎಲ್ ಕಾರ್ಖಾನೆ ಓಪನ್ ಆಗಲಿದೆ ಎಂಬ…

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ

29 June 2025

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,655 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,328 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,084 Views

Subscribe to Updates

Get the latest creative news from SmartMag about art & design.

Recent Posts
  • ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ
  • ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.
  • ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ
  • ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?
  • ನೊಂದವರ ಕಷ್ಟಕ್ಕೆ ಸ್ಪಂದಿಸಲು‌ ಅಧಿಕಾರಿಗಳಿಗೆ ಸಲಹೆ: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.