ದಾವಣಗೆರೆ ; ನಗರದಲ್ಲಿ ಕಳೆದ 14 ವರ್ಷಗಳಿಂದ ವಿವಿಧ ಸಾಮಾಜಿಕ ಸೇವೆ ಮಾಡುತ್ತಿದ್ದ ಸಾಮಾಜಿಕ ಕಾರ್ಯಕರ್ತ,ಪರಿಸರ ಹೋರಾಟಗಾರ ಎಂ ಜಿ ಶ್ರೀಕಾಂತ್ ಇಂದು ನಾಮಪತ್ರ ಸಲ್ಲಿಸಿದರು.
ಇವರು ಪಿ ಬಿ ರಸ್ತೆ ಅಗಲೀಕರಣ ಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತದಲ್ಲಿ ದೂರು ಸಲ್ಲಿಸಿದ್ದರು,, ನಗರದಲ್ಲಿ ಸಸಿ ನೆಡವುದು,ರಕ್ತದಾನ ಸೇವೆ, ಬಯೋಮೆಡಿಕಲ್ ವೆಸ್ಟ್ ಬಗ್ಗೆ ಹೋರಾಟ ಮಾಡಿದ್ದಾರೆ. ಅಲ್ಲದೇ ರೇಣುಕಾಮಂದಿರ ಬಳಿ ಹಾಕಲಾಗಿದ್ದ ಡಿವೈಡರ್ ತೆರವು ಸೇರಿದಂತೆ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ನನಗೆ ಜನ ಬೆಂಬಲಿಸಿ ಮತ ನೀಡುತ್ತಾರೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಶ್ರೀಕಾಂತ್.
8 ವರ್ಷಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಅರ್ಜಿ ಸಲ್ಲಿಕೆ ಮಾಡಿರುವುದು, ಫಾಸ್ಟ್ ಟ್ಯಾಗ್ ,ಬಸ್ ರೈಲ್ವೆ ಬುಕ್ಕೀಂಗ್ ಸೇವೆ ನೀಡಿ ಜೀವನ ಸಾಗಿಸುತ್ತಿರುವ ಎಂಜಿ ಶ್ರೀಕಾಂತ್ ಇದರ ಜತೆಜತೆ ಸಮಾಜ ಸೇವೆ ಮಾಡಿದ್ದಾರೆ. ಅಲ್ಲದೇ ಸಾಮಾಜಿಕವಾಗಿ ಹೋರಾಡುವರಿಗೆ ತ್ವರಿತವಾಗಿ ಸೇವೆ ನೀಡಿದ್ದೇನೆ ಎಂದು ಶ್ರೀಕಾಂತ್ ಹೇಳಿದ್ದಾರೆ.