ಭದ್ರಾವತಿ: ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರ ಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಯವರ ಬ್ರಹ್ಮರಥೋತ್ಸವ ಮೇ.23ರಂದು ನಡೆಯಲಿದೆ.

ಮೇ.26ರವರೆಗೆ ಧಾರ್ಮಿಕ ಆಚರಣೆಗಳು ಜರುಗಲಿದ್ದು, 21ರಂದು ಸಂಜೆ ಗರುಡೋತ್ಸವ, 22ರಂದು ಬೆಳಿಗ್ಗೆ 11-30ಕ್ಕೆ ಶ್ರೀ ನರಸಿಂಹ ಜಯಂತಿ, ಸಂಜೆ 7ಕ್ಕೆ ಕಲ್ಯಾಣೋತ್ಸವ, 23ರಂದು ಮಧ್ಯಾಹ್ನ ಬ್ರಹ್ಮರಥೋತ್ಸವ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, 24ರಂದು ಬೆಳಿಗ್ಗೆ ಗಜವಾಹನೋತ್ಸವ, ಸಂಜೆ ಶೇಷವಾಹ ನೋತ್ಸವ, 25ರಂದು ಹನುಮಂತೋತ್ಸವ, ರಾತ್ರಿ 8ಕ್ಕೆ ಪೂರ್ಣಾಹುತಿ ಹಾಗೂ 26ರಂದು ಬೆಳಿಗ್ಗೆ 9ಕ್ಕೆ ಮಹಾಭಿಷೇಕ ಮತ್ತು ಸಂಜೆ ಪಲ್ಲಕ್ಕಿ ಉತ್ಸವ ಜರುಗಲಿದೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಧಾರ್ಮಿಕ ಆಚರಣೆಗಳನ್ನು ಯಶಸ್ವಿಗೊಳಿಸು ವಂತೆ ಮುಜರಾಯಿ ಅಧಿಕಾರಿಯಾಗಿರುವ ತಹಶೀಲ್ದಾರ್ ಕೆ.ಆರ್ ನಾಗರಾಜು ಕೋರಿದ್ದಾರೆ

Share.
Leave A Reply

Exit mobile version