Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

ದಾವಣಗೆರೆ : ಜಯನಗರದ ಸಾಯಿಬಾಬಾ ಮಂದಿರದಲ್ಲಿ ಅದ್ದೂರಿ ಗುರು ಪೂರ್ಣಿಮೆ . ಸಾಯಿ ದರ್ಶನಕ್ಕೆ ಬರಲಿದ್ದಾರೆ ಸಹಸ್ರಾರು ಜನ

8 July 2025

ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಲಾಡ್ಜ್ ನಲ್ಲಿ ನೇಣಿಗೆ ಶರಣು, ಅಷ್ಟಕ್ಕೂ ಪಿಎಸ್ಐ ಲೈಫ್ ಹಿಂದೆ ಏನಿತ್ತು?..ನೇಣಿಗೆ ಶರಣಾಗುವ ಮೊದಲು ಆಧಾರ್ ನಂಬರ್ ಅಳಿಸಿದ್ದು ಯಾಕೆ?

7 July 2025

ಭದ್ರಾ ಡ್ಯಾಂ ಭರ್ತಿಯಾಗಲು ಇನ್ನೇಷ್ಟು ಅಡಿ ಬಾಕಿ ಇರಬಹುದು?…ಈ ತಿಂಗಳಿನಲ್ಲಿಯೇ ನೋಡುಗರಿಗೆ ಸಿಗಲಿದೆ ಜಲಾಶಯದ ಸೊಬಗು .‌‌‌..

5 July 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»ಪ್ರಮುಖ ಸುದ್ದಿ»ರಾಜಕೀಯ ಗಾಢ್ ಫಾದರ್ ಇಲ್ಲದ ಕೊಟ್ರೇಶ್, ಟಿಕೆಟ್ ಗಾಗಿ ಸತತ ಪ್ರಯತ್ನ
ಪ್ರಮುಖ ಸುದ್ದಿ

ರಾಜಕೀಯ ಗಾಢ್ ಫಾದರ್ ಇಲ್ಲದ ಕೊಟ್ರೇಶ್, ಟಿಕೆಟ್ ಗಾಗಿ ಸತತ ಪ್ರಯತ್ನ

ಮಾ. 20 ರ ನಂತರ ಲೋಕಸಭೆ ಚುನಾವಣೆ ಘೋಷಣೆ ಸಾಧ್ಯತೆ, ಯಾರಿಗೆ ಸಿಗುತ್ತೇ ಟಿಕೆಟ್
davangerevijaya.comBy davangerevijaya.com27 December 2023Updated:27 December 2023No Comments3 Mins Read
Facebook WhatsApp Twitter
Share
WhatsApp Facebook Twitter Telegram

ದಾವಣಗೆರೆ : ದಾವಣಗೆರೆ ಹೇಳಿ, ಕೇಳಿ ಲೋಕಸಭೆಯಲ್ಲಿ ಬಿಜೆಪಿ ಭದ್ರಕೋಟೆ. ಇಲ್ಲಿ ಬಿಜೆಪಿ ಟಿಕೆಟ್ ಸಿಕ್ಕೋರಿಗೆ ಅದೃಷ್ಟ ಒಲಿಯುತ್ತದೆ ಎಂಬುದು ಎಲ್ಲರ ನಂಬಿಕೆ..ಅದಕ್ಕಾಗಿ ಸಾಮಾನ್ಯ ನಿವೃತ್ತ ಸರಕಾರಿ ನೌಕರರೊಬ್ಬರು ದಾವಣಗೆರೆ ಬಿಜೆಪಿ ಟಿಕೆಟ್ ಗಾಗಿ ಹರಸಾಹಸ ಮಾಡುತ್ತಿದ್ದಾರೆ…

ಹೌದು..ಬಿಜೆಪಿ ಭದ್ರಕೋಟೆಯಾಗಿರುವ ದಾವಣಗೆರೆಯಲ್ಲಿ ಪರಿಸರಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸಾಮಾನ್ಯ ನೌಕರನಾಗಿದ್ದ ಕೆ.ಬಿ.ಕೊಟ್ರೇಶ್ ಇಂದು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ…‌ಅಲ್ಲದೇ ಅದಕ್ಕಾಗಿ ಸತತ ಪ್ರಯತ್ನ ಮಾಡುತ್ತಿದ್ದಾರೆ.

ರಾಜಕೀಯ ಗಾಢ್ ಫಾದರ್ ಇಲ್ಲ

ಈಗಾಗಲೇ ಬಿಜೆಪಿಯಲ್ಲಿ ಸಾಕಷ್ಟು ರಾಜಕಾರಣಿ ಮಕ್ಕಳು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಅವರು ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ ಕೊಟ್ರೇಶ್ ಗೆ ಯಾವುದೇ ರಾಜಕಾರಣಿ ಗಾಡ್ ಫಾದರ್ ಇಲ್ಲ. ಹಾಗಾಗಿ ಟಿಕೆಟ್ ಗಾಗಿ ಹಲವು ಪ್ರಯತ್ನ ಮಾಡುತ್ತಿದ್ದಾರೆ.

ಹಿರಿಯ ನಾಯಕರ ದುಂಬಾಲು ಬಿದ್ದ ಟಿಕೆಟ್ ಆಕಾಂಕ್ಷಿಗಳು

ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಗಾಗಿ ಹರಸಾಹಸ ಮಾಡಿ ಹಿರಿಯ ನಾಯಕರ ಕಾಲು ಹಿಡಿದು ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ‌. ಆದರೆ ಕೊಟ್ರೇಶ್ ಹಗಲು ರಾತ್ರಿ ಎನ್ನದೇ, ಮತದಾರರ ಮನೆ ಬಾಗಿಲು ತಟ್ಟುತ್ತಿದ್ದಾರೆ.
ಇನ್ನು ಕೆಲವರು ಹಿರಿಯ ನಾಯಕರ ಬೆಂಬಲದಿಂದ ಕ್ಷೇತ್ರದಲ್ಲಿ ಸ್ಪರ್ಧಿಸಲು ಹೋರಾಟ ನಡೆಸುತ್ತಿದ್ದಾರೆ..

ಹೇಳೋದಕ್ಕೆ ಎಲ್ಲ ಒಂದೇ, ಆದರೆ ಜಾತಿ ಬೆಂಬಲ ಬೇಕಿದೆ

ಒಂದೆಡೆ ಜಾತಿ, ಧರ್ಮವನ್ನು ಮೀರಿ ಬೆಳೆಯಬೇಕೆಂಬ ಗಿಣಿಪಾಠ ಕೇಳುತ್ತಾ ಇದ್ದರೂ, ಅದು ರಾಜಕೀಯದಲ್ಲಿ ಹೇಳೋದಕ್ಕಷ್ಟೆ ಸೀಮಿತ. ರಾಜಕೀಯದಲ್ಲಿ ಸಮುದಾಯದ ಬೆಂಬಲ, ಹಿರಿಯ ನಾಯಕರ ಕೃಪಾಶೀರ್ವಾದ, ಆರ್ಥಿಕ ಬಲ ಬೇಕೇ ಬೇಕಿದೆ. ಇದು ಇಲ್ಲದೇ ಹೋದರೆ ಬೆಳೆಯುವುದು ಕಷ್ಟ ಸಾಧ್ಯ. ಕೆಲವೊಮ್ಮೆ ಕ್ಷೇತ್ರದಲ್ಲಿ ಜನ ಬೆಂಬಲ ಇದ್ದರೂ, ಗಾಢ್ ಫಾದರ್ ಇಲ್ಲದೆ ಹೋದರೆ ಮುನ್ನಡೆಯುವುದು ಅಸಾಧ್ಯ ಎನ್ನುವಂತಾಗಿದೆ.

ಮಾ. 20 ರ ನಂತರ ಲೋಕಸಭೆ ಚುನಾವಣೆ ಘೋಷಣೆ ಸಾಧ್ಯತೆ

ಮಾ. 20 ರ ನಂತರ ಲೋಕಸಭೆ ಚುನಾವಣೆ ಘೋಷಣೆ ಸಾಧ್ಯತೆ ಇದೆ. ಅಲ್ಲದೇ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿರುವುದರಿಂದ ರಾಜ್ಯಮಟ್ಟದಲ್ಲಿ ರಾಜಕೀಯ ಪಕ್ಷಗಳ ನಾಯಕರು ನಮ್ಮ ಪಕ್ಷದ ಮುಂದಿನ ಗೆಲುವು ಹೇಗೆ? ಎಂಬ ಚಿಂತೆಯಲ್ಲಿದ್ದಾರೆ. ಈ ನಡುವೆ  ಒಂದಷ್ಟು ನಾಯಕರು ಕಣಕ್ಕಿಳಿಯಲು ಟಿಕೆಟ್‌ಗಾಗಿ ಈಗಿನಿಂದಲೇ ಕಸರತ್ತು ನಡೆಸುತ್ತಿದ್ದಾರೆ. ಆದರೆ ಕಸರತ್ತು, ತಂತ್ರ ಮಾಡಿ ಕಣಕ್ಕಿಳಿದರೂ ಕೂಡ ಅಂತಿಮವಾಗಿ ಯಾರನ್ನು ಗೆಲ್ಲಿಸಬೇಕೆಂದು ತೀರ್ಮಾನ ಮಾಡುವವರು ಮತದಾರರೇ.

ಕೇವಲ ಎರಡು ತಿಂಗಳು ಬಾಕಿ

ಲೋಕಸಭಾ ಚುನಾವಣೆಗೆ ಕೇವಲ ಎರಡು ತಿಂಗಳಷ್ಟೆ ಬಾಕಿಯಿದೆ. ಈ ಎರಡು ತಿಂಗಳಲ್ಲಿ ರಾಜಕೀಯ ಬೆಳವಣಿಗೆಗಳು ಹೇಗೆ ಬೇಕಾದರೂ ತಿರುವು ಪಡೆದುಕೊಳ್ಳಬಹುದು. ಅದೃಷ್ಟ ಕುಲಾಯಿಸಿದರೆ ಟಿಕೆಟ್ ಸಿಗಲೂ ಬಹುದು. ಅಲ್ಲದೇ ಅಧಿಕಾರ ಮತ್ತು ಸ್ಥಾನಮಾನಕ್ಕಾಗಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವ ಬಹಳಷ್ಟು ನಾಯಕರು ಕೊನೆಗಳಿಗೆಯಲ್ಲಿ ತಮ್ಮ ಪಕ್ಷ ನಿಷ್ಠೆ ಬದಲಾಯಿಸುವ ಸಾಧ್ಯತೆಯೂ ಹೆಚ್ಚಿದೆ.

ಸಮೀಕ್ಷೆಯಲ್ಲಿ ಪಾಸ್‌ ಆದ್ರೇ ಮಾತ್ರ ಟಿಕೆಟ್?

ಎಷ್ಟೇ ಜನ ಟಿಕೆಟ್ ಆಕಾಂಕ್ಷಿಗಳಾಗಿದ್ದರೂ, ಸಮೀಕ್ಷೆಯಲ್ಲಿ ಪಾಸ್‌ ಆದ್ರೇ ಮಾತ್ರ ಟಿಕೆಟ್ ಸಿಗಲಿದೆ. ಹಾಗಾಗಿ ಆಕಾಂಕ್ಷಿಗಳು ಜನರ ಬಳಿ ಹೋಗಲು ಪ್ರಯತ್ನಿಸುತ್ತಿದ್ದಾರೆ.ಇನ್ನು ಪಕ್ಷ ಬದಲಾಯಿಸುವ ನಾಯಕರು ಪ್ರಭಾವಿಗಳು ಮತ್ತು ವೈಯಕ್ತಿಕ ವರ್ಚಸ್ಸು ಹೊಂದಿರುವ ಕಾರಣದಿಂದ ಅವರು ಯಾವ ಪಕ್ಷದಿಂದ ಸ್ಪರ್ಧಿಸಿದರೂ ಗೆಲ್ಲುವ ನಾಯಕರಾಗಿರುತ್ತಾರೆ. ಆದ್ದರಿಂದ ಸರ್ವೆ ನಡೆಯುತ್ತದೆ. ಇಲ್ಲಿ ಗೆದ್ದವರಿಗೆ ಟಿಕೆಟ್ ಸಿಗಲಿದೆ.

ಟಿಕೆಟ್ ಪಡೆಯಲು ನಾನಾ ಕಸರತ್ತು

ರಾಜಕೀಯದಲ್ಲಿ ಪಕ್ಷದ ಗೆಲುವು ಮತ್ತು ಅಧಿಕಾರಕ್ಕೆ ಬರಲು ಮ್ಯಾಜಿಕ್ ಸಂಖ್ಯೆ ಅಗತ್ಯವಾಗಿರುವುದರಿಂದ ಕೊನೆಗಳಿಗೆಯಲ್ಲಿ ಅಧಿಕಾರದ ಮುಂದೆ ಸಿದ್ಧಾಂತಗಳನ್ನೆಲ್ಲ ಬದಿಗೆ ಸರಿಸಿ ಗೆಲ್ಲುವ ಕುದುರೆಯ ಬಾಲ ಹಿಡಿಯುವ ಪ್ರವೃತ್ತಿ ಜಾಸ್ತಿಯಾಗಿದೆ. ಈ ಕಾರಣದಿಂದಾಗಿ ತಳಮಟ್ಟದಲ್ಲಿ ಗುರುತಿಸಿಕೊಂಡು ತಾನು ಕೂಡ ಎಂಪಿ ಆಗಬೇಕೆಂಬ ಕನಸು ಕಾಣುವ ಬಹುತೇಕ ನಾಯಕರ ಬಯಕೆಗಳು ಈಡೇರುವುದು ಕಷ್ಟಸಾಧ್ಯವಾಗಿದೆ.

ಆದರೂ ಒಂದಷ್ಟು ನಾಯಕರು ರಾಜಕೀಯ ದೃಷ್ಟಿಯಿಂದಲೇ ಹೆಚ್ಚು, ಹೆಚ್ಚಾಗಿ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಜನರ ನಡುವೆ ಹೋಗುತ್ತಿದ್ದಾರೆ. ಮತ್ತೊಂದಷ್ಟು ನಾಯಕರು ಜನನಾಯಕನಾಗುವ ಕಸರತ್ತು ಮಾಡಿದ್ದಾರೆ.
ಆದರೆ ಕ್ಷೇತ್ರದಲ್ಲಿರುವ ನಾಯಕರು ಏನೇ ಸಮಾಜ ಸೇವೆ ಮಾಡಿ ಜನರಿಗೆ ಹತ್ತಿರವಾಗಿದ್ದರೂ ಅಂತಿಮವಾಗಿ ಸ್ಪರ್ಧೆಗೆ ಟಿಕೆಟ್ ನೀಡುವವರು ಪಕ್ಷದ ರಾಜ್ಯಮಟ್ಟದ ನಾಯಕರಾಗಿದ್ದಾರೆ. ಅವರು ಏನು ನಿರ್ಧಾರ ಕೈಗೊಳ್ಳುತ್ತಾರೆ? ಎಂಬುದು ಕೂಡ ಮುಖ್ಯವಾಗಿದೆ.

ಹಿರಿಯ ನಾಯಕರ ಕೃಪಾಶೀರ್ವಾದ ಅಗತ್ಯ

ರಾಜಕೀಯದಲ್ಲಿ ಜನರ ನಡುವೆ ಗುರುತಿಸಿಕೊಂಡು, ಪಕ್ಷಕ್ಕಾಗಿ ದುಡಿಯುತ್ತಿದ್ದರೂ, ಮೇಲ್ಮಟ್ಟದ ನಾಯಕರ ಕೃಪಕಟಾಕ್ಷ ಬೇಕೆ ಬೇಕಿದೆ. ಇಲ್ಲದೇ ಅವರು ಬೆಳೆಯುವುದು ಕಷ್ಟವೇ. ಹೀಗಾಗಿ ಟಿಕೆಟ್ ಆಕಾಂಕ್ಷಿಗಳು ಹಿರಿಯ ನಾಯಕರ ಕೃಪಾಶೀರ್ವಾದ ಪಡೆಯಲು ಸರ್ಕಸ್ ಮಾಡುತ್ತಿದ್ದಾರೆ.

ಹಿರಿಯಲು ಅಧಿಕಾರ ಬಿಡುತ್ತಿಲ್ಲ, ಕಿರಿಯರಿಗೆ ಸಿಗುತ್ತಿಲ್ಲ

ಈಗಾಗಲೇ ರಾಜಕೀಯ ಪಕ್ಷದ ಉನ್ನತ ಸ್ಥಾನದಲ್ಲಿರುವ ಹಿರಿಯ ನಾಯಕರು ತಮ್ಮ ಮಕ್ಕಳನ್ನು ರಾಜಕೀಯವಾಗಿ ಬೆಳೆಸುತ್ತಿದ್ದಾರೆ. ಜತೆಗೆ ತಾವು ತಮ್ಮ ಸ್ಥಾನವನ್ನು ಯುವ ನಾಯಕರಿಗೆ ಬಿಟ್ಟುಕೊಟ್ಟು, ನಿವೃತ್ತಿ ಪಡೆಯುವ ಮಾತನಾಡುತ್ತಿಲ್ಲ. ಇದರಿಂದಾಗಿ ನಾಯಕರು ತಾವು ಮತ್ತು ತಮ್ಮ ಕುಟುಂಬ ವರ್ಗವಷ್ಟೆ ರಾಜಕೀಯವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಬೇರೆಯವರಿಗೆ ಅವಕಾಶವೇ ಇಲ್ಲದಂತಾಗಿದೆ. ಕೆಲವು ನಾಯಕರಂತು ಪಕ್ಷದಲ್ಲಿ ಗುರುತಿಸಿಕೊಳ್ಳುವ ಸಲುವಾಗಿ ಕಳೆದ ಕೆಲವು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಅದನ್ನು ಪ್ರಚಾರ ಮಾಡಿ ಪಕ್ಷದ ಹಿರಿಯ ನಾಯಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲೂ ಬಹುದು. ಅಲ್ಲದೆ ಪಕ್ಷದ ವತಿಯಿಂದ ಟಿಕೆಟ್ ಸಿಗದೆ ಹೋದರೆ ಅಂತಹವರು ತಿರುಗಿ ಬಿದ್ದು ಚುನಾವಣೆಯಲ್ಲಿ ತಟಸ್ಥರಾಗಿದ್ದು ಬಿಡಬಹುದು.

ಕೊನೆ ಆಟ ರೋಚಕ

ರಾಜಕೀಯದಲ್ಲಿ ಎಲ್ಲವೂ ಸರಿಯಿದೆ. ಎಲ್ಲರೂ ನಮ್ಮವರೇ ಎನ್ನಲಾಗುವುದಿಲ್ಲ. ಚುನಾವಣೆ ತನಕ ಪಕ್ಷಕ್ಕೆ ನಿಷ್ಠಾವಂತರಾಗಿದ್ದವರು ಕೊನೆಗಳಿಗೆಯಲ್ಲಿ ತಿರುಗಿ ಬಿದ್ದರೂ ಅಚ್ಚರಿಪಡಬೇಕಾಗಿಲ್ಲ. ಆದರೂ ರಾಜಕೀಯದಲ್ಲಿ ಹೀಗೆಯೇ ಆಗುತ್ತದೆ ಎಂಬುದನ್ನು ನಿರೀಕ್ಷೆ ಮಾಡುವುದು ಅಸಾಧ್ಯವೇ.

ಮತದಾರರ ತೀರ್ಮಾನ ಅಂತಿಮ

ಸದ್ಯಕ್ಕೆ ಎಲ್ಲರ ಮುಂದೆ ಇರುವುದು 2024ರ ಲೋಕಸಭೆ ಚುನಾವಣೆಯಾಗಿದೆ. ಈ ಬಾರಿಯ ಚುನಾವಣೆಗೆ ಸದ್ಯ ಕಾಂಗ್ರೆಸ್, ಬಿಜೆಪಿ ನಡುವೆ ನೇರಾಹಣಾಹಣಿ ಇದೆ. ಎರಡು ಪಕ್ಷಗಳ ನಾಯಕರು ಕೂಡ ನಮ್ಮದೇ ಗೆಲುವು ಎಂಬ ವಿಶ್ವಾಸದಲ್ಲಿ ಬೀಗುತ್ತಿದ್ದಾರೆ.ಅದು ಏನೇ ಇರಲಿ ಅಧಿಕಾರದ ವಿಚಾರ ಬಂದಾಗ ಯಾರು ಯಾರಿಗೆ ಮಿತ್ರರಾಗುತ್ತಾರೆ ಎನ್ನುವುದನ್ನು ಹೇಳುವುದೇ ಕಷ್ಟವಾಗಿದೆ. ಆದರೆ ರಾಜಕೀಯ ನಾಯಕರು ಏನೇ ಕಸರತ್ತು ಮಾಡಿದರೂ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಮತದಾರರ ಕೈಯ್ಯಲ್ಲಿದೆ. ಹಾಗಾಗಿ ಮತದಾರರ ತೀರ್ಮಾನವೇ ಅಂತಿಮವಾಗಲಿದ್ದು, ಟಿಕೆಟ್ ಆಟದ ನಂತರವೇ ಪೂರ್ಣ ಚಿತ್ರಣ ಸಿಗಲಿದೆ.

BJP Lok Sabha ticket BJP stronghold davanagere Featured KB Kotresh Top News ಕೆ.ಬಿ.ಕೊಟ್ರೇಶ್ ದಾವಣಗೆರೆ ಬಿಜೆಪಿ ಭದ್ರಕೋಟೆ ಬಿಜೆಪಿ ಲೋಕಸಭೆ ಅದರ ಟಿಕೆಟ್
Share. WhatsApp Facebook Twitter Telegram
davangerevijaya.com
  • Website

Related Posts

ದಾವಣಗೆರೆ : ಜಯನಗರದ ಸಾಯಿಬಾಬಾ ಮಂದಿರದಲ್ಲಿ ಅದ್ದೂರಿ ಗುರು ಪೂರ್ಣಿಮೆ . ಸಾಯಿ ದರ್ಶನಕ್ಕೆ ಬರಲಿದ್ದಾರೆ ಸಹಸ್ರಾರು ಜನ

8 July 2025

ಇಡಿ ಬಲೆಯಿಂದ ಹೊರಬಂದ ಮಂಜುನಾಥ್ ಗೌಡ…ಎಂಭತ್ತೇರಡು ದಿನಗಳ ನಂತರ ಮರಳಿದ ಸಹಕಾರಿ ಧುರೀಣ

3 July 2025

ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ

29 June 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,656 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,335 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,084 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,595 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
ಪ್ರಮುಖ ಸುದ್ದಿ

ದಾವಣಗೆರೆ : ಜಯನಗರದ ಸಾಯಿಬಾಬಾ ಮಂದಿರದಲ್ಲಿ ಅದ್ದೂರಿ ಗುರು ಪೂರ್ಣಿಮೆ . ಸಾಯಿ ದರ್ಶನಕ್ಕೆ ಬರಲಿದ್ದಾರೆ ಸಹಸ್ರಾರು ಜನ

By davangerevijaya.com8 July 20250

ನಂದೀಶ್ ಭದ್ರಾವತಿ, ದಾವಣಗೆರೆ ಅತ್ತ ಶಿರಡಿಯಲ್ಲಿ ಗುರುಪೂರ್ಣಿಮಾ ಹಬ್ಬವು ಭಕ್ತಿ ಭಾವದಿಂದ ಆರಂಭವಾಗಲಿದ್ದು, ಸಾವಿರಾರು ಭಕ್ತರು ಸಾಯಿನಾಮವನ್ನು ಪಠಿಸುತ್ತ ಶಿರಡಿಯನ್ನು…

ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಲಾಡ್ಜ್ ನಲ್ಲಿ ನೇಣಿಗೆ ಶರಣು, ಅಷ್ಟಕ್ಕೂ ಪಿಎಸ್ಐ ಲೈಫ್ ಹಿಂದೆ ಏನಿತ್ತು?..ನೇಣಿಗೆ ಶರಣಾಗುವ ಮೊದಲು ಆಧಾರ್ ನಂಬರ್ ಅಳಿಸಿದ್ದು ಯಾಕೆ?

7 July 2025

ಭದ್ರಾ ಡ್ಯಾಂ ಭರ್ತಿಯಾಗಲು ಇನ್ನೇಷ್ಟು ಅಡಿ ಬಾಕಿ ಇರಬಹುದು?…ಈ ತಿಂಗಳಿನಲ್ಲಿಯೇ ನೋಡುಗರಿಗೆ ಸಿಗಲಿದೆ ಜಲಾಶಯದ ಸೊಬಗು .‌‌‌..

5 July 2025

ಇಡಿ ಬಲೆಯಿಂದ ಹೊರಬಂದ ಮಂಜುನಾಥ್ ಗೌಡ…ಎಂಭತ್ತೇರಡು ದಿನಗಳ ನಂತರ ಮರಳಿದ ಸಹಕಾರಿ ಧುರೀಣ

3 July 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

ದಾವಣಗೆರೆ : ಜಯನಗರದ ಸಾಯಿಬಾಬಾ ಮಂದಿರದಲ್ಲಿ ಅದ್ದೂರಿ ಗುರು ಪೂರ್ಣಿಮೆ . ಸಾಯಿ ದರ್ಶನಕ್ಕೆ ಬರಲಿದ್ದಾರೆ ಸಹಸ್ರಾರು ಜನ

8 July 2025

ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಲಾಡ್ಜ್ ನಲ್ಲಿ ನೇಣಿಗೆ ಶರಣು, ಅಷ್ಟಕ್ಕೂ ಪಿಎಸ್ಐ ಲೈಫ್ ಹಿಂದೆ ಏನಿತ್ತು?..ನೇಣಿಗೆ ಶರಣಾಗುವ ಮೊದಲು ಆಧಾರ್ ನಂಬರ್ ಅಳಿಸಿದ್ದು ಯಾಕೆ?

7 July 2025

ಭದ್ರಾ ಡ್ಯಾಂ ಭರ್ತಿಯಾಗಲು ಇನ್ನೇಷ್ಟು ಅಡಿ ಬಾಕಿ ಇರಬಹುದು?…ಈ ತಿಂಗಳಿನಲ್ಲಿಯೇ ನೋಡುಗರಿಗೆ ಸಿಗಲಿದೆ ಜಲಾಶಯದ ಸೊಬಗು .‌‌‌..

5 July 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,656 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,335 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,084 Views

Subscribe to Updates

Get the latest creative news from SmartMag about art & design.

Recent Posts
  • ದಾವಣಗೆರೆ : ಜಯನಗರದ ಸಾಯಿಬಾಬಾ ಮಂದಿರದಲ್ಲಿ ಅದ್ದೂರಿ ಗುರು ಪೂರ್ಣಿಮೆ . ಸಾಯಿ ದರ್ಶನಕ್ಕೆ ಬರಲಿದ್ದಾರೆ ಸಹಸ್ರಾರು ಜನ
  • ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಲಾಡ್ಜ್ ನಲ್ಲಿ ನೇಣಿಗೆ ಶರಣು, ಅಷ್ಟಕ್ಕೂ ಪಿಎಸ್ಐ ಲೈಫ್ ಹಿಂದೆ ಏನಿತ್ತು?..ನೇಣಿಗೆ ಶರಣಾಗುವ ಮೊದಲು ಆಧಾರ್ ನಂಬರ್ ಅಳಿಸಿದ್ದು ಯಾಕೆ?
  • ಭದ್ರಾ ಡ್ಯಾಂ ಭರ್ತಿಯಾಗಲು ಇನ್ನೇಷ್ಟು ಅಡಿ ಬಾಕಿ ಇರಬಹುದು?…ಈ ತಿಂಗಳಿನಲ್ಲಿಯೇ ನೋಡುಗರಿಗೆ ಸಿಗಲಿದೆ ಜಲಾಶಯದ ಸೊಬಗು .‌‌‌..
  • ಇಡಿ ಬಲೆಯಿಂದ ಹೊರಬಂದ ಮಂಜುನಾಥ್ ಗೌಡ…ಎಂಭತ್ತೇರಡು ದಿನಗಳ ನಂತರ ಮರಳಿದ ಸಹಕಾರಿ ಧುರೀಣ
  • ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.