ದಾವಣಗೆರೆ : ಮಾಜಿ ಸಚಿವ ಹಾಗೂ ಬಿಜೆಪಿ ನಾಯಕಬಿ.ಸಿ. ಪಾಟೀಲ್ ಅಳಿಯ ಆತ್ಮಹತ್ಯೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಪ್ರತಾಪ್ ಕುಮಾರ್ (41) ಆತ್ಮಹತ್ಯೆ ಮಾಡಿಕೊಂಡಿರುವವರು. ಬಿ.ಸಿ. ಪಾಟೀಲ್ ಅವರ ದೊಡ್ಡ ಮಗಳ ಗಂಡ ಪ್ರತಾಪ್ ಕುಮಾರ್ ಇಂದು ದಾವಣಗೆರೆ ಜಿಲ್ಲೆ ಹೊನ್ನಾಳಿ ಸಮೀಪದ ಅರಕೆರೆ ಗ್ರಾಮದ ಬಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಲ್ಲಿಸಿ ವಿಷ ಸೇವಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಪ್ರತಾಪ್ ಕುಮಾರ್ ಅವರನ್ನು ಚಿಕಿತ್ಸೆಗೆಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ದಾವಣಗೆರೆ ಕತ್ತಲಗೆರೆ ಗ್ರಾಮದ ಮೃತ ಪ್ರತಾಪ್ ಕುಮಾರ್, 15 ವರ್ಷದ ಹಿಂದೆ ಬಿ.ಸಿ. ಪಾಟೀಲ್ ಅವರ ದೊಡ್ಡ ಮಗಳು ಸೌಮ್ಯ ಎಂಬುವವರನ್ನು ವಿವಾಹವಾಗಿದ್ದರು.
ಪ್ರತಾಪ್ ರವರ ಕಾರಿನಲ್ಲಿ ವಿಷದ ಬಾಟಲಿ ಪತ್ತೆಯಾಗಿದೆ. ಪ್ರತಾಪ್ ಕುಮಾರ ಆತ್ಮಹತ್ಯೆಗೆ ಕಾರಣ ಏನೆಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
ಮಾವ ಬಿ.ಸಿ.ಪಾಟೀಲ್ ಹೇಳಿದ್ದೇನು?
ನನ್ನ ಅಳಿಯ ಮಗನ ಹಾಗೇ ಇದ್ದ, ನನ್ನ ಹೊಲ, ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ. ರಾಜಕೀಯ ಸೇರಿ ನಮ್ಮ ವ್ಯವಹಾರಗಳನ್ನೆಲ್ಲ ಅವರೆ ನೋಡಿಕೊಳ್ಳುತ್ತಿದ್ದರು. ಬೆಳಗ್ಗೆ ಜೊತೆಯಲ್ಲಿ ತಿಂಡಿ ಮಾಡಿದ್ದೆವು. ನಾನು ನಮ್ಮ ಭಾಗದ ಕೆರೆಗಳಿಗೆ ಹೋಗಿ ಭೇಟಿ ನೀಡಿ ಬರುವಾಗ ವಿಷಯ ಗೊತ್ತಾಯ್ತು. ಮಗಳ ಜೊತೆ 2008 ರಲ್ಲಿ ಮದುವೆ ಆಗಿತ್ತು. ಮಕ್ಕಳ ಆಗಿಲ್ಲ ಎನ್ನುವ ವಿಚಾರದಲ್ಲಿ ಕೊರಗಿತ್ತು.
ಇವತ್ತು ಬೆಳಗ್ಗೆ ಊರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ. ಆದ್ರೆ, ಸಾಯುತ್ತಿದ್ದೇನೆ ಎಂದು ಕುಟುಂಬಸ್ಥರಿಗೆ ಕಾಲ್ ಮಾಡಿ ಹೇಳಿದ್ದ. ಈ ವಿಚಾರವನ್ನು ಪ್ರತಾಪ್ ಅವರ ಅಣ್ಣಗೆ ಕಾಲ್ ಮಾಡಿ ಮಾಹಿತಿ ನೀಡಿದ್ದ. ಮದುವೆ ಆಗಿ 16 ವರ್ಷ ಆಗಿತ್ತು. ಜುಲೈ 09 ಚನ್ನಗಿರಿಯ ಕತ್ತಲಗೆರೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು ತಿಳಿಸಿದರು
ಕೊನೆದಾಗಿ ಮಾವನ ಜತೆ ಮಾತನಾಡಿದ್ದ ಅಳಿಯ
ಬೆಳಗ್ಗೆ ಕತ್ತಲಗೆರೆಗೆ ಹೋಗಿ ಬರುವುದಾಗಿ ನನ್ನ ಅಳಿಯ ಹೇಳಿದ್ರು, ಆಯ್ತು ಎಂದು ಹೇಳಿ ಕಳುಹಿಸಿದ್ದೆ. ಮಧ್ಯಾಹ್ನ 1:45 ಕ್ಕೆ ಪ್ರತಾಪ್ ಅಣ್ಣ ಪ್ರಭು ನನಗೆ ಪೋನ್ ಮಾಡಿದ್ರು, ಪ್ರತಾಪ್ ಎಲ್ಲಿದ್ದಾನೆ, ಸಿಕ್ಕಿದ್ನಾ ಎಂದು ಕೇಳಿದ್ರು. ಇಲ್ಲ ಊರಿಗೆ ಹೋಗುವುದಾಗಿ ಹೇಳಿ ಹೋಗಿದ್ರು ಎಂದೆ. ಅದಕ್ಕೆ ಪ್ರಭು ಅವರು ಇಲ್ಲ ಪ್ರತಾಪ್ ಗುಳಿಗೆ ತೆಗೆದುಕೊಂಡಿದ್ದಾನೆ. ಫೋನ್ ಸಿಕ್ತಿಲ್ಲ, ನೀವು ಟ್ರಾಕ್ ಮಾಡಿಸಿ ಎಂದು ಹೇಳಿದರು.
ನಾನು ಪೋನ್ ಮಾಡಿದಾಗ ರೀಚ್ ಆಗಲಿಲ್ಲ. ಆ ಮೇಲೆ ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಅವರಿಗೆ ಫೋನ್ ಮಾಡಿ ಹೇಳಿದ್ದೆ. ಅವರಿಗೆ ಫೋನ್ ನಂಬರ್ ನೀಡಿದೆ. ಆ ಮೇಲೆ ಹೂನ್ನಾಳಿ ಸಬ್ ಡಿವಿಜನ್ ಹಾಗೂ ಶಿವಮೊಗ್ಗ ಎಸ್ಪಿ ಅವರಿಗೆ ಹೇಳಿದೆ. ನಂತರ ಲೊಕೇಷನ್ ನ್ಯಾಮತಿ ಬಳಿ ಇರುವುದಾಗಿ ಹೇಳಿದ್ರು. ನಾನು ಫೋನ್ ಮಾಡಿದಾಗ ಪೋನ್ ಸಿಕ್ತು. ಆಗ ಅವರು ಫುಲ್ ವಾಂತಿ ಮಾಡಿಕೊಳ್ಳುತ್ತಿದ್ದರು. ಎಲ್ಲಿದ್ದಿಯಾ ಅಂತ ಕೇಳ್ದೆ. ಅವರು ನಾನು ಹೊನ್ನಾಳಿ- ಮಲೆಬೆನ್ನೂರು ರಸ್ತೆಯಲ್ಲಿ ಇದ್ದೇನೆ ಎಂದು ಹೇಳಿದ್ರು.ನಂತರ ಎಲ್ಲರಿಗೂ ತಿಳಿಸಿದೆ. ಅಷ್ಟರಲ್ಲಿ ಅವರ ಸಹೋದರ ಪ್ರಭು ಹೊನ್ನಾಳಿ ಆಸ್ಪತ್ರೆಗೆ ಸೇರಿಸಿದ್ದರು. ಆಗ ನಾನು ಡಾಕ್ಟರ್ ಹತ್ತಿರ ಮಾತನಾಡಿದಾಗ, ಅವರು ಜೋಳಕ್ಕೆ ಸಿಂಪಡಿಸುವ ಔಷಧವನ್ನು ಸೇವಿಸಿದ್ದಾರೆ, ಬಹಳ ಗಂಭೀರವಾದ ಸ್ಥಿತಿಯಲ್ಲಿದ್ದಾರೆ ಎಂದರು.ಆಗ ನಿಮ್ಮಲ್ಲಿ ಆಗದೇ ಹೋದ್ರೆ ಅಲ್ಲಿಂದ ಶಿಫ್ಟ್ ಮಾಡಿಸಿ ಎಂದೆ. ನಾನು ದಾವಣಗೆರೆಗೆ ಶಿಫ್ಟ್ ಮಾಡಿ ಎಂದೆ. ಅದಕ್ಕೆ ಪ್ರಭು ದಾವಣಗೆರೆ ದೂರ ಆಗುತ್ತದೆ ಎಂದು ಶಿವಮೊಗ್ಗಕ್ಕೆ ಶಿಫ್ಟ್ ಮಾಡಿದರು.ನಾನು ಶಿಕಾರಿಪುರದ ಬಳಿ ಬರುವಷ್ಟರಲ್ಲಿ ಪ್ರತಾಪ್ ತೀರಿ ಹೋಗಿದ್ದಾರೆ ಎಂದರು.
ಪ್ರತಾಪ್ಗೆ ಮಕ್ಕಳಾಗಿಲ್ಲ ಎಂದು ಕೊರಗಿತ್ತು. ಇದಕ್ಕೆ ಸೆರಗೂಮಿ ಮಾಡಿಸಲು ಬೆಂಗಳೂರಿನಲ್ಲಿ ಲಾಯರ್ ಅನ್ನು ಸಹ ಭೇಟಿ ಮಾಡಿ ಮಾತನಾಡಿದ್ದೆ. ನನ್ನೊಂದಿಗೆ ಮಾತನಾಡಿದರು ಹಾಗೂ ನನ್ನ ಮಗಳ ಬಳಿ ಸಹ ಮಾತನಾಡಿದರು. ನೀವು ಕೋರ್ಟ್ಗೆ ಬಂದು ಹೇಳಬೇಕಾಗುತ್ತದೆ ಎಂದರು. ಆಯ್ತು ಎಂದು ಹೇಳಿದ್ವಿ. ಇದಕ್ಕಾಗಿ ಕೋರ್ಟ್ ಅನುಮತಿಗಾಗಿ ಕಾಯುತ್ತಿದ್ದೆವು. ಆದರೆ, ಆತ ಕುಡಿತದ ದಾಸನಾಗಿದ್ದ. ಡಿ ಅಡಿಕ್ಷನ್ ಸೆಂಟರ್ನಲ್ಲಿ ಎರಡು ತಿಂಗಳು ಇದ್ದರು. ಆಗ ಸರಿ ಹೋಗಿದ್ದರು. ಆದರೆ ಪುನಃ ಕುಡಿತದ ಚಟಕ್ಕೆ ಬಿದ್ದಿದ್ದರು. ಎಂದು ಮಾವ ಬಿ.ಸಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.