ಚನ್ನಗಿರಿ: ಪಟ್ಟಣದ ತರಳಬಾಳು ಗ್ರಾಮಾಂತರ ಆಸ್ಪತ್ರೆಯ ಆವರಣದಲ್ಲಿ ಕಳೆದ 10 ದಿನಗಳಿಂದ ಸತ್ಯ ಮತ್ತು ಸುಳ್ಳಿನ ಮಧ್ಯೆ ಎಂಬ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.
ಚಿತ್ರದ ನಾಯಕ ನಟನಾಗಿ ರಂಗಿತಾ ರಂಗಾ, ರಾಜರಥ,ದಲ್ಲಿ ನಟಿಸಿರುವ ನಿರೂಪ್ ಬಂಡಾರಿ ನಟಿಸುತ್ತಿದ್ದು ಬೃಂದಾ ಶೆಟ್ಟಿ, ತಂದೆಯ ಪಾತ್ರದಲ್ಲಿ ಸಾಯಿಕುಮಾರ್, ಚಿತ್ರದ ಕಥೆ, ನಿರ್ದೇಶಕರಾಗಿ ಚನ್ನಗಿರಿ ತಾಲೂಕಿನ ಸುಣಿಗೆರೆ ಗ್ರಾಮದವರಾದ ಸಚ್ಚಿನ್ ವಾಲಿ, ಅಂಕಿತ್ ನಿರ್ಮಾಪಕರು ಮತ್ತು ಸುಮಾರು 130 ಜನರ ತಂಡದೊಂದಿಗೆ ಭರ್ಜರಿ ಚಿತ್ರೀಕರಣ ನಡೆಸಿದರು.
ನಟ ನಿರೂಪ್ ಬಂಡಾರಿ ಮಾತನಾಡಿ, ಈ ಚಿತ್ರವು ಒಂದು ಕುಟುಂಬದ ಚಿತ್ರವಾಗಿದ್ದು ಜನರಿಗೆ ಚಿತ್ರ ಇಷ್ಟವಾಗುತ್ತದೆ. ಸಾಯಿಕುಮಾರ್ರವರು ತಂದೆಯ ಪಾತ್ರದಲ್ಲಿ ನಟನೆ ಮಾಡುತ್ತಿದ್ದು ತೀರ್ಥಹಳ್ಳಿಯಲ್ಲಿ ಶೂಟಿಂಗ್ ಪೂರ್ಣಗೊಂಡಿದೆ. ಚನ್ನಗಿರಿ ಪಟ್ಟಣದಲ್ಲಿ ಮೊದಲು ಬಾರಿ ಶೂಟಿಂಗ್ಗೆ ಬಂದಿದ್ದುಈ ಭಾಗದ ಜನರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಆಸ್ಪತ್ರೆಯ ಅವರಣದಲ್ಲಿ ಶೂಟಿಂಗ್ ಮತ್ತು ಕೆಲವೊಂದು ಫೈಟ್ ಸೀನ್ಗಳನ್ನು ತೆಗೆದುಕೊಳ್ಳಲಾಗಿದೆ.
ಈಗಾಗಲೇ ಶೇ 50 ರಷ್ಟು ಸಿನಿಮಾ ಪೂರ್ಣಗೊಂಡಿದ್ದು ಚನ್ನಗಿರಿಯಲ್ಲಿ ಹಗಲು ರಾತ್ರಿ ಶೂಟಿಂಗ್ ಮಾಡಲಾಗುತ್ತಿದೆ. ಉಳಿದಂತೆ ಹಾಡುಗಳು ಮತ್ತು ಫೈಟ್ಗಳು ಬಾಕಿ ಇದ್ದು 30 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಕಥೆಯು ಚಿತ್ರಿಕರಣ ಹೆಚ್ಚಾಗಿ ಬೆಂಗಳೂರಿನಲ್ಲಿ ನಡೆದಿದ್ದು ಕೆಲ ಸೀನ್ಗಳನ್ನು ಗ್ರಾಮೀಣ ಪ್ರದೇಶದಲ್ಲಿ ತೆಗೆದುಕೊಳ್ಳಲಾಗುತ್ತಿದೆ ಎಂದರು ಚಿತ್ರೀಕರಣ ನೋಡಲು ಪಟ್ಟಣದ ಜನರು ಪ್ರತಿದಿನವೂ ಹೋಗುತ್ತಿದ್ದು ಹೊರಬಾಗದಿಂದ ನೋಡಲು ಅವಕಾಶ ಕಲ್ಪಿಸಲಾಗಿತ್ತು.