ದಾವಣಗೆರೆ: ನಾನು ಶಿಕ್ಷಕನಾದರೂ ನನ್ನ ನಿವೃತ್ತಿ ವೇತನ ಪಡೆಯಲು ಶಿಕ್ಷಣ ಇಲಾಖೆಗೆ ಹಣ ಕೊಡಬೇಕಾಯಿತು ಎಂದು ನಿವೃತ್ತ ಶಿಕ್ಷಕ ಕೆ.ಆರ್. ಗೋಣಪ್ಪ ತಮ್ಮ ಅಳಲು ತೋಡಿಕೊಂಡರು.
ನಗರದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿ, ಮಕ್ಕಳಿಗೆ ನಾನು ಲಂಚ ಕೊಡಬೇಡಿ ಎಂದು ಹೇಳಿಕೊಟ್ಟು ನನ್ನ ಹಣ ಪಡೆಯಲು ನಾನೇ ಹೊನ್ನಾಳಿ ಬಿಇಒ ನಂಜರಾಜ್ ಗೆ ಹಣ ಕೊಟ್ಟೇ, ಆದರೂ ನನ್ನ ಕೆಲಸವಾಗಲಿಲ್ಲ. ಆದರೆ ನನ್ನ ಅವಧಿಯಲ್ಲಿ ನಿವೃತ್ತರಾದ ಹಲವರು ಹೆಚ್ಚಿನ ಹಣ ಕೊಟ್ಟ ಕಾರಣ ಅವರಿಗೆ ಬೇಗ ನಿವೃತ್ತ ಹಣ ಸಿಕ್ಕಿತ್ತು ಎಂದು ಶಿಕ್ಷಕ ಕಣ್ಣೀರಿಟ್ಟರು.
ನಿವೃತ್ತಿ ವೇತನ ಮತ್ತು ಉಪದಾನಗಳು ಸೇರಿದಂತೆ ಇತರೆ ಎಲ್ಲಾ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಹಾಗೂ ನಿಗದಿತ ಅವಧಿಯಲ್ಲಿ ದೊರಕದ ಕಾರಣ ಶೀಘ್ರವೇ ಸಾಲ ಕೊಡಲು ಆಗಲಿಲ್ಲ. ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಿದ್ದು, ಗರ್ಭಿಣಿಯಾಗಿದ್ದಾರೆ. ಆದರೆ ಅವರ ಖರ್ಚಿಗೂ ನನ್ನ ಬಳಿ ಹಣವಿರಲಿಲ್ಲ. ನನ್ನ ನೋವನ್ನು ಯಾರಿಗೆ ಹೇಳಲಿ ಎಂದು ಬೇಸರ ವ್ಯಕ್ತಪಡಿಸಿದರು.
ಬಿಇಓ ಕಚೇರಿಯಿಂದ ಅನ್ಯಾಯಕೊಳಕ್ಕೆ ಆಗಿದ್ದೇನೆ
.ನಾನು ಸ.ಹಿ.ಪ್ರಾಶಾಲೆ ಗೊಲ್ಲರಹಳ್ಳಿಯಲ್ಲಿ ಶಿಕ್ಷಕರಾಗಿ ತೃಪ್ತಿಕರವಾಗಿ ಕರ್ತವ್ಯ ನಿರ್ವಹಿಸಿ, ಸದರಿ ಗ್ರಾಮದಲ್ಲಿ ಮತ್ತು ತಮ್ಮ ಇಲಾಖೆಯಲ್ಲಿಯೂ ಉತ್ತಮ ಹೆಸರು ಪಡೆದಿದ್ದು, 30.06.2023 ರಂದು ವಯೋನಿವೃತ್ತಿ ಹೊಂದಿರುತ್ತೇನೆ.
ನಿವೃತ್ತಿಯ ನಂತರ ಸರಕಾರ/ಇಲಾಖೆಯಿಂದ ನಿವೃತ್ತಿ ವೇತನ ಮತ್ತು ಉಪದಾನಗಳು ಸೇರಿದಂತೆ ಇತರೆ ಎಲ್ಲಾ ಸೌಲಭ್ಯಗಳನ್ನು ಮೂರು ತಿಂಗಳು ಅಥವಾ, ಆರು ತಿಂಗಳಿನ ಒಳಗೆ ಸೂಕ್ತ ರೀತಿಯಲ್ಲಿ ಹಾಗೂ ನಿಗದಿತ ಅವಧಿಯಲ್ಲಿ ದೊರಕಿಸಿಕೊಡಬೇಕಾಗಿದೆ.
ಆದರೆ ನಿವೃತ್ತಿ ವೇತನ ಮತ್ತು ಉಪದಾನಗಳಿಗೆ ಸಂಬಂಧಿಸಿದ ಕಡತಗಳನ್ನು ಸಂಬಂಧಪಟ್ಟ ಪ್ರಾಧಿಕಾರ/ಕಛೇರಿಗೆ ಕಳುಹಿಸಿಕೊಡುವಲ್ಲಿ ಬಿಇಒ ಹಾಗೂ ಕಛೇರಿ ಸಿಬ್ಬಂದಿಯ ದಿವ್ಯ ನಿರ್ಲಕ್ಷ್ಯ, ಅನಗತ್ಯ ವಿಳಂಬ ಹಾಗೂ ಕರ್ತವ್ಯಲೋಪದಿಂದ ಸುಮಾರು 6 ತಿಂಗಳು ಕಳೆದರೂ ಯಾವುದೇ ನಿವೃತ್ತಿ ವೇತನ, ಉಪದಾನ ಮತ್ತು ಇತರೆ ಯಾವುದೇ ಸೌಲಭ್ಯಗಳು ದೊರಕಲಿಲ್ಲ.
ನಿವೃತ್ತಿ ನಂತರ ನನ್ನ ಬದುಕು ಮೂರಾಪಟ್ಟೇ
ಸರಕಾರಿ ವೇತನವನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿರುವ ನಾನು ಕಷ್ಟಕ್ಕೊಳಗಾಗಿದ್ದೇನೆ.ನಿವೃತ್ತಿಯ ನಂತರ ಬರುವ ಹಣವನ್ನು ನಂಬಿಕೊಂಡು ಬಡ್ಡಿಯಂತೆ ಕೈಸಾಲ ಪಡೆದು ತಮ್ಮ ಮಕ್ಕಳ ಮದುವೆ ಮಾಡಿದ್ದು,. ಪ್ರತಿ ತಿಂಗಳು ಸುಮಾರು 25 ಸಾವಿರ ರೂ. ಬಡ್ಡಿಯನ್ನು ಕಟ್ಟುತ್ತಿದ್ದೇನೆ.
ಒಂದು ಹೊತ್ತಿನ ಊಟಕ್ಕೂ ತೊಂದರೆ
ಒಂದು ಹೊತ್ತಿನ ಊಟಕ್ಕೂ ತೊಂದರೆಯುಂಟಾಗಿ ಸಂಸಾರ ನಡೆಸುವುದೇ ಕಷ್ಟಕರವಾಗಿದೆ. ನಿವೃತ್ತಿ ವೇತನವಿಲ್ಲದೇ 6 ತಿಂಗಳುಗಳ ಕಾಲ ಮನೆಬಾಡಿಗೆ ಕಟ್ಟದೇ ಇದ್ದುದರಿಂದ ಮನೆ ಮಾಲೀಕರು ಕುಟುಂಬವನ್ನು ಹೊರಹಾಕಿ ಗಲಾಟೆ ಮಾಡಿದ್ದ ಕಾರಣ ಸ್ವಂತ ಊರು ಜಗಳೂರಿಗೆ ಮನೆ ಖಾಲಿಮಾಡಿಕೊಂಡು ಕಣ್ಣೀರು ಹಾಕಿಕೊಂಡು ಹೋಗಿದ್ದೇವೆ ಎಂದರು.
ಊರನ್ನೇ ಬಿಟ್ಟು ಹೋಗುವ ಪರಿಸ್ಥಿತಿ ಇದೆ
ಹೊನ್ನಾಳಿ ಕರವೇ ಅಧ್ಯಕ್ಷ ವಿನಯ್ ಎಂ. ವಗ್ಗರ್ ಮಾತನಾಡಿ, ಶಿಕ್ಷಕರ ಕಷ್ಟ-ನೋವುಗಳಿಗೆ ಬಿಇಒ ಮತ್ತು ತಮ್ಮ ಕಛೇರಿ ಸಿಬ್ಬಂದಿಯೇ ನೇರ ಹೊಣೆಗಾರರಾಗಿದ್ದಾರೆ.. ತಾವು ಮಾಡಿರುವ ತಪ್ಪು ಮತ್ತು ಕರ್ತವ್ಯಲೋಪದಿಂದ ಅಮಾಯಕ ಮುಗ್ಧ ಶಿಕ್ಷಕ ಸಾಲದ ಸುಳಿಯಲ್ಲಿ ಸಿಲುಕಿ ಬಡ್ಡಿಯನ್ನು ಕಟ್ಟುವಂವಂತಾಗಿ, ಊರನ್ನೇ ಬಿಟ್ಟುಹೋಗುವ ಸಂದರ್ಭ ಮತ್ತು ತುಂಬಾ ಕಷ್ಟವನ್ನು ಅನುಭವಿಸಬೇಕಾಗಿದೆ.
ನಿವೃತ್ತ ಶಿಕ್ಷಕ ಗೋಣಪ್ಪ ಅವರಿಗೆ 8 ದಿನಗಳೊಳಗೆ ನ್ಯಾಯ ಒದಗಿಸಿಕೊಡದಿದ್ದಲ್ಲಿ ಬಿಇಒ ಕಛೇರಿ ಮುಂದೆ ಸತ್ಯಾಗ್ರಹ ಧರಣಿ ಹಮ್ಮಿಕೊಳ್ಳಲಾಗುವುದು. ಎಂದು ಎಚ್ಚರಿಸಿದರು. ಇನ್ನು ಈ ಪ್ರಕರಣ ಸಂಬಂಧ ಡಿಡಿಪಿಐ ಕೊಟ್ರೇಶ್ ಮೌನವಹಿಸುತ್ತಿರುವುದು ನಾನಾ ಅನುಮಾನಕ್ಕೆ ಕಾರಣವಾಗಿದ್ದು, ಸಚಿವ ಮಧುಬಂಗಾರಪ್ಪ ಈ ಬಗ್ಗೆ ಗಮನಹರಿಸಿ ಶಿಕ್ಷಣ ಇಲಾಖೆಯನ್ನು ಸ್ವಚ್ಛಗೊಳಿಸಬೇಕಿದೆ.