ನ್ಯಾಮತಿ : ತಾಲೂಕಿನ ಮಾದನಬಾವಿ ಗ್ರಾಮದ ಮಾಧವ ಶ್ರೀರಂಗನಾಥ ಸ್ವಾಮಿ, ಶ್ರೀಬೀರಲಿಂಗೇಶ್ವರ ಸ್ವಾಮಿ, ಮುರಡೇಶ್ವರ ಸ್ವಾಮಿ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ ಗುರುವಾರ ಶಾಂತಿಯುತವಾಗಿ ವಿಜೃಂಭಣೆಯಿಂದ ನಡೆಯಿತು.
ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಿ ಗುರುವಾರ ಬೆಳಿಗ್ಗೆ ಮಾದನಬಾವಿ ಗ್ರಾಮದಿಂದ ಬಸವನಹಳ್ಳಿ ಗ್ರಾಮದ ಮೂಲಕ ಡೊಳ್ಳು, ಭಜನೆ, ಕಹಳೆ ಮಂಗಳ ವಾದ್ಯಗಳೊಂದಿಗೆ ಪಲ್ಲಕ್ಕಿಯನ್ನು ಭಕ್ತರು ಹೊತ್ತು ಪಾದಯಾತ್ರೆ ಮುಖಾಂತರ ಮೆರವಣಿಯು ತುಂಗಾ ಭದ್ರಾ ನದಿಯನ್ನು ತಲುಪಿತು.
ಉತ್ಸವ ಮೂರ್ತಿಗಳಿಗೆ ಭಕ್ತರು ಪಂಚಾಮೃತ ಸಹಿತ ರುದ್ರಾಭಿಷೇಕ ಬಿಲ್ವಾರ್ಚನೆ ಮಂಗಳಾರತಿಯನ್ನು ನಡೆಸಿದ ಬಳಿಕ ತುಂಗಾ ಭದ್ರಾ ನದಿಯ ಮಧ್ಯೆ ಭಾಗದ ನಡುಗಡ್ಡೆಯ ಶ್ರೀಗಡ್ಡೆ ರಾಮೇಶ್ವರ ದೇವರ, ಶ್ರೀದುರ್ಗಾ ದೇವಿ, ಶ್ರೀಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಠದ ಮೂಲಗದ್ದುಗೆಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಮಾದನಬಾವಿ ಗ್ರಾಮದ ಮಾಧವ ಶ್ರೀ ರಂಗನಾಥಸ್ವಾಮಿ, ಶ್ರೀ ಬೀರಲಿಂಗೇಶ್ವರ ಸ್ವಾಮಿ, ಮುರಡೇಶ್ವರ ಸ್ವಾಮಿ ಉತ್ಸವ ಮೂರ್ತಿಗಳಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯದ ಬಳಿಕ ಪುನಃ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ತುಂಗಾಭದ್ರಾ ನದಿಯಿಂದ ಡೊಳ್ಳು, ಭಜನೆ, ಕಹಳೆ ವಾದ್ಯಗಳೊಂದಿಗೆ ಪಲ್ಲಕ್ಕಿಯನ್ನು ಭಕ್ತರು ಹೊತ್ತು ಪಾದಯಾತ್ರೆ ಮುಖಾಂತರ ಮೆರವಣಿಗೆ ಸಾಗಿತು..