ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಬಗ್ಗೆ ಜಿಲ್ಲಾ ವಾಲ್ಮೀಕಿ/ ನಾಯಕ ಸಮುದಾಯದ ಕಾಂಗ್ರೆಸ್ ಮುಖಂಡರ ಮತ್ತು‌ ಕಾರ್ಯಕರ್ತರ ಸಭೆಯನ್ನು ಇದೇ ಏ.೨೮ ರಂದು ಎಸ್.ಎಸ್.ಆಸ್ಪತ್ರೆ ರಸ್ತೆಯಲ್ಲಿರುವ  ಶ್ರೀ ಸಾಯಿ ಮಂದಿರದ ಸಮುದಾಯ ಭವನದಲ್ಲಿ‌ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸಮಾಜದ ಮುಖಂಡ ಹೊದಿಗೆರೆ ರಮೇಶ್ ಮಾತನಾಡಿ, ಅಂದು ಬೆಳಗ್ಗೆ ೧೧ ಗಂಟೆಗೆ ನಡೆಯುವ ಸಭೆಯನ್ನು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್, ಮುಖಂಡರಾದ ಆರ್.ಎಸ್.ಶೇಖರಪ್ಪ, ಬಿ.ವೀರಣ್ಣ, ಹದಡಿ ಹಾಲಪ್ಪ ಇತರರು ಭಾಗವಹಿಸಲಿದ್ದಾರೆ ಎಂದರು.

ವಾಲ್ಮೀಕಿ ಸಮುದಾಯಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ, ನಮ್ಮ ಸಮುದಾಯವು ಮುಂದುವರೆದು ಅಭಿವೃದ್ಧಿ ಹೊಂದಲು  ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರಬೇಕು. ಆದ್ದರಿಂದ ಲೋಕಸಭಾ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸಬೇಕೆಂದು ನಿರ್ಧರಿಸಿ ಸಮಾಜದ ಎಲ್ಲಾ ಮುಖಂಡರ ಮತ್ತು ಕಾರ್ಯಕರ್ತರ ಸಭೆ ಕರೆಯಲಾಗಿದೆ. ಎಲ್ಲರು ಈ ಸಭೆಯಲ್ಲಿ ಭಾಗವಹಿಸಿ ಯಶಸ್ವಿ ಮಾಡಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಮಾಜದ ಬಿ.ವೀರಣ್ಣ, ಎನ್.ಡಿ.ಮುರುಗೇಶಪ್ಪ, ಕೆ.ಮಂಜುನಾಥ್, ಸೀಮೆಎಣ್ಣೆ ಮಲ್ಲೇಶಪ್ಪ, ಎನ್.ಎಂ.ಆಂಜನೇಯ, ಎಸ್.ಎನ್.ಟಿ.ತಿಪ್ಪೇಸ್ವಾಮಿ, ಶಾಮನೂರು ಪ್ರವೀಣ್ ಇತರರು ಇದ್ದರು.

Share.
Leave A Reply

Exit mobile version