ಚಿತ್ರದುರ್ಗ: ಇವರೆಲ್ಲರೂ ಕೂಡ ಮದುವೆಗೆ ಹೋಗಿ ವಧು ವರರಿಗೆ ಅಕ್ಷತೆಯನ್ನು ಹಾಕಬೇಕಾಗಿತ್ತು ಆದರೆ ವಿಧಿಯಾಟ ಬೇರೆನೆಯಾಗಿದೆ ಸಂತಸದ ಮನೆಯಲ್ಲಿ ಈಗ ಸಾವಿನ ಸೂತಕ ಮನೆ ಮಾಡಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹಾವನಹಳ್ಳಿ ಹಾಗೂ ಉಗಣೆಕಟ್ಟೆ ಗ್ರಾಮದ ಮಧ್ಯ ಭಾಗದಲ್ಲಿ ಖಾಸಗಿ ಬಸ್ಸೊಂದು ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಸ್ಥಳದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದು, ಖಚಿತವಿಲ್ಲ.

ಹೊಸದುರ್ಗ ರಸ್ತೆಯ ಮಾರ್ಗವಾಗಿ ದಾವಣಗೆರೆಯ ಮದುವೆ ಫಂಕ್ಷನ್ ಇರುವ ಕಾರಣದಿಂದಾಗಿ ಸುಮಾರು 70ಕ್ಕೆ ಹೆಚ್ಚು ಜನರು ತೆರಳುತ್ತಿದ್ದರು. ಬಸ್ಸು ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆ ಬಸ್ಸು ರಸ್ತೆ ಪಕ್ಕದಲ್ಲಿದ್ದ ಲೈಟ್ ಕಂಬಕ್ಕೆ ಡಿಕ್ಕಿ ಒಡೆದು ಪಲ್ಟಿಯಾಗಿ ನಾಲ್ವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

40 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

40ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಗಾಯಗಳಾಗಿವೆ ಇನ್ನು ಹೊಳಲ್ಕೆರೆ ಹಾಗೂ ದಾವಣಗೆರೆ, ಚಿತ್ರದುರ್ಗ ಆಸ್ಪತ್ರೆಗಳಿಗೆ 108 ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ರವಾನೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಹೊಳಲ್ಕೆರೆ ಪೊಲೀಸ್ ಠಾಣೆ ಅವರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

Share.
Leave A Reply

Exit mobile version