ದಾವಣಗೆರೆ :ಪರ ಸ್ತ್ರೀ ಮೋಹಕ್ಕೆ ಕಟ್ಟಿಕೊಂಡವಳನ್ನೇ ಕೊಲೆ ಮಾಡಿದ ಚಾಣಾಕ್ಷ ಕೊಲೆಗಾರನನ್ನು ಗ್ರಾಮಾಂತರ ಡಿಎಸ್ಪಿ ಬಿ.ಎಸ್.ಬಸವರಾಜ್ ನೇತೃತ್ವದ ತಂಡ ಎಡೆಮುರಿ ಕಟ್ಟಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸಾಸಲುಹಳ್ಳ ಗ್ರಾಮದ ಕಾವ್ಯ ಎಂಬುವರನ್ನು ಹೊಳಲ್ಕೆರೆ ತಾಲ್ಲೂಕಿನ ಕಾಗಳಗೆರೆ ಗ್ರಾಮದ ನಿವಾಸಿ ಸಚಿನ್ ಮದುವೆಯಾಗಿದ್ದ.
ಅಲ್ಲದೇ ಐದು ವರ್ಷ ಸಂಸಾರ ಮಾಡಿದ್ದ. ಹೀಗಿರುವಾಗ ಇವರಿಬ್ಬರ ಮಧ್ಯೆ ದಾವಣಗೆರೆ ತಾಲ್ಲೂಕಿನ ಕಡ್ಲೆಬಾಳು ಗ್ರಾಮದ ನಿವಾಸಿ ಚೈತ್ರ ಎಂಟ್ರಿ ಕೊಟ್ಟಳು. ಅಲ್ಲದೇ ಚೈತ್ರಳಾನ್ನು ಸಚಿನ್ ಎರಡನೇ ಮದುವೆಯಾಗಿದ್ದ.

ಇವರಿಬ್ಬರ ಪ್ರೇಮಕ್ಕೆ ಹೆಂಡತಿ ಕಾವ್ಯ ಅಡ್ಡಿ

ಸಚಿನ್ ಹಾಗೂ ಚೈತ್ರಾಳ ಪ್ರೀತಿಗೆ ಹೆಂಡತಿ ಕಾವ್ಯ ಅಡ್ಡಿಯಾಗಿದ್ದಳು. ಆದ್ದರಿಂದ ಸಚಿನ್ ಹಾಗೂ ಚೈತ್ರಾ ಕಾವ್ಯಳನ್ನು ಕೊಲೆ ಮಾಡಲು ಸ್ಕೇಚ್ ಹಾಕಿದರು.

ಕತ್ತು ಹಿಸುಕಿ ಕೊಲೆ

ಸಚಿನ್ ಹಾಗೂ ಚೈತ್ರಾಳ ಸರಸಕ್ಕೆ ಕಾವ್ಯ ಅಡ್ಡಿಯಾಗಿದ್ದಳು, ಆದ್ದರಿಂದ ಈಕೆಯನ್ನು ಸೀರೆಯಿಂದ ಕುತ್ತಿಗೆ ಹಿಸುಕಿ ಸಾಯಿಸಿ ಕೊಲೆಮಾಡಿದ್ದಾರೆ. ನಂತರ ಗೋಣಿಚೀಲದಲ್ಲಿ ತುಂಬಿಕೊಂಡು ದಾವಣಗೆರೆ ತಾಲ್ಲೂಕಿನ ಕೊಡಗನೂರು ಕೆರೆಗೆ ತಂದು ಹಾಕಿದ್ದಾರೆ.. ಇತ್ತ ಕಾವ್ಯ ಕಾಣದೇ ಇರುವುದರಿಂದ ಅವರ ತವರು‌‌ಮನೆಯವರು ಪೊಲೀಸರಿಗೆ‌ದೂರು ನೀಡಿದ್ದಾರೆ.. ಅನುಮಾನಗೊಂಡ ಪೊಲೀಸರು ಗಂಡ ಸಚಿನ್ ನನ್ನು ಅವರ ಸ್ಟೈಲ್ ನಲ್ಲಿ ವಿಚಾರ ಮಾಡಿದಾಗ ಸತ್ಯಾಂಶ ಹೊರ‌ಬಂದಿದೆ

ಕೊಲೆಯಾಗಿದ್ದ ಕಾವ್ಯ ಶವ ಇದ್ದದ್ದು ಗೋಣಿ ಚೀಲದಲ್ಲಿ ಪತ್ತೆ

ಕೊಡಗನೂರು ಕೆರೆಯ ಆವರಣದಲ್ಲಿ ಮೂಟೆಯಿಂದ ಗಬ್ಬು ವಾಸನೆ ಬರುತ್ತಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಇಡೀ‌ ಕೆರೆ ಶೋಧ ಮಾಡಿ ಮೂಟೆಯಲ್ಲಿದ್ದ ಶವವನ್ನು ಹೊರ ತೆಗೆದರು. ಆ ಶವ ಕಾವ್ಯಳದ್ದು ಆಗಿತ್ತು. ಇಲ್ಲಿ ಬೆಳಗ್ಗೆಯಿಂದ ಪೊಲೀಸರ ಜೀಪುಗಳ ಕೆರೆ ಏರಿ‌ಮೇಲೆ‌ನಿಂತಿದ್ದನ್ನು ನೋಡಿ ಸುತ್ತಮುತ್ತಲಿನ ನೂರಾರು ಜನರು ಈ‌ ಕೆರೆಯ ಬಳಿ ಜಮಾಯಿಸಿದ್ದರು. ಏನೋ ನಡೆಯಬಾರದ್ದು ನಡೆದಿದೆ ಎನ್ನುವ ಅನುಮಾನ ಜನರಲ್ಲಿತ್ತು, ಅವರ ಅನುಮಾನ ಕೂಡ ನೂರಕ್ಕೆ‌ನೂರರಷ್ಟು ಸತ್ಯವಾಗಿತ್ತು. ಅಲ್ಲದೇ ಬಾಳಿ ಬದುಕಬೇಕಿದ್ದ ಮಹಿಳೆ ತನ್ನ ಪತಿಯಿಂದಲೇ ಕೊಲೆಗೈದು, ಗೋಣಿಚೀಲದಲ್ಲಿ ಹಾಕಿ ಇಲ್ಲಿ ತಂದು ಯಾರಿಗೂ ಗೊತ್ತಿಲ್ಲದಂತೆ ಬಿಸಾಕಿ ಹೋಗಿದ್ದ.

ಬಡಕುಟುಂಬದಲ್ಲಿ ಹುಟ್ಟಿದ್ದ ಕಾವ್ಯ

ಕಾವ್ಯ ಬಡ ಕುಟುಂಬದಲ್ಲಿ ಹುಟ್ಟಿದ ಮುದ್ದಾದ ಯುವತಿ, ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಕನಸು ಕಂಡವಳು, ಮದುವೆ ಮಗು ಗಂಡ ಎನ್ನುವ ಸಂಸಾರ ಸಾಗರದಲ್ಲೇ ಸುಖ ಸಂಸಾರ ನಡೆಸುತ್ತಿದ್ದಳು. ಆದರೆ ಅದೇ ಸಂಸಾರವೇ ಆಕೆಗೆ ಯಮಪಾಶವಾಗಿತ್ತು.. ಸುಖವಾಗಿ ಕಷ್ಟ ಬಾರದಂತೆ ನೋಡಿಕೊಳ್ಳಬೇಕಿದ್ದ ಗಂಡನೇ ಯಮನಾಗಿ ಕಾಡಿದ್ದಾನೆ.. ಆಕೆಯೊಬ್ಬಳ ಎಟ್ರಿಯಿಂದ ಇವರ ಸಂಸಾರವೇ ಅಲ್ಲೋಲ ಕಲ್ಲೋಲವಾಗಿತ್ತು.

ಹೆಂಡತಿ ಜಗಳ ಮಾಡಿಕೊಂಡು ತವರು ಮನೆಗೆ ಹೋಗಿದ್ದಳು

ಕಾವ್ಯ ಕಳೆದ ಐದು ವರ್ಷಗಳಿಂದ ಈ ಪಾಪಿ ಸಚಿನ್ ಜೊತೆ ಸಂಸಾರ ಮಾಡಿದ್ದು, ಆದರೆ ಇತ್ತೀಚೆಗೆ ಈತನ ವರ್ತನೆಯೇ ಬೇರೆಯಾಗಿತ್ತು. ಅಲ್ಲದೇ ಚೈತ್ರಳಾ ಜೊತೆ ಕಣ್ಣಮುಚ್ಚಾಲೆ ಆಟದ ವಿಚಾರ ತಿಳಿಯುತ್ತಿದ್ದಂತೆ ಜಗಳ‌ಮಾಡಿಕೊಂಡು ತನ್ನ ತವರು ಮನೆಗೆ ಹೋಗಿದ್ದಳಂತೆ.. ಕಳೆದ ಜನವರಿ 6 ರಂದು ಆಕೆಯನ್ನು ತವರು ಮನೆಯಿಂದ ಕಾಗಳಗೆರೆ ಗ್ರಾಮಕ್ಕೆ ಕರೆತಂದಿದ್ದ, ಮತ್ತೆ ಜಗಳವಾಗುತ್ತಿದ್ದಂತೆ ಸಚಿನ್ ಹಾಗೂ ಚೈತ್ರ ಸೇರಿಕೊಂಡು ಕಾವ್ಯಾಳ‌ ಕತೆ ಮುಗಿಸಿದ್ದಾರೆ. ಇಲ್ಲಿ ಇದ್ದರೆ ನಮ್ಮ‌‌ ಮೇಲೆ ಬರುತ್ತೆ ಎಂದು ಗೋಣಿಚೀಲದಲ್ಲಿ ಹೆಣವನ್ನು ಹಾಕಿಕೊಂಡು ಕೊಡಗನೂರು‌ಕೆರೆಗೆ ತಂದು ಹಾಕಿದ್ದಾರೆ.. ತವರು ಮನೆಯಿಂದ ಗಂಡನ ಮನೆಗೆ ಹೋದ ಮಗಳು ಕಾಣೆಯಾಗಿದ್ದರಿಂದ ಅನುಮಾನಗೊಂಡ ತವರುಮನೆಯವರು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೀಟ್ ಕೊಟ್ಟಿದ್ದಾರೆ… ಆಗ ಸಚಿನ್ ನನ್ನು ವಿಚಾರಣೆ‌ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ, ಸುಮಾರು 19 ದಿನದ ಬಳಿಕ ಕಾವ್ಯಾಳ ಶವ ಪತ್ತೆಯಾಗಿದ್ದು‌. ಕೊಳತ ಸ್ಥಿತಿಯಲ್ಲಿರುವ ಕಾವ್ಯಾಳ‌ ಮೃತದೇಹವನ್ನು ಮಾಯಕೊಂಡ‌ ಠಾಣೆ ಪೊಲೀಸರು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದ್ದು, ಮತ್ತಷ್ಟು ತನಿಖೆ‌‌ ನಡೆಸುತ್ತಿದ್ದಾರೆ

ಏನೇ ಆಗಲಿ ಹೆಂಡತಿಯನ್ನು ಬಿಟ್ಟು ಬೇರೆ ಮಹಿಳೆಯ ಮೋಜಿಗೆ ಬಿದ್ದ ಸಚಿನ್ ನಿಂದ ಕಾವ್ಯ ಹತ್ಯೆಯಾಗಿದ್ದು, ಮದುವೆಯಾಗಿ ಕನಸಿನ ಗೋಪುರ ಕಟ್ಟಿಕೊಂಡಿದ್ದ ಕಾವ್ಯ ಮಾತ್ರ ಹೀನಾಯವಾಗಿ ಕೊಲೆ ಯಾಗಿದ್ದು‌ ಮಾತ್ರ ದುರದೃಷ್ಟಕರ. ಕೊಲೆ‌ಆರೋಪಿಗಳಾದ ಸಚಿನ್ ಹಾಗೂ ಚೈತ್ರ ಈಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದು, ಈಗ ಕೊಲೆಯಾದ ಕಾವ್ಯಳ ಆತ್ಮಕ್ಕೆ ಶಾಂತಿ ಸಿಕ್ಕಿದೆ.

Share.
Leave A Reply

Exit mobile version