![](https://davangerevijaya.com/wp-content/uploads/2024/07/IMG-20240719-WA01231.jpg)
ದಾವಣಗೆರೆ : ನಗರದ ಪೊಲೀಸ್ ಕ್ರೀಡಾಂಗಣದಲ್ಲಿ
2023_24 ನೇ ಸಾಲಿನ ಪೊಲೀಸ್ ಪಬ್ಲಿಕ್ ಸ್ಕೂಲ್ ವಾರ್ಷಿಕ ಕ್ರೀಡಾ ಕೂಟ- PPS ಪ್ರೋತ್ಸಾಹ-2023ರ ಉದ್ಘಾಟನಾ ಸಮಾರಂಭ ನಡೆಯಿತು.
ಅಂತರಾಷ್ಟ್ರೀಯ ಮಟ್ಟದಲ್ಲಿ ಮ್ಯಾರಥಾನ್ ನಲ್ಲಿ ಬಂಗಾರದ ಪದಕ ಪಡೆದಿರುವ ಏಳು ವರ್ಷದ ಕ್ರೀಡಾ ಸಾಧಕ ಮಹಮ್ಮದ್ ಝಯಾದ್ ಮತ್ತಿಹಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
![](https://davangerevijaya.com/wp-content/uploads/2024/07/IMG-20240715-WA0352.jpg)
ಈ ಸಂದರ್ಭದಲ್ಲಿ ಉದ್ಘಾಟನಾ ನುಡಿಗಳನ್ನಾಡಿದ ಕ್ರೀಡಾವಸಾಧಕ ಮಹಮ್ಮದ್ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದು ನನ್ನ ಮೊದಲ ಆದ್ಯತೆ ಅದಕ್ಕಾಗಿ ಕಠಿಣ ಪರಿಶ್ರಮ ಪ್ರತಿನಿತ್ಯ ವ್ಯಾಯಾಮ ನಡೆಸುತ್ತೇನೆ ನೀವು ಕೂಡ ಕ್ರೀಡೆಯಲ್ಲಿ ಭಾಗವಹಿಸುವುದು ಪ್ರಯತ್ನಿಸಿ . ಆಗ ನಿಮ್ಮ ಗೆಲುವು ಸಾಧ್ಯ. ಏನಾದರೂ ಸಾಧಿಸಬೇಕೆಂಬ ಆಸೆ ನಿಮ್ಮಲ್ಲಿ ಮೂಡುತ್ತದೆ ಎಂದು ಮಾರ್ಗದರ್ಶನ ನೀಡಿದರು.
ಜಿಲ್ಲಾ ಶಶಸ್ತ್ರ ಮೀಸಲು ಪಡೆಯ ಸಬ್ ಇನ್ಸ್ಪೆಕ್ಟರ್ ಸೋಮಶೇಖರ್ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸಲು ಸದೃಢತೆಯ ದೇಹ ಹೊಂದಿರಬೇಕು ಹಾಗೂ ಉತ್ತಮ ಅಭ್ಯಾಸ ಮಾರ್ಗದರ್ಶನ ಪಡೆದು ಕ್ರೀಡೆಯಲ್ಲಿ ಯಶಸ್ಸು ಗಳಿಸಬೇಕು. ಪೊಲೀಸ್ ಪಬ್ಲಿಕ್ ಶಾಲೆಯ ಮಕ್ಕಳು ಯಾವುದೇ ಕ್ರೀಡೆಯಲ್ಲಿಯೂ ಕೂಡ ಭಾಗವಹಿಸಿ ಉತ್ತಮ ಕ್ರೀಡಾಪಟುಗಳಾಗಿ ಆಯ್ಕೆಯಾಗುವರು ಎಂಬ ಆತ್ಮವಿಶ್ವಾಸ ಎದ್ದು ಕಾಣುತ್ತಿದೆ ಎಂದು ವಿದ್ಯಾರ್ಥಿಗಳನ್ನು ಪ್ರಶಂಸಿಸಿ ಪ್ರೋತ್ಸಾಹಿಸಿದರು.
ಕ್ರೀಡಾ ಜ್ಯೋತಿಯನ್ನು ಬೆಳಗುವ ಮೂಲಕ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ಕೊಟ್ಟ ಜಿಲ್ಲಾ ನಗರ ಪೊಲೀಸ್ ಉಪ ಅಧೀಕ್ಷಕ ಮಲ್ಲೇಶ್ ದೊಡ್ಮನಿ, ತಮ್ಮ ಅತಿಥೇಯ ನುಡಿಗಳನ್ನಾಡಿದರು. ಶಾಲಾ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಕ್ರೀಡಾಪಟುಗಳಾಗಿ ವಿವಿಧ ಕ್ರೀಡೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡರೆ ಯಶಸ್ಸನ್ನ ಪಡೆಯಲು ಸಾಧ್ಯ ಎಂದು ತಿಳಿಸಿದರು . ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಸತತ ಅಭ್ಯಾಸ ಮತ್ತು ಪರಿಶ್ರಮದ ಮೂಲಕ ಜಿಲ್ಲಾ, ರಾಜ್ಯ, ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಕ್ರೀಡಾಪಟುಗಳನ್ನು ತಯಾರಿಸಲು ಪೊಲೀಸ್ ಪಬ್ಲಿಕ್ ಸ್ಕೂಲ್ ಸನ್ನದ್ಧವಾಗಿದೆ ಎಂದು ತಿಳಿಸಿದರು.
*ಸಮಾರೋಪ ಸಮಾರಂಭ*
2023_24 ನೇ ಸಾಲಿನ ಪೊಲೀಸ್ ಪಬ್ಲಿಕ್ ಸ್ಕೂಲ್ ವಾರ್ಷಿಕ ಕ್ರೀಡಾ ಕೂಟ- PPS ಪ್ರೋತ್ಸಾಹ-2023ರ ಸಮಾರೋಪ ಸಮಾರಂಭ ಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆ ಬದುಕಿನಲ್ಲಿ ಶಿಸ್ತು, ಸಂಯಮ ಹಾಗೂ ಶಾಂತಿಯುತ ಮನೋಭಾವನೆಯ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡೆ ಮನಸ್ಸನ್ನು ಹದಗೊಳಿಸಿ ಸದೃಡ ಆರೋಗ್ಯಕ್ಕೆ ಸಹಾಯಕಾರಿಯಾಗಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಲಿದೆ ಎಂದು ತಿಳಿಸಿದರು. ಈಗ ದೇಶದಲ್ಲಿ ಕ್ರೀಡೆಗೆ ಉತ್ತಮ ಭವಿಷ್ಯವಿದೆ. ಪೋಷಕರು ಮಕ್ಕಳಿಗೆ ಉತ್ತೇಜನ ನೀಡಿ ಉತ್ತಮ ಕ್ರೀಡಾಪಟುಗಳನ್ನಾಗಿ ತಯಾರು ಮಾಡಬೇಕು ಎಂದು ಕಿವಿಮಾತು ಹೇಳಿದರು
ಈ ಸಂದರ್ಭದಲ್ಲಿ ಪ್ರಕಾಶ್. ಪಿ.ಬಿ. ಜಿಲ್ಲಾ ಶಶಸ್ತ್ರ ಮೀಸಲು ಪಡೆಯ ಉಪಾಧೀಕ್ಷಕರು ಕ್ರೀಡಾ ಪ್ರೋತ್ಸಾಹದಲ್ಲಿ ಮಾತನಾಡಿ, ಮಕ್ಕಳಲ್ಲಿ ಗುಣಾತ್ಮಕ ಕಲಿಕೆಯ ಜೊತೆಗೆ ಕ್ರೀಡೆಯಲ್ಲಿಯೂ ಕೂಡ ಪ್ರಭಾವಕಾರಿಯಾಗಿ ತೊಡಗಿಸಿಕೊಳ್ಳುವುದು ಮುಖ್ಯ. ನಿತ್ಯ ಬದುಕಿನಲ್ಲಿ ಚಟುವಟಿಕೆದಾಯಕವಾಗಿರಲು ಕ್ರೀಡೆ ನಮಗೆ ಅವಶ್ಯಕವಾಗಿದೆ. ಆಸಕ್ತಿ ತೋರಿದರೆ ಈ ಕ್ರೀಡೆಯೇ ಭವಿಷ್ಯಕ್ಕೆ ಆಧಾರವಾಗುತ್ತದೆ ಎಂದು ಅಭಿಪ್ರಾಯಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಶಾಲೆಯ ಪ್ರಾಂಶುಪಾಲ ಯತೀಶ್ ಆಚಾರ್. ಎಚ್. ವಿ. ಮಾತನಾಡಿ,
ಕ್ರೀಡೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಜೊತೆಗೆ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯ ದ ಮೇಲೆ ಪ್ರಭಾವ ಬೀರಿ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡುತ್ತದೆ ಎಂದುತಿ ಳಿಸಿದರು.
ಅತಿಥಿಗಳಿಗೆ ಪೊಲೀಸ್ ಪಬ್ಲಿಕ್ ಶಾಲೆಯ 4 ಹೌಸ್ ಗಳಾದ ಕಾವೇರಿ, ನೇತ್ರಾವತಿ, ಶರಾವತಿ ಮತ್ತು ಕೃಷ್ಣ ಮತ್ತು ಕೃಷ್ಣ ಪಥ ಸಂಚನದ ಮೂಲಕ ಗೌರವವಂದನೆ ಸಲ್ಲಿಸಿದರು. ದಿನವೀಡಿ ನಡೆದ ೧೮ ಆಟೋಟಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡರು. ಅಂತಿಮವಾಗಿ ಕೃಷ್ಣ ಹೌಸ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿ ಟ್ರೋಫಿಗೆ ಮುತ್ತಿಟ್ಟರು. ಕಾವೇರಿ ಹೌಸ್ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರು.
![](https://davangerevijaya.com/wp-content/uploads/2024/07/IMG-20240716-WA0138.jpg)