Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»ರಾಜಕೀಯ ಸುದ್ದಿ»ಡಿಸಿಸಿ ಬ್ಯಾಂಕ್ ಚುನಾವಣೆ, ಸಂಡೂರು ಎಚ್.ಕೆ.ಬಸಪ್ಪ ಎಂಟ್ರಿಯೇ ಒಂದು ರೋಚಕ
ರಾಜಕೀಯ ಸುದ್ದಿ

ಡಿಸಿಸಿ ಬ್ಯಾಂಕ್ ಚುನಾವಣೆ, ಸಂಡೂರು ಎಚ್.ಕೆ.ಬಸಪ್ಪ ಎಂಟ್ರಿಯೇ ಒಂದು ರೋಚಕ

davangerevijaya.comBy davangerevijaya.com25 January 2024Updated:25 January 2024No Comments3 Mins Read
Facebook WhatsApp Twitter
Share
WhatsApp Facebook Twitter Telegram

ನಂದೀಶ್ ಭದ್ರಾವತಿ ದಾವಣಗೆರೆ

ಶಿಮುಲ್ ಉಪಾಧ್ಯಕ್ಷ ಎಚ್.ಕೆ.ಬಸಪ್ಪ ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಈ ಗೆಲುವಿನ ಹಿಂದೆ ಸಾಕಷ್ಟು ರೋಚಕ ಕಥೆಗಳಿದ್ದು, ದಾವಣಗೆರೆ ವಿಜಯ ಎಳೆಎಳೆಯಾಗಿ ಬಿಚ್ಚಿಟ್ಟಿದೆ.

ಒಂದೇ ಪಕ್ಷದವರೇ ಎದುರಾಳಿ

ಎಚ್.ಕೆ.ಬಸಪ್ಪ, ಹನುಮನಹಳ್ಳಿ ಬಸವರಾಜಪ್ಪ ಕಾಂಗ್ರೆಸ್ ಪಕ್ಷದವರಾಗಿದ್ದು, ಇವರ ನಡುವೆ ನೇರಹಣಾಹಣಿ ನಡೆಯಿತು. ಈ ಹಿಂದೆ ಹನುಮನಹಳ್ಳಿ ಬಸವರಾಜಪ್ಪ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಎಚ್.ಕೆ.ಬಸಪ್ಪಗೆ ಮತ ಪ್ರಚಾರ ವೇಳೆ ಸಾಕಷ್ಟು ಫೈಟ್ ಕೊಟ್ಟಿದ್ದರು. ಆದರೆ ಎಣಿಕೆ ಫಲಿತಾಂಶದಲ್ಲಿ ಎಚ್.ಕೆ.ಬಸಪ್ಪ ಮೊದಲಿನಿಂದಲೂ ಹೆಚ್ಚು ಮತ ತೆಗೆದುಕೊಂಡರು. 

ಹಗಲು-ರಾತ್ರಿ ಪ್ರಚಾರ

ಎಚ್.ಕೆ.ಬಸಪ್ಪ ಡಿಸಿಸಿ ಬ್ಯಾಂಕ್  ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದರು. ಚಿಹ್ನೆ ಸಿಕ್ಕ ನಂತರ ದೇವಸ್ಥಾನಗಳಿಗೆ ಭೇಟಿ ನೀಡಿ ಮತ ಪ್ರಚಾರಕ್ಕೆ ಹೊರಟರು. ಅಲ್ಲದೇ ಹಗಲು-ರಾತ್ರಿ ಎನ್ನದೇ ಕಾಲಿಗೆ ಗೆಜ್ಜೆ ಕಟ್ಟಿಕೊಂಡುವರಂತೆ ಓಡಾಡಿದರು. ಅಲ್ಲದೇ ಮತದಾರರ ಮನವೊಲಿಸಲು ಯಶಸ್ವಿಯಾದರು. 

ನಾಲ್ಕು ಬಾರಿ ಮತದಾರರ ಭೇಟಿ

ಚನ್ನಗಿರಿ-ನ್ಯಾಮತಿ-ಹೊನ್ನಾಳಿ ಭಾಗದಲ್ಲಿ ಒಟ್ಟು 101 ಮತಗಳಿದ್ದು ಎಲ್ಲ ಮತದಾರರನ್ನು ವೈಯಕ್ತಿಕವಾಗಿ ನಾಲ್ಕು ಬಾರಿ ಕಂಡರು. ಅಲ್ಲದೇ ಗೆದ್ದು ಬಂದ್ರೆ ನಿಮ್ಮೊಂದಿಗೆ ಇರುತ್ತೇನೆ ಎಂದು ಮಾತುಕೊಟ್ಟರು. ಪರಿಣಾಮ ಮತಗಳು ನಿರಾಸಯವಾಗಿ ಎಚ್.ಕೆ.ಬಸಪ್ಪಗೆ ಬಿದ್ದವು.

ಕಾಂಗ್ರೆಸ್ ಶಾಸಕರ ಬೆಂಬಲ ನಡುವೆ ಬಿಜೆಪಿ ಬೆಂಬಲವಿತ್ತು

ಕಾಂಗ್ರೆಸ್ ಪಕ್ಷದವರೇ ಆದ ಎಚ್‌‌.ಕೆ.ಬಸಪ್ಪಗೆ ಶಾಸಕ ಶಿವಗಂಗಾಬಸವರಾಜ್, ಬಸವಂತಪ್ಪ, ಶಾಂತನಗೌಡ ಸೇರಿದಂತೆ ಬಿಜೆಪಿಯ ಮಾಜಿ ಶಾಸಕರೊಬ್ಬರ ಬೆಂಬಲಿವಿತ್ತು. ಅಲ್ಲದೇ ಆಡಳಿತರೂಢ ಕಾಂಗ್ರೆಸ್ ಸರಕಾರವಿದ್ದ ಕಾರಣ ಎಚ್‌.ಕೆ.ಬಸಪ್ಪರಿಗೆ ಗೆಲುವಿನ ಹಾದಿ ಸುಗಮವಾಯಿತು.

ಮತ ಎಣಿಕೆ ವೇಳೆ ಭಾರಿ ಮುನ್ನಡೆ

ಚುನಾವಣಾಧಿಕಾರಿ ನಜ್ಮಾ ಬ್ಯಾಲೇಟ್ ಬಾಕ್ಸ್ ಓಪನ್ ಮಾಡಿದ ಕ್ಷಣದಿಂದ ಬಸಪ್ಪ ಮತ ಎಣಿಕೆಯಲ್ಲಿ ಮುಂದಿದ್ದರು. ಪರಿಣಾಮ 101 ಮತಗಳಲ್ಲಿ 77 ಮತಗಳನ್ನು ಬಸಪ್ಪ ಪಡೆದುಕೊಂಡರು. ಪ್ರತಿ ಸ್ಪರ್ಧಿ ಬಸವರಾಜಪ್ಪ 24 ಮತಗಳಿಸಿ ಪರಾಜಿತರಾದರು. ಮತ ಎಣಿಕೆಯಲ್ಲಿ ಮೊದಲಿನಿಂದಲೂ ಮುನ್ನಡೆಯಿದ್ದ ಬಸಪ್ಪ ಎಲ್ಲಿಯೂ ಹಿಂದೆ ಹೋಗಲಿಲ್ಲ..ಸತತವಾಗಿ ಮುಂದೆ ಬಂದ್ರು. 

ಬೆಂಬಲಕ್ಕಿದ್ದ ಇಡೀ ಕುಟುಂಬ

ಎಚ್.ಕೆ ಬಸಪ್ಪಗೆ ರಾಜಕಾರಣಿಗಳಿಗಿಂತ ಇಡೀ ಕುಟುಂಬ ಬೆಂಬಲಕ್ಕಿತ್ತು. ಅದರಲ್ಲೂ ಪತ್ನಿ, ಮಗ, ಅಣ್ಣ ಸೇರಿದಂತೆ ಸಂಬಂಧಿಕರು ಬೆಂಬಲಕ್ಕೆ ನಿಂತರು. ಅಲ್ಲದೇ ಮತದಾನದ ವೇಳೆ ಮತದಾರರ ಮನವೊಲಿಸಲು ಇಡೀ ಕುಟುಂಬ ಯಶಸ್ವಿಯಾಯಿತು.

ಎಣಿಕೆಯ ತನಕ ಟೆನೆಷನ್, ತಾಳ್ಮೆ ಕಳೆದುಕೊಳ್ಳದ ಬಸಪ್ಪ

ಮತದಾನದ ಸಮಯ ಮುಗಿದ ನಂತರ ಎಚ್‌.ಬಸಪ್ಪಗೆ ಭಾರೀ ಟೆನೆಷನ್ ಇತ್ತು. ಆದರೂ ಬಸಪ್ಪ ತಾಳ್ಮೆ ಕಳೆದುಕೊಳ್ಳಲಿಲ್ಲ. ಅಲ್ಲದೇ ಇಡೀ ಕುಟುಂಬದ ಮುಖ ಬಾಡಿತ್ತು. ಆದರೆ ಫಲಿತಾಂಶ ಹೊರ ಬಿದ್ದ ವೇಳೆ ಎಲ್ಲರ ಮುಖದಲ್ಲಿ ನಗು ಅರಳಿತು.

ನಾಮಪತ್ರ ಹಿಂತೆಗೆಯಲು ಕಂಡೀಷನ್ ಇಡಲಾಗಿತ್ತು

ಎಚ್.ಕೆ.ಬಸಪ್ಪ ಹಾಗೂ ಹನುಮನಹಳ್ಳಿ ಬಸವರಾಜಪ್ಪ ಇಬ್ಬರು ಒಂದೇ ಪಕ್ಷದವರು ಆದ ಕಾರಣ ನಾಯಕರು  ಇಬ್ಬರನ್ನು ಕರೆಸಿ ಒಂದು ಕಂಡೀಷನ್ ಇಟ್ಟಿದ್ದರು. ನಾಮಪತ್ರ ಹಿಂತೆಗೆದುಕೊಳ್ಳಲು ಅಧಿಕಾರ ಅವಧಿ ಹಂಚಿಕೆ ಮಾಡಿಕೊಡಲಾಗಿತ್ತು. ಆಗ ಬಸಪ್ಪ ನನ್ನ ನಾಮಪತ್ರ ಹಿಂತೆಗೆದುಕೊಳ್ಳಲು ನನಗೆ ಮೊದಲು ಅಧಿಕಾರ ಕೊಡಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಬಿ.ಜಿ.ಬಸವರಾಜಪ್ಪ ಈ ಮಾತನ್ನು ಒಪ್ಪಿರಲಿಲ್ಲ‌ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಪರಿಣಾಮ ಇಬ್ಬರು ಕೂಡ ಚುನಾವಣಾ ಅಖಾಡಕ್ಕೆ ಧುಮಕಿದರು.

ಹನುಮನಹಳ್ಳಿ ಬಸವರಾಜಪ್ಪ ಕೂಡ ಸ್ಟ್ರಾಂಗ್ ಕ್ಯಾಂಡೆಂಟ್

ಎದುರಾಳಿ ಹನುಮನಹಳ್ಳಿ ಬಸವರಾಜಪ್ಪ ಕೂಡ ಸ್ಟ್ರಾಂಗ್ ಕ್ಯಾಂಡೇಟ್ ಇದ್ದು, ಇವರನ್ನು ಸೋಲಿಸುವುದು ಸಾಮಾನ್ಯ ಮಾತು ಆಗಿರಲಿಲ್ಲ..ಅಲ್ಲದೇ ಹೊನ್ನಾಳಿಯವರಾಗಿರುವ ಕಾರಣ ಶಾಸಕ ಶಾಂತನಗೌಡ ಬೆಂಬಲವಿತ್ತು‌. ಹಾಲಿ ನಿರ್ದೇಶಕರಾಗಿದ್ದ ಕಾರಣ ಎಲ್ಲರೂ ಕೂಡ ಹನುಮನಹಳ್ಳಿ ಬಸವರಾಜಪ್ಪ ಗೆಲ್ಲುತ್ತಾರೆ ಎಂದುಕೊಂಡಿದ್ದರು. ಆದರೆ ಫಲಿತಾಂಶ ಉಲ್ಟಾ ಹೊಡೆಯಿತು.

ರೈತರ ಏಳ್ಗೆಗೆ ಶ್ರಮಿಸುವೆ

ಚುನಾವಣಾಧಿಕಾರಿ ನಜ್ಮಾರವರ ಬಳಿ ಪ್ರಮಾಣ ಪತ್ರ ಸ್ವೀಕರಿಸಿ ದಾವಣಗೆರೆ ವಿಜಯೊಂದಿಗೆ ಮಾತನಾಡಿ, ನಾನು ಹಾಲಿ ಶಿಮುಲ್ ಉಪಾಧ್ಯಕ್ಷನಾಗಿದ್ದು, ರೈತರೊಂದಿಗೆ ಒಡನಾಟ ಹೊಂದಿದ್ದೇನೆ. ಅವರ ಶ್ರೇಯೋಭಿವೃದ್ದಿಗೆ ನಾನು ಶ್ರಮಿಸುತ್ತೇನೆ ಎಂದರು.

ಮೂರು ಮತದಾನ ತಿರಸ್ಕೃತ

11 ಕ್ಷೇತ್ರಕ್ಕೆ ಚುನಾವಣೆ ನಡೆದಿದ್ದು, ಎಲ್ಲ ಕ್ಷೇತ್ರದಲ್ಲಿ ಎದುರಾಳಿ ಇಬ್ಬರು ಮಾತ್ರ ಇದ್ದರು. ಆದರೆ ಈ ಕ್ಷೇತ್ರದಲ್ಲಿ ಮೂವರು ಎದುರಾಳಿಯಾಗಿದ್ದರು. ಆದ್ದರಿಂದ ಮೂವರು ಮತದಾರ ಇಬ್ಬರಿಗೂ ಮತದ ಮುದ್ರೆ ಹಾಕಿದ್ದರು. ಪರಿಣಾಮ ಮೂವರು ಮತದಾರರ ಹಕ್ಕು ಚಲಾವಣೆ ತಿರಸ್ಕೃತಗೊಂಡಿತ್ತು.

ಮೂವರ ಹೆಸರುಗಳು ಒಂದೇ ಬಗೆಯದ್ದು

ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಹೆಸರುಗಳು ಒಂದೇ ಬಗೆಯ ಹೆಸರುಗಳಾಗಿದ್ದವು‌‌. ಅದರಲ್ಲಿ ಎಚ್.ಕೆ.ಬಸಪ್ಪ ಕ್ರಮ ಸಂಖ್ಯೆ 1 ಆಗಿತ್ತು. ಹನುಮನಹಳ್ಳಿ ಬಸವರಾಜಪ್ಪರ ಕ್ರಮಸಂಖ್ಯೆ ಎರಡಾಗಿತ್ತು. ಇನ್ನೊಬ್ಬರ ಬಸವರಾಜರ ಸಂಖ್ಯೆ ಮೂರಾಗಿತ್ತು.

ಅದೃಷ್ಟ ತಂದ ಕ್ರಮ ಸಂಖ್ಯೆ1

ಎಚ್.ಕೆ.ಬಸಪ್ಪ ಚಿಹ್ನೆ ಹಣ್ಣಿನ ಬುಟ್ಟಿಯಾಗಿದ್ದು, ಕ್ರಮ ಸಂಖ್ಯೆ 1 ಆದ ಕಾರಣ ಅವರಿಗೆ ಈ ಅಂಕೆ ಅದೃಷ್ಟ ತಂದುಕೊಟ್ಟಿತ್ತು. ಅಲ್ಲದೇ ಮತದಾರರ ಮೊದಲಿನ ಅಂಕೆಗೆ ಹೆಚ್ಚು ಮುದ್ರೆ ಒತ್ತಿದರು.

ಪಟಾಕಿ ಸಿಡಿಸಿ ಸಂಭ್ರಮ

ಎಚ್.ಕೆ. ಗೆದ್ದ ಬಸಪ್ಪ ಗೆದ್ದಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಹೊಡೆದು ಸಿಹಿ ಹಂಚಿ ಸಂಭ್ರಮಾಚಾರಣೆ ಮಾಡಿದರು. ಅಲ್ಲದೇ ಬಸಪ್ಪಗೆ ಹೂವಿನಹಾರ ಟೋಪಿ ಹಾಕಿ ಪೋಟೋ ಕ್ಲಿಕಿಸಿಕೊಂಡರು. ಒಟ್ಟಾರೆ ಎಚ್..ಕೆ.ಬಸಪ್ಪರ ಮುಳ್ಳಿನ ಹಾದಿಯ ದಾರಿ ಮುಗಿದಿದ್ದು, ಹೂವಿನ ಪಲಕ್ಕಿ ಹಾದಿಗೆ ತಲುಪಿದ್ದಾರೆ, ಆದ್ದರಿಂದ ಡಿಸಿಸಿ ಬ್ಯಾಂಕ್ ನ ಇವರ ಪ್ರಯಾಣ ಸುಖಕರವಾಗಲಿ ಎಂದು ದಾವಣಗೆರೆ ವಿಜಯ ಹಾರೈಸುತ್ತಿದೆ.

Featured Hanumanhalli Basavarajappa Top News ಎಚ್.ಕೆ.ಬಸಪ್ಪ ಡಿಸಿಸಿ ಬ್ಯಾಂಕ್ ಚುನಾವಣೆ ದಾವಣಗೆರೆ ಹನುಮನಹಳ್ಲಿ ಬಸವರಾಜಪ್ಪ
Share. WhatsApp Facebook Twitter Telegram
davangerevijaya.com
  • Website

Related Posts

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025

ಎಸ್ಸೆಸ್ಸೆಲ್ಸಿ : ಕ್ಯಾನ್ಸರ್‌ ಗೆದ್ದ ಯುವತಿ ಸರಕಾರಿ ಶಾಲೆಗೆ ಫಸ್ಟ್, ಹಾಗಾದ್ರೆ ಆ ಶಾಲೆ ಯಾವುದು?

3 May 2025

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಪೊಲೀಸರಿಗೆ ಇಲ್ಲಿ ರಕ್ಷಣೆ ಇಲ್ಲ : ಮಾಜಿ ಸಚಿವ ರೇಣುಕಾಚಾರ್ಯ

2 May 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,651 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,319 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,081 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,586 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
ಪ್ರಮುಖ ಸುದ್ದಿ

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

By davangerevijaya.com12 June 20250

*ದಾವಣಗೆರೆಯಲ್ಲಿ ಅಂಚೆ  ವಿಭಾಗೀಯ  ಕಚೇರಿ ಬರಲು ಇವರು ಕಾರಣ * ದಾವಣಗೆರೆ ಅಂಚೆ ಇಲಾಖೆ ಪ್ರಥಮ ಅಧೀಕ್ಷಕ *ನಿಷ್ಠೆ, ಪ್ರಾಮಾಣಿಕತೆಯಿಂದ…

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025

ನೊಂದವರ ಕಷ್ಟಕ್ಕೆ ಸ್ಪಂದಿಸಲು‌ ಅಧಿಕಾರಿಗಳಿಗೆ ಸಲಹೆ: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

10 June 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,651 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,319 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,081 Views

Subscribe to Updates

Get the latest creative news from SmartMag about art & design.

Recent Posts
  • ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.
  • ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ
  • ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?
  • ನೊಂದವರ ಕಷ್ಟಕ್ಕೆ ಸ್ಪಂದಿಸಲು‌ ಅಧಿಕಾರಿಗಳಿಗೆ ಸಲಹೆ: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
  • ಆರ್ ಸಿಬಿ ವಿಜಯೋತ್ಸವ ವೇಳೆ 11 ಜನರ ಸಾವು : ಸಿಬಿಐಗೆ ವಹಿಸಲು ಮಾಜಿ ಸಚಿವ ಒತ್ತಾಯ
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.