![](https://davangerevijaya.com/wp-content/uploads/2024/07/IMG-20240719-WA01231.jpg)
ನಂದೀಶ್ ಭದ್ರಾವತಿ ದಾವಣಗೆರೆ
ಸವಿತಾಬಾಯಿ ಈ ಹೆಸರು ದಾವಣಗೆರೆಯಲ್ಲಿ ಎಲ್ಲರಿಗೂ ಚಿರಪರಿಚಿತ...2023 ರ ವಿಧಾನಸಭಾ ಚುನಾವಣೆಯಲ್ಲಿ ಒಬ್ಬ ಮಹಿಳೆಯಾಗಿ ಸಖತ್ ಹವಾ ಮಾಡಿದ್ದ ಲೇಡಿ.. ಎಂಎಲ್ ಎ ಚುನಾವಣೆಯಲ್ಲಿ ಪರಾಜಿತರಾದ ನಂತರ ರಾಜಕೀಯವಾಗಿ ಕುಂದಿದ್ದ ಸವಿತಾಬಾಯಿ ಏನು ಮಾಡುತ್ತಿದ್ದಾರೆ ಎಂಬುದು ಹಲವರ ಪ್ರಶ್ನೆ ಆಗಿತ್ತು. ಈ ಪ್ರಶ್ನೆಗೆ ಈಗ ಉತ್ತರ ಸಿಗಲಿದ್ದು, ನಮ್ಮೊಂದಿಗೆ ಅವರ ಮನದಾಳದ ಮಾತು ಹಂಚಿಕೊಂಡಿದ್ದಾರೆ.
![](https://davangerevijaya.com/wp-content/uploads/2024/07/IMG-20240715-WA0352.jpg)
ಹೌದು..ಸವಿತಾಬಾಯಿ ಈಗ ಮರು ರಾಜಕೀಯ ಎಂಟ್ರಿ ಪಡೆಯುತ್ತಿದ್ದಾರೆ..ಕಾಂಗ್ರೆಸ್ ನಾಯಕಿಯು ಆಗಿರುವ ಸವಿತಾಬಾಯಿ ಬಹು ಭಾಷಾ ನಟಿಯೂ ಹೌದು. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕ್ಯಾಂಪೇಯೇನ್ ಮಾಡಲಿದ್ದಾರೆ. ಅದರಲ್ಲಿ ಸಚಿವ ಪ್ರಭಾ ಮಲ್ಲಿಕಾರ್ಜುನ್ ಜತೆ ಕೈ ಜೋಡಿಸಲಿದ್ದಾರೆ.
ಮಾಯಕೊಂಡ ವಿಧಾನ ಸಭಾ ಕ್ಷೇತ್ರ ಪರಿಚಯವಿರುವ ಕಾರಣ ಸವಿತಾಬಾಯಿ ಅಲ್ಲಿನ ಮತದಾರರನ್ನು ಒಟ್ಟುಗೂಡಿಸಿ ಕಾಂಗ್ರೆಸ್ ಗೆ ಮತ ಹಾಕುವಂತೆ ಜನರಲ್ಲಿ ಮನವಿ ಮಾಡುತ್ತಾರೆಯಂತೆ. ಅಲ್ಲದೇ ಕಾಂಗ್ರೆಸ್ ಸರಕಾರದ ಯೋಜನೆಗಳು ಜನರಿಗೆ ತಿಳಿಸಿ, ಮತ್ತೆ ಕ್ಷೇತ್ರದಲ್ಲಿ ಸವಿತಾಬಾಯಿ ಹವಾ ಎಬ್ಬಿಸಲಿರುವರು.
ಕ್ಷೇತ್ರದ ಎಲ್ಲ 184 ಗ್ರಾಮಗಳ ಪರಿಚಯ ಸವಿತಾಬಾಯಿಗೆ ಇದೆ. ಈ ಎಲ್ಲ ಗ್ರಾಮಗಳ ಜನರು ಸವಿತಾಬಾಯಿಗೆ ಚಿರಪರಿಚಿತ. ಎಲ್ಲಿ ಏನು ಸಮಸ್ಯೆ ಇದೆ? ಜನರ ಬೇಡಿಕೆಗಳೇನು ಎಂಬ ಸ್ಪಷ್ಟ ಅರಿವಿದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಿ ಅವರ ಮತಗಳನ್ನು ಕಾಂಗ್ರೆಸ್ ಗೆ ಹಾಕಿಸುವುದು ಸವಿತಾಬಾಯಿ ಗುರಿಯಾಗಿದೆ.
ನಾನು ನಿರಂತರ ಜನರ ಮಧ್ಯೆಯೇ ಇದ್ದು ಸೇವೆ ಮಾಡಿಕೊಂಡು ಬಂದವಳು. ಜನರಿಗಾಗಿ ಕೆಲಸ ಮಾಡಿದ್ದೆ. ಕೊರೊನಾ ವೇಳೆ ಎಲ್ಲರೂ ಮನೆಯಲ್ಲಿ ಕುಳಿತರೆ, ನಾನು ಸೋಂಕಿತರಿಗೆ ಬೆಡ್, ಚಿಕಿತ್ಸೆ ಕೊಡಿಸಲು ಓಡಾಡುತ್ತಿದ್ದೆ. ಹಾಗಾಗಿ ನನ್ನ ಕ್ಷೇತ್ರದಲ್ಲಿನ ಜನರಿಗೆ ಕಾಂಗ್ರೆಸ್ ಗೆ ಮತ ಹಾಕುವಂತೆ ಪ್ರೇರಿಪಿಸುತ್ತೇನೆ ಎನ್ನುತ್ತಾರೆ ಸವಿತಾಬಾಯಿ.
ಮೂರೂವರೆ ವರ್ಷಗಳಿಂದ ಕ್ಷೇತ್ರದಲ್ಲಿ ತಿರುಗಾಡುತ್ತಿದ್ದೇನೆ. ನನ್ನ ಶಕ್ತಿ ಮೀರಿ ಜನರ ಸೇವೆ ಮಾಡಿದ್ದು, ಅದು ಲೋಕಸಭೆ ಚುನಾವಣೆಯಲ್ಲಿ ಸಹಾಯವಾಗಲಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಬಯಸಿದ್ದೆ. ಟಿಕೆಟ್ ಸಿಗುವುದು, ಬಿಡುವುದು ಎರಡನೇ ವಿಚಾರ. ಮಹಿಳೆಯರ ಸ್ವಾಭಿಮಾನಕ್ಕಾಗಿ, ಗೌರವಕ್ಕಾಗಿ ಪ್ರಭಾ ಮಲ್ಲಿಕಾರ್ಜುನ್ ಗೆಲ್ಲಿಸಬೇಕು ಎಂಬುದಷ್ಟೇ ನನ್ನ ಗುರಿಯಾಗಿದೆ. ಪ್ರತಿದಿನ 2,000ಕ್ಕೂ ಅಧಿಕ ಜನ ಪ್ರತಿ ಹಳ್ಳಿಗಳಲ್ಲಿ ನನ್ನ ಜತೆ ಸೇರುತ್ತಿದ್ದರು. ಅದನ್ನೆಲ್ಲ ನೋಡುವಾಗ ಖುಷಿಯಾಗುತ್ತದೆ. ಜನರ ಪ್ರೀತಿಯನ್ನು ಕಂಡು ಬೆರಗಾಗಿದ್ದೇ. ಸೋಲು ಗೆಲುವಿನ ಬಗ್ಗೆ ತಲೆಕೆಡಿಸಿ ಕೊಳ್ಳದೇ ಕಣಕ್ಕೆ ಇಳಿದಿದ್ದೆ. ಆದರೆ ಸೋತೆ. ಈಗ ಪ್ರಭಾರವರನ್ನು ಗೆಲ್ಲಿಸುವೊದೆಂದೆ ನನ್ನ ಗುರಿ ಎನ್ನುತ್ತಾರೆ ಸವಿತಾಬಾಯಿ.
ಹಲವು ವರ್ಷಗಳಿಂದ ಯಾವ ಮಹಿಳೆಯೂ ಲೋಕಸಭೆಗೆ ಆಯ್ಕೆಯಾಗಿಲ್ಲ. ಈ ಬಾರಿ ಮಹಿಳೆಯನ್ನು ಆಯ್ಕೆ ಮಾಡುವ ಅವಕಾಶ ಜನರ ಮುಂದಿದೆ. ಪ್ರಭಾ ಮಲ್ಲಿಕಾರ್ಜುನ್ ಜನ ಒಬ್ಬ ಸಾಮಾನ್ಯ ಕುಟುಂಬದಿಂದ ಬಡ ಕುಟುಂಬದಿಂದ ಬಂದವರು. ಬಡತನ ಅಂದರೆ ಏನು ಎಂಬ ಅರಿವು ಅವರಿಗಿದೆ. ರೈತರ ಸಂಕಷ್ಟ ಗೊತ್ತಿದೆ. ಜನರ ಬಡತನ ಮತ್ತು ಸಮಸ್ಯೆಗಳ ಬಗ್ಗೆ ಗೊತ್ತಿರುವವರು ಸ್ಪಂದಿಸುವುದು ವಿಶೇಷ. ಕೊರೊನಾ ಕಾಲದಲ್ಲಿ ಶಾಮನೂರು ಕುಟುಂಬ ಮಾಡಿದ ಸೇವೆ ಜನರಿಗೆ ಅರಿವಿದೆ. ಈ ಎಲ್ಲ ಕಾರಣಗಳಿಂದ ಜನ ಪ್ರಭಾರನ್ನು ಆಯ್ಕೆ ಮಾಡಲಿದ್ದಾರೆ ಎನ್ನುತ್ತಾರೆ ನಟಿ.
ಶಾಮನೂರು ಅಪ್ಪಾಜಿ ಬ್ರಾಂಡ್
ದಾವಣಗೆರೆಯಲ್ಲಿ ಶಾಮನೂರು ಅಪ್ಪಾಜಿ ಅಂದ್ರೆ ಬ್ರಾಂಡ್. ಅದರ ಜತೆಗೆ ಪಕ್ಷ ಅಂದರೆ ಬ್ರ್ಯಾಂಡ್. ಬ್ರ್ಯಾಂಡ್ ಮೇಲೆ ಹಲವರು ತರಕಾರಿಗಳನ್ನು ಖರೀದಿಸುತ್ತಾರೆ. ಬ್ರ್ಯಾಂಡ್ ಇಲ್ಲದ ಆದರೆ, ತಾಜಾ ತರಕಾರಿ ಕಂಡರೆ ಜನರ ಬ್ರ್ಯಾಂಡ್ ನೋಡದೇ ತಮ್ಮ ಆರೋಗ್ಯಕ್ಕೆ ಯಾವುದು ಒಳ್ಳೆಯದು ಎಂದು ತೀರ್ಮಾನಿಸಿ ಅದನ್ನೇ ಆಯ್ಕೆ ಮಾಡುತ್ತಾರೆ. ಹಾಗಾಗಿ ಶಾಮನೂರು ಅಪ್ಪಾಜಿ ಬ್ರಾಂಡ್ ಇದ್ದು ಅವರ ಮನೆ ಸೊಸೆಯಾದ ಪ್ರಭಾ ಮಲ್ಲಿಕಾರ್ಜುನ್ ರನ್ನು ಆಯ್ಕೆ ಮಾಡಲಿದ್ದಾರೆ. ಜನ ನಮ್ಮ ಮನೆಯ ಮಗಳು ಎಂದು ಅಪ್ಪಿಕೊಳ್ಳಲಿದ್ದಾರೆ ಎಂಬುದು ಸವಿತಾಬಾಯಿ ಮನದಾಳದ ಮಾತು.
ಪ್ರಭಾ ಮಲ್ಲಿಕಾರ್ಜುನ್ ಎಂಪಿ ಆದರೆ ಮಾಯಕೊಂಡ ಅಭಿವೃದ್ಧಿ
ಕ್ಷೇತ್ರದ ಮನೆ ಮಗಳಾಗಿ, ಸಹೋದರಿಯಾಗಿ ಅಧಿಕಾರ ಇಲ್ಲದೆಯೇ ಕೆಲಸ ಮಾಡಿದ್ದೇನೆ. ಕ್ಷೇತ್ರದಾದ್ಯಂತ ಓಡಾಡಿದ್ದೇನೆ. ಎಲ್ಲಿ ಏನು ಕೆಲಸಗಳಾಗಬೇಕು ಎಂದು ಗೊತ್ತಿದೆ. ಶಿಕ್ಷಣ, ಉದ್ಯೋಗ, ನೀರು ಸಹಿತ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುವುದು ನನ್ನ ಕನಸು. ಅದಕ್ಕಾಗಿ ಪ್ರಭಾ ಮಲ್ಲಿಕಾರ್ಜುನ್ ಗೆಲ್ಲಬೇಕು ಎಂದು ಸವಿತಾಬಾಯಿ ಹೇಳುತ್ತಾರೆ. ಜನ ಪ್ರಭಾರವರನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವೂ ಇದೆ. ನಾನು ಜನರ ಮಧ್ಯೆ ಇದ್ದವಳು. ಹಾಗಾಗಿ ಅವರ ಪರ ಕೆಲಸ ಮಾಡುತ್ತೇನೆ, ಜತೆಗೆ ಇರುತ್ತೇನೆ. ಹೆಣ್ಣುಮಕ್ಕಳ ರಕ್ಷಣೆಗಾಗಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಆದ್ದರಿಂದ ಹಗಲಿರುಳು ಅವರ ಪರ ಕೆಲಸ ಮಾಡುತ್ತೇನೆ, ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಸವಿತಾಬಾಯಿ ವಾಗ್ದಾನ ಮಾಡಿದ್ದು, ಅವರ ಈ ಆಸೆ ಈಡೇರಲಿ.
![](https://davangerevijaya.com/wp-content/uploads/2024/07/IMG-20240716-WA0138.jpg)