ದಾವಣಗೆರೆ :  ದಾವಣಗೆರೆ ವಿಶ್ವವಿದ್ಯಾಲಯ ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳು ತಮಗೆ ವಿದ್ಯಾರ್ಥಿ ವೇತನ ಬರುತ್ತಿಲ್ಲವೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಕಷ್ಟವಾಗಿದೆ. ಆದ್ದರಿಂದ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಿಸಿಕೊಡುವಂತೆ ಎಂದು ಡಿಸಿ ವೆಂಕಟೇಶ್ ಗೆ ಮನವಿ ಸಲ್ಲಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ವ್ಯಾಸಂಗ ಮಾಡುತ್ತಿರುವ ನಾವುಗಳು ಕಳೆದ (2022-23) ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿವೇತನ ಪಡೆದಿಲ್ಲ. ಅಲ್ಲದೇ (ಎನ್‌ಎಸ್‌ಪಿ / ಎಸ್‌ಎಸ್‌ಪಿ) ಮಂಜೂರು ಆಗದೆ ಇರುವುದರಿಂದ ನಮ್ಮ ಶೈಕ್ಷಣಿಕ ಶುಲ್ಕವನ್ನು ಪಾವತಿಸಲು ತೊಂದರೆಯಾಗಿರುತ್ತದೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿಯೂ ವಿದ್ಯಾರ್ಥಿ ವೇತನ ಮಂಜೂರು ಆಗದೆ ಹೋದರೆ ನಮ್ಮ ಶೈಕ್ಷಣಿಕ ಅಭ್ಯಾಸಕ್ಕೆ ತೊಂದರೆಯುಂಟು ಆಗಲಿದೆ. ಆದ್ದರಿಂದ ತಾವುಗಳು ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಿ ಆದಷ್ಟು ಬೇಗನೆ ನಮ್ಮ ವಿದ್ಯಾರ್ಥಿವೇತನ ನಮಗೆ ಸಿಗುವ ಹಾಗೆ ಮಾಡಬೇಕೆಂದು  ಕೇಳಿಕೊಳ್ಳುತ್ತೇವೆ.

2022-23ನೇ ಸಾಲಿನಲ್ಲಿ ಮೊದಲನೇ ವರ್ಷಕ್ಕೆ ದಾಖಲಾದ ಸಂದರ್ಭದಲ್ಲಿ ಎನ್‌ಎಸ್‌ಪಿ ವಿದ್ಯಾರ್ಥಿವೇತನವು ಮುಕ್ತಾಯಗೊಂಡಿದ್ದು, ನಾವುಗಳು ಯಾರೂ ಪ್ರಸಕ್ತ ಸಾಲಿಗೆ ಎನ್‌ಎಸ್‌ಪಿ ವಿದ್ಯಾರ್ಥಿವೇತನಕ್ಕೆ ಸಾಧ್ಯವಾಗಿರುವುದಿಲ್ಲ. ಆದ್ದರಿಂದ ವಿದ್ಯಾರ್ಥಿವೇತನವನ್ನು ಸಹ ಕೊಡಿಸಿಕೊಡಬೇಕೆಂದು ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ  ದಾವಣಗೆರೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾದ ಇಮ್ರಾನ್, ಎ ಮತೀನ್, ಮಹಬೂಬ್ ಇದ್ದರು.

Share.
Leave A Reply

Exit mobile version