ಭದ್ರಾವತಿ: ಉಕ್ಕಿನ ನಗರಿಯಲ್ಲಿ ದಿನದಿಂದ ದಿನಕ್ಕೆ ಕ್ರೆöÊಂ ಹೆಚ್ಚಳವಾಗುತ್ತಿದ್ದು, ತಾಲ್ಲೂಕಿನ ಕಾರೇಹಳ್ಳಿ ಗ್ರಾಮದ ಬಳಿಯ ಯುವಕನೋರ್ವ ನನ್ನು ಕೊಲೆ ಮಾಡಿ ಖಾಲಿ ಜಾಗದಲ್ಲಿ ಎಸೆದುಹೋಗಿರುವ ಘಟನೆ ತಾಳೆಎಣ್ಣೆ ಪ್ಯಾಕ್ಟರಿ ಬಳಿ ಘಟನೆ ನಡೆದಿದೆ. ಮೈದೊಳಲು ಮಲ್ಲಾಪುರದ ನಿವಾಸಿ ಪರುಶುರಾಮ್(36) ಮೃತ ವ್ಯಕ್ತಿ.

ಈತನ ತಂಗಿ ಗಂಡನೇ ಪ್ರಕರಣದ ಪ್ರಮುಖ ಆರೋಪಿ ಎನ್ನುವುದು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ತರೀಕೆರೆ ತಾಲೂಕಿನ ಓರ್ವ ಸೇರಿದಂತೆ ಮೂವರನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ. ತಂಗಿ ಗಂಡ ನೀಡಿದ ಸುಪಾರಿ ಅನ್ವಯ ಆರೋಪಿಗಳು ಪರಶುರಾಮನ ಕುತ್ತಿಗೆ ಬಿಗಿದು ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ಶವ ಎಸೆದುಹೋಗಿದ್ದರು. ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಎಸೆದಿರುವುದನ್ನು ಗಮನಿಸಿದ ಸ್ಥಳೀಯ ರೈತರಿಗೆ ಮೃತದೇಹ ಕಾಣಿಸಿದೆ. ಜೊತೆಗೆ ಕೊಳೆತ ವಾಸನೆಯ ಬರುತ್ತಿತ್ತು. ತಕ್ಷಣ ಸ್ಥಳೀಯರು ಕಾಗದ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ….

ಘಟನೆ ವಿವರ

ತರೀಕೆರೆ ಎಂಸಿ ಹಳ್ಳಿ ನಿವಾಸಿ ಸುದೀಪ್ ಎಂಬಾತನಿಗೆ ಭದ್ರಾವತಿ ಮೀನುಗಾರರ ಬೀದಿಯ ಕೃಷ್ಣ ಎಂಬಾತ ಪರಿಚಯವಿದ್ದ. ಸುದೀಪ ಬಿನ್ ಪಳನಿ ಈತ ಮೊದಲು ಎಂಸಿ ಹಳ್ಳಿಯಲ್ಲಿದ್ದು ನಂತರ ಭದ್ರಾವತಿಗೆ ಶಿಫ್ಟ್ ಆಗ್ತಾನೆ. ಈ ವೇಳೆ ಸುದೀಪ್ ತನಗೆ ಪರಿಚಯಸ್ಥ ಗೊಂದಿ ನಿವಾಸಿ ಮಹಾಂತೇಶ್ ಅವರ ಪತ್ನಿಯ ಸಹೋದರ ಮತ್ತು ಮೈದೊಳಲು ಪರಮೇಶ್ವರ್ ದುಡಿಮೆ ಇಲ್ಲದೆ ಮನೆಮಂದಿಯವರಿಗೆಲ್ಲಾ ಹಣದ ವಿಚಾರದಲ್ಲಿ ಕಾಟಕೊಡುತ್ತಿರುವ ಬಗ್ಗೆ ಮೀನುಗಾರ ಬೀದಿಯ ಕೃಷ್ಣನ ಬಳಿ ಹೇಳಿಕೊಂಡಿರುತ್ತಾನೆ.

ಮೈದೊಳಲು ಮಲಾಪುರ ಗ್ರಾಮದ ವಾಸಿ ಪರಶುರಾಮ ಈತನನ್ನ ಕೊಲೆ ಮಾಡಿದರೆ 3 ಲಕ್ಷ ರೂ. ಕೊಡುವುದಾಗಿ ಮಹಂತೇಶ್ ಹೇಳಿಕೊಂಡಿರುವುದಾಗಿ, ಅದೂ ಅಲ್ಲದೆ ತನಗೆ ಕೆಲಸ ಇಲ್ಲದ ಕಾರಣ ಕೊಲೆಗೆ ಸಿದ್ದನಿರುವುದಾಗಿ ಸುದೀಪ್ ತಿಳಿಸಿದ್ದ. ಆತ ತಿಳಿಸಿದಂತೆ, ಡಿ.09 ರಂದು ಸುದೀಪ್, ಬೊಮ್ಮೇನಹಳ್ಳಿ ಅರುಣ್‌ಗೆ ಹೇಳಿದ್ದು, ಅರುಣ್ ಪರಶುರಾಮ್ ನನ್ನು ಹೊಳೆಹೊನ್ನೂರಿನ ಮೈದೊಳಲು ಮಲಾಪುರದಿಂದ ಭದ್ರಾವತಿಗೆ ಕರೆಯಿಸಿಕೊಂಡು, ಅಲ್ಲಿಂದ ಬಾರಂದೂರಿನ ವೈನ್ ಶಾಪ್ ಕಡೆ ಎಣ್ಣೆಹೊಡೆಯಲು ಹೋಗಿದ್ದಾರೆ.

ಕಾರೇಹಳ್ಳಿಯ ತಾಳೆ ಎಣ್ಣೆ ಪ್ರಾö್ಯಕ್ಟರಿಗೆ ಸೇರಿದ ತಾಳೆ ಮರಗಳಿರುವ ತೋಟದಲ್ಲಿ ಕಾಲುವೆಯ ಮೋರಿಕಟ್ಟೆಯ ಮೇಲೆ ಸುದೀಪ ಮತ್ತು ಅರುಣ ಕುಡಿಯುವಂತೆ ನಾಟಕ ಮಾಡಿ ಪರಶುರಾಮನಿಗೆ ಎಣ್ಣೆಯನ್ನು ಕುಡಿಸಿದ್ದಾರೆ. ಈ ಸಂದರ್ಭದಲ್ಲಿ ಸುದೀಪನು ತನ್ನ ಬಳಿ ಇದ್ದ ಟವೆಲ್ ನಿಂದ ಪರಶುರಾಮನ ಕುತ್ತಿಗೆ ಬಿಗಿದು ಕಾಲಿನಿಂದ ಮೈಕೈಗೆ ಒದ್ದು ಉಸಿರು ಕಟ್ಟಿಸಿ ಸಾಯಿಸಿ, ಪರಶುರಾಮನು ಸತ್ತ ಮೇಲೆ ಶವವನ್ನು ಕಾಲುವೆಗೆ ತಳ್ಳಿ ವಾಪಾಸ್ ಭದ್ರಾವತಿಗೆ ಬಂದಿದ್ದಾರೆ.

ಆದರೆ ಆ ರಾತ್ರಿ ಪರಶುರಾಮನ ಕೊಲೆ ಮಾಡಿದ್ದರಿಂದ ಸುದೀಪ್ ಗೆ ನಿದ್ದೆ ಬಾರದಿರುವ ಕಾರಣ ಸ್ನೇಹಿತ ಕೃಷ್ಣನಿಗೆ ಕರೆ ಮಾಡಿದ್ದಾನೆ. ನಿಮ್ಮ ಬಳಿ ಒಂದು ವಿಷಯ ಹೇಳ್ಕೊಬೇಕು ಎಂದು ಹೇಳಿದ್ದಾನೆ. ಎಣ್ಣೆ ಹೊಡೆದ ಗುಂಗಿನಲ್ಲಿ ಮಾತನಾಡುತ್ತಿರುವುದಾಗಿ ಕೃಷ್ಣ ನಿರ್ಲಕ್ಷಿಸಿದ್ದು, ಅಯ್ಯಪ್ಪ ಮಾಲೆ ಹಾಕಿದ್ದರಿಂದ ಸುದೀಪ್ ಮಾತಿನಬಗ್ಗೆ ಲಕ್ಷ್ಯ ನೀಡಿರಲಿಲ್ಲ.

ಪೂಜೆ ಪುನಸ್ಕಾರ ಮುಗಿಸಿದ್ದಾರೆ. ಈವೇಳೆ ಸುದೀಪ್ ಕೃಷ್ಣನನ್ನ ಹುಡುಕಿಕೊಂಡು ಬಂದು ಪರಶುರಾಮನ ಕೊಲೆ ವಿಚಾರ ಹೇಳಿದ್ದಾನೆ. ಕೊಲೆ ಪ್ರಕರಣ ಮುಚ್ಚಿಟ್ಟರೆ ತಪ್ಪಾಗುತ್ತದೆ ಎಂದು ತಿಳಿದು ಕಾರೇಹಳ್ಳಿ ಯಾವ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತೆ ಎಂದು ತಿಳಿದು ಪೇಪರ್ ಟೌನ್ ಪೊಲೀಸ್ ಠಾಣೆಗೆ ಕೃಷ್ಣ ದೂರು ನೀಡಿದ್ದಾರೆ. ದೂರಿನ ಆಧಾರದ ಮೇರೆಗೆ ಮೂವರನ್ನ ಬಂಧಿಸಲಾಗಿದೆ.

 

Share.
Leave A Reply

Exit mobile version