ಭದ್ರಾವತಿ: ಉಪ ವಿಭಾಗದ ನೇತೃತ್ವದಲ್ಲಿ, ಐಟಿಬಿಪಿ ಮೀಸಲು ಪಡೆ ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಭದ್ರಾವತಿ ನಗರದಲ್ಲಿ ಪೊಲೀಸ್ ಪಥ ಸಂಚಲನ (ರೂಟ್ ಮಾರ್ಚ್) ಹಮ್ಮಿಕೊಳ್ಳಲಾಗಿತ್ತು.
ನಗರದ ಗಾಂಧಿ ವೃತ್ತದಿಂದ ಆರಂಭಗೊಂಡು ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ಹೊಳೆಹೊನ್ನೂರು ವೃತ್ತ, ಅನ್ವರ್ ಕಾಲೋನಿ, ಸಂತೆ ಮೈದಾನ, ಹೊಸಮನೆ ಮುಖ್ಯ ರಸ್ತೆಯಿಂದ ಗಾಂಧಿ ವೃತ್ತಕ್ಕೆ ಬಂದು ಮುಕ್ತಾಯ ಮಾಡಲಾಯಿತು.
ಪಥ ಸಂಚನದಲ್ಲಿ ಸಿಪಿಐ ಶೀಶೈಲ, ಐಟಿಬಿಪಿ ಮೀಸಲು ಪಡೆಯ ರಾಜೀವ್,ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು, ಐಟಿಬಿಪಿ ಮೀಸಲು ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.