ಭದ್ರಾವತಿ: ಚೈತನ್ಯಫೌಂಡೇಶನ್ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿಗೆ ಭದ್ರಾವತಿ ತಾಲ್ಲೂಕಿನ ಯರೇಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ಭಾಜನರಾಗಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರ್ಜಿಹಾಕಿ ಪ್ರಶಸ್ತಿ ಪಡೆಯಲು ವಿರೋಧಿಸುವ ತಾವು ಸರ್ಕಾರ ಕೊಡುವ ಯಾವ ಪ್ರಶಸ್ತಿಗೂ ಅರ್ಜಿ ಹಾಕಿಲ್ಲ, ಹಾಗಾಗಿ ಪ್ರಶಸ್ತಿಯೂ ಬಂದಿಲ್ಲ.ಇದುವರೆಗೂ ವಿವಿಧ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸುವ ಪ್ರಮುಖ 3 ಪ್ರಮುಖ ಪ್ರಶಸ್ತಿಗಳು ಕಾರ್ಯ ಕ್ಷಮತೆ ಹೆಚ್ಚಿಸಿವೆ ಎಂದರು.

ಹೊಸದುರ್ಗ ಸ್ನೇಹಿತರೆ ನೀಡಿದ ಕನ್ನಡ ಗಾರುಡಿಗ ಪ್ರಶಸ್ತಿ, ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ತು ನೀಡಿದ ಕನ್ನಡ ಸೇವಾರತ್ನ ಪ್ರಶಸ್ತಿಗಳು ಸಾಹಿತ್ಯ ಸೇವೆಗೆ ಸಂದ ಪ್ರಶಸ್ತಿಗಳಾಗಿವೆ.

ಅದೇ ರೀತಿ ಚೈತನ್ಯಫೌಂಡೇಶನ್ ವತಿಯಿಂದ ಪಡೆದ ಪ್ರಶಸ್ತಿಯು ಶಿಕ್ಷಣ ಕ್ಷೇತ್ರದ ಸಾಧನೆಗೆ ಗುರುತಿಸಿ ಗೌರವಿಸಿದ ಪ್ರಶಸ್ತಿಯಾಗಿದೆ ಎಂದು ತಿಳಿಸಿದ್ದಾರೆ.

Share.
Leave A Reply

Exit mobile version