![](https://davangerevijaya.com/wp-content/uploads/2024/07/IMG-20240719-WA01231.jpg)
ದಾವಣಗೆರೆ : ಎಲ್ಲರೂ ರೈತ ನಮ್ಮ ದೇಶದ ಬೆನ್ನಲುಬು ಅಂತಾರೆ…ಆದರೆ ಅವನ ಬೆನ್ನುಲುಬು ಮುರಿದರೆ ಕೈ ಹಿಡಿಯೋರು ಯಾರು ಇಲ್ಲ…ಇಂತಹ ಸಂದರ್ಭದಲ್ಲಿ ರೈತರ ಒಡನಾಡಿಯಾಗಿರುವ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ.ಬಿ.ಕೊಟ್ರೇಶ್ ದಾವಣಗೆರೆ ರೈತರ ಹೋರಾಟಕ್ಕೆ ಧುಮುಕಿದ್ದಾರೆ.
ಈಗಾಗಲೇ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟ ಸರಕಾರ, ಭದ್ರಾ ನೀರನ್ನು ದಾವಣಗೆರೆಗೆ ಬಿಡಲು ಮೀನಮೇಷ ಎಣಿಸುತ್ತಿದೆ. ಶಿವಮೊಗ್ಗಕ್ಕೆ ಹೆಚ್ಚು ನೀರನ್ನು ಬಿಟ್ಟು, ದಾವಣಗೆರೆಗೆ ಅಲ್ಪ ನೀರನ್ನು ಕೊಟ್ಟು ಕಾಡಾ ಮೋಸ ಮಾಡುತ್ತಿದೆ. ದಾವಣಗೆರೆಗೂ ಭದ್ರಾ ನೀರಿಗೂ ಈ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ. ಆದರೆ ಇಲ್ಲಿನ ರೈತರಿಗೆ ಮೋಸವಾದರೆ ಸ್ಥಳೀಯ ರಾಜಕಾರಣಿಗಳು ತುಟಿ ಬಿಚ್ಚದೇ ಇರುವುದು ದುರುದೃಷ್ಟಕರ. ಈ ಕಾರಣದಿಂದ ರೈತರ ಪರ ಕೆ.ಬಿ.ಕೊಟ್ರೇಶ್ ಸರಕಾರದ ಕಣ್ಣು ತೆರೆಸಲು ಮುಂದಾಗಿದ್ದಾರೆ.
![](https://davangerevijaya.com/wp-content/uploads/2024/07/IMG-20240715-WA0352.jpg)
ಕೆ.ಬಿ.ಕೊಟ್ರೇಶ್ ಮಾತನಾಡಿ, ಈ ಹೋರಾಟಕ್ಕೆ ನಾನು ಒಬ್ಬನೇ ಕಾರಣವಲ್ಲ. ನನ್ನ ಜತೆ ಭಾರತೀಯ ರೈತ ಒಕ್ಕೂಟವಿದೆ. ನಾನು ಅವರ ಕೈ ಜೋಡಿಸಿದ್ದೇನೆ. ಸರಕಾರ ಜೈ ಜವಾನ್ ಜೈ ಕಿಸಾನ್ ಎನ್ನುತ್ತದೆ. ಆದರೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಎಣ್ಣೆ ಬಿಡುತ್ತಿದೆ ಎನ್ನುತ್ತಾರೆ ಕೊಟ್ರೇಶ್.
ಹೋರಾಟಕ್ಕೆ ಧುಮುಕಿದ್ದೇನೆ
ರೈತನೇ ದಾವಣಗೆರೆ ಬೆನ್ನೆಲುಬು. ಇಂತಹ ರೈತನಿಗೆ ನಾನು ಯಾವತ್ತೂ ಹೋರಾಟ ಮಾಡುತ್ತೇನೆ. ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಜ.10 ರಿಂದ ಮತ್ತು ಬಲದಂಡೆ ನಾಲೆಗೆ ಜ.20 ರಿಂದ ನೀರು ಹರಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದ್ದು ನಮ್ಮ ರೈತರು ಎಲ್ಲಿ ಹೋಗಬೇಕು ಎಂದು ಕೊಟ್ರೇಶ್ ಪ್ರಶ್ನಿಸುತ್ತಾರೆ.
ಆನ್ ಅಂಡ್ ಆಫ್ ಪದ್ದತಿಗೆ ವಿರೋಧ
ಎಡದಂಡೆ ನಾಲೆಗೆ ಜ.10 ರಿಂದ ನೀರು ಹರಿಸಲಾಗುತ್ತಿದ್ದು, ಆನ್ ಮತ್ತು ಆಫ್ ಮಾದರಿ ಅನುಸರಿಸಲಾಗುವುದು. ಜ.10 ರಿಂದ 16 ದಿನ ಆನ್ ಮತ್ತು 15 ದಿನ ಆಫ್, ನಂತರ 17 ದಿನ ಆನ್, 15 ದಿನ ಆಫ್, 18 ದಿನ ಆನ್ 15 ದಿನ ಆಫ್ ಮತ್ತು 20 ದಿನ ಆನ್, 15 ದಿನ ಆಫ್ ಇರುತ್ತದೆ. ಇದರಿಂದ ರೈತರಿಗೆ ಅನುಕೂಲವಾಗುವುದಿಲ್ಲ. ಅದರಲ್ಲೂ ಕೊನೆ ಭಾಗದ ರೈತರಿಗೆ ನೀರು ಸಿಗೋದಿಲ್ಲ ಎಂಬುದು ಕೊಟ್ರೇಶ್ ಅಭಿಪ್ರಾಯ.
ದಾವಣಗೆರೆಯವರೇ ಕಾಡಾ ಅಧ್ಯಕ್ಷರಾಗಲಿ
ದಾವಣಗೆರೆಯಲ್ಲಿ ಶೇಕಡಾ 70ರಷ್ಟು ಭಾಗ ದಾವಣಗೆರೆಯಲ್ಲಿದೆ. ಇಲ್ಲಿನವರೇ ಕಾಡಾ ಅಧ್ಯಕ್ಷರಾದರೆ ಸಮಸ್ಯೆಗಳ ಬಗ್ಗೆ ಅರಿವಿರುತ್ತದೆ. ರೈತರ ಕಷ್ಟಗಳು ಗೊತ್ತಿರುತ್ತವೆ. ಜಿಲ್ಲೆಯವರೇ ಕಾಡಾ ಅಧ್ಯಕ್ಷರಾದರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಸಮರ್ಥವಾಗಿ ಮಂಡನೆ ಮಾಡಬಹುದು. ಆಗ ನಮ್ಮ ಹಕ್ಕು ಭದ್ರಾ ಡ್ಯಾಂ ನೀರು ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ದಾವಣಗೆರೆ ಭಾಗದವರೇ ಅಧ್ಯಕ್ಷರಾಗಲಿ ಎಂದು ಕೊಟ್ರೇಶ್ ಹೇಳುತ್ತಾರೆ.
![](https://davangerevijaya.com/wp-content/uploads/2024/07/IMG-20240716-WA0138.jpg)