ದಾವಣಗೆರೆ ; ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ‌ ಜಿ.ಎಂ.ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಅವರ‌ ಹೆಸರು ಪ್ರಕಟಿಸಿರುವುದನ್ನು ಖಂಡಿಸಿ ಶಿರಮಗೊಂಡನಹಳ್ಳಿಯಲ್ಲಿರುವ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಅವರ ನಿವಾಸದಲ್ಲಿ ಸಭೆ ನಡೆಸಿದ ಸಿದ್ದೇಶ್ವರ ವಿರೋಧಿ ಬಣ ಗೋ‌ ಬ್ಯಾಕ್ ಸಿದ್ದೇಶ್ ಘೋಷಣೆ ಕೂಗಿದರು. ಇದೇ ಸಂದರ್ಭದಲ್ಲಿ  ಹೈ ಡ್ರಾಮ ಕೂಡ ನಡೆಯಿತು.

ಸಿದ್ದೇಶ್ ಹಠಾವೋ ದಾವಣಗೆರೆ ಬಚಾವೋ ಘೋಷಣೆ ಕೂಗಿದ ವಿರೋಧಿ ಬಣದ ಕಾರ್ಯಕರ್ತರು,  ಅಭ್ಯರ್ಥಿ ಬದಲಾವಣೆ ಮಾಡಬೇಕೆಂದು ಪಕ್ಷದ ಹೈ ಕಮಾಂಡ್‌ಗೆ ಆಗ್ರಹಿಸಿದರು. 

ಈ ವೇಳೆ ಕಾರ್ಯಕರ್ತನೊಬ್ಬಮೈ ಮೇಲೆ‌‌  ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ  ಯತ್ನಿಸಿದ. ಇತರೆ ಕಾರ್ಯಕರ್ತರು ಅದನ್ನು ತಡೆದರು. ಈ ಸಂದರ್ಭದಲ್ಲಿ ಆ ಕಾರ್ಯಕರ್ತ ರವಿಕುಮಾರ್ ಗೆ ಜೈ, ಗೋ ಬ್ಯಾಕ್ ಗಾಯಿತ್ರಿ ಸಿದ್ದೇಶ್ವರ, ಸಿದ್ದೇಶ್ ಹಟಾವೋ, ದಾವಣಗೆರೆ ಬಚಾವೋ ಎಂಬ ಘೋಷಣೆ ಕೂಗಿದ. ಈ ವೇಳೆ ಡಾ.ರವಿ, ಮಾಜಿ ಶಾಸಕ ಗುರು ಸಿದ್ದನಗೌಡ ಆತನ ತಲೆ ಮೇಲೆ ನೀರು ಹಾಕಿ. ಇಂತಹ ಕೆಲಸವನ್ನು ಯಾರು ಮಾಡಬಾರದು. ಇದರಿಂದ ನಮಗೆ ಕೆಟ್ಟ ಹೆಸರು ಬರುತ್ತದೆ. ನಮ್ಮ ಹೋರಾಟ ಯಾವಾಗಲೂ ಶಾಂತಿಯುತವಾಗಿ ಇರಬೇಕು. ಆಗ ಮಾತ್ರ ಜಯ ಸಾಧ್ಯ ಎಂದು ಮಾಜಿ ಶಾಸಕ ಗುರುಸಿದ್ದನಗೌಡ ಹೇಳಿದರು.

Share.
Leave A Reply

Exit mobile version