![](https://davangerevijaya.com/wp-content/uploads/2024/07/IMG-20240719-WA01231.jpg)
ನಂದೀಶ್ ಭದ್ರಾವತಿ, ಚಿತ್ರದುರ್ಗ
ಬಡವರು ಮಕ್ಕಳು ಬೆಳಿಬಾರ್ದಾ ಎಂದು ರೆಬೆಲ್ ಆಗಿದ್ದ ಮೊಳಕಾಲ್ಮೂರು ಕಾಂಗ್ರೆಸ್ ಮುಖಂಡ ಯೋಗೀಶ್ ಬಾಬುಗೆ ದ್ರಾಕ್ಷಿರಸ ಮಂಡಳಿಯ ಅಧ್ಯಕ್ಷ ಸ್ಥಾನ ದೊರೆತಿದೆ.
![](https://davangerevijaya.com/wp-content/uploads/2024/07/IMG-20240715-WA0352.jpg)
ಯೋಗೀಶ್ ಬಾಬು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಅವರಿಗೆ ಟಿಕೆಟ್ ತಪ್ಪಿದ ವೇಳೆ ಈ ಮೇಲಿನ ಮಾತನ್ನು ಹೇಳಿದ್ದರು. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿ ಇವರು ತಮ್ಮದೇ ಆದ ಹೆಸರನ್ನು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮತ್ತು ಹಲವಾರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಡಾ ಬಿ ಯೋಗೀಶ್ ಬಾಬು ಬಂಡೆದಿದ್ದರು. ಅಲ್ಲದೇ ಈಸಂದರ್ಭದಲ್ಲಿ ಆಗ ತಾನೆ ಕಾಂಗ್ರೆಸ್ ಸೇರಿದ್ದ ಎನ್.ವೈ.ಗೋಪಾಲಕೃಷ್ಣ ಪ್ರತಿಕ್ರಿಯಿಸಿ, ಅವರ ಕೋಪ, ಅಸಮಾಧಾನ ಸಹಜವೇ ಎಂದಿದ್ದರು. ನಂತರ ಮಾತನಾಡಿದ್ದ ಯೋಗೀಶ್ ಬಾಬು ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದರೂ ಅವರನ್ನು ಕಡೆಗಣಿಸಿ ಕೇವಲ ಒಂದುವಾರದ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಎನ್ ವೈ ಗೋಪಾಲಕೃಷ್ಣಗೆ ಟಿಕೆಟ್ ನೀಡಲಾಗಿದೆ. ಹೈಕಮಾಂಡ್ ನಿರ್ಧಾರದಿಂದ ತೀವ್ರವಾಗಿ ನೊಂದಿದ್ದೆ ಕ್ಷೇತ್ರದ ಬಿಜಿ ಕೆರೆ ಗ್ರಾಮದಲ್ಲಿ ಮಾತಾಡುವಾಗ ಗದ್ಗದಿತರಾದ ಯೋಗೀಶ್ ಹೇಳಿದ್ದರು. ನಂತರ ಶಾಸಕ ಗೋಪಾಲಕೃಷ್ಣ ಪರ ಪ್ರಚಾರ ಮಾಡಿದ್ದರು.
ನಾನಾ ಭಾಗಗಳಿಗೆ ಭೇಟಿ
ಕಾಂಗ್ರೆಸ್ ಮುಖಂಡರಾದ ಡಾ.ಬಿ ಯೋಗೇಶ್ ಬಾಬು ದ್ರಾಕ್ಷರಸ ಮಂಡಳಿ ನೂತನವಾಗಿ ಅಧ್ಯಕ್ಷಯಾದ ನಂತರ ಇ ಮೊದಲನೇ ಬಾರಿಗೆ ತಾಲೂಕಿನ ನಾನಾ ಭಾಗಗಳಿಗೆ ಭೇಟಿ ನೀಡಿದ್ದರು. ಮೊಳಕಾಲ್ಮುರು ಪಟ್ಟಣಕ್ಕೆ ಭೇಟಿ ನೀಡಿದ ವೇಳೆ ಡಾ. ಬಿ ಯೋಗೇಶ್ ಬಾಬುರವರಿಗೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಬೃಹತ್ ಹಾರಗಳನ್ನು ಹಾಕಿ ಸನ್ಮಾನಿಸುವ ಮೂಲಕ ಭರ್ಜರಿಯಾಗಿ ಸ್ವಾಗತ ನೀಡಿದ್ದರು.
ನಾನಾ ಕಡೆ ಪೂಜೆ
ಪಟ್ಟಣದಲ್ಲಿರುವ ನುಂಕಮಲೆ ಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರೇಹಳ್ಳಿ,ಗೌರಸಮುದ್ರ,ಬಿಜಿಕೆರೆ ಸೇರಿದಂತೆ ನಾನಾ ಗ್ರಾಮಗಳಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಭೇಟಿ ಮಾಡಿದ್ದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ ಬಿ ಯೋಗೇಶ್ ಬಾಬುರವರಿಗೆ ಟಿಕೆಟ್ ತಪ್ಪಿದಾಗ ಅವರ ಅಭಿಮಾನಿಗಳಲ್ಲಿ ಸಹಜವಾಗಿಯೇ ಸಾಕಷ್ಟು ನಿರಾಸೆ ಉಂಟಾಗಿತ್ತು. ಆದ್ರೆ ಇವರ ಪಕ್ಷ ನಿಷ್ಠೆ ಹಾಗೂ ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಗುರ್ತಿಸಿ ಇದೀಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಿರುವುದು ಇವರ ಅಭಿಮಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ಸಂಭ್ರಮ ಉಂಟು ಮಾಡಿದೆ.
ಮಾ.11 ಕ್ಕೆ ಪದಗ್ರಹಣ
ಬೆಂಗಳೂರಿನ ಕಬ್ಬನ್ ಉದ್ಯಾನವನದ ಬಳಿ ಇರುವ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಕಚೇರಿಯಲ್ಲಿ ಮಾ.11 ಕ್ಕೆ ಕಾಂಗ್ರೆಸ್ ನಾಯಕ ಯೋಗಿಶ್ ಬಾಬು ದ್ರಾಕ್ಷಿರಸ ಮಂಡಳಿಯ ಅಧ್ಯಕ್ಷರಾಗಿ ಪದಗ್ರಹಣ ಮಾಡುವರು. ಒಟ್ಟಾರೆ ಮೊಳಕಾಲ್ಮೂರಿನಲ್ಲಿ ರೆಬೆಲ್ ಆಗಿದ್ದ ಯೋಗಿಶ್ ಬಾಬುಗೆ ಮಾತಿನಂತೆ ಬಡವರ ಮಕ್ಕಳನ್ನು ಬೆಳೆಸಿದೆ.
![](https://davangerevijaya.com/wp-content/uploads/2024/07/IMG-20240716-WA0138.jpg)