![](https://davangerevijaya.com/wp-content/uploads/2024/07/IMG-20240719-WA01231.jpg)
ನಂದೀಶ್ ಭದ್ರಾವತಿ,
ದಾವಣಗೆರೆ: ನಮಗೆ ಕಷ್ಟ ಬಂದ್ರೆ, ಹಣ ಬೇಕಾಗುತ್ತೇ, ಆದರೆ ಇಂದಿನ ದಿನಗಳಲ್ಲಿ ಆಧಾರ್ ಇಲ್ಲದೇ ಯಾರು ಹಣ ಕೊಡುತ್ತಾರೆ ಅಲ್ವ..ಆದರೆ ಆ್ಯಪ್ ಗಳಲ್ಲಿ ಯಾವುದೇ ದಾಖಲೆ ಇಲ್ಲದೇ ಹಣ ಕೊಡುತ್ತಾರೆ..ನಾವು ಕೂಡ ಖುಷಿಯಿಂದ ತೆಗೆದುಕೊಳ್ಳುತ್ತೇವೆ…ಆದರೆ ಅದರ ಹಿಂದೆ ಇರುವ ಕರಾಳ ದಂಧೆ ಯಾರಿಗೂ ಗೊತ್ತಿಲ್ಲ…ಆ ಒಂದು ಕಥೆಯನ್ನು
ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ವಿವರವಾಗಿ ವಿವರಿಸಿದ್ದು ಹೀಗೆ….
![](https://davangerevijaya.com/wp-content/uploads/2024/07/IMG-20240715-WA0352.jpg)
ಕೊರೊನಾ ಇಡೀ ಪ್ರಂಪಚವನ್ನೇ ಅಲುಗಾಡಿಸಿದೆ, ಹೀಗಿರುವಾಗ ಎಲ್ಲರದ್ದು ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು.. ದುಡಿಮೆ ಇಲ್ಲ, ಯಾರು ಕೂಡ ಹಣ ಕೊಡೋರು ಇರಲಿಲ್ಲ. ಆಗ ಜನರು ಆ್ಯಪ್ ನಲ್ಲಿ ಸಿಗುವ ಲೋನ್ ಪಡೆದರು. ಹಣನೂ ಸಿಕ್ತು, ಕಷ್ಟನೂ ಬಗೆಹರಿಯುತು ಎಂದು ಅಂದುಕೊಂಡಾತನಿಗೆ ನಂತರ ಕಾದಿದ್ದೇ ಶಾಖ್.
ಬೆಂಗಳೂರಿನಲ್ಲಿ ನಡೆದ ಘಟನೆಯಾದರೂ ಏನು ಗೊತ್ತಾ?
ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಸಿಸಿಬಿ ಪೊಲೀಸ್ ಎಸ್ಪಿ ಯತೀಶ್ ಚಂದ್ರ ಬಳಿ ಹೋಗುತ್ತಾನೆ…ಸರ್ ನಾನು ಸಾಲ ತೀರಿಸಬೇಕೆಂದಿದ್ದೇನೆ, ದಯವಿಟ್ಟು ಕಾಪಾಡಿ ಎಂದು ಗೋಗೆರೆಯುತ್ತಾನೆ…ಆಗ ಎಸ್ಪಿ ಯತೀಶ್ ಚಂದ್ರ ಕೊಟ್ಟಿರೋ ಹಣ ಕೊಡೋದೇ ಕಷ್ಟ ಅಂತ ಇರುವ ಈ ಕಾಲದಲ್ಲಿ, ನೀನು ತೆಗೆದುಕೊಂಡ ಹಣ ಕಟ್ಟುತ್ತೇನೆ ಅಂತೀಯಾ ಹಣ ಕಟ್ಟು ಅಂತ ಎಸ್ಪಿ ಯತೀಶ್ ಚಂದ್ರ ಹೇಳುತ್ತಾರೆ...ಆದರೆ ಹಣ ತೆಗೆದುಕೊಂಡಾತ ಸರ್ ಹಣ ಕಟ್ಟೋದು ದೊಡ್ಡ ವಿಷಯವಲ್ಲ, ನನಗೊಂದು ಸಮಸ್ಯೆಯಾಗಿದೆ ಅಂತ ಹೇಳುತ್ತಾನೆ…
ಸಾಲ ತೆಗೆದುಕೊಂಡ ವ್ಯಕ್ತಿಗೆ ಆದ ಸಮಸ್ಯೆಯಾದ್ರೂ ಏನು?
ವ್ಯಕ್ತಿಯೊಬ್ಬ ಕೊರೊನಾ ಸಮಯದಲ್ಲಿ ಆ್ಯಪ್ ನಲ್ಲಿ ಸಾಲ ತೆಗೆದುಕೊಂಡಿದ್ದ..ಬಳಿಕ ಆ ವ್ಯಕ್ತಿಯ ಮೊಬೈಲ್ ನಲ್ಲಿನ ಗ್ಯಾಲರಿಯಲ್ಲಿದ್ದ ಎಲ್ಲ ಪೋಟೋಗಳನ್ನು ಸಾಲ ಕೊಟ್ಟ ನಕಲಿ ಆ್ಯಪ್ ಹ್ಯಾಕ್ ಮಾಡಿಕೊಂಡಿದೆ..ಮೊದಲಿಗೆ ಆತನ ಪೋಟೋ ತೆಗೆದುಕೊಂಡ ನಕಲಿ ಆ್ಯಪ್ ಕಂಪನಿ ಬೆತ್ತಲೆ ಇರುವ ಹೆಣ್ಣಿನ ಜತೆ ಆತನ ಪೋಟೋ ಹಾಕಿ ಕಳಿಸಿದೆ..ನೀನು ನಮಗೆ ಐವತ್ತು ಸಾವಿರ ಕೊಡಬೇಕು. ಇಲ್ಲದೇ ಹೋದರೆ ನಿನ್ನ ಮೊಬೈಲ್ ನಲ್ಲಿರುವ ಎಲ್ಲ ಸಂಬಂಧಿಕರಿಗೆ, ಕಾಟ್ಯಾಂಕ್ಟ್ ಲಿಸ್ಟ್ ನಲ್ಲಿರುವ ಎಲ್ಲ ನಂಬರ್ ಗೆ ನೀನು ಹುಡುಗಿಯ ಜತೆ ಬೆತ್ತಲೆ ಆಗಿರುವ ಪೋಟೊವನ್ನು ಕಳಿಸುತ್ತೇವೆ ಎಂದು ಹೆದರಿಸಿದ್ದಾರೆ..ಆತ ಮರ್ಯಾದೆಗೆ ಅಂಜಿ ಐವತ್ತು ಸಾವಿರ ಹಣ ಹಾಕುತ್ತಾನೆ…ಆದರೂ ಬಿಡದ ಹ್ಯಾಕರ್ಸ್ ಮತ್ತೇ ಇದೇ ರೀತಿ ಮಾಡಿದಾಗ ಆತ ಸಿಸಿಬಿ ಎಸ್ಪಿ ಯತೀಶ್ ಚಂದ್ರ ಬಳಿ ಬಂದು ತನ್ನ ಕಥೆ ಹೇಳುತ್ತಾನೆ.
ಇದು ಹೇಗೆ ಆಯ್ತು?
ಸಾಲ ತೆಗೆದುಕೊಂಡ ವ್ಯಕ್ತಿ ಸಾಲ ತೆಗೆದುಕೊಳ್ಳಬೇಕಾದರೆ ಆ್ಯಪ್ ನಲ್ಲಿ ಕೇಳುವ ಎಲ್ಲ ಪರ್ಮಿಷನ್ ಗಳಿಗೆ ಓಕೆ ಕೊಟ್ಟಿದ್ದ. ಇದನ್ನೇ ಬಳಸಿಕೊಂಡ ಚೈನಾ ಹ್ಯಾಕರ್ಸ್ ಆತನ ಮೊಬೈಲ್ ನಲ್ಲಿದ್ದ ಹೆಸರುಗಳು, ಪೋಟೋಗಳನ್ನು ಬಳಸಿ ಕೊಂಡು ಹ್ಯಾಕರ್ಸ್ ಸಾಲ ತೆಗೆದುಕೊಂಡ ವ್ಯಕ್ತಿ ಬಳಿ ಹೆಚ್ಚು ಹಣ ಪೀಕಿದ್ದ. ಒಟ್ಟಾರೆ ಕಷ್ಟ ಅಂತ ಆ್ಯಪ್ ಮೊರೆ ಹೋದ ವ್ಯಕ್ತಿ, ತಾನು ಮಾಡಿದ ತಪ್ಪಿನಿಂದ ಎರಡು ಪಟ್ಟು ಹಣ ಕಟ್ಟಿದ್ದ..ಹಾಗಾಗಿ ನೀವು ಹುಷಾರ್….
![](https://davangerevijaya.com/wp-content/uploads/2024/07/IMG-20240716-WA0138.jpg)