ದಾವಣಗೆರೆ: ಇ-ಸ್ವತ್ತು ಮಾಡಿಸಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಇಬ್ಬರು ಪಾಲಿಕೆ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ‌

ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ (ಪ್ರಭಾರ) ಬಿ. ಅನ್ನಪೂರ್ಣಾ ಹಾಗೂ ಮಹಾನಗರ ಪಾಲಿಕೆ ವಲಯ–1ರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಲಕ್ಕಪ್ಪ ವೈ. ಲೋಕಾಯುಕ್ತ ಬಲೆಗೆ ಬಿದ್ದವರು.

ಇವರು ಹಿಟ್ಟಿನ ಗಿರಣಿ ಮನೆಯ ಇ–ಸ್ವತ್ತು ಮಾಡಿಕೊಡಲು ರೂ. 15,000 ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್  ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ನಗರದ ಬೇತೂರು ರಸ್ತೆಯ ಇಮಾಂ ನಗರದ 4ನೇ ಕ್ರಾಸ್‌ ನಿವಾಸಿ ಚಂದ್ರಶೇಖರ ಬಿ. ಅವರು ಹಿಟ್ಟಿನ ಗಿರಣಿ ಮನೆಯ ಇ–ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದ್ದರು. ಇ–ಸ್ವತ್ತು ನೀಡಲು  ರೂ. 15,000 ಲಂಚ ನೀಡುವಂತೆ ಲಕ್ಕಪ್ಪ ವೈ. ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಚಂದ್ರಶೇಖರ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಈ ಸಂದರ್ಭದಲ್ಲಿ ರೂ. 15,000 ಲಂಚ ಕೊಡಲು ಬಂದಾಗ ಕಂದಾಯ ಅಧಿಕಾರಿ ಬಿ. ಅನ್ನಪೂರ್ಣಾ ರೂ. 25,000ಕ್ಕೆ ಬೇಡಿಕೆ ಇಟ್ಟಿದ್ದರು. ಆಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪೂರೆ, ಲೋಕಾಯುಕ್ತ ಡಿವೈಎಸ್‌ಪಿ ಕಲಾವತಿ, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಎಚ್‌.ಎಸ್‌. ರಾಷ್ಟ್ರಪತಿ, ಪ್ರಭು ಬಿ. ಸೂರಿನ, ಸಿಬ್ಬಂದಿ ಆಂಜನೇಯ, ಸುಂದರೇಶ್‌, ಆಶಾ, ಮಲ್ಲಿಕಾರ್ಜುನ, ಲಿಂಗೇಶ್‌, ಧನರಾಜ್‌, ಮಂಜುನಾಥ್‌, ಗಿರೀಶ್‌, ಬಸವರಾಜ, ಜಂಷಿದ್ ಖಾನಂ ಅವರ ತಂಡ ಕಾರ್ಯಾಚರಣೆ ನಡೆಸಿದೆ.

Share.
Leave A Reply

Exit mobile version