Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?

20 May 2025

ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ

19 May 2025

ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಗೆ ಸಿಕ್ಕಿತ್ತು ಈ ಪದಕ..ಅದು ಯಾಕಾಗಿ?

18 May 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»ಪ್ರಮುಖ ಸುದ್ದಿ»ಸಿಇಒ, ಡಿಸಿ, ಎಸ್ಪಿ ಶ್ರಮಕ್ಕೆ ಸಿಕ್ತು ಪ್ರತಿಫಲ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತದಾನ
ಪ್ರಮುಖ ಸುದ್ದಿ

ಸಿಇಒ, ಡಿಸಿ, ಎಸ್ಪಿ ಶ್ರಮಕ್ಕೆ ಸಿಕ್ತು ಪ್ರತಿಫಲ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತದಾನ

ಜೂ.4 ರಂದು ಫಲಿತಾಂಶ, ಅಭ್ಯರ್ಥಿ ಎದೆಯಲ್ಲಿ ಢವ, ಢಬ
davangerevijaya.comBy davangerevijaya.com8 May 2024No Comments2 Mins Read
Facebook WhatsApp Twitter
Share
WhatsApp Facebook Twitter Telegram

 ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಮತದಾನ ಪ್ರಮಾಣ ಭಾರಿ ಹೆಚ್ಚಳ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಯಶಸ್ಸಿಗೆ ಕಾರಣರಾದ ಅಧಿಕಾರಿಗಳ ತಂಡ, ಮತದಾರರಿಗೆ ಜಿಲ್ಲಾಡಳಿತ ಅಭಿನಂದನೆ ಸಲ್ಲಿಸಿದೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ಎಂವಿ ವೆಂಕಟೇಶ್ ಮಾತನಾಡಿ,  ದಾವಣಗೆರೆ ಲೋಕಸಭಾ ಕ್ಷೇತ್ರ ಹರಪನಹಳ್ಳಿ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುತ್ತದೆ. ಇಲ್ಲಿ ಒಟ್ಟು 1946 ಮತಗಟ್ಟೆಗಳಿಂದ 851990 ಪುರುಷ, 857117 ಮಹಿಳಾ, 137 ಇತರೆ ಮತದಾರರು ಸೇರಿ 1709244 ಮತದಾರರಿದ್ದರು.

 ಮಂಗಳವಾರ ಬೆಳಗ್ಗೆ ಅಣಕು ಮತದಾನ ನಂತರ 7 ಗಂಟೆಯಿಂದ ಸ್ವಲ್ಪ ಮಂದಗತಿಯಿಂದ ಆರಂಭವಾದ ಮತದಾನ 9 ಗಂಟೆಯವರೆಗೆ ಶೇ 9.13 ರಷ್ಟು ಮತದಾನವಾಗಿತ್ತು. ಇದು 11 ಗಂಟೆಯ ವೇಳೆಗೆ ಏರುಗತಿಯಲ್ಲಿ ಸಾಗಿ ಶೇ 23.77 ರಷ್ಟು ದಾಖಲಾಯಿತು.

ಮಧ್ಯಾಹ್ನ ಬಿಸಿಲಿನಲ್ಲಿಯು ಸರತಿ ಸಾಲಿನಲ್ಲಿ ನಿಂತ ಜನರಿಂದ ಮತದಾನ ಚುರುಕುಗೊಂಡು ಮಧ್ಯಾಹ್ನ 1 ಗಂಟೆಗೆ ಮತದಾನ ಪ್ರಮಾಣ ಶೇ 42.27 ಕ್ಕೇರಿತು. ಮಧ್ಯಾಹ್ನ 3 ಗಂಟೆಗೆ 57.34 ರಷ್ಟು ದಾಖಲಿಸಿ ಸಂಜೆ 5 ಗಂಟೆಗೆ ಶೇ 70.94 ರಷ್ಟು ಮತದಾನವಾಗಿತ್ತು. ಅಂತಿಮ ಹಂತದ ಮತದಾನ ಪ್ರಮಾಣವನ್ನು ನಿರೀಕ್ಷಿಸಲಾಗಿದ್ದು 2019 ರ ಚುನಾವಣೆಯಲ್ಲಿ ದಾಖಲಾಗಿದ್ದ ಶೇ 72.96 ರಷ್ಟು ಮತದಾನ ಪ್ರಮಾಣದ ದಾಖಲೆಯನ್ನು ಹಿಂದಿಕ್ಕಿ ಗಣನೀಯ ಮತಪ್ರಮಾಣ ಏರಿಕೆಯಾಗಲಿದೆ ಎಂದು ಆಶಿಸಲಾಗಿದೆ.

 ಚುನಾವಣಾ ಪ್ರಕ್ರಿಯೆಯಲ್ಲಿ ಕಳೆದ ಮೂರು, ನಾಲ್ಕು ತಿಂಗಳುಗಳಿಂದ ತಂಡಗಳು ನಿರಂತರ ಕೆಲಸ ಮಾಡುತ್ತಾ ಬರಲಾಯಿತು. ಪ್ರಮುಖವಾಗಿ ಮತದಾರರ ನೊಂದಣಿ, ಮತದಾರರ ಜಾಗೃತಿ ಕಾರ್ಯಕ್ರಮಗಳ ಮೂಲಕ ಮತದಾರರಿಗೆ ಮಾಹಿತಿ, ಅರಿವು ಮೂಡಿಸುವ ಕೆಲಸವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್ ರವರು ನಿರಂತರ ಸ್ವೀಪ್ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಿ ಮತದಾರರು ಜಾಗೃತರನ್ನಾಗಿಸಲು ಶ್ರಮಿಸಿದ್ದಾರೆ. ಮತ್ತು ಸುಧೀರ್ಘವಾದ ಚುನಾವಣೆಯಲ್ಲಿ ಸಂಪೂರ್ಣ ಶಾಂತಯುತ ಚುನಾವಣೆ ನಡೆಸಲು ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸಿದ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಮತ್ತು ಪೊಲೀಸ್ ಇಲಾಖೆ, ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರು, ಚುನಾವಣಾ ತಂಡಗಳಲ್ಲಿ ಕೆಲಸ ಮಾಡುವ ಮೂಲಕ ಮಾದರಿ ನೀತಿ ಸಂಹಿತೆ ಜಾರಿಗೆ ತರಳು ದಿನದ ಮೂರು ಪಾಳಿಯಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕರ್ತವ್ಯವನ್ನು ಮೆಚ್ಚಲಾಗಿದೆ.

ಮತದಾನ ದಿನ ಅಂದಾಜು 8996 ಮತದಾನ ಸಿಬ್ಬಂದಿಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಚುನಾವಣೆಯನ್ನು ಯಶಸ್ವಿಯಾಗುವಂತೆ ಮಾಡಿದ್ದಾರೆ.  ಚುನಾವಣಾ ಆಯೋಗದ ನಿಯಮಗಳನ್ನು ಚಾಚು ತಪ್ಪದೇ ಪಾಲನೆ ಮಾಡುವ ಮೂಲಕ ಮತದಾನದಲ್ಲಿ ಭಾಗಿಯಾದ ಮತದಾರರು ಹಾಗೂ ದಾವಣಗೆರೆ ಜಿಲ್ಲೆಯ ನಾಗರಿಕರ ಸಹಕಾರ ಬಹಳ ದೊಡ್ಡದಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮನ್ನಣೆ ನೀಡಿದ ಜನತೆಗೆ ಅಭಿನಂದನೆಗಳನ್ನು ತಿಳಿಸಲಾಗಿದೆ.

ಮತ ಎಣಿಕೆ ಜೂನ್ 4

ಲೋಕಸಭಾ ಮತದಾನ ಎಣಿಕೆಯು ಜೂನ್ 4 ರಂದು ಬೆಳಗ್ಗೆ 8 ರಿಂದ ತೋಳಹುಣಸೆ ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿಯಲ್ಲಿ ನಡೆಯಲಿದ್ದು ಅಲ್ಲಿಯವರೆಗೆ ಲೋಕಸಭಾ ಕ್ಷೇತ್ರದ 30 ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿರಲಿದ್ದು ಮತ ಎಣಿಕೆ ಪ್ರತಿ ಕ್ಷೇತ್ರದಲ್ಲಿ ಒಟ್ಟು 14 ಟೇಬಲ್‍ಗಳಲ್ಲಿ ನಡೆಯಲಿದೆ.

=====

CEO DC Featured SP reward for hard work Top News
Share. WhatsApp Facebook Twitter Telegram
davangerevijaya.com
  • Website

Related Posts

ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?

20 May 2025

ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ

19 May 2025

ಭಾನುವಾರದ ನಿಮ್ಮ ರಾಶಿ ಭವಿಷ್ಯ ಏನಿದೆ ತಪ್ಪದೇ ನೋಡಿ?

18 May 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,631 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,206 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,065 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,580 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
ಪ್ರಮುಖ ಸುದ್ದಿ

ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?

By davangerevijaya.com20 May 20250

*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫* *🕉️ದ್ವಾದಶ ರಾಶಿಗಳ ದಿನ ಭವಿಷ್ಯ#ತಾರೀಕು#20/05/2025 ಮಂಗಳವಾರ🕉️* *01,✨ಮೇಷ ರಾಶಿ✨* 📖,ಆರ್ಥಿಕ…

ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ

19 May 2025

ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಗೆ ಸಿಕ್ಕಿತ್ತು ಈ ಪದಕ..ಅದು ಯಾಕಾಗಿ?

18 May 2025

ಅಪಘಾತದಲ್ಲಿ ಕುಟುಂಬವನ್ನೇ ಕಳೆದುಕೊಂಡ ಕ್ರಷರ್ ಮಾಲೀಕ : ನರಳಿ, ನರಳಿ ಮೃತಪಟ್ಟ ಒಂದು ವರ್ಷ, ನಾಲ್ಕುವರ್ಷದ ಮಗು…ಹಾಗಾದ್ರೆ ಆ ಘಟನೆ ಹೇಗಾಯ್ತು?

18 May 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?

20 May 2025

ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ

19 May 2025

ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಗೆ ಸಿಕ್ಕಿತ್ತು ಈ ಪದಕ..ಅದು ಯಾಕಾಗಿ?

18 May 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,631 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,206 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,065 Views

Subscribe to Updates

Get the latest creative news from SmartMag about art & design.

Recent Posts
  • ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?
  • ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ
  • ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಗೆ ಸಿಕ್ಕಿತ್ತು ಈ ಪದಕ..ಅದು ಯಾಕಾಗಿ?
  • ಅಪಘಾತದಲ್ಲಿ ಕುಟುಂಬವನ್ನೇ ಕಳೆದುಕೊಂಡ ಕ್ರಷರ್ ಮಾಲೀಕ : ನರಳಿ, ನರಳಿ ಮೃತಪಟ್ಟ ಒಂದು ವರ್ಷ, ನಾಲ್ಕುವರ್ಷದ ಮಗು…ಹಾಗಾದ್ರೆ ಆ ಘಟನೆ ಹೇಗಾಯ್ತು?
  • ಭಾನುವಾರದ ನಿಮ್ಮ ರಾಶಿ ಭವಿಷ್ಯ ಏನಿದೆ ತಪ್ಪದೇ ನೋಡಿ?
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.