Author: davangerevijaya.com

ಬೆಂಗಳೂರು: ರಾಜ್ಯದಲ್ಲಿ ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಡಿ.ಎಸ್.ರಮೇಶ್, ಬೆಂಗಳೂರು ಜಲಮಂಡಳಿ ಚೇರ್‌ಮನ್ ಡಾ ರಾಮ ಪ್ರಸಾತ್ ಮನೋಹರ್ ವಿ ಸೇರಿ ಸೇರಿದಂತೆ 11 ಐಎಎಸ್ ಅಧಿಕಾರಿಗಳನ್ನು ಸರಕಾರ ವರ್ಗಾವಣೆ ಮಾಡಿದೆ. 1) ಹುದ್ದೆಗಾಗಿ ಕಾಯುತ್ತಿದ್ದ 2004ರ ಕರ್ನಾಟಕ ಕೆಡರ್‌ನ ಐಎಎಸ್ ಅಧಿಕಾರಿ ಸತ್ಯವತಿ ಜಿ. ಅವರನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಬೆಂಗಳೂರಿನ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿದೆ. ಇಲ್ಲಿದ್ದ ಐಎಎಸ್ ಅಧಿಕಾರಿ ಎನ್. ಮಂಜುನಾಥ ಪ್ರಸಾದ್ ಅವರನ್ನು ಈ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. 2) ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಮಿಷನರ್ 2010ರ ಬ್ಯಾಚ್‌ನ ಕರ್ನಾಟಕ ಕೆಡರ್‌ನ ಅಧಿಕಾರಿ ಶಿವಕುಮಾರ್ ಕೆಬಿ ಅವರನ್ನು ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಇಲಾಖೆಯ ಕಮಿಷನರ್ ಆಗಿ ನಿಯೋಜಿಸಲಾಗಿದೆ. ಇಲ್ಲಿ ಅಧಿಕಾರಿಯಾಗಿದ್ದ ರಣದೀಪ್ ಡಿ ಅವರನ್ನು ಇಲ್ಲಿಂದ ಬಿಡುಗಡೆ ಮಾಡಲಾಗಿದೆ. 3) ಶಿವಕುಮಾರ್ ಕೆಬಿ ಅವರನ್ನು ಸದ್ಯ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ…

Read More

ಶಿವಮೊಗ್ಗ : ದಾವಣಗೆರೆ ಚಿತ್ರದುರ್ಗ ಹಾಲು ಒಕ್ಕೂಟ (ಶಿಮುಲ್) ಈ ಸಾಲಿನ ಮೊದಲ ಆಡಳಿತ ಮಂಡಳಿಯ ಸಭೆ ನೂತನ ಅಧ್ಯಕ್ಷ *ಗುರುಶಕ್ತಿ ವಿಧ್ಯಾದರ್* ಅವರ ಅಧ್ಯಕ್ಷತೆಯಲ್ಲಿ  ನಡೆಯಿತು ರೈತರ ಮತ್ತು ಹಾಲು ಸಂಘಗಳ ಜೊತೆಗೆ ಸಿಬ್ಬಂದಿಗಳ ಬಗ್ಗೆ ಹಲವಾರು ವಿಚಾರದ ಚರ್ಚೆ ನಡೆಸಿದ  ಶಿಮುಲ್ ನಿರ್ದೇಶಕ ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ *ಡಾ. ಆರ್ ಎಂ ಮಂಜುನಾಥಗೌಡ* ಅವರು ಅನೇಕ ಮಾರ್ಗದರ್ಶನವನ್ನು ನೀಡಿದರು. ಈಗಿನ ಕಾಲದ ಅನೇಕ ರಾಜಕೀಯ ರಂಗದಲ್ಲಿ  ತಮ್ಮ ಕುಟುಂಬ ತಮ್ಮ ಜಾತಿ ಕೂಲ ಅಂತ ಜಗಳ ಗುದ್ದಾಟಾ ಮಾಡುವ ವ್ಯವಸ್ಥೆಯಲ್ಲಿ ತನ್ನ ಜೊತೆಗೆ ಇರುವ ಎಲ್ಲಾ ಜಾತಿ ಎಲ್ಲಾ ಜನಾಂಗದ ಪ್ರಮುಖರನ್ನು ಅಯಾ ಕ್ಷೇತ್ರದಲ್ಲಿ ಬೆಳಸುವ ನಮ್ಮ ನಾಯಕರು ಗುರುಶಕ್ತಿ ವಿಧ್ಯಾದರ್ ರಾಗಿದ್ದಾರೆ ಎಂದರು.ಒಟ್ಟಾರೆ ರಾಜ್ಯ ಬ್ರಾಹ್ಮಣ ಸಮಾಜದ ಪ್ರಮುಖರು ಎರಡು ಬಾರಿ ಪ್ರತಿಷ್ಠಿತ ಈ ಒಕ್ಕೂಟಕ್ಕೆ  ಅಧ್ಯಕ್ಷರು ಅಧಿಕಾರ ಹಿಡಿಯಲು ಕಾರಣ ಮಂಜುನಾಥ್ ಗೌಡ ರಾಗಿದ್ದು, ಅವರ ಅನುಭವದ…

Read More

ದಾವಣಗೆರೆ: ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಾಳ ಗ್ರಾಮದಲ್ಲಿ ನಡೆದಿದ್ದು, ಬಿಜೆಪಿ ನಾಯಕ ಜಿ.ಎಸ್.ಅನಿತ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಅಸ್ವಸ್ಥಗೊಂಡವರನ್ನು ಚನ್ನಗಿರಿ, ಶಿವಮೊಗ್ಗದ ಮೆಗ್ಗಾನ್, ಭದ್ರಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಧೈರ್ಯ ತುಂಬಿ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ ಮಕ್ಕಳ ಆರೋಗ್ಯ ವಿಚಾರಿಸಿ ನಿಮ್ಮ ಜತೆ ನಾನಿದ್ದೇನೆ ಎಂದರು. ಗ್ರಾಮದಲ್ಲಿ ಮೊದಲು ನಾಲ್ಕು ಜನರಲ್ಲಿ ವಾಂತಿ-ಬೇಧಿ ಕಾಣಿಸಿಕೊಂಡಿದ್ದು, ಬಳಿಕ ಗ್ರಾಮದ 25 ಜನರು ವಾತಿ-ಭೇದಿ ಬಳಲಿ ಅಸ್ವಸ್ಥಗೊಂಡಿದ್ದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಗ್ರಾಮದ ಏಳು ಜನರು ಅಸ್ವಸ್ಥಗೊಂಡು ಗುಣಮುಖರಾದ ಬೆನ್ನಲ್ಲೇ ಇದೀಗ ಜೋಳದಾಳು ಗ್ರಾಮದಲ್ಲಿ ಕುಲುಷಿತ ನೀರು ಸೇವಿಸಿ 25 ಜನರು ಅಸ್ವಸ್ಥಗೊಂಡಿದ್ದಾರೆ. ಜೋಳದಾಳು ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ,…

Read More

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಭದ್ರಾವತಿ ಮಹಿಳೆಯನ್ನು ತನ್ನ ಗಂಡನೇ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ  ಕೆಂಗೇರಿ ಉಪನಗರದ ವಿಶ್ವೇಶ್ವರಯ್ಯ ಲೇಔಟ್ 1ನೇ ಬ್ಲಾಕ್ ನಲ್ಲಿ ನಡೆದಿದೆ.‌ ಕೆಂಗೇರಿ ಉಪನಗರದ ವಿಶ್ವೇಶ್ವರಯ್ಯ ಲೇಔಟ್ 1ನೇ ಬ್ಲಾಕ್ ನಿವಾಸಿ ನವ್ಯಾಶ್ರೀ (26) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಆರೋಪಿ ಪತಿ ಕಿರಣ್‌ಕುಮಾರ್ (30) ಎಂಬಾತನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭದ್ರಾವತಿಯ ನವ್ಯಾಶ್ರೀ ಮತ್ತು ಚಿಕ್ಕಬಳ್ಳಾಪುರ ಮೂಲದ ಕಿರಣ್‌ಕುಮಾರ್ 3 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಡ್ಯಾನ್ಸರ್ ಮತ್ತು ಕೊರಿಯೊಗ್ರಾರ್ ಆಗಿದ್ದ ನವ್ಯಾಶ್ರೀ, ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದಳು. ಕಿರಣ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದು ಪತ್ನಿಯ ನಡತೆ ಶಂಕಿಸಿ ಕತ್ತುಕೊಯ್ದು ಕೊಲೆ ಮಾಡಿದ ಪತಿ ಕೆಂಗೇರಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಕಾರಣವೇನು? ಅನಿಲ್ ಎಂಬಾತ ಜತೆಗೆ ನವ್ಯಾಶ್ರೀಗೆ ಸ್ನೇಹ ಬೆಳೆದಿತ್ತು. ಇದನ್ನು ತಿಳಿದ ಕಿರಣ್ ಕೆರಳಿ ಪತ್ನಿಯೊಂದಿಗೆ ಆಗಾಗ್ಗೆ ಜಗಳ…

Read More

ದಾವಣಗೆರೆ : ಸಂಸದೆ ಪ್ರಭಾ ಮಲ್ಲಿಕಾರ್ಜುನ್ ವಿರುದ್ಧ ಸಿಡಿದೆದ್ದ ವಿನಯ್ ಕುಮಾರ್ ರನ್ನು ಕಾಂಗ್ರೆಸ್ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ ವಿನಯ್ ಕುಮಾರ್ ಪಕ್ಷೇತರರಾಗಿ ಸ್ಪರ್ಧಿಸಿದ್ದು, ಕೈ ನಾಯಕಿಗೆ ನಡುಕ ಉಂಟು ಮಾಡಿದ್ದರು. ಸ್ವತಃ ಸಿಎಂ ಸಿದ್ದರಾಮಯ್ಯ ಬಂದು ವಿನಯ್ ಕುಮಾರ್ ಗೆ ಮತ ಹಾಕಬೇಡಿ ಎಂದಿದ್ದರು. ಹೀಗಿದ್ದರೂ ವಿನಯ್ ಕುಮಾರ್ ನಲವತ್ತು ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಇವೆಷ್ಟು ಕಾಂಗ್ರೆಸ್ ಮತಗಳಾಗಿದ್ದವು. ಅಲ್ಲದೇ ಬಿಜೆಪಿಗೆ ವರದಾನವಾಗಿತ್ತು. ಸಿಎಂ ಸಿದ್ದರಾಮಯ್ಯ ವಿರುದ್ದ ಆರೋಪ ಬಂದಾಗ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಮಲ್ಲಿಕಾರ್ಜುನ್ ಸಿಎಂ ಪರ ಇಲ್ಲ ಎಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಈ ನಡುವೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜಪ್ಪ ಕೂಡ ಪತ್ರಿಕಾಗೋಷ್ಠಿ ನಡೆಸಿ ಪಕ್ಷದಿಂದ ಉಚ್ಚಾಟನೆ ಮಾಡುವುದಾಗಿ ಹೇಳಿದ್ದರು. ಈ ಬೆನ್ನೇಲ್ಲೆ ಪಕ್ಷ ವಿನಯ್ ಕುಮಾರ್ ರನ್ನು ಉಚ್ಚಾಟನೆ ಮಾಡಿದೆ.  ಪಕ್ಷದ ಕಾರ್ಯಕರ್ತರು, ನಾಯಕರುಗಳಾಗಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬಾರದೆಂದು ಪತ್ರಿಕಾ ಪ್ರಕಟಣೆ ಮೂಲಕ ಪಕ್ಷದ ಚೇರಮನ್ ಕೆ.ರೆಹಮಾನ್ ಖಾನ್…

Read More

ಶಿವಮೊಗ್ಗ: ಕಿಮ್‌ಸ್ಟಾರ್ ಉಡುಪಿ ವತಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ. ಕೆ.ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಬೆಂಗಳೂರು ಚಿತ್ರೋತ್ಸವ ಕಾರ್ಯಕ್ರಮದಲ್ಲಿ ಶಿವಮೊಗ್ಗದ ರೋಟರಿ ಜಿ.ವಿಜಯಕುಮಾರ್ ಅವರಿಗೆ “ಡಾ. ಪುನೀತ್ ರಾಜ್‌ಕುಮಾರ್ ರಾಜರತ್ನ ಸೇವಾ ಪ್ರಶಸ್ತಿ” ಪ್ರದಾನ ಮಾಡಲಾಯಿತು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಅವರು ದಶಕಗಳಿಂದ ಸಮಾಜಮುಖಿ ಹಾಗೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಡವರಿಗೆ ಆರ್ಥಿಕ ಸಹಾಯ, ಕುಡಿಯುವ ನೀರಿನ ವ್ಯವಸ್ಥೆ, ಶಿಕ್ಷಣ, ಆರೋಗ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸೈಕ್ಲಿಂಗ್‌ನಲ್ಲಿ ಗಿನ್ನೆಸ್ ಲಿಮ್ಕಾ ದಾಖಲೆ ಮಾಡಿದ್ದಾರೆ. 47 ಬಾರಿ ರಕ್ತದಾನ ಮಾಡಿದ್ದಾರೆ. ರೋಟರಿ ವಿಜಯ್‌ಕುಮಾರ್ ಅವರ ದಶಕಗಳ ಸಾಮಾಜಿಕ ಸೇವೆಯನ್ನು ಗುರುತಿಸಿ ಡಾ. ಪುನೀತ್‌ರಾಜ್ ಕುಮಾರ್ ರಾಜರತ್ನ ಸೇವಾ ಪ್ರಶಸ್ತಿ ನೀಡಲಾಯಿತು. ಪುನೀತ್‌ರಾಜ್ ಪುತ್ಥಳಿ, ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು. ಖ್ಯಾತ ಜನಪದ ಗಾಯಕ ಗುರುರಾಜ್ ಹೊಸಕೋಟಿ, ಚಲನಚಿತ್ರ ನಿರ್ದೇಶಕ ಲೋಹಿತ್ ರಾಣ, ಚಿತ್ರನಟಿ ರಕ್ಷಾ, ಕಿಮ್‌ಸ್ಟಾರ್ ಉಡುಪಿ ಸಂಸ್ಥೆ ಅಧ್ಯಕ್ಷ ಕೆ.ಜಯಶೀಲನ್, ಉಡುಪಿ ಕುಕ್ಕೇಹಳ್ಳಿಯ ಆದಿಶಕ್ತಿ ಮೂಕಾಂಬಿಕಾ ಶ್ರೀ…

Read More

ಶಿವಮೊಗ್ಗ: ನಗರದ ಉದ್ಯಮಿಗಳಿಗೆ ಅನುಕೂಲ ಕಲ್ಪಿಸುವುದು ಹಾಗೂ ವ್ಯಾಪಾರದ ಲೈಸೆನ್ಸ್ ಪ್ರಕ್ರಿಯೆ ಸುಲಭಗೊಳಿಸುವ ಆಶಯದಿಂದ ಮೇಳ ಆಯೋಜಿಸಿದ್ದು, ಶಿವಮೊಗ್ಗ ನಗರದ ಉದ್ಯಮಿಗಳು ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ಕವಿತಾ ಯೋಗಪ್ಪನವರ್ ಹೇಳಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಸಹಯೋಗದಲ್ಲಿ ನಾಲ್ಕನೇ ಬಾರಿ ಆಯೋಜಿಸಿದ್ದ “ಟ್ರೇಡ್ ಲೈಸೆನ್ಸ್ ಮೇಳ” ಉದ್ಘಾಟಿಸಿ ಮಾತನಾಡಿ, ಲೈಸೆನ್ಸ್ ಪಡೆಯಲು ಉದ್ಯಮಿಗಳಿಗೆ ಆಗುವ ತೊಂದರೆಗಳನ್ನು ಪರಿಹರಿಸುವ ಆಶಯದಿಂದ ಮೇಳ ನಡೆಸುತ್ತಿದ್ದು, ದಾಖಲೆಗಳ ಜತೆಯಲ್ಲಿ ಅರ್ಜಿ ಸಲ್ಲಿಸಿ ಕೂಡಲೇ ಲೈಸೆನ್ಸ್ ಪಡೆಯಬೇಕು. ಇದರಿಂದ ಉದ್ಯಮಿಗಳಿಗೆ ಸಮಯ ಉಳಿತಾಯವಾಗಲಿದೆ ಎಂದು ತಿಳಿಸಿದರು. ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಂಘದ ಸಂಯುಕ್ತ ಆಶ್ರಯದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೆರೋ ಕ್ಯಾಸ್ಟ್ ಸಭಾಂಗಣದಲ್ಲಿ ಆಯೋಜಿಸಲಾದ ಟ್ರೇಡ್ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷ ಎನ್ ಗೋಪಿನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೂರು…

Read More

ಶಿವಮೊಗ್ಗ : ಕಾಸ್ಮೋ ಕ್ಲಬ್ ನಲ್ಲಿ ನಡೆದ ಅವಾರ್ಡ್ಸ್ ನೈಟ್ ಮತ್ತು ಮೆಂಬರ್ ಶಿಪ್ ಡೆವಲಪ್ ಮೆಂಟ್ ಅಂಡ್ ಪಬ್ಲಿಕ್ ಇಮೇಜ್ ಕಾರ್ಯಕ್ರಮದಲ್ಲಿ 2023-24 ನೇ ಸಾಲಿನ ಸೇವಾ ಕಾರ್ಯಗಳನ್ನು ಗುರುತಿಸಿ 16 ಜಿಲ್ಲಾ ಪ್ರಶಸ್ತಿಗಳನ್ನು ರೋಟರಿ ಕ್ಲಬ್ ಸೆಂಟ್ರಲ್ ಪಡೆದುಕೊಂಡಿದೆ. ಮ್ಯಾನೇಜ್ ಮೆಂಟ್ ಆಫ್ ಫೈನಾನ್ಸ್ ಗ್ಲೋಬಲ್ ಗ್ರ್ಯಾಂಡ್ ಕ್ಲಬ್ ಬುಲೆಟ್ ರೋಟರಿ ಇಂಡಿಯಾ ಆಫ್ ಬಳಕೆ ಫ್ಯಾಮಿಲಿ ಆಫ್ ರೋಟರಿ ಕೆರಿಯರ್ ಅಂಡ್ ಸ್ಕಿಲ್ ಡೆವಲಪ್ ಮೆಂಟ್ ದಿಸ್ ಇಸ್ ಪ್ರಿವೆನ್ಷನ್ ಅಂಡ್ ಟ್ರೀಟ್ ಮೆಂಟ್, ಬೇಸಿಕ್ ಎಜುಕೇಶನಲ್ ಲಿಟರಸಿ, ಎನ್ವಿರಾನ್ ಮೆಂಟ್, ಇಂಟರ್ ನ್ಯಾಷನಲ್ ಅಂಡರ್ ಸ್ಟ್ಯಾಂಡಿಂಗ್, ಇಂಟರಾಕ್ಟ್ ಯೂತ್ ವೆಲ್ಫೇರ್,ವ್ಯಾಲ್ಯೂ ಬೇಸಡ್ ಎಜುಕೇಶನ್, ಸಾಯಿಲ್ ಫರ್ಟಿಲಿಟಿ ಕನ್ಸರ್ವೇಷನ್, ಡ್ರೈ ಸೇಫ್ ಅಂಡ್ ಸೇವೆ ಲೈಫ್ 2023-24 ನೇ ಸಾಲಿನ ಅಧ್ಯಕ್ಷರಾದ ಶಿವರಾಜ್ ಹಾಗೂ ಕಾರ್ಯದರ್ಶಿ ಕಿರಣ್ ಕುಮಾರ್ ಅವರನ್ನು ರೋಟರಿ ಜಿಲ್ಲೆಯಿಂದ ಗುರುತಿಸಲಾಗಿದೆ. ಮತ್ತು ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸೆಂಟ್ರಲ್ ವತಿಯಿಂದ 26 ರಿಜಿಸ್ಟ್ರೇಷನ್…

Read More

ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 27 ಕಾರ್ಯಕಾರಿ ಸಮಿತಿ ಸಾಮಾನ್ಯ ಸದಸ್ಯ ಸ್ಥಾನಗಳಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಚುನಾವಣೆ ನಡೆದಿದ್ದು, ಫಲಿತಾಂಶ ಪ್ರಕಟವಾಗಿದೆ. ಒಟ್ಟು 57 ಜನರು ರಾಜ್ಯಾದ್ಯಂತ ಸ್ಫರ್ಧಿಸಿದ್ದರು. ಇದರಲ್ಲಿ 27 ಜನ ಜಯಗಳಿಸಿದರು. ಎನ್.ವಿ.ಈರೇಶ್ 13448, ಅಂಗಡಿ ಶಂಕರಪ್ಪ-13377, ಕರೇಗೌಡ-12167, ಸಂಗನಗೌಡ ಪಾಟೀಲ್ 12061, ಗುರಪ್ಪಾ ಚನ್ನಬಸಪ್ಪ ಮೆಟಗುಡ್ಡ 11893, ಉಮೇಶ್‌ಬಣಕಾರ್ 11849, ನಟರಾಜ್ ಸಾಗರನಹಳ್ಳಿ-11805, ಚಂದ್ರಶೇಖರ್ ಎಸ್.ಶೆಟ್ಟರ್-11707, ಪ್ರವೀಣ್ ಹನುಮಟ್ಟಿ-11678, ಡಿ.ವಿ.ಗಿರೀಶ್‌ಕುಮಾರ್-11535, ಎಂ.ಆರ್.ಪೂರ್ಣೇಶ್‌ಮೂರ್ತಿ 11488, ಶಶಿಕಾಂತ್ ಬಿ.ಪಾಟೀಲ್-11482, ಸಂತೋಷ್‌ಕುಮಾರ್ ಪಾಟೀಲ್-11321, ಸಿ.ಮಲ್ಲಿಕಾರ್ಜುನ್‌ಯ್ಯ-11292, ಎಚ್.ಕೆ.ಚನ್ನಪ್ಪ-11240, ರಾಜಶೇಖರ್ ಬಸವಣ್ಣೆಪ್ಪ-11172, ನಾಗಾರಾಜ್-11165, ಮೋಹನ್ ವೀರಭದ್ರಪ್ಪ ಅಸುಂಡಿ-10911, ಬಸವರಾಜಪ್ಪ-10867, ಎನ್.ನಂಜುಡೇಶ್-10823, ಎಸ್.ವಿರೂಪಾಕ್ಷಯ್ಯ-10757, ಶರಣಪ್ಪಬಸಪ್ಪ ಹ್ಯಾಟಿ-10628, ಶಂಭುಲಿAಗಪ್ಪ ನಿಜಪ್ಪ-10555, ಸಂದೀಪ್ ಅಣಬೇರು-10489, ಎ.ಪಿ.ವಿಜಯ್‌ಕುಮಾರ್-10338, ಆರ್.ಹರೀಶ್ ಆರಾಧ್ಯ-10236, ಸೋಮನಾಥ್ ರೆಡ್ಡಿ-10139 ಮತಗಳನ್ನು ಪಡೆದಿದ್ದಾರೆ ಎಂದು ಅಖಿಲ ಭಾರತ ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಮ್.ರೇಣುಕಾಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ ಬೆಂಬಲಿತ ಎಂಬಂತೆ ಪ್ಯಾನೆಲ್ ಗಳು ರಚನೆಗೊಂಡಿದ್ದವು.ಇದಕ್ಕೆ ಪುಷ್ಟಿ ಎಂಬಂತೆ 27 ಜನರ ಪ್ಯಾನಲ್ ನವರು…

Read More

*✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕* *🤍ದಿನ ಭವಿಷ್ಯ 28/08/2024 ಬುಧವಾರ🤍* *01🌹,⚜️,ಮೇಷ ರಾಶಿ*⚜️ ಹಣದ ವಿಚಾರದಲ್ಲಿ ಏರುಪೇರು ಹೆಚ್ಚಾಗುತ್ತದೆ. ವ್ಯಾಪಾರಗಳು ಸ್ವಲ್ಪಮಂದಗತಿಯಲ್ಲಿಸಾಗುತ್ತವೆಉದ್ಯೋಗದಲ್ಲಿಸಹೋದ್ಯೋಗಿಗಳಿಂದ,ಅನಿರೀಕ್ಷಿತಸಮಸ್ಯೆಗಳು,ಉಂಟಾಗುತ್ತವೆ .ಕುಟುಂಬದ, ಸದಸ್ಯರ ವರ್ತನೆಯಿಂದ ಮಾನಸಿಕಅಶಾಂತಿಉಂಟಾಗುತ್ತದೆ. ಸಾಲಗಾರರಿಂದ ಒತ್ತಡ ಹೆಚ್ಚಾಗುತ್ತದೆ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ವಹಿಸಬೇಕು, ಅದೃಷ್ಟದ ದಿಕ್ಕು:ದಕ್ಷಿಣ ಅದೃಷ್ಟದ ಸಂಖ್ಯೆ:2 ಅದೃಷ್ಟದ ಬಣ್ಣ:ನೀಲಿ *02🌹,⚜️,ವೃಷಭ ರಾಶಿ*⚜️ ಸಮಾಜದಲ್ಲಿ ಪರಿಚಯಗಳು ಹೆಚ್ಚಾಗುತ್ತವೆ.ಸ್ಥಿರಾಸ್ತಿವಿವಾದಗಳಿಗೆ, ಸಂಬಂಧಿಸಿದಂತೆ ಪ್ರಮುಖ ವ್ಯಕ್ತಿಗಳಿಂದ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಹಠಾತ್ ಆರ್ಥಿಕ ಲಾಭದಸೂಚನೆಗಳಿವೆ. ಕೈಗೆತ್ತಿಕೊಂಡ ಕೆಲಸದಲ್ಲಿ ಕಾರ್ಯ ಸಿದ್ದತೆ ಇರುತ್ತದೆ. ವೃತ್ತಿ ವ್ಯವಹಾರದಲ್ಲಿ ಲಾಭ . ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆಗಳಿರುತ್ತವೆ, ಅದೃಷ್ಟದ ದಿಕ್ಕು:ಪೂರ್ವ ಅದೃಷ್ಟದ ಸಂಖ್ಯೆ:1 ಅದೃಷ್ಟದ ಬಣ್ಣ:ಹಳದಿ *03🌹,⚜️,ಮಿಥುನ ರಾಶಿ*⚜️ ಕೈಗೆತ್ತಿಕೊಂಡ ಕೆಲಸದಲ್ಲಿ ಶ್ರಮ ಹೆಚ್ಚಾಗುತ್ತದೆ.ಒಂದುವ್ಯವಹಾರದಲ್ಲಿ ಆತ್ಮೀಯ ಸ್ನೇಹಿತರಿಂದ ಪಡೆದ ಮಾಹಿತಿಯು ನಿರಾಶಾದಾಯಕವಾಗಿರುತ್ತದೆ. ಪ್ರಯಾಣವನ್ನುಮುಂದೂಡುವುದು ಉತ್ತಮ. ವೃತ್ತಿಪರ ವ್ಯವಹಾರಗಳಲ್ಲಿ ವೆಚ್ಚಗಳು ಹೆಚ್ಚಾಗುತ್ತವೆ. ಉದ್ಯೋಗಗಳು ಗೊಂದಲಮಯವಾಗಿರುತ್ತವೆ, ಅದೃಷ್ಟದ ದಿಕ್ಕು:ಉತ್ತರ ಅದೃಷ್ಟದ ಸಂಖ್ಯೆ:5 ಅದೃಷ್ಟದ ಬಣ್ಣ:ಕೆಂಪು *04🌹,⚜️,ಕರ್ಕ ರಾಶಿ*⚜️ ಆಸ್ತಿ ವಿವಾದ ಪರಿಹಾರದತ್ತ ಸಾಗುತ್ತದೆ. ಉತ್ತಮ…

Read More