ಹೊಳಲ್ಕೆರೆ ; ನೂಡಲ್ಸ್ ಕೊಡಿಸುವುದಾಗಿ ಐದು ವರ್ಷದ ಕಂದಮ್ಮನನ್ನು ಊರ ಪಕ್ಕದ ತೋಟಕ್ಕೆ ಕರೆದುಕೊಂಡು ಹೋಗಿ ಚಾಕುವಿನಿಂದ ಕತ್ತು ಕೊಯ್ದು ಕೊಲೆಗೆ ಯತ್ನ ಮಾಡಿರುವ ಘಟನೆ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯ ಮಲ್ಲಸಿಂಗನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ 8.30 ರ ಸುಮಾರಿಗೆ ಸಂಭವಿಸಿದೆ.

ಘಟನೆ ವಿವರ :

ಮಲ್ಲಸಿಂಗನಹಳ್ಳಿ ಗ್ರಾಮದ ಮಹಂತೇಶ್ ಹಾಗೂ ಭಾರತಿ ದಂಪತಿಯ ಪುತ್ರಿ ಕಂದಮ್ಮ ಬಿಂದು ( 5 ) ಮೇಲೆ ಕೊಲೆ ಯತ್ನ ನಡೆದಿರುವುದು.ಜೂ.6 ರ ಗುರುವಾರದಂದು ರಾತ್ರಿ 8.30 ರ ಸುಮಾರಿಗೆ ಮಗುವಿನ ತಂದೆ ಮಹಂತೇಶ್, ತಾಯಿ ಭಾರತಿ, ಹಾಗೂ ಮಗುವಿನ ದೊಡ್ಡಪ್ಪ ರಂಗಸ್ವಾಮಿ ಮನೆಯಲ್ಲಿ ಊಟ ಮಾಡುತ್ತಿರುವ ಸಂದರ್ಭದಲ್ಲಿ ಮಗು ಬಿಂದು ಆಟವಾಡುತ್ತಾ ಮನೆಯಿಂದ ಹೊರಗಡೆ ಬಂದಿದೆ.

ಆಗ ಕರೆಂಟ್ ಇರಲಿಲ್ಲ ಮಗುವಿನ ತಂದೆ ಮನೆಯ ಹೊರಗೆ ಬಂದು ನೋಡಿದಾಗ ಮಗು ಕಾಣೆಯಾಗಿದೆ. ಕೂಡಲೇ ಎಲ್ಲರೂ ಮಗುವನ್ನು ಹುಡುಕಾಡುತ್ತಾ ಇರುವಾಗ ಅಂಗಡಿ ರೇಖಮ್ಮನನ್ನು ಕೇಳಿದ್ದಾರೆ. ಆಗ ಅವರು ಪಾಪು ಯಾರೋ ವ್ಯಕ್ತಿಯ ಜೋತೆ ಹೋಗಿದ್ದು ನೋಡಿರುವುದನ್ನು ತಿಳಿಸಿದ್ದಾರೆ.

ಕೂಡಲೇ ಪಕ್ಕದ ತೋಟದ ಬಳಿ ಮಗುವನ್ನು ಕೂಗುತ್ತಾ ಬಂದಾಗ ಮಗು ತನ್ನ ತಂದೆಯನ್ನು ಅಪ್ಪಾ ಎಂದು ಜೋರಾಗಿ ಕೂಗಿರುವುದು ಕೇಳಿದ್ದು , ಎಲ್ಲರೂ ಕೂಡಲೇ ಮಗುವಿನ ಬಳಿಗೆ ಹೋಗಿದ್ದಾರೆ.

ಮಗುವಿನ ಕುತ್ತಿಗೆ ಬಳಿ ರಕ್ತ ಕಾಣಿಸಿದ್ದು, ಘಟನೆ ಬಗ್ಗೆ ಮಗುವನ್ನು ವಿಚಾರಿಸಲಾಗಿ ಹನುಮ ಮಾಮ ನೂಡಲ್ಸ್ ಕೊಡಿಸುವುದಾಗಿ ಹೇಳಿ ಇಲ್ಲಿಗೆ ಕರೆತಂದು ಕತ್ತು ಕೋಯ್ದುರುವುದಾಗಿ ಮಗು ತಿಳಿಸಿದೆ. ಕೂಡಲೇ ಮಗುವನ್ನು ಹೊಳಲ್ಕೆರೆ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.

ನಂತರ ವೈದ್ಯರ ಸಲಹೆ ಮೇರೆಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದಾರೆ.ಮಲ್ಲಸಿಂಗನಹಳ್ಳಿ ಗ್ರಾಮದಲ್ಲಿ ಹನುಮಂತ ಎಂಬುವವರು ಇಬ್ಬರು ವ್ಯಕ್ತಿಗಳಿದ್ದು, ಮಗುವಿಗೆ ಪೋಟೋ ತೋರಿಸಲಾಗಿ ಮನೆಗೆ ಆಗಾಗ್ಗೆ ಕೆಲಸಕ್ಕೆ ಬರುತಿದ್ದ ಹನುಮಂತನನ್ನು ಗುರುತಿಸಿದೆ.

ಮಗುವಿನ ಹೇಳಿಕೆ ಪಡೆದ ಪಿಎಸ್ ಐ ಟಿ.ರಮೇಶ್ ಹಾಗೂ ತಂಡ ಆರೋಪಿಗಾಗಿ ಬಲೆ ಬೀಸಿ ಆರೋಪಿಯನ್ನು ಶನಿವಾರ ತಾಳ್ಯ ಗ್ರಾಮದಲ್ಲಿ ಬಂದಿಸಿದ್ದಾರೆ.ಚಿತ್ರಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹೆಚ್ವಿನ ತನಿಖೆ ಕೈಗೊಂಡಿದ್ದಾರೆ.

 

Share.
Leave A Reply

Exit mobile version