ದಾವಣಗೆರೆ: ಎಷ್ಟೋ ಜನ ಮಕ್ಕಳಿಲ್ಲವೆಂದು ಕೊರಗುತ್ತಿರುತ್ತಾರೆ, ದೇವರು, ದಿಂಡ್ರೂ ಅಂತ ಟೆಂಪಲ್ ರನ್ ಮಾಡುತ್ತಾರೆ…ಆದರೆ ಇಲ್ಲೊಂದು ಘಟನೆ ಅತ್ಯಂತ ಅಮಾನುಷವಾಗಿದೆ.

ಹೆಣ್ಣುಭ್ರೂಣ ಹತ್ಯೆ ವಿಚಾರ ರಾಜ್ಯದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ, ಇಂತಹ ಸಮಯದಲ್ಲಿ ಹೊನ್ನಾಳಿ ತಾಲ್ಲೂಕು ಕ್ಯಾಸನಕೆರೆ ಗ್ರಾಮದಲ್ಲಿ ಆಗಷ್ಟೇ ಜನಿಸಿದ್ದ ಹೆಣ್ಣು ನವಜಾತ ಶಿಶುವಿನ ಕೊರಳಿಗೆ ಹಗ್ಗ ಕಟ್ಟಿಸಿ, ಸಾಯಿಸಿ ನಿರ್ಜನ ಪ್ರದೇಶದಲ್ಲಿ ಬಿಸಾಡಿದ ಅಮಾನವೀಯ ಕೃತ್ಯ ನಡೆದಿದೆ.

ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಆರೋಪಿಗಳಾದ ವೀರೇಶ, ಸಿದ್ದೇಶ ಸಹ ಇದೇ ಕ್ಯಾಸಿನಕೆರೆ ಗ್ರಾಮದವರಾಗಿದ್ದು, ಇದೇ ಆರೋಪಿಗಳ ಊರಿನಲ್ಲಿ ನವಜಾತ ಶಿಶುವಿನ ಕೊರಳಿಗೆ ಹಗ್ಗ ಬಿಗಿದು ಕೊಲೆ ಮಾಡಲಾಗಿದೆ.

ಮುಳ್ಳಿನ ಪೊದೆಯಲ್ಲಿ ಶಿಶು ಪತ್ತೆ

ಈ ನವಜಾತ ಹೆಣ್ಣು ಶಿಶುವಿನ ಕುತ್ತಿಗೆಗೆ ಹಗ್ಗ ಬಿಗಿದು, ಕೊಲೆ ಮಾಡಿ ಬಿಸಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಪ್ರತ್ಯಕ್ಷದರ್ಶಿಗಳು ಪೋಲಿಸರಿಗೆ ವಿಷಯ ತಿಳಿಸಿದ್ದಾರೆ.

ಮುಳ್ಳು ಕಂಟಿಗಳಲ್ಲಿ ಬಿದ್ದಿದ್ದ ಈ ಹೆಣ್ಣು ಶಿಶುವನ್ನು ಗುರುತಿಸಿದ ಸ್ಥಳೀಯರು ಆರಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸುತ್ತಿದ್ದಂತೆಯೇ ಅದನ್ನು ಬಯಲಿಗೆ ತಂದಿದ್ದಾರೆ.

ಹಗ್ಗ ಬಿಗಿದು ಕೊಲೆ

ಈ ಹೆಣ್ಣು ನವಜಾತ ಶಿಶುವಿನ ಕೊರಳಿಗೆ ಹಗ್ಗವನ್ನು ಬಿಗಿದು ಕೊಲೆ ಮಾಡಲಾಗಿದೆ. ನಂತರ ಅದನ್ನು ತಂದು ಗಿಡಗಂಟಿಗಳಿದ್ದ ಜಾಗದಲ್ಲಿ ಕೂಸಿನ ಹೆತ್ತವರೋ, ಸಂಬಂಧಿಗಳೋ ಎಸೆದಿರುವ ಅನುಮಾನಗಳು ಕೇಳಿ ಬಂದಿವೆ. ಸಾಸ್ವೆಹಳ್ಳಿ ಉಪಠಾಣೆ ಪೋಲಿಸರು ಸ್ಥಳಕ್ಕೆ ದಾವಿಸಿ ಪರಿಶೀಲಿಸಿದ್ದಾರೆ.

Share.
Leave A Reply

Exit mobile version