.✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
*ಅಕ್ಷ ತದಿಗೆ / ಅಕ್ಷಯ ತೃತೀಯ*
*🪷ಅಕ್ಷಯ ತೃತೀಯ – ಅನಂತ ಶುಭವನ್ನುತರುತ್ತದೆ*
🤔,ಅಕ್ಷಯ ತೃತೀಯ ತಾರೀಕು 10/05/2024, ಶುಕ್ರವಾರ, ಈ ದಿನದಂದು ಚಂದ್ರ ಮತ್ತು ಸೂರ್ಯ ಇಬ್ಬರೂ ತಮ್ಮ ತಮ್ಮ ಉಚ್ಚ ರಾಶಿಯಲ್ಲಿ ಇರುವ ದಿನದಂದು ಆಚರಿಸುತ್ತಾರೆ. ಸೂರ್ಯನು ತನ್ನ ಉನ್ನತ ಸ್ತಾನವಾದ ಮೇಶರಾಶಿಯಲ್ಲಿ – ಅಂದರೆ ಸೌರಮಾನ ಲೆಕ್ಕದ ಮೇಷ ಮಾಸದಲ್ಲಿ – ಪೂರ್ತಿ 30 ದಿನಗಳು ಇರುತ್ತಾನೆ. ಸೂರ್ಯ ತಿಂಗಳಿಗೊಮ್ಮೆ ರಾಶಿ ಬದಲಾಯಿಸಿದರೆ, ಚಂದ್ರ ದಿನಕ್ಕೊಮ್ಮೆನಕ್ಷತ್ರಬದಲಾಯಿಸುತ್ತಾನೆ, {ಅಂದಾಜುಎರಡೂವರೆ ದಿನಕ್ಕೊಂದು ರಾಶಿ}ಹಾಗಾಗಿ ಈ ಮೇಷ ಮಾಸದ ಯಾವ ದಿನದಂದು ಚಂದ್ರ ತನ್ನ ಉಚ್ಚ ಸ್ತಾನದಲ್ಲಿ ಇರುತ್ತಾನೋ ಅಂದೇ ಈ ಅಕ್ಷಯ ತೃತೀಯ. ಚಾಂದ್ರಮಾನ ಲೆಕ್ಕದ ಮೂಲಕ ನೋಡಿದರೆ ಈ ದಿನ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನ ಆಗಿರುತ್ತದೆ.
📖,*ವೇದದಲ್ಲಿ ದಾನ ಧರ್ಮಗಳನ್ನು ಮಾಡಿದರೆ ಒಳ್ಳೆಯದು*
🌹,ವೇದ ಶಾಸ್ತ್ರ ಗಳ ಪ್ರಕಾರ ಯಾವು಼ದೇ ಒಂದು ಶುಭ ದಿನವನ್ನು ನಾವು ಆಧ್ಯಾತ್ಮಿಕ ಶಕ್ತಿಯನ್ನು ವೃದ್ದಿಸಿಕೊಳ್ಳಲು ಕಡ್ಡಾಯವಾಗಿಬಳಸಿಕೊಳ್ಳಬೇಕೆಂದು ಹೇಳುತ್ತದೆ. ಇದನ್ನು ತಮ್ಮ ತಮ್ಮ ಮನೆಗಳಲ್ಲಿ ಗ್ರಂಥ ಪಾರಾಯಣಮಾಡುವಮೂಲಕಹೋಮ ಹವನಾದಿಗಳನ್ನು ಮಾಡುವ ಮೂಲಕ , ಮನೆಯ ಇಷ್ಟ ದೇವರನ್ನು ಪೂಜಿಸುವ ಮೂಲಕ ಅಥವಾ ವಿಶೇಷವಾದ ಪೂಜೆಗಳನ್ನು ನೆರವೇರಿಸುವ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಿಸಬಹುದು.
🪷,ಇಷ್ಟೇ ಅಲ್ಲದೆ ನಮ್ಮ ಪೂರ್ವಜರಿಗೆ ಗೌರವ ನೀಡುವುದು, ಬ್ರಾಹ್ಮಣರಿಗೆ ದಾನ ಮಾಡುವುದು,ಗಿಡ ಮರಗಳಿಗೆನೀರುಉಣಿಸುವುದಬಡವರಿಗೆದಾನನೀಡುವುದು,
ವಿದ್ಯಾದಾನ ಮಾಡುವುದು ಇತ್ಯಾದಿ ಶುಭ ಕಾರ್ಯಗಳನ್ನು ಈ ಅಕ್ಷಯ ತೃತೀಯದಂದು ಮಾಡಿದರೆ ಬಹಳ ಒಳ್ಳೆಯದು. ಈರೀತಿಯಶುಭಕಾರ್ಯಗಳನ್ನು ಅಕ್ಷಯ ತೃತೀಯ ದಂದು ನೆರವೇರಿಸಿದರೆ ನಮಗೆ ಇನ್ನಷ್ಟು ಇಂತಹ ಕಾರ್ಯಗಳನ್ನು ನೆರವೇರಿಸಲು ಆಧ್ಯಾತ್ಮಿಕ ಶಕ್ತಿ ಸಿಗುತ್ತದೆ. ಹೀಗೆ ನಿರಂತರವಾಗಿ ಈ ಪ್ರಕ್ರಿಯೆಯನ್ನು ಮಾಡುವ ಮೂಲಕ ನಮಗೆ ಕ್ರಮೇಣ ಆಧ್ಯಾತ್ಮಿಕ ಹಾಗೂ ಸಂಪತ್ತು, ಹಾಗೂ ವಸ್ತು ಸಮೃದ್ಧಿಯೂ ತುಂಬಹುದು
*🧽ಅಕ್ಷಯ ತೃತೀಯ ಇತಿಹಾಸ*
ಪುರಾಣ ಮತ್ತು ಪ್ರಾಚೀನ ಇತಿಹಾಸದ ಪ್ರಕಾರ, ಈ ದಿನವು ಬಹಳಷ್ಟು ಪ್ರಮುಖ ಘಟನೆಗಳನ್ನು ಗುರುತಿಸುತ್ತದೆ
🌹,ಕೃತಯುಗ {ಸತ್ಯ ಯುಗ} ಶುರುವಾದ ದಿನ ಎಂದು ಹೇಳಲಾಗುತ್ತದೆ.
🌹,ಗಣೇಶ ಮತ್ತು ವೇದ ವ್ಯಾಸರು ಮಹಾಭಾರತ ಮಹಾಕಾವ್ಯವನ್ನು ಈ ದಿನದಂದು ಬರೆಯುತ್ತಿದ್ದರು.
🌹,ಈ ದಿನವನ್ನು ವಿಷ್ಣುವಿನ ಆರನೇ ಅವತಾರವಾದ *ಭಗವಂತಶ್ರೀಪರಶುರಾಮನ*
ಜನ್ಮದಿನವೂ ಆಚರಿಸಲಾಗುತ್ತದೆ.
🌹,ಈ ದಿನ ಅನ್ನಪೂರ್ಣ ದೇವಿಯು ಜನಿಸಿದಳು.
🌹,ಈ ದಿನ, ಶ್ರೀಕೃಷ್ಣನು ಸಹಾಯಕ್ಕಾಗಿ ತನ್ನ ರಕ್ಷಣೆಗೆ ಬಂದಿದ್ದ ತನ್ನ ಬಡ ಸ್ನೇಹಿತ ಸುದಾಮನಿಗೆ {ಕುಚೇಲನಿಗೆ} ಸಂಪತ್ತು ಮತ್ತು ನೀಡಿದ ಅಕ್ಷಯವಾದಂತಹ ಐಶ್ವರ್ಯ ಪ್ರಾಪ್ತಿಗಳು,ವಿತ್ತೀಯಲಾಭಗಳನ್ನು,ದಯಪಾಲಿಸಿದನು.
📖,ಮಹಾಭಾರತದ ಪ್ರಕಾರ, ಈ ದಿನ ಶ್ರೀಕೃಷ್ಣರು ದೇಶಭ್ರಷ್ಟರಾಗಿದ್ದಾಗ ಪಾಂಡವರಿಗೆ ‘ಅಕ್ಷಯ ಪತ್ರ’ ವನ್ನು ಅರ್ಪಿಸಿದರು. ಅವರು ಈ ಬಟ್ಟಲಿನಿಂದಆಶೀರ್ವದಿಸಿದರುಅದು ಅನಿಯಮಿತಪ್ರಮಾಣದ ಆಹಾರವನ್ನುಉತ್ಪಾದಿಸುವುದನ್ನು ಮುಂದುವರಿಸುತ್ತದೆ, ಅದು ಅವರಿಗೆಎಂದಿಗೂ
ಹಸಿವಾಗುವು಼ದಿಲ್ಲ.
🌹,ಆದಿ ಶಂಕರಾಚಾರ್ಯರು ಕನಕಧಾರ ಸ್ತೋತ್ರವನ್ನು ಸಂಯೋಜಿಸಲಾರಂಭಿಸಿದ್ದು.
🌹,ಕಾಯಕ ಯೋಗಿ ಬಸವಣ್ಣನವರು ಜನಿಸಿದ್ದು.
🌹, ಬಲರಾಮ ಜಯಂತಿ ಅನ್ನೂಇಂದು
ಆಚರಿಸಲಾಗುತ್ತದೆ.
🌹,ಈ ದಿನ, ಗಂಗಾ ನದಿ ಭೂಮಿಯ ಮೇಲಿನ ಸ್ವರ್ಗದಿಂದ ಇಳಿಯಿತು.
🌹,ಈ ದಿನವೇ ಕುಬೇರನು ಲಕ್ಷ್ಮಿ ದೇವಿಯನ್ನು ಪೂಜಿಸಿದನು ಮತ್ತು ಹೀಗೆ ದೇವರ ಖಜಾಂಚಿಯಾಗಿ ಕೆಲಸಕ್ಕೆ ನಿಯೋಜಿಸಲ್ಪಟ್ಟನು.
🌹,ಜೈನ ಧರ್ಮದಲ್ಲಿ, ಅವರ ಮೊದಲ ದೇವರಾದ ಭಗವಾನ್ ಆದಿನಾಥನನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ.
🌹,ದಾನಶೂರ ಕರ್ಣನು ಜನಿಸಿದ್ದು,ಇದೇ ದಿನ,
🌹, ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದದಿನ.
🌹,ಪಾಂಡವರು ತಮ್ಮ ವನವಾಸ, ಅಜ್ಞಾತವಾಸದ ನಂತರ ಶಸ್ತ್ರಾಸ್ತ್ರಗಳನ್ನು ಪುನಃ ಪಡೆದ ದಿನ.
🌹ಈ ದಿನ ವಿಷ್ಣು ಮತ್ತು ಲಕ್ಷ್ಮಿ ಗಂಗಾಸ್ನಾನ ಮಾಡಿ, ಗಂಗೆಯನ್ನು ಪುಜಿಸಿದ್ದರೆಂದು. ಅಂದಿನಿಂದ ಗಂಗಾ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆ ಎಂಬ ರೂಢಿ ಬಂದಿತು ಎಂದು ಹೇಳಲಾಗುತ್ತದೆ಼.
*🌹,ಮಾತಾಂಗಿ ಜಯಂತಿ ದೇವಿಯನ್ನು ಬೈಸಾಕ್ ತಿಂಗಳ ಶುಕ್ಲ ಪಕ್ಷ ತೃತೀಯ ದಿನದಂದು ಆಚರಿಸಲಾಗುತ್ತದೆ*.
🔯 *ಸಿಂಹಾಚಲ ಚಂದನೋತ್ಸವಂ*
🔯 ವಿಷ್ಣುಪತಿ ಪುಣ್ಯಕಾಲ ಎಂಬುದು ಬ್ರಹ್ಮಾಂಡದ ಸಂರಕ್ಷಣಾಕಾರರಾಗಿರುವ ಶ್ರೀ ಹರಿ ವಿಷ್ಣು ಈ ಬ್ರಹ್ಮಾಂಡದ ಕಲ್ಯಾಣ ಮತ್ತು ಉಳಿವಿಗಾಗಿ ಅದ್ಭುತ ಕಾರ್ಯಗಳನ್ನು ನಿರ್ವಹಿಸುವ ಸಮಯ.
🪐,ವೃಷಭ ಸಂಕ್ರಾಂತಿ ಆಚರಣೆಯು ಹಿಂದೂ ಭಕ್ತರಿಗೆ ಅಪಾರ ಧಾರ್ಮಿಕಮಹತ್ವವನ್ನು ಹೊಂದಿದೆ. ಸಂತೋಷದ ಮತ್ತು ಸಮೃದ್ಧಜೀವನವನ್ನುಆಶೀರ್ವದಿಸಲುಜನರುಈಮಹತ್ವಾಕಾಂಕ್ಷೆಯ ದಿನದಂದು ವಿಷ್ಣುವನ್ನು ಪೂಜಿಸುತ್ತಾರೆ. ಪುನರ್ಜನ್ಮದ ನಿರಂತರಚಕ್ರದಿಂದಸ್ವಾತಂತ್ರ್ಯವನ್ನು,ಪಡೆಯಲುಮತ್ತುಮೋಕ್ಷವನ್ನು ಪಡೆಯಲು ಅವರು ಸ್ವಾಮಿಯನ್ನು ಮನವಿ ಮಾಡುತ್ತಾರೆ.
🤔,ಈ ಎಲ್ಲ ವಿಶೇಷತೆಗಳು ನಡೆದದ್ದು ಈ ಅಕ್ಷಯ ತೃತೀಯ ದಿನದಂದೇ ಎಂದು ಪುರಾಣಗಳ ಕಥೆಗಳು ಹೇಳುತ್ತವೆ. ಈ ದಿನ ಅಕ್ಷಯತೃತೀಯಆಚರಿಸಿದವರಿಗೆ ದೇವರುಒಳ್ಳೆಯದುಮಾಡಲಿ ಎಂದು ಆಶಿಸೋಣ. ಎಲ್ಲರ ಸಂಪತ್ತು ಅಕ್ಷಯವಾಗಲಿ. ವೇದಾಂತ ಜ್ಞಾನರವರಿಂದ ಎಲ್ಲರಿಗೂ ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು
🧽,*ಅಕ್ಷಯ ತೃತೀಯ ಸಮಯದಲ್ಲಿ ಆಚರಣೆಗಳು*
🪴,ವಿಷ್ಣುವಿನ ಭಕ್ತರು ಈ ದಿನ ದೇವತೆಯನ್ನು ಉಪವಾಸ ಮಾಡುವ ಮೂಲಕ ಪೂಜಿಸುತ್ತಾರೆ. ನಂತರ, ಬಡವರಿಗೆ ಅಕ್ಕಿ, ಉಪ್ಪು, ತುಪ್ಪ, ತರಕಾರಿಗಳು, ಹಣ್ಣುಗಳು ಮತ್ತು ಬಟ್ಟೆಗಳನ್ನು ವಿತರಿಸುವ ಮೂಲಕ ದಾನ ಮಾಡಲಾಗುತ್ತದೆ. ವಿಷ್ಣುವಿನ ಸಂಕೇತವಾಗಿ ತುಳಸಿ ನೀರನ್ನು ಸುತ್ತಲೂ ಚಿಮುಕಿಸಲಾಗುತ್ತದೆ.
🌏,ಪೂರ್ವ ಭಾರತದಲ್ಲಿ, ಈ ದಿನವು ಮುಂಬರುವ ಸುಗ್ಗಿಯ ಮೊದಲ ಉಳುಮೆ ದಿನವಾಗಿ ಪ್ರಾರಂಭವಾಗುತ್ತದೆ. ಅಲ್ಲದೆ, ಉದ್ಯಮಿಗಳಿಗೆ, ಮುಂದಿನ ಹಣಕಾಸು ವರ್ಷಕ್ಕೆ ಹೊಸ ಲೆಕ್ಕಪರಿಶೋಧನಾಪುಸ್ತಕವನ್ನು ಪ್ರಾರಂಭಿಸುವಮೊದಲುಗಣೇಶ ಮತ್ತುಲಕ್ಷ್ಮಿದೇವಿಯನ್ನು
ಪೂಜಿಸಲಾಗುತ್ತದೆ
🧽,ಈ ದಿನ, ಅನೇಕ ಜನರು ಚಿನ್ನ ಮತ್ತು ಚಿನ್ನಾಭರಣಗಳನ್ನು ಖರೀದಿಸುತ್ತಾರೆ. ಚಿನ್ನವು ಅದೃಷ್ಟ ಮತ್ತು ಸಂಪತ್ತಿನ ಸಂಕೇತವಾಗಿರುವುದರಿಂದ, ಇದನ್ನು ಖರೀದಿಸುವುದನ್ನು ಈ ದಿನ ಧಾರ್ಮಿಕವೆಂದು ಪರಿಗಣಿಸಲಾಗುತ್ತದೆ.
🤔,ಜನರು ಈ ದಿನದಂದು ಮದುವೆ ಮತ್ತು ದೀರ್ಘ ಪ್ರಯಾಣವನ್ನುಯೋಜಿಸುತ್ತಾರೆ
🌹,ಈ ದಿನ ಹೊಸ ಉದ್ಯಮಗಳು, ನಿರ್ಮಾಣ ಕಾರ್ಯಗಳನ್ನುಪ್ರಾರಂಭಿಸಲು ಉತ್ತಮ,
🪷,ಇತರ ಆಚರಣೆಗಳಲ್ಲಿ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡುವುದು, ಬಾರ್ಲಿಯನ್ನು ಪವಿತ್ರಬೆಂಕಿಯಲ್ಲಿಅರ್ಪಿಸುವುದು, ಮತ್ತು ಈ ದಿನ ದೇಣಿಗೆ ಮತ್ತು ಅರ್ಪಣೆ ಮಾಡುವುದು ಸೇರಿವೆ.
🏺,ಜೈನರು ಈ ದಿನ ತಮ್ಮ ವರ್ಷಪೂರ್ತಿ ತಪಸ್ಯವನ್ನು ಪೂರ್ಣಗೊಳಿಸುತ್ತಾರೆ ಮತ್ತು ಕಬ್ಬಿನ ರಸವನ್ನು ಕುಡಿಯುವ ಮೂಲಕ ತಮ್ಮ ಪೂಜೆಯನ್ನು ಕೊನೆಗೊಳಿಸುತ್ತಾರೆ.
🤔,ಭವಿಷ್ಯದಲ್ಲಿ ಅದೃಷ್ಟವನ್ನು ಖಚಿತಪಡಿಸಿಕೊಳ್ಳಲು ಆಧ್ಯಾತ್ಮಿಕ ಚಟುವಟಿಕೆಗಳನ್ನು ನಿರ್ವಹಿಸುವುದು, ಧ್ಯಾನ ಮಾಡುವುದು ಮತ್ತು ಪವಿತ್ರ ಮಂತ್ರಗಳನ್ನು ಪಠಿಸುವುದು, ಮಾಡುತ್ತಿರಬೇಕು,
🤔,ಪುರಾಣ ಕತೆಯ ಮೂಲಕ ಯೋಚನೆ ಮಾಡೋದಾದರೆ, ಚಂದ್ರನಿಗೆ 27 ಜನ ( ಇವೇ 27 ನಕ್ಷತ್ರಗಳು) ಹೆಂಡತಿಯರು ಅನ್ನುತ್ತಾರೆ. ಚಂದ್ರ ತನ್ನ ಪ್ರತಿ ಹೆಂಡತಿಯ ಜೊತೆ ಒಂದೊಂದು ದಿನ ಇರುತ್ತಾನೆ ಎನ್ನುವ ಕತೆ ಇದು. ಈ 27 ಹೆಂಡತಿಯರಲ್ಲಿ ರೋಹಿಣಿಚಂದ್ರನಿಗೆಪ್ರಿಯವಾದ, ಹೆಂಡತಿ ಅಂತೆ. ಹಾಗಾಗಿ ಕೆಲ ಕತೆಗಳು ರೋಹಿಣಿ ನಕ್ಷತ್ರದ ದಿನ ಬಂದ {ಅಂದರೆ ಚಂದ್ರ ರೋಹಿಣಿ ನಕ್ಷತ್ರದಲ್ಲಿದ್ದಾಗ}ಅಕ್ಷಯ ತೃತೀಯ ಹೆಚ್ಚು ಶ್ರೇಷ್ಠ ಅನ್ನುವ,ನಂಬಿಕೆಹೊಂದಿದ್ದಾರೆ.ಶುಕ್ರವಾರ,ಶುಕ್ರನವಾರ
ವಾದ್ದರಿಂದ ಈ ಅಕ್ಷತದಿಗೆ ಹಬ್ಬ ಶುಕ್ರವಾರ ರೋಹಿಣಿ ನಕ್ಷತ್ರವಿದ್ದ ದಿನದಲ್ಲಿ ಬಂದರೆ ಇನ್ನೂ ಹೆಚ್ಹು ಶ್ರೇಷ್ಠ ಅನ್ನುತ್ತಾರೆ.
👩,ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ.ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂಮಾಡುತ್ತಾರೆ,
*🧽ಅಕ್ಷಯ ತೃತೀಯದ ಹೇಗೆ ಆಚರಿಸಬೇಕು ಹಾಗೂ ಅದರ ಫಲಗಳು*
🌹,ಸಾಲವನ್ನು ಮಾಡಿಯಾದರೂ ಚಿನ್ನವನ್ನು ತೆಗೆದುಕೊಳ್ಳಬೇಕೆಂಬ ಮನಸ್ಥಿತಿಯನ್ನು ನಾವುಗಳು ಮೊದಲು ಬಿಟ್ಟು ಅಂದು ಏನೆಲ್ಲಾ ಒಳ್ಳೆಯ ಕೆಲಸವನ್ನು ಮಾಡಬೇಕು ಎಂಬುದು ತಿಳಿದುಕೊಳ್ಳಬೇಕಾಗಿದೆ.
🌹,ಶುಚಿರ್ಭೂತರಾಗಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಬಹುದು
🌹,ನಾವು ಕೊಟ್ಟಷ್ಟು ನಮಗೆ ತಿರುಗಿ ಬರುತ್ತದೆ ಎಂಬುದಕ್ಕೆ ಉದಾಹರಣೆ ಅಕ್ಷಯ ತೃತೀಯ ಅಂದು ದಾನ ಧರ್ಮಗಳನ್ನು ಪುಣ್ಯ ಕಾರ್ಯಗಳನ್ನು ದೇವರ ದರ್ಶನವನ್ನು ಮಾಡಿದಷ್ಟು ನಮಗೆಪುಣ್ಯಪ್ರಾಪ್ತಿಯಾಗುತ್ತದೆ
🌹,ಆಧ್ಯಾತ್ಮಿಕ ಉನ್ನತಿ ಹಾಗೂ ಬಯಸಿದ,ಬಯಕೆಗಳುಈಡೇರುತ್ತದೆ.
*🪷ಅಕ್ಷಯ ತೃತೀಯ ದಿನದಂದು ಪುಣ್ಯಪ್ರಾಪ್ತಿಗಾಗಿ ದಾನ* 🧉,ಮಣ್ಣಿನ ಮಡಕೆಯಲ್ಲಿ ಉದಕ {ನೀರು} ದಾನ, ಮಾಡಿದರೆ ಮೃತ್ಯು ಭಯದಿಂದ ದೂರ ಆಗಬಹುದು.
🤦♂️,ಬಡವರಿಗೆ, ವಸ್ತ್ರ ದಾನ ಮಾಡಿದರೆ ರೋಗ ರುಜಿನಗಳು ದೂರವಾಗುತ್ತದೆ.
🍇,ಹಣ್ಣು ಹಂಪಲುಗಳನ್ನು ದಾನ ಮಾಡಿದರೆ, ನಮ್ಮ ಕಾರ್ಯಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಏರುತ್ತೇವೆ ಎನ್ನುವ ನಂಬಿಕೆ.
🌾,ಅಕ್ಕಿ, ಬೇಳೆ, ಗೋಧಿ, ಬೆಲ್ಲ ದಾನ ಮಾಡಿದರೆ ಅಕಾಲ ಮೃತ್ಯುವಿನ ಭಯದಿಂದ ಪಾರಾಗಬಹುದು.
🐄,ಮಜ್ಜಿಗೆ ಮೊಸರು ದಾನ ಮಾಡಿದರೆ ಮಾಡಿದ ಪಾಪಕರ್ಮಗಳಿಂದ ಮುಕ್ತಿ ಹೊಂದಬಹುದು ಎಂಬ ನಂಬಿಕೆ.
🐂,ಬೆಳಿಗ್ಗೆ ಗೋ ಮಾತೆಗೆಪೂಜೆ ಪುನಸ್ಕಾರಗಳನ್ನುಮಾಡಿಗೋಧಿ ಬೆಲ್ಲಬಾಳೆಹಣ್ಣುತಿನ್ನಿಸುವುದರಿಂದ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಪಾತ್ರವಾಗುತ್ತದೆ. 📖,ಪಂಚಾಂಗ, ಧಾರ್ಮಿಕ ಪುಸ್ತಕಗಳನ್ನು ಮತ್ತು ಫಲ ತಾಂಬೂಲಗಳನ್ನು ದಾನ ಮಾಡುವುದರಿಂದ ಅಧಿಕ ಪುಣ್ಯ ಪ್ರಾಪ್ತಿಯಾಗುತ್ತದೆ.
🌻,*ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಮಾಡುವ ವಿಧಾನ*
ಪೂರ್ವಜರಿಗೆ ಗತಿ ಸಿಗುವುದು ಮಹತ್ವ: ಅಕ್ಷಯ ತದಿಗೆಯ ದಿನ ಉಚ್ಚಲೋಕದಿಂದ ಸಾತ್ತ್ವಿಕತೆಯು ಬರುತ್ತಿರುತ್ತದೆ. ಈ ಸಾತ್ತ್ವಿಕತೆಯನ್ನು ಗ್ರಹಣ ಮಾಡಲು ಭುವರ್ಲೋಕದಲ್ಲಿನ ಅನೇಕಜೀವಗಳು{ಲಿಂಗದೇಹಗಳುಪೃಥ್ವಿಯಸಮೀಪಕ್ಕೆಬರುತ್ತವೆ. ಭುವರ್ಲೋಕದಲ್ಲಿರುವ ಬಹುತೇಕ ಜೀವಗಳು ಮನುಷ್ಯರಪೂರ್ವಜರಾಗಿರುತ್ತಾರೆ ಮತ್ತು ಅವರು ಪೃಥ್ವಿಯ ಸಮೀಪ ಬರುವುದರಿಂದ ಮನುಷ್ಯರಿಗೆತೊಂದರೆಯಾಗುವ, ಸಾಧ್ಯತೆಯಿರುತ್ತದೆ. ಪೂರ್ವಜರ ಋಣವೂ ಮನುಷ್ಯರ ಮೇಲೆ ಬಹಳಷ್ಟು ಇರುತ್ತದೆ. ಈ ಋಣವನ್ನು ತೀರಿಸಲು ಮನುಷ್ಯನು ಪ್ರಯತ್ನ ಮಾಡುವುದು ಈಶ್ವರನಿಗೆ ಅಪೇಕ್ಷಿತವಾಗಿದೆ. ಪೂರ್ವಜರಿಗೆ ಗತಿಸಿಗಬೇಕೆಂದು ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಮಾಡುತ್ತಾರೆ.
🌻,*ಎಳ್ಳು ತರ್ಪಣೆ ಮಾಡುವ ಪದ್ಧತಿ:*
ಒಂದುತಟ್ಟೆಯನ್ನುತೆಗೆದುಕೊಂಡು ತಟ್ಟೆಯಲ್ಲಿ ಶ್ರೀವಿಷ್ಣು, ಬ್ರಹ್ಮ ಅಥವಾದತ್ತನಆವಾಹನೆಯನ್ನು ಮಾಡಬೇಕು.ಆಮೇಲೆದೇವತೆಗಳು ಸೂಕ್ಷ್ಮದಲ್ಲಿ ಆ ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ಕೈಯಲ್ಲಿಎಳ್ಳನ್ನುತೆಗೆದುಕೊಂಡು ಅವರ ಚರಣಗಳ ಮೇಲೆ ಅರ್ಪಿಸಬೇಕು. ಇನ್ನೊಂದು ತಟ್ಟೆಯನ್ನು ತೆಗೆದುಕೊಂಡು ನಮ್ಮಪೂರ್ವಜರಆವಾಹನೆಯನ್ನು ಮಾಡಬೇಕು. ಆಮೇಲೆ ಪೂರ್ವಜರು ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ದೇವತೆಗಳ ತತ್ತ್ವದಿಂದ ಭರಿತವಾದ ಎಳ್ಳನ್ನು ಅವರಿಗೆ ಅರ್ಪಿಸಬೇಕು, ಅಂದರೆ ಸಾತ್ತ್ವಿಕವಾಗಿರುವ ಈ ಎಳ್ಳನ್ನು ಕೈಯಲ್ಲಿ ತೆಗೆದುಕೊಂಡು ಅದರ ಮೇಲಿನಿಂದ ತಟ್ಟೆಯಲ್ಲಿ ನಿಧಾನವಾಗಿನೀರನ್ನುಬಿಡಬೇಕು ಮತ್ತು ಆ ಸಮಯದಲ್ಲಿ ಬ್ರಹ್ಮ, ಶ್ರೀವಿಷ್ಣು ಅಥವಾ ಇವರಿಬ್ಬರ ಅಂಶವಿರುವದತ್ತನಿಗೆಪೂರ್ವಜರಿಗೆ, ಗತಿ ನೀಡಬೇಕೆಂದು ಪ್ರಾರ್ಥನೆಯನ್ನು ಮಾಡಬೇಕು.
ನಂಬಿಕೆಯೇ ಪರದೈವ,
ಜಗತ್ತು ಸತ್ಯ,
ದೇವರ ಸ್ಮರಣೆ ಮುಖ್ಯ🙏
🚩 *ಭಗವಂತ ಶ್ರೀ ಪರಶುರಾಮ*🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
🌸
ಏಕಾಕ್ಷರಪ್ಪ
🌸ph no : +91 94485 51613