![](https://davangerevijaya.com/wp-content/uploads/2024/07/IMG-20240719-WA01231.jpg)
ದಾವಣಗೆರೆ : ಈಗಿನ ಪ್ಲಾಸ್ಟಿಕ್ ಯುಗದಲ್ಲಿ ಯಾರಿಗೆ ಯಾವಾಗ ಏನಾಗುತ್ತದೆ ಗೊತ್ತಿಲ್ಲ. ಖಾಸಗಿ ವಿಮೆಗೆ ಹೋದರೆ ಹೆಚ್ಚು ಹಣ ಕಟ್ಟಬೇಕು. ಆದರೆ ಅಂಚೆ ಇಲಾಖೆ ಇದಕ್ಕೆ ಬ್ರೇಕ್ ಹಾಕಿದೆ.
ಹೌದು. ಅಂಚೆ ಇಲಾಖೆ ಹೊಸ ಟರ್ಮ್ ಇನ್ಸೂರೆನ್ಸ್ ಯೋಜನೆ ಜಾರಿಗೆ ತಂದಿದ್ದು, ವರ್ಷಕ್ಕೆ ಕೇವಲ 520 ರೂಪಾಯಿಗೆ 10 ಲಕ್ಷ ವಿಮೆ ಸಿಗಲಿದೆ. ಇದು ಕುಟುಂಬದ ಸುರಕ್ಷತೆಗೆ ಮಹತ್ವದ ಸುಯೋಗವಾಗಿದ್ದು, ಕುಟುಂಬಕ್ಕೆ ಜೀವನಾಧಾರವಾಗಿದೆ.ಈ ಮೂಲಕ ನೀವು ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು.
![](https://davangerevijaya.com/wp-content/uploads/2024/07/IMG-20240715-WA0352.jpg)
ಅಪಘಾತ ಅಥವಾ ಅಪಮೃತ್ಯು ಸಂಭವಿಸಿದಾಗ ಈ ಜೀವ ವಿಮೆ ಉಪಯೋಗವಾಗಲಿದೆ. ಇನ್ನು ಅಪಘಾತ ಆದ ವ್ಯಕ್ತಿಗೆ ಯಾವುದೇ ಭಾಗದಲ್ಲಿ ಊನಾದರೂ ಅವನ ಕುಟುಂಬಕ್ಕೆ 10 ಲಕ್ಷ ಜೀವವಿಮೆ ಸಿಗುತ್ತದೆ.
ಇದಲ್ಲದೆ, ಆತ ಚಿಕಿತ್ಸೆ ಹೊಂದುತ್ತಿದ್ದರೆ ಮೆಡಿಕಲ್ ಎಮರ್ಜೆನ್ಸಿಗಾಗಿ ಸೀರಿಯಸ್ ಕಂಡಿಷನ್ಗಳಲ್ಲಿ 60,000 ರೂಪಾಯಿ ಮತ್ತು ಸಾಮಾನ್ಯ ಕಂಡಿಷನ್ಗಳಲ್ಲಿ 30,000 ರೂಪಾಯಿ ಸಹಾಯ ದೊರಕುತ್ತದೆ. ಆದ್ದರಿಂದ ದಯವಿಟ್ಟು ಎಲ್ಲರೂ ಈ ವಿಮೆ ಪಾಲಿಸಿಯನ್ನ ಮಾಡಿಸಿ. ನಿಮಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ನ ಕಾಂಟಾಕ್ಟ್ ಮಾಡಿ. ಅಥವಾ ಸಂತೋಷ್ ಈ ನಂಬರ್ ಗೆ 88611 26883 ಸಂಪರ್ಕಿಸಿ
![](https://davangerevijaya.com/wp-content/uploads/2024/07/IMG-20240716-WA0138.jpg)