ದಾವಣಗೆರೆ: ಜಿಲ್ಲಾ ಸಹಕಾರ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ 13 ಮಂದಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಸಿರಿಗೆರೆ ರಾಜಣ್ಣ, ಉಪಾಧ್ಯಕ್ಷೆಯಾಗಿ ಮಂಜುಳಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದಾವಣಗೆರೆ ತಾಲೂಕಿನ ಎಲೆಬೇತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಿದ್ದೇಶ್, ಎಚ್.ಆರ್. ಹರಿಹರ ತಾಲೂಕಿನ ಕೆಂಚನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎಚ್‌.ಕೆ. ಮಹೇಶ್, ಜಗಳೂರು ತಾ.ಕೆಚ್ಚೇನಹಳ್ಳಿ ಕೃಷಿ ಪತ್ತಿನ ಸಂಘಕ್ಕೆ ಎಸ್.ದೀಪಕ್ ಪಟೇಲ್, ಚನ್ನಗಿರಿ ತಾ.ಬಸವಾಪಟ್ಟಣದ ಕೃಷಿ ಪತ್ತಿನ ಸಂಘಕ್ಕೆ ಎಸ್.ಜಿ. ಸತೀಶ್, ಹೊನ್ನಾಳಿ ತಾ. ಕೆಂಗಲಹಳ್ಳಿಯ ಕೃಷಿ ಪತ್ತಿನ ಸಂಘಕ್ಕೆ ಕೆ.ಎಚ್. ಷಣ್ಮುಖಪ್ಪ, ನ್ಯಾಮತಿ ತಾ.ಸವಳಂಗದ ಕೃಷಿ ಪತ್ತಿನ ಸಂಘಕ್ಕೆ ಷಣ್ಮುಖಪ್ಪ ಆಯ್ಕೆಯಾಗಿದ್ದಾರೆ.

ದಾವಣಗೆರೆಯ ಶ್ರೀಕನ್ನಿಕಾಪರಮೇ ಶ್ವರಿ ಸಹಕಾರ ಬ್ಯಾಂಕ್‌ನ ಆರ್.ಜಿ. ಶ್ರೀನಿವಾಸಮೂರ್ತಿ, ಮಲೆಬೆನ್ನೂರು ಕ್ರೆಡಿಟ್ ಕೋ-ಆಪರೇಟಿವ್ ಸಂಸ್ಥೆಯ ಸಿರಿಗೆರೆ ರಾಜಣ್ಣ, ಕೆಂಚಮ್ಮನಹಳ್ಳಿ ಹಾಲು ಉತ್ಪಾದಕರ ಸಂಘದ ಕೆ.ಜಿ. ಸುರೇಶ್, ಬೆನಕನಹಳ್ಳಿ ಹಾಲು ಉತ್ಪಾದ ಕರ ಸಂಘದ ಎಚ್‌.ಜಿ. ಮಂಜುಳಾ, ಚನ್ನಗಿರಿ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಷಣ್ಮುಖಪ್ಪ, ದಾವಣಗೆರೆ ಮಹಿಳಾ ಪತ್ತಿನ ಸಹಕಾರ ಸಂಘದ ಎಸ್. ಎಸ್. ನಿರ್ಮಲ, ಸರ್ವೋದಯ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘದ ಈ ಬಸವರಾಜ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್. ಮಂಜುಳಾ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್. ಮಲ್ಲಿಕಾರ್ಜುನ್, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಸೂಚನೆ ಮೇರೆಗೆ ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟಕ್ಕೆ ನೂತನವಾಗಿ ನಿರ್ದೇಶಕರನ್ನು ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Share.
Leave A Reply

Exit mobile version