ದಾವಣಗೆರೆ : ಇನ್ಮುಂದೆ ಯಾರಾದ್ರೂ ಮೊಸರು ತಂದಿದ್ದೇನೆ ಉಪ್ಪಿನಕಾಯಿ ಕೊಡಿ‌ ಅಂತ ಮನೆ ಬಾಗಿಲಿಗೆ ಬಂದ್ರೆ ಮಹಿಳೆಯರು ಎಚ್ಚರದಿಂದ ಇರಬೇಕು….ಅಯ್ಯೋ ಯಾಕೆ ಎಂದು ಪ್ರಶ್ನೆ  ಕೇಳೋರಿಗೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.

ಹೌದು….ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ  ಗ್ರಾಮವೊಂದರಲ್ಲಿ‌ ವ್ಯಕ್ತಿಯೊಬ್ಬ ಉಪ್ಪಿನಕಾಯಿ ಕೇಳಲು ಬಂದು ಮಹಿಳೆಯೊಬ್ಬಳ ಕೆನ್ನೆ ಕಚ್ಚಿದ್ದಾನೆ.

ಮಂಜಪ್ಪ ಆಲಿಯಾಸ್ ಮಂಜುನಾಥ್ ಡಿ.ಹೆಚ್. ಎಂದು ಹೇಳಲಾಗುತ್ತಿದ್ದು, ಆ ವ್ಯಕ್ತಿಯನ್ನು ಬಂಧಿಸಬೇಕೆಂದು ಅಲ್ಲಿನ ಗ್ರಾಮದ ಮಹಿಳೆಯರು ದಾವಣಗೆರೆಯ ಎಸ್ಪಿ ‌ಕಚೇರಿ ಬಳಿ ಆರೋಪಿಯ ಫೊಟೋವನ್ನು ಹಿಡಿದು  ಪ್ರತಿಭಟನೆ  ನಡೆಸಿದರು.

ಏನಿದು ಘಟನೆ?

ಮನೆಯಲ್ಲಿ ಒಬ್ಬಂಟಿ ಮಹಿಳೆ ಇರುವುದನ್ನು ಗಮನಿಸಿದ ಕಾಮುಕ ನನಗೆ ಉಪ್ಪಿನಕಾಯಿ ಬೇಕು ಎಂದು ಕೇಳುತ್ತಾ ಮನೆಯೊಳಗೆ ನುಗ್ಗಿದ್ದಾನೆ. ಬಳಿಕ ಅತ್ಯಾಚಾರಕ್ಕೆ ಯತ್ನಿಸಿ ಕೆನ್ನೆಯನ್ನು ಕಚ್ಚಿ ಪರಾರಿಯಾಗಿದ್ದಾನೆ. ಡಿಸೆಂಬರ್ 2 ರಂದು ಈ ಘಟನೆ ನಡೆದಿದ್ದು,  ಪೊಲೀಸರಿಗೆ ದೂರು ಕೊಟ್ಟರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಹಿಳೆಯರು ಎಸ್ಪಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಕ್ರಮಕ್ಕೆ ಒತ್ತಾಯ

ಮಹಿಳೆ ಮನೆಯಲ್ಲಿ ಒಬ್ಬಳೇ ಇರುವುದನ್ನು ಗಮನಿಸಿ ಅತ್ಯಾಚಾರಕ್ಕೆ ಯತ್ನ ಮಾಡಿದ ಆರೋಪಿಯನ್ನು ಬಂಧಿಸಿ ಆತನಿಗೆ ತಕ್ಕ ಶಿಕ್ಷೆ ಕೊಡಬೇಕು. ದೂರು ಕೊಟ್ಟು ಹಲವು ದಿನಗಳಾದರೂ ಆತನನ್ನು ಆರೋಪಿ ಬಂಧಿಸದ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಹಲವು ಮಹಿಳೆಯರು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಗೆ ಮನವಿ ಸಲ್ಲಿಸಿದರು‌.

  ಆದಷ್ಟು ಬೇಗ ಆರೋಪಿಯನ್ನು ಬಂಧಿಸುವ ಭರವಸೆಯನ್ನು ಎಸ್ಪಿ ನೀಡಿದರು.

Share.
Leave A Reply

Exit mobile version