ಚಿತ್ರದುರ್ಗ: ಅವರಿಬ್ಬರು ಒಂದು ವರ್ಷ ಪ್ರೀತಿಸಿ, ನಾಲ್ಕು ದಿನಗಳ ಹಿಂದೆ ಮದುವೆಯಾಗಿದ್ದರು ಆ ನವ ಜೋಡಿ ಇಂದು ಚಿತ್ರದುರ್ಗದ ಎಸ್ಪಿ ಕಚೇರಿಗೆ ಭೇಟಿ ನೀಡಿ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ.

ಚಳ್ಳಕೆರೆ ತಾಲೂಕಿನ ಚಿಕ್ಕಮಧುರ ಗ್ರಾಮದ ಮಲ್ಲಿಕಾರ್ಜುನ್ ಹಿರಿಯೂರು ತಾಲೂಕಿನ ಸೊಂಡೆಕೆರೆಯ ಕೀರ್ತಿ ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು ಯುವತಿ ಬಿಎಸ್ಸಿ ಓದುತ್ತಿರೋ ಕೀರ್ತಿ ಖಾಸಗಿ ಬಸ್ ಚಾಲಕನಾಗಿರೋ ಯುವಕ ಮಲ್ಲಿಕಾರ್ಜುನನ್ನು ಪ್ರೀತಿಸಿ ಮಂಡ್ಯದ ದೇವಸ್ಥಾನದ ಒಂದರಲ್ಲಿ ಮದುವೆಯಾಗಿದ್ದರು.

ಕೀರ್ತಿಯ ಪೋಷಕರು ನಿಮ್ಮನ್ನು ಬದುಕುವುದಕ್ಕೆ ಬಿಡುವುದಿಲ್ಲ ಎಂದು ಆರೋಪ ಮಾಡಿದ ಹಿನ್ನೆಲೆ ನವ ಜೋಡಿಗಳು ಚಿತ್ರದುರ್ಗದ ಎಸ್ಪಿ ಕಚೇರಿ ಮೆಟ್ಟಿಲು ಏರಿ ರಕ್ಷಣೆ ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ

Share.
Leave A Reply

Exit mobile version