ದಾವಣಗೆರೆ.ಮೇ.೧೯; ರಾಜಕಾರಣ ಎಂದರೆ ಸಾಕು ಎನ್ನುವಂತಾಗಿದೆ, ಇಂತಹ ಸನ್ನಿವೇಶದಲ್ಲಿ ಉತ್ತಮ ರಾಜಕಾರಣಿಗಳು ಸಿಗುವುದು ಅಪರೂಪ, ಈ ನಡುವೆ ವೈ.ಎ ನಾರಾಯಣ ಸ್ವಾಮಿ ಜನಮೆಚ್ಚಿದ ರಾಜಕಾರಣಿ ಎಂದರೆ ತಪ್ಪಾಗಲ್ಲ ಎಂದು ಶೋಷಿತ ವರ್ಗಗಳ ಮುಖಂಡರಾದ ಬಾಡದ ಆನಂದರಾಜು ತಿಳಿಸಿದ್ದಾರೆ.ಜಿಎಂಐಟಿ ಅತಿಥಿ ಗೃಹದಲ್ಲಿ ಶಾಸಕ ನಾರಾಯಣಸ್ವಾಮಿಯವರನ್ನ ಸನ್ಮಾನಿಸಿ ಈ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ವೈ.ಎ ನಾರಾಯಣ ಸ್ವಾಮಿ ಅವರು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ, ಏಕೆಂದರ ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಏಕೈಕ ವ್ಯಕ್ತಿಯಾಗಿದ್ದಾರೆ. ಈ ಕಾರಣ ಇವರು ಈ ಬಾರಿ ಅತೀ ಹೆಚ್ಚು ಮತಗಳ ಅಂತರದಿಂದ ಜಯಗಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡುವ ಅವಶ್ಯಕತೆ ಇದೇ, ಶಕ್ತಿ ಕೇಂದ್ರದಲ್ಲಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ನ್ಯಾಯುತವಾಗಿ ಹೋರಾಟ ಮಾಡುವ ಅವಶ್ಯಕತೆ ಇದೇ ಇದಕ್ಕೆ ಸೂಕ್ತ ಎಂದರೆ ವೈ ಎ ನಾರಾಯಣ ಸ್ವಾಮಿಯವರು, ಪ್ರಬುದ್ಧರು ಇಂತಹ ವ್ಯಕ್ತಿಗಳನ್ನ ಆಯ್ಕೆ ಮಾಡಬೇಕು ಎಂದರು. ಹಿಂದುಳಿದ ಹಾಗೂ ಎಲ್ಲಾ ಸಮುದಾಯದ ಪದವೀಧರರು ಈ ಬಾರಿ ಒಮ್ಮತದಿಂದ ಗೆಲ್ಲಿಸಬೇಕು ಸರ್ವ ಸಮಾಜದವರನ್ನ ಸಮಾನವಾಗಿ ಕಾಣುವ ವೈ. ಎ ನಾರಾಯಣ ಸ್ವಾಮಿಗೆ ಸಂಪೂರ್ಣ ಬೆಂಬಲ ನೀಡಬೇಕು ಪದವೀಧರ ಕ್ಷೇತ್ರದ ಚುನಾವಣೆ ಮಾದರಿಯಾಗಬೇಕೆಂದು ಬಾಡದ ಆನಂದರಾಜು ತಿಳಿಸಿದರು.ಇದೇ ಸಂದರ್ಭದಲ್ಲಿ ಪದವಿಧಾರರಾದ ನಾಗರಾಜ್ ನಾಯ್ಕ್, ರಾಜು, ಶ್ರೀನಿವಾಸ್, ಮುರುಳಿಯಾದವ್, ತಿಮ್ಮೇ

Share.
Leave A Reply

Exit mobile version