ದಾವಣಗೆರೆ: ದಾವಣಗೆರೆ ಕ್ಷೇತ್ರಕ್ಕೂ ಮೈಸೂರು ಅರಮನೆಗೂ ಅವಿನಾಭಾವ ಸಂಬಂಧವಿದೆ ಅದಕ್ಕೆ ಕಾರಣ ದಾವಣಗೆರೆ ಅಂದಿನ ಮೈಸೂರು ಮಹಾಸಂಸ್ಥಾನಕ್ಕೆ ಒಳಪಟ್ಟಿತ್ತು ಇಂದು ಪ್ರಧಾನಿ ನರೇಂದ್ರಮೋದಿಯವರು ಮೈಸೂರು ಮಹಾ ಸಂಸ್ಥಾನದ ಪ್ರತಿಧ್ವನಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಮೈಸೂರು ಮಹಾರಾಜರು ಹಾಗೂ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹೇಳಿದರು.

ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಪರ ಬೃಹತ್ ರೋಡ್ ಶೋ‌ ಮೂಲಕ ಮತಯಾಚನೆ ಮಾಡಿ ಮಾತನಾಡಿದ ಮೈಸೂರು‌ಮಹಾರಾಜರು ದಾವಣಗೆರೆಯೊಂದಿಗಿನ ಒಡನಾಟದ ಬಗ್ಗೆ ಹೇಳಿದರು.ಮುಂದುವರೆದು ಮಾತನಾಡಿದ ಅವರು‌ ಹಿಂದಿನ‌ಕಾಲದಲ್ಲಿ ಮೈಸೂರಿನ ಅರಸರು ಮಾಡಿದ ಅಭಿವೃದ್ಧಿ ಕಾರ್ಯದಂತೆ ಇಂದು ಮೋದೀಜಿಯವರು ಅಭಿವೃದ್ಧಿ ಕೈಗೊಂಡಿದ್ದಾರೆ. ಮೈಸೂರು ಬ್ರಾಂಡ್ ಮೂಲಕ ವಿಶ್ವ ವಿಖ್ಯಾತಿ ಪಡೆದಿದ್ದರು.ಆಧುನಿಕತೆಯ ಮೂಲಕ ಅನೇಕ ಯೋಜನೆಗಳನ್ನು ಕೈಗೊಂಡಿದ್ದರು.ಅದೇ ರೀತಿ ಪ್ರಧಾನಿಯವರು ಮೇಕ್‌ಇನ್ ಇಂಡಿಯಾ ಮೂಲಕ ಸ್ವದೇಶಿ ಉತ್ಪನ್ನಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.

ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಸೃಷ್ಠಿಸುವಂತಹ ಅವಕಾಶಗಳನ್ನು ನೀಡಿದ್ದಾರೆಂದರು.ಭಾರತೀಯ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವಂತಹ ಯೋಜನೆಗಳನ್ನು ರೂಪಿಸಿದ್ದಾರೆ.ಮೀಸಲಾತಿ,ಮಹಿಳಾ ಸಬಲೀಕರಣ ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ನೆರವು ನೀಡಿದ್ದಾರೆ.ಪ್ರಧಾನಿಯವರು ೫೬ ಯೋಜನೆಗಳ ಮೂಲಕ ದೇಶವನ್ನು‌ಮುನ್ನೆಲೆಗೆ‌ ತಂದಿದ್ದಾರೆಂದರು.ಮಹಿಳೆಯರು, ಯುವಕರಿಗೆ ಸ್ಟಾರ್ಟ್ ಅಪ್ ಸೃಷ್ಠಿಸಲು ಉತಗತೇಜನ ನೀಡಿದ್ದಾರೆ.ಮೈಸೂರಿನ ಅರಸರಂತೆ ಹಿಂದೂ‌ಪರಂಪರೆ ಉಳಿಸುವಲ್ಲಿ ನಿರತರಾಗಿದ್ದಾರೆ.ರಾಮಜನ್ಮ‌ಭೂಮಿಯಲ್ಲಿ ಶ್ರೀರಾಮನ‌ಪ್ರತಿಷ್ಠಾಪನೆ,ಕಾಶಿ ವಿಶ್ವನಾಥ ದೇಗುಲ ಅಭಿವೃದ್ಧಿ ಮಾಡಿದ್ದಾರೆ.ಅಂದಿನಕಾಲದಲ್ಲಿ ಮೈಸೂರು‌ಮಹಾಸಂಸ್ಥಾನ ಕೈಗೊಂಡ ಜನಪರ ಯೋಜನೆಗಳನ್ನು‌ ಮೋದಿ ಮುಂದುವರೆಸಿದ್ದಾರೆ.

 

ಇಡೀ ಭಾರತವನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿದಿದ್ದಾರೆಂದರು.ವಿಕಸಿತ ಭಾರತ‌ಕ್ಕಾಗಿಮೋದಿ ಜೀ ಕೈ ಬಲಪಡಿಸೋಣ ಅದಕ್ಕಾಗಿ ದಾವಣಗೆರೆ ‌ಕ್ಷೇತ್ರದಲ್ಲಿ ಗಾಯತ್ರಿ ಸಿದ್ದೇಶ್ವರ್ ಗೆ ಮತ ಹಾಕಬೇಕು‌ ಎಂದು‌ ಜನರಲ್ಲಿ ಮನವಿ ಮಾಡಿದರು.

ಈ ವೇಳೆ‌ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್ ನಾಗಪ್ಪ, ಬಿಜೆಪಿ‌ಮುಖಂಡರಾದ ಎಸ್ ಟಿ‌.ವೀರೇಶ್,ಪಿ.ಸಿ‌ಶ್ರೀನಿವಾಸ್,ವಾಣಿಭೂಷಣ್ ಸೇರಿದಂತೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಇದ್ದರು.

Share.
Leave A Reply

Exit mobile version