ಚನ್ನಗಿರಿ : ಪಕ್ಷವು  ಯಾರಿಗೆ ಸೂಚಿಸುತ್ತದೆಯೋ ಅವರ ಗೆಲುವಿಗೆ ಎಲ್ಲರೂ ಸೇರಿ ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇವೆ ಎಂದು ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿ‌ ಗಾಯಿತ್ರಿ ಸಿದ್ದೆಶ್ವರವರನ್ನು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಬೆಂಬಲಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತದೆ.

ಚನ್ನಗಿರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶಕ್ಕೆ  ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರ  ಆಗತ್ಯವಿದ್ದು  ಕಾರ್ಯಕರ್ತರು ಲೋಕಸಭಾ ಚುನಾವಣೆಯಲ್ಲಿ  ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಪಕ್ಷಬೇದವನ್ನು ಮರೆತು  ಕೆಲಸ ಮಾಡಬೇಕು.

 ಈ ಬಾರಿ  ಬಿಜೆಪಿ  ತುಂಗಾದಿಂದ  ಗಂಗಾದವರೆಗೆ  ಎಂಬ  ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿದೆ. ನಮ್ಮಲ್ಲಿ ಸಮಸ್ಯೆಗಳು  ಇರುವುದು ಸಹಜ. ಆದರೆ  ಕಳೆದು ಹೋದ ಸಮಯದ  ಬಗ್ಗೆ ಚಿಂತನೆ ಮಾಡದೇ ಆಗುವಂತಹ ಕೆಲಸಗಳ ಬಗ್ಗೆ  ಹೆಚ್ಚಿನ ಗಮನಹರಿಸಬೇಕಿದೆ. ದೇಶದಲ್ಲಿ ಬಿಜೆಪಿ  ಪಕ್ಷವು  ಒಂದು ಬಲಿಷ್ಟವಾದ ಪಕ್ಷವಾಗಿದ್ದು ಚುನಾವಣೆಗೆ  ಸ್ಪರ್ಧೆಯನ್ನು ಮಾಡಲು ಕೇಳುವ ಹಕ್ಕು  ಪ್ರತಿಯೊಬ್ಬ ಕಾರ್ಯಕರ್ತರಿಗಿದೆ. ಅದರಂತೆ ಪಕ್ಷವು  ಯಾರಿಗೆ ಸೂಚಿಸುತ್ತದೆಯೋ ಆವರ ಗೆಲುವಿಗೆ ಎಲ್ಲರೂ ಸೇರಿ ಪ್ರಾಮಾಣಿಕವಾದ ಪ್ರಯತ್ನ ಮಾಡಲಾಗುವುದು ಎಂದರು.

 ಚನ್ನಗಿರಿ ವಿಧಾನಸಭಾ  ಕ್ಷೇತ್ರದಲ್ಲಿಯೂ ಸಹ ಎಚ್.ಎಸ್.ಶಿವಕುಮಾರ್‌ರವರ  ಜೊತೆಗೂಡಿ  ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಾಗುವುದು  ಎಂದರು.  ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ದಿಗ್ಗೇನಹಳ್ಳಿ ನಾಗರಾಜ್, ಪುರಸಭೆ  ಸದಸ್ಯರಾದ ಪಾರಿ ಪರಮೇಶ್, ಪಟ್ಲಿನಾಗರಾಜ್, ಕಮಲಾ ಹರೀಶ್. ಸವಿತಾ ರಾಘವೇಂದ್ರಶೆಟ್ಟಿ, ಕೆ.ಪಿ.ಎಂ.ಲತಾ, ಸುಣಿಗೆರೆ ಕುಮಾರ್ ಇತರರು  ಹಾಜರಿದ್ದರು.

Share.
Leave A Reply

Exit mobile version