ಶಿವಮೊಗ್ಗ.
ಕಾಶಿ ಪೀಠದ ಜಗದ್ಗುರುಗಳಾದ ಡಾಕ್ಟರ್ ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಎಂಟು ದಿನಗಳ ಆಧ್ಯಾತ್ಮಿಕ ಪ್ರವಚನ ಶಿವ ತತ್ವ ಚಿಂತನೆ ಕಾರ್ಯಕ್ರಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ನಗರ ಘಟಕದ ಅಧ್ಯಕ್ಷರಾದ ವೇದಮೂರ್ತಿ ಪ್ರದೀಪ್ ಚಂದ್ರ ಸಿಂಗಟಗೆರೆ ಮಠ ಇವರ ಮನೆಗೆ ಆಗಮಿಸಿ ಪಾದಪೂಜೆ ನೆರವೇರಿಸಿ ಎಲ್ಲಾ ಭಕ್ತರಿಗೆ ಪ್ರಸಾದ ವಿತರಿಸಿದರು.
ಬೈಕ್ ಹಾಗೂ ಕಾರ್ ರ್ಯಾಲಿಗಳ ಮುಖಾಂತರ ತೆರಳಿ ನಂತರ ಪೂರ್ಣ ಕುಂಭ ಸ್ವಾಗತದೊಂದಿಗೆ ಆಗಮಿಸಿ ಎಲ್ಲರಿಗೂ ಆಶೀರ್ವದಿಸಿದರು ಕಾರ್ಯಕ್ರಮದಲ್ಲಿ ಸಿ ಎ ಹಿರೇಮಠ ಮಹಾಲಿಂಗ ಶಾಸ್ತ್ರಿಗಳು ಕಾಟನ್ ಜಗದೀಶ್ ಜಂಗಮ ಸಮಾಜದ ಅಧ್ಯಕ್ಷರರಾದ ಚಂದ್ರಯ್ಯನವರು ಕಾರ್ಯದರ್ಶಿ ಪುಟ್ಟಣ್ಣಹಿರೇಮಠ, ರುದ್ರಪ್ರಸಾದ್ ,ಮಲ್ಲಿಕಾರ್ಜುನ್, ಸೋಮನಾಥ್ ಕೆಆರ್. ಜಿ ವಿಜಯಕುಮಾರ್ ಬಾಪೂಜಿ ಮಲ್ಲಿಕಾರ್ಜುನ್ ಕಾನೂರ್. ಹಿರೇಮಠ್ ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.