ವಾಣಿಜ್ಯ ನಗರಿ ದಾವಣಗೆರೆಯಲ್ಲಿ ನಡೆಯುವ ಪ್ರತಿದಿನದ ಕಾರ್ಯಕ್ರಮಗಳ ವಿವರ. ದಾವಣಗೆರೆ ನಗರ ಹಾಗೂ ಹರಿಹರ, ಹೊನ್ನಾಳಿ, ನ್ಯಾಮತಿ, ಜಗಳೂರು, ಚನ್ನಗಿರಿ ತಾಲೂಕುಗಳಲ್ಲಿ ಪ್ರತಿನಿತ್ಯ ನಡೆಯುವ ಪ್ರತಿ ಕಾರ್ಯಕ್ರಮದ ಮಾಹಿತಿಯನ್ನು ದಾವಣಗೆರೆವಿಜಯ.ಕಾಂ ನೀಡಲಿದೆ. ನಿಮ್ಮ ಊರುಗಳಲ್ಲಿ ನಡೆಯುವ ಕಾರ್ಯಕ್ರಮದ ಮಾಹಿತಿಯನ್ನು ಮೂರು ದಿನಗಳ ಮುಂಚಿತವಾಗಿ ನೀಡಿದರೆ ದಾವಣಗೆರೆವಿಜಯ.ಕಾಂ ಉಚಿತವಾಗಿ ಪ್ರಕಟಿಸಲಿದೆ. ನಿಮ್ಮೂರಿನಲ್ಲಿ ನಡೆಯುವ ಕಾರ್ಯಕ್ರಮದ ಮಾಹಿತಿಯನ್ನು ನಮ್ಮ 9113614148 ಈ ನಂಬರ್‌ಗೆ ವಾಟ್ಸ್ಆಪ್ ಮಾಡಿ.

ಬಿ.ಸಹನಾ ಭರತನಾಟ್ಯ ರಂಗ ಪ್ರವೇಶ

ದಾವಣಗೆರೆ  ನಗರದ ಕುವೆಂಪು ಕನ್ನಡ ಭವನದಲ್ಲಿ ನೃತ್ಯ ಕಲಾವಿದೆ ಬಿ.ಸಹನಾ ಭರತನಾಟ್ಯ ರಂಗ ಪ್ರವೇಶ ಮಾಡುವರು.ಅಧ್ಯಕ್ಷತೆಯನ್ನು ಎಸ್.ಎಸ್.ಎನ್.ಪಿ.ಎಸ್.ಶಾಲೆಯ ಮುಖ್ಯಸ್ಥ ಮಂಜುನಾಥ್ ರಂಗರಾಜು ವಹಿಸುವರು.

ಭಾರತೀಯ ಮಹಿಳಾ ಒಕ್ಕೂಟದ ಸಮ್ಮೇಳನ

ದಾವಣಗೆರೆ ನಗರದಲ್ಲಿ ಭಾರತೀಯ ಮಹಿಳಾ ಒಕ್ಕೂಟದ ಸಮ್ಮೇಳನ ಡಿ.2 ಹಾಗೂ ಡಿ.3 ರಂದು ನಡೆಯಲಿದೆ. ಜಯದೇವ ಸರ್ಕಲ್  ಹತ್ತಿರದ ನಾಟ್ಯಾಚಾರ್ಯ ಕುಲಕರ್ಣಿ ರಸ್ತೆಯಲ್ಲಿನ ಕಾಂ.ಗೀತಾ ಮುಖರ್ಜಿ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಯಲಿದೆ. ಮಧ್ಯಾಹ್ನ 12 ಕ್ಕೆ ಜಯದೇವ ಸರ್ಕಲ್ ನಿಂದ ಮೆರವಣಿಗೆ ನಡೆಯಲಿದೆ. ಎನ್ಎಫ್ ಐ ಡಬ್ಲ್ಯೂ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಜ್ಯೋತಿ ಬಹಿರಂಗ ಸಭೆಯ ಅಧ್ಯಕ್ಷತೆವಹಿಸುವರು.

ಜಗದ್ಗುರು ಜಯದೇವ ಪ್ರೌಢ ಶಾಲೆಗಳ 60 ರ ಸಂಭ್ರಮಾಚರಣೆ

  • ಸ್ಥಳ : ವಿನೋಭನಗರದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢ ಶಾಲಾವರಣ
  • ಸಮಯ : ಬೆಳಗ್ಗೆ 10.30.ಕ್ಕೆ 
  • ಕೃತಿ ಲೋಕಾರ್ಪಣೆ : ಸಂಸ್ಥಾಪಕರ ದಿನ ಹಾಗೂ ಕೃತಿ ಲೋಕಾರ್ಪಣೆ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ
  • ಮುಖ್ಯ ಅತಿಥಿಗಳು : ಕೃತಿ ರಚನಾಕಾರರಾದ ಆರುಂಧತಿ ಟಿ.ಸಜ್ಜನ್, ಮುಖ್ಯ ಅತಿಥಿಗಳಾಗಿ ಎಚ್.ಬಿ.ಮಂಜುನಾಥ್ ಆಗಮಿಸುವರು.

ಶ್ರೀ ಶಿವಾನಂದ ತೀರ್ಥಸ್ವಾಮಿಗಳವರ ಪುಣ್ಯರಾಧನೆ

  • ಸ್ಥ : ಜಯದೇವ ಸರ್ಕಲ್ ನಲ್ಲಿರುವ ಶ್ರೀ ರಾಜನಹಳ್ಳಿ ಹರಿಹರಪ್ಪ ಟ್ರಸ್ಟ್ ನ ಶ್ರೀ ಗುರು ದತ್ತಾತ್ರೇಯ ದೇವಾಲಯದ ಶ್ರೀ ಶಿವಾನಂದ ತೀರ್ಥಗುರು ಅಧ್ಯಾತ್ಮ ಮಂದಿರ
  • ಸಮಯ : ಬೆಳಗ್ಗೆ 9 ಕ್ಕೆ ಶ್ರೀಗಳ ಪಾದುಕೆಗಳಿಗೆ ಲಘುನ್ಯಾಸ ಪೂರ್ವಕ ಏಕವಾರ  ರುದ್ರಾಭಿಷೇಕ, ಮಧ್ಯಾಹ್ನ 1.30 ಕ್ಕೆ ತೀರ್ಥ ಪ್ರಸಾದ.

ಜಿಲ್ಲಾ ವಕೀಲರ ಸಂಘದಿಂದ ಉಪನ್ಯಾಸ ಮಾಲಿಕೆ-4ಸಾಮಾಜಿಕ ಮೌಲ್ಯ ಮತ್ತು ಸಮಕಾಲೀನ ಸಮಾಜ ಕುರಿತು ಉಪನ್ಯಾಸ

  • ಸ್ಥಳ : ವಕೀಲರ ಸಾಂಸ್ಕೃತಿಕ ಸಮುದಾಯ ಭವನ
  • ಸಮಯ : ಮಧ್ಯಾಹ್ನ 2.30ಕ್ಕೆ
  • ಉದ್ಘಾಟನೆ : ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ,
  • ಮುಖ್ಯ ಅತಿಥಿ : ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ
  • ಹರಿಹರ : ಇಂದಿನಿಂದ ಎನ್ನೆಸ್ಸೇಸ್ ಶಿಬಿರ, ವಾರ್ಷಿಕ ಶಿಬಿರ
  • ಸ್ಥಳ : ಜಿಗಳಿಯ ಉನ್ನತೀಕರಿಸಿದ ಸ.ಹಿ.ಪ್ರಾಥಮಿಕ ಶಾಲೆ ಆವರಣ, 
  • ಆಯೋಜಕರು : ಹರಿಹರದ ಸರಕಾರಿ ಪ್ರಥಮ ದರ್ಜೆ ಕಾಲೇಜು
  • ಸಮಯ : ಸಂಜೆ.5.30ಕ್ಕೆ

ಇಂದಿನ ಪತ್ರಿಕಾಗೋಷ್ಠಿಗಳು

  • ಮಧ್ಯಾಹ್ನ 11.20 ಕ್ಕೆ ಮಾಜಿ ಶಾಸಕ ರೇಣುಕಾಚಾರ್ಯ ಸುದ್ದಿಗೋಷ್ಠಿ
  • ಮಧ್ಯಾಹ್ನ 11.40.ಹನುಮಂತಪ್ಪ ಸೊರಟೂರು
  •  ಮಧ್ಯಾಹ್ನ 12.00. ಬ್ರಹ್ಮಕುಮಾರಿ ಸಮಾಜ
  • ಮಧ್ಯಾಹ್ನ 12.20 ರೌಂಡ್ ಟೇಬಲ್ 76
Share.
Leave A Reply

Exit mobile version