ಭದ್ರಾವತಿ: ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಸಮನ್ವಯ ಸಾಧಿಸುವಂತೆ ಮಾಡಲು ಉಡುಪಿ ಮಾಜಿ ಶಾಸಕ ಹಾಗೂ ಲೋಕಸಭಾ ಚುನಾವಣಾ ಪ್ರಭಾರ ರಘುಪತಿ ಭಟ್ ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿ ಅವರ ನಿವಾಸದಲ್ಲಿ ಪಕ್ಷದ ಮುಖಂಡರೊಡನೆ ನಡೆಸಿದರು. ಚುನಾವಣಾ ಪೂರ್ವ ಸಿದ್ದತೆ ಪರಿಶೀಲನೆ ಹಾಗೂ ಉಭಯ ಪಕ್ಷಗಳೊಡನೆ ಸಮನ್ವಯಕ್ಕಾಗಿ ಮಾತುಕತೆ ನಡೆಸಿದ ಅವರು ಪ್ರಪಂಚದ ಶ್ರೇಷ್ಟತೆಯ ಬಹುದೊಡ್ಡ ಪ್ರಜಾಪ್ರಭುತ್ವದ ಚುನಾವಣೆಯಾಗಿದೆ. ಈ ಚುನಾವಣೆಯನ್ನು ಎರಡೂ ಪಕ್ಷಗಳು ಜಂಟಿಯಾಗಿ ಎದುರಿಸೋಣ. ಪ್ರಧಾನಿಮೋದಿರವರ ಕೈ ಬಲಪಡಿಸಲು ಶ್ರಮಿಸಿ ದೇಶ ಕಟ್ಟೋಣ. ಹಿಂದೂ ವಿರೋಧಿಗಳಿಗೆ ಮತ್ತು ರಾಷ್ಟ್ರ ವಿರೋಧಿಗಳಿಗೆ ತಕ್ಕ ಪಾಠ ಕಲಿಸುವ ಹಾಗೂ ಚುನಾವಣೆ ಮೂಲಕ ಉತ್ತರಿಸುವ ಕೆಲಸ ಮಾಡೋಣವೆಂದರು.

ಸಭೆಯಲ್ಲಿ ಜೆಡಿಎಸ್‌ ಪಕ್ಷದ ಅಧ್ಯಕ್ಷ ಆರ್.ಕರುಣಾಮೂರ್ತಿ, ಮುಖಂಡರಾದ ಎಸ್. ಕೆ.ಉಮೇಶ್, ಮಂಜುನಾಥ್. ಮಧುಸೂಧನ್, ರವಿಕುಮಾ‌ರ್, ಉದಯಕುಮಾ‌ರ್, ಬಿಜೆಪಿ ಮುಖಂಡರಾದ ಧರ್ಮಪ್ರಸಾದ್, ಕೂಡ್ಲಿಗೆರೆ ಹಾಲೇಶ್, ಕೆ.ಹೆಚ್. ತೀರ್ಥಯ್ಯ, ವಿ.ಕದಿರೇಶ್, ಜಿ. ಆನಂದಕುಮಾ‌ರ್, ಚನ್ನೇಶ್, ರುದ್ರೇಶ್ ಮುಂತಾದವರಿದ್ದರು.

Share.
Leave A Reply

Exit mobile version