- ಪ್ರಮುಖ ಸುದ್ದಿ
- ದಾವಣಗೆರೆ ವಿಶೇಷ
- ಕ್ರೈಂ ಸುದ್ದಿ
- ರಾಜಕೀಯ ಸುದ್ದಿ
- ರೈತಮಿತ್ರ
- ಅಡಕೆ ಧಾರಣೆ
- ಚಿನ್ನ, ಬೆಳ್ಳಿ ಧಾರಣೆ
- Blog
Subscribe to Updates
Get the latest creative news from FooBar about art, design and business.
Author: davangerevijaya.com
ನಂದೀಶ್ ಭದ್ರಾವತಿ ದಾವಣಗೆರೆ ದಾವಣಗೆರೆ ಶಿಕ್ಷಣ, ವಾಣಿಜ್ಯ ಕ್ಷೇತ್ರಗಳಲ್ಲಿ ಹೆಗ್ಗಳಿಕೆ ಪಡೆದ ದೇವ ನಗರಿ ಇಲ್ಲಿ ಬೆಣ್ಣೆ ದೋಸೆಗಿಂತ, ಮಂಡಕ್ಕಿ, ಮಿರ್ಚಿ, ಖಾರವನ್ನೇ ಜನ ಹೆಚ್ಚಾಗಿ ಇಷ್ಟಪಡುತ್ತಾರೆ. ಆದ್ದರಿಂದ ದಾವಣಗೆರೆ ಬಿಸಿ ಬಿಸಿ ಮಿರ್ಚಿ, ಮಂಡಕ್ಕಿಗಳಿಂದಲೂ ವೈಶಿಷ್ಟ್ಯತೆ ಪಡೆದಿದೆ. ರುಚಿ, ಗುಣಮಟ್ಟದಲ್ಲಿ ದಾವಣಗೆರೆ ಮಿರ್ಚಿಗೆ ಇಲ್ಲಿನ ಮಿರ್ಚಿಯೇ ಸಾಟಿ. ಕೇವಲ ಕಡ್ಲಿಬೇಳೆ ಹಿಟ್ಟಿನಿಂದ ತಯಾರಿಸುವ ಈ ಮಿರ್ಚಿಯ ರುಚಿ ತಿನ್ನುವವರ ನಾಲಿಗೆ ಮೇಲೆ ದಿನಿವಿಡೀ ಲಾಸ್ಯವಾಡುತ್ತದೆ. ಮಿರ್ಚಿ ತಿನ್ನಲು ಸಂಜೆ ಹೇಳಿಮಾಡಿಸಿದ ಹೊತ್ತು. ಮಳೆಗಾಲ, ಚಳಿಗಾಲದಲ್ಲಿ ಮಿರ್ಚಿಗೆ ವಿಶೇಷ ಮೆರುಗು. ಮಂಡಕ್ಕಿ, ಖಾರದೊಂದಿಗೆ ಮಿರ್ಚಿಯ ಸವಿ ಬರೀ ಹೇಳಲಾಗದು, ತಿಂದೇ ನೋಡಬೇಕು. ಇಂತಹ ಮಿರ್ಚಿಗಳನ್ನು ಸಾಮಾನ್ಯವಾಗಿ ರಾಜ್ಯದ ಎಲ್ಲ ಊರುಗಳಲ್ಲಿ ತಯಾರಿಸುತ್ತಾರೆ. ಆದರೆ, ದಾವಣಗೆರೆ ಕೈಚಳಕವೇ ಬೇರೆ. ಯಾವ ಹೋಟೆಲ್ ಗೂ ಹೋದ್ರು ಸಿಗುತ್ತೇ ಮಿರ್ಚಿ ದಾವಣಗೆರೆಯ ಯಾವುದೇ ಹೋಟೆಲ್ ಗೆ ಹೋದ್ರು ಮಿರ್ಚಿ ಸಿಗುತ್ತದೆ. ಸಿಹಿ ಊಟಕ್ಕೆ ಹೊರತುಪಡಿಸಿದರೆ ಉಳಿದೆಲ್ಲ ಊಟದ ಜತೆ ಮಿರ್ಚಿ ಅದ್ಭುತ ಕಾಂಬಿನೇಷನ್. ತಟ್ಟೆಯಲ್ಲಿ ಒಂದೆರಡು ದಾವಣಗೆರೆ …
ಚನ್ನಗಿರಿ: ಚನ್ನಗಿರಿ ತಾಲೂಕಿನ ಮಾವಿನಹೊಳೆ ಕ್ಷೇತ್ರಕ್ಕೆ ಮಾಜಿ ಸಚಿವರು ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕುಟುಂಬದವರ ಮತ್ತು ಸ್ನೇಹಿತರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ನಡೆಸಿದರು. ನಂತರ ಕ್ಷೇತ್ರದ ದೇವರಾದ ಮಾವಿನಹೊಳೆ ಮಹಾರುದ್ರಸ್ವಾಮಿಯ ದರ್ಶನ ಪಡೆದು ಕಾರ್ತೀಕೋತ್ಸವದ ಎಳ್ಳುಗಂಟನ್ನು ಶಾಮನೂರು ಕುಟುಂಬ ಹಚ್ಚಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಶ್ರೀ ಕ್ಷೇತ್ರವು ಒಂದು ಶಕ್ತಿ ಸ್ಥಾನವಾಗಿದ್ದು, ಪ್ರತಿ ವರ್ಷವೂ ನಮ್ಮ ಕುಟುಂಬದವರೊಂದಿಗೆ ಶ್ರೀ ಕ್ಷೇತ್ರಕ್ಕೆ ಕಾರ್ತೀಕ ಮತ್ತು ಶ್ರಾವಣ ಮಾಸದಲ್ಲಿ ಭೇಟಿ ನೀಡುತ್ತೇವೆ.ಕಾರ್ತಿಕ ಮಾಸದಲ್ಲಿ ಒಂದು ಸೋಮವಾರ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತೇವೆ ಎಂದರು. ಎಂಪಿ ಕ್ಯಾಂಡೇಟ್ ಇನ್ನೂ ತೀರ್ಮಾನವಾಗಿಲ್ಲ ಲೋಕಸಭಾ ಚುನಾವಣೆ ಸಂಬಂಧ ಮಾತನಾಡಿ,ಕಾಂಗ್ರೆಸ್ ಪಕ್ಷದ ವತಿಯಿಂದ ದಾವಣಗೆರೆ ಲೋಕಸಭಾ ಅಭ್ಯರ್ಥಿಯನ್ನು ಇನ್ನೂ ತೀರ್ಮಾನ ಮಾಡಿಲ್ಲ. ಯಾರೇ ಪ್ರಚಾರ ಮಾಡುವವರು ಪಕ್ಷ ಅಭ್ಯರ್ಥಿ ಘೋಷಣೆ ಮಾಡಿದ ನಂತರ ಪ್ರಚಾರ ಮಾಡಬೇಕು. ಎಲ್ಲರ ಜೊತೆ ಚರ್ಚಿಸಿ ಅಭ್ಯರ್ಥಿಯ…
ಜಗಳೂರು : ತಾಲೂಕಿನ ದೊಣ್ಣೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಶ್ಚಿತ ಭಾರತ್ ಸಂಕಲ್ಪ ಯಾತ್ರಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಬೇಸಾಯ ತಜ್ಞ ಮಲ್ಲಿಕಾರ್ಜುನ್, ಕೇಂದ್ರ ಸರ್ಕಾರದ ಕೃಷಿಗೆ ಸಂಬಂಧಪಟ್ಟ ಯೋಜನೆಗಳನ್ನು ಕಾರ್ಯಕ್ರಮದಲ್ಲಿ ರೈತರಿಗೆ ತಿಳಿಸಿಕೊಟ್ಟರು. ಮಣ್ಣು ನೀರು ಪರೀಕ್ಷೆ, ನೈಸರ್ಗಿಕ ಕೃಷಿ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಡಿಯಲ್ಲಿ ಬೆಳೆಯುವ ಬೆಳೆ ಕಾಳು ಹಾಗೂ ಎಣ್ಣೆಕಾಳು ಬೆಳೆ, ನಿಕ್ರಾ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅವರು ಒದಗಿಸಿದರು.
ಚನ್ನಗಿರಿ: ವಸತಿ ಶಾಲೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡ 24 ವಿದ್ಯಾರ್ಥಿನಿಯರನ್ನು ಸಂತೆಬೆನ್ನೂರು ಸಮುದಾಯ ಆಸ್ಪತ್ರೆಯಲ್ಲಿ ಚಿಕತ್ಸೆಗೆ ದಾಖಲಿಸಿದ ಘಟನೆ ಚನ್ನಗಿರಿ ತಾಲ್ಲೂಕಿನ ಕಾಕನೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ. ತಾಲ್ಲೂಕಿನ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಆಹಾರದ ವ್ಯತ್ಯಾಸದಿಂದ ಬಳಲಿದ ವಿದ್ಯಾರ್ಥಿಗಳು ನಿಶಕ್ತಿ, ಹೊಟ್ಟೆ ನೋವು, ವಾಂತಿ, ತಲೆಸುತ್ತಿನಿಂದ ಹಾಗೂ ಭಯಗೊಂಡಿದ್ದ 24 ವಿದ್ಯಾರ್ಥಿನಿಯರನ್ನು ಕೂಡಲೇ ಸಂತೇಬೆನ್ನೂರು ಸರ್ಕಾರಿ ಸಮುದಾಯ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. 12 ವಿದ್ಯಾರ್ಥಿಗಳಿಗೆ ಶಾಲೆಯಲ್ಲಿಯೇ ಚಿಕಿತ್ಸೆ 12 ವಿದ್ಯಾರ್ಥಿಗಳಿಗೆ ಶಾಲೆಯಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಸ್ಥಳಕ್ಕೆ ಶಾಸಕ ಬಸವರಾಜ್ ಶಿವಗಂಗಾ ಭೇಟಿನೀಡಿ ಮಕ್ಕಳ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ವ್ಯವಸ್ಥೆ ಮಾಡಿದರು. ಸುಮಾರು 10 ಕ್ಕೂ ಹೆಚ್ಚು ವೈದ್ಯರನ್ನು ನೇಮಿಸಿ ತುರ್ತು ಚಿಕಿತ್ಸೆ ನೀಡಲಾಯಿತು. ಮೂರು ವಿದ್ಯಾರ್ಥಿಗಳು ತೀವ್ರ ಅಸ್ತವ್ಯಸ್ತ ಗೊಂಡಿದ್ದು,ಹೆಚ್ಚಿನ ಚಿಕಿತ್ಸೆ ನೀಡಿ ತಜ್ಞವೈದ್ಯರಿಂದ ಇರಿಸಲಾಗಿದೆ. ಆಹಾರದಲ್ಲಿ ಹುಳುಗಳು ವಸತಿ ಶಾಲೆಯಲ್ಲಿ ನೀಡುವ ಆಹಾರದಲ್ಲಿ…
ಚನ್ನಗಿರಿ : ದಾವಣಗೆರೆ ಅಂದ್ರೆ ಎಲ್ಲರೂ ಬೆಣ್ಣೆ ದೋಸೆ ಅಂತಾರೆ, ಆದರೆ ಈ ಭಾಗದ ಜನರಿಗೆ ಖಾರ-ಮಂಡಕ್ಕಿ, ಮಿರ್ಚಿ ಅಂದ್ರೆ ಬಲು ಇಷ್ಟ..ಅದರಲ್ಲೂ ಶಾಸಕ ಶಾಮನೂರು ಶಿವಶಂಕರಪ್ಪರಿಗೆ ತನ್ನ ಕುಟುಂಬದ ಜತೆ ಮಾತನಾಡುತ್ತಾ ಮಿರ್ಚಿ-ಮಂಡಕ್ಕಿ ತಿನ್ನುವುದು ಅಂದ್ರೆ ಸಾಕು ಎಲ್ಲಿಲ್ಲದ ಪ್ರೀತಿ. ಶಾಮನೂರು ಶಿವಶಂಕರಪ್ಪ ಮೂಲತಃ ವ್ಯಾಪಾರದ ಕುಟುಂಬದಿಂದ ಬಂದಿರುವ ಕಾರಣ ಅವರಿಗೆ ದಾವಣಗೆರೆ ಮಿರ್ಚಿ, ಖಾರ ಮಂಡಕ್ಕಿ ನಡುವೆ ಸಂಬಂಧ ಇದೆ ಇವರ ಮನೆಯ ಯಾವುದೇ ಧಾರ್ಮಿಕ ಕಾರ್ಯಕ್ರಮವಿದ್ದರೂ ಅಲ್ಲಿ ಖಾರ, ಗರಂ ಮಂಡಕ್ಕಿ ರೆಡಿ ಇರುತ್ತದೆ. ಅಲ್ಲದೇ ಅವರ ಕುಟುಂಬ, ಸ್ನೇಹಿತರೂ ಕೂಡ ಮಂಡಕ್ಕಿ ಸವಿಯದೇ ಹಾಗೇ ಹೋಗುವುದಿಲ್ಲ. ಮಂಡಕ್ಕಿ ತಿಂದ್ರೆ ಹಲವರು ಗ್ಯಾಸ್ ಬರುತ್ತದೆ ಅಂತಾರೆ, ಆದ್ರೆ ಶಾಮನೂರು ಶಿವಶಂಕರಪ್ಪ ವಯಸ್ಸು 92ಆದ್ರೂ ಮಂಡಕ್ಕಿ ಮಿರ್ಚಿ ಸವಿಯುತ್ತಾರೆ. ಅಂತೆಯೇ ಚನ್ನಗಿರಿ ತಾಲೂಕಿನ ಮಾವಿನಹೊಳೆ ಕ್ಷೇತ್ರಕ್ಕೆ ಮಾಜಿ ಸಚಿವರು ಹಾಲಿ ಶಾಸಕರಾದ ಶಾಮನೂರು ಶಿವಶಂಕರಪ್ಪ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಬೇಟಿ…
ದಾವಣಗೆರೆ ; ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪರ್ವ ಮುಂದುವರಿದಿದ್ದು, ಸರಕಾರ 7 ಡಿವೈಎಸ್ಪಿ (ಸಿವಿಲ್) ಮತ್ತು 14 ಪೊಲೀಸ್ ಇನ್ಸ್ಪೆಕ್ಟರ್ (ಸಿವಿಲ್) ಗಳನ್ನು ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಿದೆ. ಬೆಂಗಳೂರಿನಲ್ಲಿ ನವೆಂಬರ್ 27ರಂದು ನಡೆದ ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಈ ಕೆಳಕಂಡ ಡಿವೈಎಸ್ಪಿ ಮತ್ತು ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿದೆ. ಇದರಲ್ಲಿ ಹರಿಹರದಲ್ಲಿದ್ದ ಸಿಪಿಐ ಯು.ಸತೀಶ್ ಕುಮಾರ್ ಸ್ಥಳ ನಿರೀಕ್ಷಣೆಯಲ್ಲಿದ್ದು, ಬೆಂಗಳೂರು ಜೆ.ಪಿನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಪೊಲೀಸ್ ಇನ್ ಸ್ಪೇಕರ್ ವರ್ಗಾವಣೆ
ದಾವಣಗೆರೆ : ದಾವಣಗೆರೆಯಲ್ಲಿ ಎಸ್ಪಿಯಾಗಿದ್ದ ಸಿಬಿ ರಿಷ್ಯಂತ್ ದೇವನಗರಿ ಬಿಟ್ಟು ಹೋದ್ರು, ಅವರನ್ನು ಅವರ ಸಿಬ್ಬಂದಿಗಳು ಅವರನ್ನು ಮರೆತಿಲ್ಲ. ಒಬ್ಬ ಅಧಿಕಾರಿ ತಾನು ಮಾಡುವ ಕೆಲಸ, ಪ್ರಾಮಾಣಿಕತೆ, ಜನರ ಪ್ರೀತಿ, ಕಾನೂನು ಪಾಲನೆ ಜತೆಗೆ ಒಂದಿಷ್ಟು ಮಾನವೀಯತೆ ಇದ್ದರೇ ಎಲ್ಲಿ ಹೋದ್ರು ಮರೆಯೋದಿಲ್ಲ ಎಂಬುದಕ್ಕೆ ದಾವಣಗೆರೆ ಪೊಲೀಸರೇ ಸಾಕ್ಷಿ. ಎಸ್ಪಿ ರಿಷ್ಯಂತ್ ಗೆ ಸಿಬ್ಬಂದಿಗಳ ಮೇಲೆ ಪ್ರೀತಿ ಇದ್ದ ಕಾರಣ ಅವರ ಸಿಬ್ಬಂದಿಗಳು ನೆನಸಿಕೊಳ್ಳುತ್ತಾರೆ. ಈ ಪ್ರೀತಿ ವ್ಯಕ್ತಪಡಿಸಲು ಸಿಬ್ಬಂದಿಗಳಿಗೆದಾವಣಗೆರೆ ವಿಜಯ ಒಂದು ವೇದಿಕೆ ಕಲ್ಪಿಸಿಕೊಟ್ಟಿತ್ತು..ಅಲ್ಲದೇ ಇಂದು ಅವರ ವಿವಾಹ ವಾರ್ಷಿಕೋತ್ಸವ ಇದ್ದ ಕಾರಣ ಅವರ ಆಪ್ತರು, ಪ್ರೀತಿಪಾತ್ರರು ಅವರಿಗೆ ಅನಿಸಿರುವ ಮನದಾಳದ ಮಾತನ್ನು ಕಳುಹಿಸಿಕೊಟ್ಟರು.ಅದರಲ್ಲಿ ಆಯ್ದ ಕೆಲ ತುಣಕಗಳು ನಿಮ್ಮ ಮುಂದೆ…..ಹಾಗಾದ್ರೆ ಅವರು ಹೇಳಿದ್ದೇನು…ತಪ್ಪದೇ ಓದಿ. ರಿಷ್ಯಂತ್ ಸರ್ ಹಾಗೂ ಭಾರತೀ ಮೇಡಂ ಉತ್ತಮ ಜೋಡಿಯಾಗಿದ್ದು, ಮಹಾನ್ ಸಹಾನುಭೂತಿ, ಕಾಳಜಿಯುಳ್ಳ ಸ್ವಭಾವ ಮತ್ತು ಜನರೊಂದಿಗೆ ಬೆರೆಯುವ ಉತ್ತಮ ದಂಪತಿಗಳು. ಇವರಿಬ್ಬರ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇನೆ –ಬಿ.ಎಸ್.ಬಸವರಾಜ್, ಡಿಎಸ್ಪಿ ರಿಷ್ಯಂತ್…
ದಾವಣಗೆರೆ : ಮಾಜಿ ಸಚಿವ ಸೋಮಣ್ಣ ಸಿದ್ದಗಂಗಾ ಮಠದಲ್ಲಿ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬೆನ್ನೆಲೆ ದಾವಣಗೆರೆಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಕೆಂಡಾಮಂಡಲವಾದರು. ಮಾಜಿ ಸಚಿವ ಸೋಮಣ್ಣ ಬಿಜೆಪಿಯಲ್ಲಿ ಎಲ್ಲವನ್ನು ಅನುಭವಿಸಿದ್ದಾರೆ. ಪಕ್ಷದಲ್ಲಿ ಅಸಮಾಧಾನ ಇದೆ, ಅದನ್ನು ಕುಳಿತು ಬಗೆಹರಿಸಿಕೊಳ್ಳಬೇಕು. ಮಠದಲ್ಲಿ ಮಾತನಾಡುವ ಅವಶ್ಯಕತೆ ಇತ್ತಾ..ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು. ಮಾಜಿ ಸಚಿವ ಸೋಮಣ್ಣ ಸಿದ್ದಗಂಗಾ ಮಠದಲ್ಲಿ ರಾಜಕಾರಣ ಮಾಡಿದ್ದಾರೆ..ದೆಹಲಿಗೆ ಹೋಗ್ತಾರಾ ಹೋಗಲಿ ಅದೇನು ಚಾಡಿ ಹೇಳುತ್ತಾರೋ ಹೇಳಲಿ..ನಮಗೂ ದೆಹಲಿ ನಾಯಕರು ಗೊತ್ತು, ನಾವು ದೆಹಲಿಗೆ ಹೋಗ್ತಿವಿ..ಬಿಎಸ್ ವೈ ಬಗ್ಗೆ ಮಾತನಾಡಿದರೆ ಸುಮ್ಮನೇ ಇರಲ್ಲ..ಬಿಎಸ್ ವೈ ಕರೆದು ಹೊಡೆದರು ಪರವಾಗಿಲ್ಲ, ನಾನು ಮಾತನಾಡುತ್ತೇನೆ..ವಿನಾಕಾರಣ ಬಿಎಸ್ ವೈ ಬಗ್ಗೆ ಮಾತನಾಡೋದು ಸರಿಯಲ್ಲ.. ವಿಧಾನ ಸಭೆ ಸೋಲು ಹೊಡೆತವನ್ನು ವರಿಷ್ಠರು ನೋಡಿದ್ದಾರೆ..ಹೀಗಾಗಿ ವಿಜಯೇಂದ್ರರನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ..ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತಂದಿದೆ ಬಿಎಸ್ ವೈ..ಬಿಎಸ್ ವೈ ರೆಡಿ ಮೇಡ್ ಫುಡ್ ಅಲ್ಲ.. ಸೋಮಣ್ಣ ಬಂದಿದ್ದು ಕಾಂಗ್ರೆಸ್ ನಿಂದ..ನಿಮ್ಮಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ..ಕಾಂಗ್ರೆಸ್ ನಿಂದ…
ದಾವಣಗೆರೆ: ಜಾತಿ ಗಣತಿ ವರದಿ ಬಿಡುಗಡೆಯೇ ಆಗಿಲ್ಲ, ಹೀಗಾಗಿ ಆ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಬೆಂಗಳೂರಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳು ಸಭೆ ಮಾಡಿ, ವರದಿಗೆ ವಿರೋಧ ಮಾಡಿದ್ದಾರೆ. ಹೀಗಾಗಿ ಈಗ ಒಬ್ಬೊಬ್ಬರೂ ಒಂದೊಂದು ಅಭಿಪ್ರಾಯ ವ್ಯಕ್ತವಾಗುತ್ತಿವೆ. ಒಕ್ಕಲಿಗ, ಲಿಂಗಾಯತ ಸೇರಿದಂತೆ ಹಲವಾರು ಜಾತಿಗಳು ವರದಿಗೆ ವಿರೋಧ ಮಾಡಿವೆ. ಮೊದಲು ಜಾತಿ ಗಣತಿ ವರದಿ ಬಿಡುಗಡೆಯಾಗಲಿ. ಆ ಬಳಿಕ ಆ ಬಗ್ಗೆ ನೋಡೋಣ’’ ಎಂದರು. ‘‘ಸಭೆಯಲ್ಲಿ ನಾನು ಇರಲಿಲ್ಲ. ವಿರೋಧ ಪಕ್ಷಗಳು ಇರುವುದೆ ವಿರೋಧ ಮಾಡುವುದಕ್ಕೆ ಎಂದರಲ್ಲದೆ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಬಗ್ಗೆ ಮಾಜಿ ಸಚಿವ ಎಚ್.ವಿಶ್ವನಾಥಗೆ ಏನು ಗೊತ್ತಿದೆ? ಅವನೊಬ್ಬ ಸಮಯ ಸಾಧಕ. ಎಲ್ಲ ಪಕ್ಷಗಳನ್ನು ಅಡ್ಡಾಡಿಕೊಂಡು, ಈಗ ಯಾವ ಪಕ್ಷದಲ್ಲಿದ್ದಾರೆ’’ ಎಂದು ಪ್ರಶ್ನಿಸಿದರು. ಕಾಂಗ್ರೆಸ್ನಲ್ಲಿ ಜಾಗ ಇರಬೇಕಲ್ವ? ಮಾಜಿ ಸಚಿವ ವಿ.ಸೋಮಣ್ಣ…
ನಂದೀಶ್ ಭದ್ರಾವತಿ ದಾವಣಗೆರ ನಾನು 15 ವರ್ಷ ಸರ್ವೀಸ್ ಮಾಡಿದ್ದೇನೆ, ಕಷ್ಟಪಟ್ಟು ಡಿಗ್ರಿ ಮಾಡಿದ್ದೇನೆ, ಆದರೂ ನನಗೆ ಇನ್ನೂ ಒಂದು ಪ್ರಮೋಷನ್ ಸಿಕ್ಕಿಲ್ಲ…ಆದರೆ , ನಿನ್ನೆ, ಮೊನ್ನೆ ಬಂದ ಜಿಪಿಟಿ ಶಿಕ್ಷಕರಿಗೆ ಬಡ್ತಿ ಸೇರಿದಂತೆ, ವೇತನ, ವರ್ಗಾವಣೆ ಹೀಗೆ ಹತ್ತಾರು ಸೌಲಭ್ಯಗಳು ಸಿಗುತ್ತೀವೆ…ನಾವು ಇನ್ನು ಇದ್ದಲ್ಲಿಯೇ ಇದ್ದೇವೆ..ಯಾವುದೇ ಗೌರವನೂ ಸಿಗುತ್ತಿಲ್ಲ. ನಮಗೆ ಆಗಿರೋ ಅನ್ಯಾಯ ಸರಿಪಡಿಸೋರು ಯಾರು? ಎಂದು ಕಣ್ಣಲ್ಲಿ ನೀರು ಹಾಕುತ್ತಾ, ಶಿಕ್ಷಕಿಯೊಬ್ಬರು ತನ್ನ ಅಸಾಯಕತೆ ವ್ಯಕ್ತಪಡಿಸಿದರು. ಹೌದು…ಇದು ಕೇವಲ ಒಬ್ಬ ಪಿಎಸ್ಟಿ ಶಿಕ್ಷಕಿ ಕಥೆಯೆಲ್ಲ, ರಾಜ್ಯದಲ್ಲಿನ ಒಂದು ಲಕ್ಷದ ಎಂಭತ್ತು ಸಾವಿರ ಪಿಎಸ್ಟಿ ಶಿಕ್ಷಕರ ಕಥೆ-ವ್ಯಥೆ. ಆದರೆ ಇವರ ಹೋರಾಟಕ್ಕೆ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಸೇರಿದಂತೆ ಸ್ವಂತ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರು ಸಹ ಬೆಂಬಲ ನೀಡುತ್ತಿಲ್ಲ ಎಂಬ ಮಾತು ಸ್ವತಹ ಶಿಕ್ಷಕ ವಲಯದಿಂದ ವ್ಯಕ್ತವಾಗುತ್ತಿದೆ.. 2016 ಕ್ಕಿಂತ ಮುಂಚೆ 1-7/8 ಕ್ಕೆ ಸಹ ಶಿಕ್ಷಕರು ಎಂದು ಮೊದಲು ನೇಮಕಗೊಂಡರು. ಬಳಿಕ 20-25 ವರ್ಷಗಳ ಕಾಲ …