ದಾವಣಗೆರೆ: ಆತ ಹುಡುಗಿಯೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದ ಆದರೆ ಹೆಂಡತಿ ಅರ್ಧದಲ್ಲಿಯೇ ಮೃತಪಟ್ಟಳೆಂದು ಖಿನ್ನತೆಗೆ ಒಳಗಾಗಿದ್ದ..ಆತನಿಗೆ ಇಬ್ಬರು ಮುದ್ದಾದ ಮಕ್ಕಳಿದ್ದರು..ಆದರೆ ಮಕ್ಕಳು ಪದೇ, ಪದೇ ಅಮ್ಮ ಅಂತ ಕೇಳುತ್ತಿದ್ದು, ಆತನ ಹೃದಯ ಕಿವುಚುತ್ತಿತ್ತು..ಕೊನೆಗೆ ಆತನೇ ತನ್ನ ಮಕ್ಕಳ‌ ಕತ್ತು ಹಿಸುಕಿ ತಾನು ಆತ ಕೂಡ ಆತ್ಮಹತ್ಯೆ ಮಾಡಿಕೊಂಡ.

ಸ್ಥಳೀಯ ಎಸ್.ಪಿ.ಎಸ್ ನಗರದ ರಾಜೀವ್ ಗಾಂಧಿ ಬಡಾವಣೆಯ ವಾಸಿ ಉದಯ್ ಕುಮಾರ್ (32) ಎಂಬಾಂತ ತನ್ನ ಮಕ್ಕಳಾದ ಸಿಂಧುಶ್ರೀ (4), ಶ್ರೀಜಯ್ (3) ಎಂಬ ಪುಟ್ಟ ಮಕ್ಕಳನ್ನು ಕೊಂದು ತಾನು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.

ಕಳೆದ ಎಂಟು ತಿಂಗಳ ಹಿಂದೆ ಉದಯ್ ಅವರ ಪತ್ನಿ ಹೇಮಾ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಪತ್ನಿಯನ್ನು ಕಳೆದುಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಉದಯ್ ಇಬ್ಬರು ಮಕ್ಕಳ ಕುತ್ತಿಗೆ ಹಿಸುಕಿ ಕೊಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ

ಉದಯ್ ಕುಮಾರ್ ಅವರ ಪತ್ನಿ ಕಳೆದ ಸೆಪ್ಟೆಂಬ‌ರ್ ತಿಂಗಳಿನಲ್ಲಿ ಮೃತಪಟ್ಟಿದ್ದರು. ಪತ್ನಿ ಮೃತ ಪಟ್ಟಾಗಿನಿಂದಲು ಉದಯ್ ಕುಮಾರ್ ಜೀವನದಲ್ಲಿ ಜುಗುಪ್ಸೆಗೊಂಡಿದ್ದರು ಎಂದು ತಿಳಿದು ಬಂದಿದೆ.

ನಾನು, ನನ್ನ ಹೆಂಡತಿ ಮತ್ತು ಮಕ್ಕಳು ತುಂಬಾ
ಚೆನ್ನಾಗಿ ಇದ್ದೆವು. ನನ್ನ ಹೆಂಡತಿ ಮೃತಪಟ್ಟಳು. ತನ್ನ ಮಕ್ಕಳು ಪದೇ ಪದೇ ಅಮ್ಮನನ್ನು ಕೇಳುತ್ತಿದ್ದಾರೆ ಎಂದು ಎಂಟು ಪುಟಗಳ ಡೆತ್ ನೋಟ್ ಬರೆದಿಟ್ಟು ಉದಯ್ ಕುಮಾರ್ ನೇಣು ಬಿಗಿದು-ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನವೇ ಗೋಡೆಯ ಮೇಲೆ ರಕ್ತದಲ್ಲಿ ಐ ಲವ್ ಯು ಹೇಮಾ ಎಂದು ತನ್ನ ಮೃತ ಪತ್ನಿಯ ಹೆಸರನ್ನು ಬರೆದಿದ್ದಾರೆ.

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಚಳಗೆರೆ ನಿವಾಸಿ ಹೇಮಾ ಮತ್ತು ಉದಯ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸ್ಥಳಕ್ಕೆ ಪೊಲೀಸರು, ಶ್ವಾನ ದಳ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞ ಪರಿಶೀಲನೆ ನಡೆಸಿದ್ದಾರೆ.

ಒಟ್ಟಿನಲ್ಲಿ ಲವ್ ಮಾಡಿದ ಆಕೆ ಅರ್ಧಕ್ಕೆ ಬಿಟ್ಟು ಹೋಗಿದ್ದರಿಂದ ನೋವಿನಲ್ಲಿ ಕೊರಗಿದ ಪತಿ ಸಹ ಸಾವನ್ನಪ್ಪಿದ್ದಾನೆ. ಹೆಂಡ್ತಿ ಇಲ್ಲ ಇನ್ನೂ ತಾನು ಸಹ ಸತ್ತರೆ ಮಕ್ಕಳನ್ನು ಯಾರು ನೋಡಿಕೊಳ್ಳುವವರ ಎಂದು ಅವರನ್ನು ಸಹ ತನ್ನ ಜೊತೆಗೆ ಕರೆದುಕೊಂಡು ಹೋಗಿದ್ದು, ಇಡೀ ಕುಟುಂಬವೇ ದುರಂತ ಅಂತ್ಯವಾದಂತಾಗಿದೆ

Share.
Leave A Reply

Exit mobile version