ನ್ಯಾಮತಿ: ವಿವಾಹವಾಗಿ ಆರು ವರ್ಷ ಕಳೆದರು ಮಕ್ಕಳಾಗಲಿಲ್ಲ  ಎಂದು ಮನ ನೊಂದು ಗೃಹಿಣಿ ಮನೆಯ ದೇವರ ಮನೆಯ ಮರದ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.

ತಾಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮದ ರಾಧಿಕಾ(25) ಮೃತ ಮಹಿಳೆಯಾಗಿದ್ದು ಬಸವನಹಳ್ಳಿ ಗ್ರಾಮದ ರಾಧಿಕಾ ಅವರನ್ನು ದೊಡ್ಡೆತ್ತಿನಹಳ್ಳಿ ಗ್ರಾಮದ ಲೋಕೇಶ ಎಂಬುವವರಿಗೆ ಕಳೆದ 6 ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು.

ಆರು ವರ್ಷಗಳಾದರು ಮಕ್ಕಳಾಗಲಿಲ್ಲ ಎಂಬ ಕೊರಗಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ತಾಯಿ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪಿಐ ಎನ್.ಎಸ್.ರವಿ ತನಿಖೆ ಕೈಗೊಂಡಿದ್ದಾರೆ.

Share.
Leave A Reply

Exit mobile version