ದಾವಣಗೆರೆ ; ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚರಂಡಿಗೆ ಇಂಡಿಕಾ ಕಾರೊಂದು ಪಲ್ಟಿಯಾದ ಘಟನೆ ಹುಣಸೇಕಟ್ಟೆ ಗ್ರಾಮದ ಬಳಿ‌ ಜರುಗಿದೆ.ಕಾರಿನಲ್ಲಿದ್ದ ಇಬ್ಬರು ವೃದ್ದರು ಸ್ಥಳದಲ್ಲೇ ಸಾವನ್ನಪ್ಪಿದ್ದು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.ಹರಿಹರದ ಸಾರಥಿ ಗ್ರಾಮದ ಕೊಟ್ರೇಶಪ್ಪ (65), ಹುಬ್ಬಳ್ಳಿಯ ಪುಷ್ಟ (55) ಮೃತ ದುರ್ದೈವಿಗಳು
ಇಂಡಿಕಾ ಕಾರಿನಲ್ಲಿ ಚಿತ್ರದುರ್ಗದಲ್ಲಿ ಮದುವೆ ಮುಗಿಸಿಕೊಂಡು ವಾಪಸ್ಸಾಗುವಾಗ ಘಟನೆ ನಡೆದಿದೆ.

ಅತಿ ವೇಗದ ಚಾಲನೆಯಿಂದ‌ ನಿಯಂತ್ರಣ ತಪ್ಪಿ  ಕಾರು ಪಲ್ಟಿಯಾಗಿದೆ ಎಂದು‌ ತಿಳಿದುಬಂದಿದೆ.ಗಾಯಗೊಂಡವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ಕುರಿತು‌ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share.
Leave A Reply

Exit mobile version